ವಿರಾಜಪೇಟೆ ಏ.16 NEWS DESK : ಮೈತಾಡಿ ಗ್ರಾಮದ ಐಚೆಟ್ಟಿರ ಐನ್ಮನೆಯ ಅಂಗಳದಲ್ಲಿ ವಿಶ್ವ ಕಲಾದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಚಿತ್ರಕಲಾವಿದ ಬಿ.ಆರ್.ಸತೀಶ್ ಅವರು ದೈವ ಕೋಲದ ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ವಿಶ್ವದ ಶ್ರೇಷ್ಠ ಚಿತ್ರ ಕಲಾವಿದರಲ್ಲಿ ಒಬ್ಬರಾದ ಲಿಯೊನಾರ್ಡ್ ಡಾವಿನ್ಸಿಯ ಹುಟ್ಟು ಹಬ್ಬದ ಗೌರವಾರ್ಥವಾಗಿ ಆ ದಿನವನ್ನು ಎಲ್ಲಾ ಚಿತ್ರಕಲಾವಿದರು ಸೇರಿ ವಿಶ್ವ ಕಲಾದಿನ ಎಂದು ಘೋಷಿಸಲಾಯಿತು. ಕಲೆಯ ಪ್ರಾಮುಖ್ಯತೆಯು ಇಡೀ ವಿಶ್ವದ ಜನರಿಗೂ, ಎಲ್ಲಾ ವಯೋಮಾನದವರಿಗೂ, ಸರ್ವಜನಾಂಗದವರಿಗೂ ತಲುಪಿಸುವ ಪ್ರಯತ್ನವಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೇ ವಿಶ್ವ ಕಲಾದಿನವನ್ನು ಐಚೆಟ್ಟೀರ ಕುಟುಂಬದವರು ಐನ್ಮನೆಯಲ್ಲಿ ನಡೆಸಲು ಅವಕಾಶ ಕಲ್ಪಿಸಿದ್ದು, ಕುಟುಂಬದ ಸದಸ್ಯರಿಗೆ ವಿಶ್ವ ಕಲಾದಿನ ಶುಭಾಶಯಗಳನ್ನು ತಿಳಿಸಿ ಬಿಡಿಸಿದ ದೈವಕೊಲದ ಚಿತ್ರವನ್ನು ಐಚೆಟ್ಟೀರ ಕುಟುಂಬಸ್ಥರಿಗೆ ನೀಡಿದರು. ಈ ಸಂದರ್ಭ ಐಚೆಟಿರ ಕುಟುಂಬದ ಸದಸ್ಯರು ಹಾಜರಿದ್ದರು.
ಲೇಖಕ: admin
ಗೋಣಿಕೊಪ್ಪ ಏ.16 NEWS DESK : ಕೆದಮುಳ್ಳೂರು ಗ್ರಾಮದ ಕುಲ್ಲಚೆಟ್ಟಿ ಕುಟುಂಬಸ್ಥರು ಮೂರು ವರ್ಷಗಳಿಗೊಮ್ಮೆ ನಡೆಸುವ ಹರಿಸೇವೆ ಹಾಗೂ 101 ಕೋಲ ಎರಡು ದಿನಗಳ ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು. ಕುಲ್ಲಚೆಟ್ಟಿಐನ್ ಮನೆಯಲ್ಲಿ ಬೆಳಗ್ಗೆ ವೆಂಕಟರಮಣ ದೇವರ ಹರಿಸೇವೆ, ಪೂಜಾ ಕಾರ್ಯಗಳು ನಡೆಯಿತು. ವೆಂಕಟರಮಣ ಮತ್ತು ಕೆಂಚರಾಯ ದೇವ ದರ್ಶನ ನಡೆಯಿತು. ವೆಂಕಟರಮಣ ಹರಿ ಸೇವೆಯ ಪೂಜೆಯನ್ನು ದಾಸ ಹರೀಶ್ ನಡೆಸಿದರು. ಸಂಜೆ ಅರೆಭಾಷೆ ಗೌಡ ಜನರ ಪ್ರಮುಖ ದೈವವಾದ ಬಚ್ಚನಾಯಕ ಆರಾಧನೆ ಮತ್ತು ಕೋಲ, ಜತೆಗೆ ಹುಲಿ ಚಾಮುಂಡಿ, ಇತರೆ ಶ್ರೀ ಧರ್ಮ ದೇವತೆಗಳು, ಕೋಲಗಳು ಜರುಗಿದವು. ಎರಡನೇ ದಿನ ಧರ್ಮ ದೇವತೆ, ಸೀರಾಡಿ ದೈವದ ಕೋಲ ನೆರವೇರಿತು. ಮೂರನೇ ದಿನ 17 ರಂದು, ಪಾಷಣಮೂರ್ತಿ, ಪಂಜುರ್ಲಿ ಸೇರಿದಂತೆ ಹಲವು ಕೋಲಗಳು ನಡೆಯಲಿದೆ. ಕುಲ್ಲಚೆಟ್ಟಿ ಕುಟುಂಬಸ್ಥರ ಪಟ್ಟೆದಾರ ಮಾಚಯ್ಯ, ಪೂವಯ್ಯ ಮತ್ತು ಹಿರಿಯರುಗಳಾದ, ಕಾರ್ಯಪ್ಪ, ಚಂದ್ರಶೇಖರ್, ತಿಮ್ಮಯ್ಯ, ಈಶ್ವರ್, ಕಿರಣ್ಉತ್ತಪ್ಪ, ದಿನೇಶ್ಉತ್ತಪ್ಪ, ಅಪ್ಪಾಜಿ ದೇವಯ್ಯ, ಜಯಪೂಣಚ್ಚ, ಬೊಪ್ಪಿಗಣೇಶ್ ಸೇರಿದಂತೆ…
ಮಡಿಕೇರಿ ಏ.16 NEWS DESK : ಮಡಿಕೇರಿ ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಏ. 18 ಮತ್ತು 19 ರಂದು ನಗರದ ಗಾಂಧಿ ಮೈದಾನದಲ್ಲಿ “ಅರೆಭಾಭಾಷೆ ಗೌಡ ಕ್ರೀಡಾ ಹಬ್ಬ” ನಡೆಯಲಿದೆ ಎಂದು ಅಕಾಡೆಮಿ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಕಾಡೆಮಿ ಪದಾಧಿಕಾರಿ ಪೊನ್ನಚ್ಚನ ಶ್ರೀನಿವಾಸ್, ಕ್ರೀಡಾ ಹಬ್ಬಕ್ಕೆ ಬಿಡ್ಡಿಂಗ್ ಮೂಲಕ ಆಟಗಾರರನ್ನು ವಿವಿಧ ತಂಡಗಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಕ್ರೀಡಾ ಹಬ್ಬದಲ್ಲಿ ಪ್ರಮುಖವಾಗಿ ಫುಟ್ಬಾಲ್ ಚಾಂಪಿಯನ್ ಲೀಗ್, 45 ವರ್ಷ ಮೇಲ್ಪಟ್ಟವರ ಲೆಜೆಂಡ್ಸ್ ಫುಟ್ಬಾಲ್ ಚಾಂಪಿಯನ್ ಟ್ರೋಫಿ, 16ವರ್ಷ ಒಳಗಿನವರ ಜೂನಿಯರ್ ಫುಟ್ಬಾಲ್ ಚಾಂಪಿಯನ್ ಟ್ರೋಫಿ, ಬಾಲಕಿಯರ ಫುಟ್ಬಾಲ್ ಚಾಂಪಿಯನ್ ಟ್ರೋಫಿ ಸ್ಪರ್ಧೆಗಳು ಬೆಳಿಗ್ಗಿನಿಂದ ಆರಂಭವಾಗಲಿದ್ದು, ಹೊನಲು ಬೆಳಕಿನಲ್ಲಿಯೂ ಪಂದ್ಯ ಮುಂದುವರೆಯಲಿದೆ. ಮಹಿಳಾ ಹಗ್ಗಜಗ್ಗಾಟ ಸ್ಪರ್ಧೆಯೂ ನಡೆಯಲಿದೆ. ವಿವಿಧ ಸ್ಪರ್ಧೆಗಳಲ್ಲಿ ಒಟ್ಟು 29 ತಂಡಗಳು ಪಾಲ್ಗೊಳ್ಳಲಿವೆಯೆಂದು ತಿಳಿಸಿದರು. ಏ.19 ರಂದು ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಅಂದು ನಡೆಯಲಿರುವ ಸಮಾರೋಪದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ,…
ಮಡಿಕೇರಿ ಏ.16 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಏ.17ರಿಂದ 24ರವರೆಗೆ ನಡೆಯಲಿದೆಯೆಂದು ಎಮ್ಮೆಮಾಡಿನ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಕೆ.ಎಂ.ಹುಸೈನ್ ಸಖಾಫಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಏ.17 ರಂದು ಜುಮಾ ನಮಾಝಿನ ಬಳಿಕ ಜಮಾಅತ್ ಅಧ್ಯಕ್ಷನಾದ ತಾನು ಧ್ವಜಾರೋಹಣವನ್ನು ನೆರವೇರಿಸಲಿದ್ದೇನೆ. ಉರೂಸ್ ಮತ್ತು ಮಖಾಂ ಝಿಯಾರತ್ ಉದ್ಘಾಟನೆಯನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ನಡೆಸಿಕೊಡಲಿದ್ದಾರೆ. ಅಂದು ರಾತ್ರಿ ಧಾರ್ಮಿಕ ಪ್ರವಚನವನ್ನು ಎಮ್ಮೆಮಾಡಿನ ಮುದರ್ರಿಸ್ ಎ.ಪಿ.ಹಂಝ ಸಖಾಫಿ ಮೇಲ್ಮುರಿ ಅವರು ನಡೆಸಿಕೊಡಲಿದ್ದಾರೆಂದರು. ಏ.18 ರಂದು ರಾತ್ರಿ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮ ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿ ಅವರ ನೇತೃತ್ವದಲ್ಲಿ ನಡೆಯಲಿದೆ. ಏ.19ರಂದು ರಾತ್ರಿ ಖತಂ ದುಅ ಮಜ್ಲಿಸ್ ಕಾರ್ಯಕ್ರಮವು ಶಿಹಾಬುದ್ದೀನ್ ಮುತ್ತನೂರ್ ತಂಙಳರವರ ನೇತೃತ್ವದಲ್ಲಿ ನಡೆಯಲಿರುವುದಾಗಿ ಹೇಳಿದರು. :: ಸಾರ್ವಜನಿಕ ಸಮ್ಮೇಳನ :: ಏ.20 ರಂದು ಮಧ್ಯಾಹ್ನ ಸಯ್ಯದ್ ಸ್ವಾದಿಕಲಿ…
*ಶುಭ ಅಕ್ಷಯ ತೃತೀಯ : ಕುಶಾಲನಗರದ ಜಿ.ಆಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಚಿನ್ನ ಖರೀದಿಗೆ ಶುಭ ಸಮಯ : ಆಕರ್ಷಕ ಕೊಡುಗೆಗಳು ನಿಮಗಾಗಿ*
ಮಡಿಕೇರಿ ಏ.16 NEWS DESK : ಕೊಡಗು ಜಿಲ್ಲಾ ಮಟ್ಟದ 15ನೇ ವರ್ಷದ ರೋಮನ್ ಕ್ಯಾಥೋಲಿಕ್ ಕ್ರೀಡೋತ್ಸವ, ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಏ.18 ಮತ್ತು 19 ರಂದು ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಅವರು, ಅಸೋಸಿಯೇಷನ್, ಪಾಲಿಬೆಟ್ಟದ ಲೂರ್ದ್ ಮಾತೆಯ ಚರ್ಚ್, ತಿತಿಮತಿಯ ಫಾತಿಮಾ ಮಾತೆಯ ಚರ್ಚ್ನ ಸಂಯುಕ್ತಾಶ್ರಯದಲ್ಲಿ ಕ್ರೀಡಾಕೂಟ ನಡೆಯಲಿದೆ. ಇದರಲ್ಲಿ ಜಿಲ್ಲಾ ವ್ಯಾಪ್ತಿಯ ಧರ್ಮ ಕೇಂದ್ರಗಳ ಕ್ರೈಸ್ತ ಬಾಂಧವರು ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು. ಕೊಡಗು ಜಿಲ್ಲಾ ವ್ಯಾಪ್ತಿಯ 23 ಧರ್ಮಕೇಂದ್ರಗಳ ಕ್ರಿಕೆಟ್ ತಂಡಗಳು ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ. ಎರಡು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿ ವಿಜೇತ ತಂಡಕ್ಕೆ 50 ಸಾವಿರ ರೂ.ನಗದು ಮತ್ತು ಟ್ರೋಫಿ, ದ್ವಿತೀಯ 30 ಸಾವಿರ ರೂ. ಮತ್ತು ಟ್ರೋಫಿ,…
ಮಡಿಕೇರಿ ಏ.16 NEWS DESK : ಕೊಡಗು ವಿಶ್ವವಿದ್ಯಾಲಯವು 2023 ರಲ್ಲಿ ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯವಾಗಿ ಕೊಡಗಿನ ಚಿಕ್ಕ ಅಳುವಾರದಲ್ಲಿ ಸ್ಥಾಪನೆಯಾಗಿದ್ದು, ವಿಶಿಷ್ಟವಾಗಿ ಗಡಿ ಮತ್ತು ಗ್ರಾಮೀಣ ಜಿಲ್ಲೆಯ ಉನ್ನತ ಶಿಕ್ಷಣ ಆಕಾಂಕ್ಷೆ ಪ್ರತಿನಿಧಿಸುತ್ತದೆ. ಕೊಡಗು ವಿಶ್ವವಿದ್ಯಾಲಯವು ಒಂಬತ್ತು ಸ್ನಾತಕೋತ್ತರ ವಿಭಾಗಗಳು ಮತ್ತು ಇಪ್ಪತ್ತೈದು ಸಂಯೋಜಿತ ಪದವಿ ಕಾಲೇಜುಗಳನ್ನು ಹೊಂದಿದ್ದು, ಅತ್ಯಲ್ಪ ಅವಧಿಯಲ್ಲಿ ಪಾರದರ್ಶಕ ಆಡಳಿತ, ಪರಿಣಾಮಕಾರಿ ಪರೀಕ್ಷಾ ನಿರ್ವಹಣೆ, ಸಂಪನ್ಮೂಲ ಕ್ರೋಢೀಕರಣ ಮತ್ತು ಆರ್ಥಿಕ ಶಿಸ್ತು ಇತ್ಯಾದಿ ಮಾನದಂಡಗಳಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದೆ. ಕೊಡವ ಸಾಮೂದಾಯಿಕ ಅಸ್ಮಿತೆ: ಕೊಡಗು ಜಿಲ್ಲೆಯಲ್ಲಿ ಹೇರಳವಾಗಿ ಕಂಡುಬರುವ ಕೊಡವ ಸಂಸ್ಕøತಿಯು ಭಾರತದ ಇತರ ಸಂಸ್ಕೃತಿಗಳಿಗಿಂತ ಭಿನ್ನವಾಗಿರುವ ಸಾಂಸ್ಕøತಿಕ ಅಸ್ಮಿತೆಯಾಗಿದ್ದು, ವಿಶಿಷ್ಟ ಸಂಪ್ರದಾಯ ಆಚರಣೆಗಳನ್ನು ಒಳಗೊಂಡಿರುವ ಪಶ್ಚಿಮ ಘಟ್ಟ ಪ್ರದೇಶದ ಸ್ಥಳೀಯ ಕೊಡವ ಸಮುದಾಯಗಳ ಜೀವನ ಕ್ರಮವಾಗಿದೆ. ಕೊಡವ ಸಂಸ್ಕøತಿಯು ಪ್ರಾಚೀನ ಪರಂಪರೆ, ಸಮರ ಕೌಶಲ್ಯ, ಕೃಷಿ, ಪ್ರಕೃತಿ ಮತ್ತು ಕುಟುಂಬ ನೆಲೆಗಟ್ಟಿನೊಂದಿಗೆ ಸಂಯೋಜನೆ ಹೊಂದಿರುವ ಸಾಮೂದಾಯಿಕ ಜೀವನ ಪದ್ಧತಿಯಾಗಿದೆ ಮತ್ತು ಹೇರಳವಾದ ಮೌಖಿಕ…
ಮಡಿಕೇರಿ NEWS DESK ಏ.16 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.16 ರಂದು ಗೆಲುವು ಸಾಧಿಸಿದ ತಂಡಗಳು. *ಮೈದಾನ 1* ಅಯ್ಯಮಾಡ ಮತ್ತು ಮಲ್ಲಾಜಿರ ತಂಡಗಳ ನಡುವಿನ ಪಂದ್ಯದಲ್ಲಿ ಮಲ್ಲಾಜಿರಕ್ಕೆ 8 ವಿಕೆಟ್ ಗಳ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಯ್ಯಮಾಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 43 ರನ್ ಗಳನ್ನು ಗಳಿಸಿತು. ಮಲ್ಲಾಜಿರ 6 ಓವರ್ 2 ವಿಕೆಟ್ ನಷ್ಟಕ್ಕೆ 45 ರನ್ ಗಳನ್ನು ಸೇರಿಸಿ ಗೆಲುವು ಕಂಡಿತು. ಚಾರಿಮoಡ ಮತ್ತು ಆಟ್ರಂಗಡ ನಡುವಿನ ಪಂದ್ಯದಲ್ಲಿ ಚಾರಿಮಂಡ 5 ರನ್ ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚಾರಿಮಂಡ 6 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 84 ರನ್ ಗಳನ್ನು ಸೇರಿಸಿತು. ಆಟ್ರಂಗಡ 6 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 79 ರನ್…
ಮಡಿಕೇರಿ NEWS DESK ಏ.16 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.17 ರ ಪಂದ್ಯಗಳು. *ಮೈದಾನ 1* ಬೆಳಿಗ್ಗೆ 9 ಗಂಟೆಗೆ ಓಡಿಯಂಡ ಮತ್ತು ಅಮ್ಮುಣಿಚಂಡ, 10 ಗಂಟೆಗೆ ಕೋಚೆರ ಮತ್ತು ಚೆಯ್ಯಂಡ (ಬಲಂಬೆರಿ), 11ಕ್ಕೆ ಪಾಲಚಂಡ ಮತ್ತು ಐಚೋಡಿಯಂಡ, ಮಧ್ಯಾಹ್ನ 12ಕ್ಕೆ ಚೆರುವಾಳಂಡ (ಪಾಲೂರು) ಮತ್ತು ಚೆಕ್ಕೇರ, 1ಕ್ಕೆ ಬೋಳಕಾರಂಡ ಮತ್ತು ಅಡ್ಡೇಂಗಡ, 2ಕ್ಕೆ ಆಲೆಮಾಡ ಮತ್ತು ಚಾಮೇರಾ ಹಾಗೂ 3 ಗಂಟೆಗೆ ಕರ್ತಮಾಡ ಮತ್ತು ಮೋಟನಾಳಿರ *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಚಂಗುಲoಡ ಮತ್ತು ಪೊನ್ನಚಂಡ, 10ಕ್ಕೆ ಮೇದೇರಿರ ಮತ್ತು ಕೋಲುಮಾದಂಡ (ರ್ವತ್ತೊಕ್ಲು), 11ಕ್ಕೆ ಮಂಡೀರ (ನೆಲಜಿ) ಮತ್ತು ಚೊಟ್ಟಂಗಡ, ಮಧ್ಯಾಹ್ನ 12ಕ್ಕೆ ಕೊಟ್ರಮಾಡ ಮತ್ತು ಮಚ್ಚಮಾಡ, 1ಕ್ಕೆ ಓಡಿಯಂಡ ಮತ್ತು ಅಮ್ಮುಣಿಚಂಡ (ವಿಜೇತರು) ಹಾಗೂ ಕೊಚೇರ ಮತ್ತು ಚೆಯ್ಯಂಡ (ವಿಜೇತರು)
ಮಡಿಕೇರಿ ಏ.16 NEWS DESK : ನಮ್ಮ ಗಣತಿ, ನಮ್ಮ ಅಭಿವೃದ್ಧಿ 2027 ರ ಜನಗಣತಿಯ ಮೊದಲ ಹಂತವು ಈಗಾಗಲೇ ಆರಂಭವಾಗಿದ್ದು, ಸ್ವಯಂ ಗಣತಿ ಕಾರ್ಯ ಪೂರ್ಣಗೊಂಡಿದೆ. ಆ ದಿಸೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಸುಮಾರು 1,74,114 ಕುಟುಂಬಗಳಲ್ಲಿ 7,379 ಪ್ರಗತಿಯಾಗಿದೆ. ಉಳಿದಂತೆ ಏಪ್ರಿಲ್, 16 ರಿಂದ ಮೇ, 15 ರವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾಹಿತಿ ನೀಡಿದ್ದಾರೆ. ಮನೆ ಮನೆ ಗಣತಿ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ 999 ಗಣತಿದಾರರನ್ನು ನಿಯೋಜಿಸಲಾಗಿದೆ. ಮಡಿಕೇರಿ ತಾಲ್ಲೂಕಿಗೆ 187, ಮಡಿಕೇರಿ ನಗರಕ್ಕೆ 61, ಸೋಮವಾರಪೇಟೆ ತಾಲ್ಲೂಕಿಗೆ 186, ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ 12, ವಿರಾಜಪೇಟೆ ತಾಲ್ಲೂಕಿಗೆ 133, ವಿರಾಜಪೇಟೆ ಪುರಸಭೆ ವ್ಯಾಪ್ತಿಗೆ 36, ಪೊನ್ನಂಪೇಟೆ ತಾಲ್ಲೂಕಿನಲ್ಲಿ 161, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 19, ಕುಶಾಲನಗರ ತಾಲ್ಲೂಕಿಗೆ 158, ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ 46, ಒಟ್ಟು 999 ಗಣತಿದಾರರನ್ನು ನಿಯೋಜಿಸಲಾಗಿದೆ. ಜೊತೆಗೆ 172 ಮಂದಿ…






