ಲೇಖಕ: admin

ಮಡಿಕೇರಿ NEWS DESK ಜ.1 : ಮಹಾರಾಷ್ಟ್ರದಲ್ಲಿ ನಡೆದ ಆರನೇ ವರ್ಷದ ರಾಷ್ಟ್ರೀಯ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಕೊಡಗಿನ ಆರು ಬಾಲಕರು ಹಾಗೂ ನಾಲ್ವರು ಬಾಲಕಿಯರು ಭಾಗವಹಿಸಿ ಪದಕ ಗೆದ್ದಿದ್ದಾರೆ. ಮನ್ವಿತ್ ಮೋಹನ್, ಕೌಶಿಕ್ ಕುಮಾರ್ ಯು.ಸಿ ಹಾಗೂ ಹಫೀಸ್ ಚಿನ್ನದ ಪದಕ ಗೆದ್ದುಕೊಂಡರು. ಯಾಸಿನ್ ವಿ., ವಿಕ್ತ ಚೋಂದಮ್ಮ ಬೆಳ್ಳಿ ಪದಕ, ಶರಣಿ ಎ.ಶೆಟ್ಟಿ, ಸಾತ್ವಿಕ ಬಿ.ಎಸ್, ಸಾಧ್ವಿ ಆನಂದ್, ವೇಣುಗೋಪಾಲ್ ಹಾಗೂ ಸಿಯಾನ್ ಗೌಡ ಕಂಚಿನ ಪದಕ ಪಡೆದರು. ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ತರಬೇತುದಾರ ಎನ್.ಸಿ.ಸುದರ್ಶನ್ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷ ಬಿ.ಕೆ.ಸತೀಶ್ ಕುಮಾರ್ ಅವರು ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.

Read More

ಮಡಿಕೇರಿ ಜ.1 NEWS DESK : ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಗಣಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಗಯ್ಯಪುರ ಗ್ರಾಮದಲ್ಲಿ ನಡೆದಿದೆ. ಸಂಗಯ್ಯಪುರ ಗ್ರಾಮದ ನಿವಾಸಿ ಪೊನ್ನಪ್ಪ(62) ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ. ಮನೆಯ ಮುಂಭಾಗದಲ್ಲಿರುವ ಜಮೀನಿಗೆ ಕೆಲಸಕ್ಕೆಂದು ಬಂದಾಗ ಏಕಾಏಕಿ ಕಾಡಾನೆ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಎಸಿಎಫ್ ಗೋಪಾಲ್, ಆರ್‍ಎಫ್‍ಒ ಶೈಲೇಂದ್ರ, ಡಿಆರ್‍ಎಫ್ ಶ್ರವಣ ಕುಮಾರ್, ಸಿಬ್ಬಂದಿಗಳಾದ ಈರಣ್ಣ, ವೆಂಕಟೇಶ್, ಪ್ರವೀಣ್ ಕುಮಾರ್, ರಂಜಿತ್, ವೇದಮೂರ್ತಿ, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಹಾಗೂ ವೃತ್ತ ನೀರಿಕ್ಷಕರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡರು. ಕಾಡಾನೆ ಉಪಟಳ ಮಿತಿ ಮೀರಿರುವ ಕುರಿತು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಡಾನೆ ದಾಳಿ ತಡೆಗೆ ಶಾಶ್ವತ ಪರಿಹಾರ ಸೂಚಿಸಬೇಕೆಂದು ಒತ್ತಾಯಿಸಿದರು. ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದಾಗ ಅರಣ್ಯ ಅಧಿಕಾರಿಗಳು ಆನೆ ಕಂದಕ ಮತ್ತು ಸೋಲಾರ್ ಬೇಲಿ ನಿರ್ಮಾಣದ ಭರವಸೆ ನೀಡಿದರು.

Read More

ಸುಂಟಿಕೊಪ್ಪ ಜ.1 NEWS DESK  : ಪ್ರಸ್ತುತ ಸಮಾಜದಲ್ಲಿ ಧರ್ಮ ಶಿಕ್ಷಣದ ಕೊರತೆಯಿಂದ ಹಿಂದೂ ವಿರೋಧಿ ನೀತಿ ಮತ್ತು ಸಾಮಾಜಿಕ ದೌರ್ಜನ್ಯಗಳು ಹೆಚ್ಚುತ್ತಿದ್ದು, ಇದು ಹಿಂದೂ ಸಮಾಜಕ್ಕೆ ಅಪಾಯವನ್ನು ತಂದೊಡ್ಡಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಂಚಾಲಕ ಡಾ.ಪ್ರಣವ್ ಮಲ್ಯ ಹೇಳಿದ್ದಾರೆ. ಸುಂಟಿಕೊಪ್ಪದ ಗುಂಡುಗುಟ್ಟಿ ಶ್ರೀ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಹಿಂದೂ ರಾಷ್ಟ್ರದ ಅವಶ್ಯಕತೆ ಕುರಿತು ಮಾತನಾಡಿದ ಅವರು, ಜಾತ್ಯತೀತ ರಾಷ್ಟ್ರದ ಹೆಸರಿನಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಎಂದು ಕೊಂಡು ಕಾನೂನು ಮತ್ತು ಸಂವಿಧಾನ ದುರುಪಯೋಗ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಆಂಗ್ಲ ಶಿಕ್ಷಣ ಮತ್ತು ಅವರು ನೀಡಿದ ಭಾರತ ಸುಳ್ಳು ಇತಿಹಾಸದ ಹಿನ್ನಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಾಗಲಿ ನಮ್ಮ ಯುವಜನತೆಗೆ ಆದರ್ಶರಾಗಿ ಉಳಿದಿಲ್ಲ ಬದಲಿಗೆ ಸಿನಿಮಾ ನಟ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡಿರುವ ಮಂದಿಯನ್ನು ಅನುಕರಿಸುತ್ತಿದ್ದಾರೆ ಎಂದರು. ಸಂಚಾಲಕರಾದ ದೀಪಾತಿಲಕ್ ಮಾತನಾಡಿ, ನಾವು ಜನ್ಮದಿಂದ ಹಿಂದೂ…

Read More

ಸುಂಟಿಕೊಪ್ಪ ಜ.1 NEWS DESK : ಜಿ ಟೌನ್ ಯುನೈಟೆಡ್ ಎಫ್‍ಸಿ ವತಿಯಿಂದ ನಡೆದ ಎರಡನೇ ವರ್ಷದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮಂಗಳೂರಿನ ಮರ್ಚೆಂಟ್ಸ್ ಎಫ್‍ಸಿ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಸುಂಟಿಕೊಪ್ಪ ಜಿಎಂಪಿ ಶಾಲಾ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಅಂತರಾಜ್ಯದ ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಒಟ್ಟು 28 ತಂಡಗಳು ಫುಟ್ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ಫೈನಲ್ ಪಂದ್ಯಾವಳಿಯಲ್ಲಿ ಕೊಡಗಿನ ಗೋಣಿಕೊಪ್ಪ ಕ್ಲಾಸಿಕ್ ಎಫ್ ಸಿ ತಂಡವು ದ್ವಿತೀಯ ಸ್ಥಾನ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಈ ಮೂಲಕ ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಗೆ ತೆರೆ ಬಿತ್ತು. ರೋಚಕವಾಗಿ ನಡೆದ ಫೈನಲ್ ಪಂದ್ಯಾವಳಿ ಮೊದಲಾರ್ಧದ 7ನೇ ನಿಮಿಷದಲಿ ಆದಿಲ್ ಗಳಿಸಿದ ಗೋಲಿನಿಂದ ಮಂಗಳೂರು ಮಚೆರ್ಂಟ್ಸ್ ಎಫ್ ಸಿ ತಂಡ ಮುನ್ನಡೆ ಸಾಧಿಸಿದ್ದರು. ದ್ವಿತಿಯಾರ್ಧದ ಕೊನೆಯ ನಿಮಿಷದಲ್ಲಿ ಗೋಣಿಕೊಪ್ಪ ಕ್ಲಾಸಿಕ್ ಎಫ್ ಸಿ ತಂಡದ ಜುನೈದ್ ಒಡೆದ ಗೋಲಿನಿಂದ ಸಮಬಲದಲ್ಲಿ ಪಂದ್ಯಾಟದ ಪೂರ್ಣ ಅವಧಿ ಕೊನೆಗೊಂಡಿತು. ನಂತರ ನಡೆದ ಟ್ರೈಬೇಕರ್ ನಲ್ಲಿ…

Read More

ಸುಂಟಿಕೊಪ್ಪ ಜ.1 NEWS DESK : ಯುವ ಜನಾಂಗ ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದು, ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕೆಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪಿ.ಎಂ.ಲತೀಫ್ ತಿಳಿಸಿದರು. ಸುಂಟಿಕೊಪ್ಪದ ಜಿಯಂಪಿ ಶಾಲಾ ಮೈದಾನದಲ್ಲಿ ನಡೆದ ಜಿ ಟೌನ್ ಯುನೈಟೆಡ್ ಎಫ್‍ಸಿ ವತಿಯಿಂದ ಡ್ರಗ್ಸ್ ಮುಕ್ತ ನಮ್ಮ ನಾಡು ಎಂಬ ಧೈಯ ವಾಕ್ಯದೊಂದಿಗೆ ನಡೆದ ಎರಡನೇ ವರ್ಷದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕ್ರೀಡೆಗೆ ಮಾತ್ರ ಒತ್ತು ನೀಡದೆ ಅದರೊಂದಿಗೆ ಯುವ ಸಂಘಟಗರು ಒಳ್ಳೆಯ ಸಮಾಜವನ್ನು ನಿರ್ಮಿಸಲು ಮಾದಕ ವ್ಯಸಕ್ಕೆ ಬಲಿಯಾಗಬೇಡಿ. ಪೋಷಕರು ತಮ್ಮ ಮೇಲೆ ಇರಿಸಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಮೂಲಕ ಉತ್ತಮ ಜೀವನವನ್ನು ಕಟ್ಟಿಕೊಳ್ಳುವಂತೆ ಕರೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್‍ನ ಅಧ್ಯಕ್ಷ ಜಮ್ಮಡ ಸೋಮಣ್ಣ ಮಾತನಾಡಿ, ಮಾದಕ ವಸ್ತುಗಳ ವ್ಯಸನದಿಂದ ಯುವಜನತೆ ದಾರಿ ತಪ್ಪಿ ಹಣದಾಸೆಯಿಂದ ಸಮಾಜ ಘಾತಕ ಶಕ್ತಿಗಳಾಗಿ ಬೆಳೆಯುತ್ತಾರೆ. ಯುವಜನತೆಯನ್ನು ಗುರಿಯಾಗಿಸಿ…

Read More

ಪುತ್ತೂರು ಜ.1 NEWS DESK : ಜಿಎಲ್ ಮಾಲ್ ಉತ್ಸವದ ಅಂಗವಾಗಿ ರೋಟರಿ ಕ್ಲಬ್ ಪುತ್ತೂರು ಯುವ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಎಲ್ ವನ್ ಮಾಲ್ ಆಶ್ರಯದಲ್ಲಿ ಚಿತ್ರಕಲಾ ಸ್ಪರ್ಧೆ ಭಾನುವಾರ ಜಿಎಲ್ ವನ್ ಮಾಲ್’ನಲ್ಲಿ ಉದ್ಘಾಟನೆಗೊಂಡಿತು. ವಿದ್ಯಾರ್ಥಿಗಳಾದ ಅಪ್ರಮೇಯ, ಶ್ರೇಯಾ, ಪ್ರಣ್ವಿತ್, ವಿಶೇಷ ಚೇತನ ಕಲಾವಿದೆ ರಕ್ಷಿತಾ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಪ್ರತಿ ಮಕ್ಕಳಲ್ಲೂ ಸೃಜನಾತ್ಮಕ ಪ್ರತಿಭೆ ಹುದುಗಿರುತ್ತದೆ. ಅದನ್ನು ಹೊರತೆಗೆದು, ವೇದಿಕೆ ನೀಡುವ ಕಾರ್ಯ ಇಲ್ಲಿ ಮಾಡಲಾಗುತ್ತಿದೆ ಎಂದರು. ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಕುಸುಮ್’ರಾಜ್ ಮಾತನಾಡಿ, ಕಲೆಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ಒಟ್ಟು ಏಳು ವಿಭಾಗಗಳಲ್ಲಿ ನಡೆಯುತ್ತಿರುವ ಈ ಚಿತ್ರಕಲಾ ಸ್ಪರ್ಧೆಗೆ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿರುವುದು ಸಂತೋಷದ ವಿಚಾರ ಎಂದರು. ಇದೇ ಸಂದರ್ಭ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ಚಿತ್ರಕಲಾ ಶಿಕ್ಷಕ…

Read More

ವಿರಾಜಪೇಟೆ ಜ.1 NEWS DESK : ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್ ನಿವೃತ್ತಿ ಹೊಂದಿದ್ದಾರೆ.  ವಿದ್ಯಾರ್ಥಿ ಹಾಗೂ ಸಾರ್ವಜನಿಕ ವಲಯದಲ್ಲಿ ತಮ್ಮ ಕಾರ್ಯವೈಖರಿಯ ಮೂಲಕ ಜನಾನುರಾಗಿ ಸುದೀರ್ಘ 32 ವರ್ಷ ಐದು ತಿಂಗಳ ಕಾಲ ಉತ್ತಮವಾಗಿ ಸೇವೆಯನ್ನು ಸಲ್ಲಿಸುವುದರ ಜೊತೆಗೆ ವಯೋನಿವೃತ್ತರಾಗಿದ್ದಾರೆ. ಮೂಲತ ಗೋಣಿಕೊಪ್ಪಲುವಿನ ದಿವಂಗತ ನಾಮೇರ ಡಾ.ಕುಟ್ಟಪ್ಪ ಹಾಗೂ ನಾಮೇರ ಜಾನಕಿ ಕುಟ್ಟಪ್ಪ ಅವರ ಪುತ್ರಿಯಾಗಿರುವ ಜ್ಯೋತಿ ಪ್ರಕಾಶ್, ಜೀವಶಾಸ್ತ್ರದಲ್ಲಿ ಎಂ.ಎಸ್ಸಿ, ಎಂ.ಫಿಲ್ ಪದವಿಯನ್ನು ಪಡೆಯುದರ ಜೊತೆಗೆ 1993 ಜುಲೈ 22 ರಂದು ಹಾಸನ ಜಿಲ್ಲೆಯ ಬೇಲೂರುವಿನ ಸರ್ಕಾರಿ ಪಿ ಯು ಕಾಲೇಜಿನಲ್ಲಿ ಉಪನ್ಯಾಸಕಿ ವೃತ್ತಿ ಜೀವನವನ್ನು ಆರಂಭಿಸಿದರು. ತದನಂತರ ಆರ್. ಸಿ. ರೋಡ್ ಹಾಸನದ ಪಿ. ಯು. ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಉಪನ್ಯಾಸಕಿಯಾಗಿ ಸೇವೆಯನ್ನು ಸಲ್ಲಿಸಿ, 1997 ಜೂನ್ 20ಕ್ಕೆ ವಿರಾಜಪೇಟೆ ಸರ್ಕಾರಿ ಪಿ. ಯು. ಕಾಲೇಜಿನಲ್ಲಿ ವರ್ಗಾವಣೆಯಾಗಿ ಬಂದು ವೃತ್ತಿಯನ್ನು ಮುಂದುವರೆಸಿದರು. 2018 ಜೂನ್ 21 ರಂದು ಇದೇ…

Read More

ಮಡಿಕೇರಿ ಜ.1 NEWS DESK : ಕೊಡಗು ಜಿಲ್ಲಾಧಿಕಾರಿ ವೆಂಕಟ್‍ರಾಜಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಒಂದೇ ದಿನ ವಿವಿಧೆಡೆಗೆ ವರ್ಗಾವಣೆಗೊಂಡಿದ್ದು, ಇವರ ಸ್ಥಾನಕ್ಕೆ ನೂತನ ಅಧಿಕಾರಿಗಳು ನಿಯುಕ್ತಿಗೊಂಡಿದ್ದಾರೆ. ಜಿಲ್ಲಾಧಿಕಾರಿ ಕೆ.ವೆಂಕಟ್‍ರಾಜಾ ಅವರ ಸ್ಥಾನಕ್ಕೆ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ವಿಭಾಗದ ಆಯುಕ್ತರಾಗಿದ್ದ ಎಸ್.ಜೆ.ಸೋಮಶೇಖರ್ ನಿಯೋಜನೆಗೊಂಡಿದ್ದಾರೆ. 2023ರಲ್ಲಿ ಕೊಡಗು ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದ ವೆಂಕಟ್ ರಾಜಾ ಅವರು ಕಳೆದ ಎರಡೂವರೆ ವರ್ಷಗಳಿಂದ ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಬೆಂಗಳೂರಿನ ಸರ್ವೆ ಹಾಗೂ ಭೂ ದಾಖಲೆಗಳ ವಿಭಾಗದ ಆಯುಕ್ತರಾಗಿ ವರ್ಗಾವಣೆಯಾಗಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ವರ್ಗಾವಣೆಗೊಂಡಿದ್ದು, ಈ ಸ್ಥಾನಕ್ಕೆ ಮೈಸೂರು ನಗರ ಉಪ ಆಯುಕ್ತೆ ಆಗಿದ್ದ ಬಿಂದು ಮಣಿ ನೇಮಕಗೊಂಡಿದ್ದಾರೆ. 2023ರ ಜನವರಿಯಲ್ಲಿ ಎಸ್‍ಪಿಯಾಗಿ ನಿಯುಕ್ತಿಗೊಂಡ ಕೆ.ರಾಮರಾಜನ್ ಅವರು ಬೆಳಗಾವಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ. ರಾಮರಾಜನ್ ತಮ್ಮ ಕಾರ್ಯಾವಧಿಯಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದರು.

Read More

ನಾಪೋಕ್ಲು ಜ.1 NEWS DESK : ಲಯನ್ಸ್ ಕ್ಲಬ್ ನಾಪೋಕ್ಲು ವತಿಯಿಂದ ಜ.4 ರಂದು ಲಯನ್ಸ್ ರಿಜನ್ ಮೀಟ್ “ಬೆಸುಗೆ” ಎಂಬ ಅದ್ದೂರಿ ಸಮ್ಮೇಳನವನ್ನು ನಾಪೋಕ್ಲು ಕೊಡವ ಸಮಾಜದಲ್ಲಿ ಆಯೋಜಿಸಲಾಗಿದೆ ಎಂದು ಕೊಡಗು ಮತ್ತು ಪಿರಿಯಾಪಟ್ಟಣ ವಲಯಕ್ಕೆ ಒಳಪಟ್ಟ 12 ಲಯನ್ಸ್ ಕ್ಲಬ್‍ಗಳ ಪ್ರಾಂತೀಯ ಅಧ್ಯಕ್ಷ ಲಯನ್ ಡಾ. ಕೋಟೆರ ಪಂಚಮ್ ತಿಮ್ಮಯ್ಯ ಹೇಳಿದರು. ಕೊಡವ ಸಮಾಜದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಯನ್ಸ್ ಕ್ಲಬ್ ಕೊಡಗು, ರೆವಿನ್ಯೂ ಜಿಲ್ಲೆಗಳನ್ನು ಹೊಂದಿದ್ದು ಇದರಲ್ಲಿ ಜಿಲ್ಲೆಯ ಲಯನ್ಸ್ ಕ್ಲಬ್‍ಗಳು ಭಾಗವಹಿಸುವುದರೊಂದಿಗೆ ಜ.4 ರಂದು ಸಂಜೆ 4 ಗಂಟೆಯಿಂದ 9 ಗಂಟೆವರೆಗೆ ಅದ್ದೂರಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಸಂದರ್ಭ 12 ಕ್ಲಬ್‍ಗಳ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ಲಿಯೋ ಕ್ಲಬ್ ನಾಪೋಕ್ಲು, ಲಯನ್ಸ್ ಜೋನ್ ಅಧ್ಯಕ್ಷರುಗಳು ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಲಿದ್ದು ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್, ರೊಟೇರಿಯನ್ ಅಭಿನಂದನ್ ಎ . ಶೆಟ್ಟಿ ಮುಖ್ಯ ಭಾಷಣಕಾರರಾಗಿರುವರು. ಕಾರ್ಯಕ್ರಮದಲ್ಲಿ 12 ಕ್ಲಬ್ ಗಳ ಸೇವೆಯನ್ನು ಪರಿಗಣಿಸಿ…

Read More

ಪುತ್ತೂರು ಜ.1 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು (ಓಚಿಣioಟಿಚಿಟ ಃoಚಿಡಿಜ oಜಿ ಂಛಿಛಿಡಿeಜiಣಚಿಣioಟಿ) ಮೂರು ಶೈಕ್ಷಣಿಕ ವರ್ಷಗಳಿಗೆ ಮಾನ್ಯತೆಯನ್ನು ನೀಡಿದೆ. ಈ ಹಿಂದೆ 2019 ರಿಂದ 2022 ಹಾಗೂ 2022 ರಿಂದ 2025 ವರೆಗೆ ಎರಡು ಬಾರಿ ರಾಷ್ಟ್ರೀಯ ಮಾನ್ಯತೆ ದೊರಕಿತ್ತು, ಈಗ ಮತ್ತೆ ಮೂರು ವರ್ಷಗಳ ಕಾಲಕ್ಕೆ ಅಂದರೆ ಜನವರಿ 2026 ರಿಂದ ಡಿಸೆಂಬರ್ 2028ರ ವರೆಗೆ ಮಾನ್ಯತೆಯನ್ನು ನೀಡಲಾಗಿದೆ. ರಾಷ್ಟ್ರೀಯ ಮಾನ್ಯತಾ ಮಂಡಳಿಯು ನವದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ (ಂIಅಖಿಇ) ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಪರೀಕ್ಷಿಸುವ ಜತೆಗೆ ಭಾರತದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಉತ್ತೇಜಿಸುವ ಸ್ವಾಯತ್ತ ಸಂಸ್ಥೆಯಾಗಿದೆ. ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಂIಅಖಿಇ) ನಿಗದಿಪಡಿಸಿದ ರೀತಿಯಲ್ಲಿ ಕಾಲೇಜಿನ ಶೈಕ್ಷಣಿಕ ಸೌಲಭ್ಯಗಳು, ಪಾಠ ಪ್ರವಚನಗಳು, ಮೂಲಭೂತ ಸೌಕರ್ಯಗಳು,…

Read More