ಲೇಖಕ: admin

ಮಡಿಕೇರಿ ಸೆ.17 : ರಾಷ್ಟ್ರೀಯ ನಾಯಕರಾದ ಲಾಲ್ ಬಹುದೂರ್ ಶಾಸ್ತ್ರಿ ಅವರ ಅಮೃತಕಾಲದಲ್ಲಿ ಅವರ ಜೀವನ ಶೈಲಿ ಮತ್ತು ಪರಂಪರೆ ಎಂಬ ವಿಷಯದ ಕುರಿತು ನೆಹರು ಯುವ ಕೇಂದ್ರದ ಕಚೇರಿಯಲ್ಲಿ ವರ್ಚುವಲ್ ಮಾಧ್ಯಮದ ಮೂಲಕ ನಡೆದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಶಾಬೀಭ ಪ್ರಥಮ, ಅಕ್ಷತಾಶೆಟ್ಟಿ ದ್ವಿತೀಯ ಮತ್ತು ಕಾವ್ಯ ಶ್ರೀ ತೃತೀಯ ಸ್ಥಾನ ಗಳಿಸಿದ್ದಾರೆ. ಪ್ರಥಮ ಸ್ಥಾನ ಪಡೆದ ಶಾಬೀಭ ಅವರು ರಾಜ್ಯ ಮಟ್ಟದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 25 ಸ್ಪರ್ಧಿಗಳು ಸಂಸತ್ತು ಭವನದಲ್ಲಿ ಭಾಷಣ ಮಾಡಲು ಅವಕಾಶವನ್ನು ಪಡೆಯಲಿದ್ದಾರೆ. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ ಅವರ ನೇತೃತ್ವದಲ್ಲಿ ಸ್ಪರ್ಧೆ ನಡೆಯಿತು. ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ, ನೆಹರು ಯುವ ಕೇಂದ್ರದ ಸಿಬ್ಬಂದಿಗಳಾದ ದೀಪ್ತಿ ಹಾಗೂ ರಂಜಿತಾ ಉಪಸ್ಥಿತರಿದ್ದರು.

Read More

ಮಡಿಕೇರಿ ಅ.17 :  ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ಅಕ್ಟೋಬರ್ 16 ರಿಂದ 24 ರವರೆಗೆ ನಗರದ ಗಾಂಧಿ ಮೈದಾವದ  ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿತ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಕಲಾವಿದರು, ಕಲಾತಂಡಗಳಿಂದ ಅಜಿ೯ ಆಹ್ವಾನಿಸಲಾಗಿದೆ. ಕಲಾವಿದರು, ಕಲಾತಂಡಗಳು ಅಜಿ೯  ನಮೂನೆಯನ್ನು  madikeridasara.com  ವೆಬ್ ಸೈಟ್ ನಿಂದ ಪಡೆದುಕೊಂಡು ಸೆಪ್ಟಂಬರ್ 26 ರೊಳಗಾಗಿ  madikeridasara@gmail.com  ಇಮೇಲ್ ಗೆ   ಮೇಲ್ ಮಾಡಬೇಕು. ಅಥವಾ  ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ಕೇರಾಫ್ ಮಡಿಕೇರಿ ನಗರ ದಸರಾ ಸಮಿತಿ, ಮಡಿಕೇರಿ ನಗರಸಭಾ ಸಂಕೀಣ೯. ಮಡಿಕೇರಿ – 571201 ಈ  ಕಛೇರಿಗೆ ಸಲ್ಲಿಸಬೇಕಾಗಿದೆ.  ನಿಗಧಿತ ದಿನಾಂಕದ ನಂತರ ಬಂದ ಅಜಿ೯ಗಳನ್ನು ಪರಿಗಣಿಸಲಾಗುವುದಿಲ್ಲ.  ಅಜಿ೯ ಸಲ್ಲಿಸುವವರು ನಿಗಧಿತ ಅಜಿ೯  ನಮೂನೆಯಲ್ಲಿಯೇ  ತಮ್ಮ ಮಾಹಿತಿ ನೀಡುವಂತೆ  ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪಕ೯ ತೆನ್ನಿರಾ ಮೈನಾ. ಸಂಚಾಲಕರು, ಸಾಂಸ್ಕೖತಿಕ ಸಮಿತಿ  9449156215, ಕುಡೆಕಲ್ ಸಂತೋಷ್  8762110948

Read More

ಮಡಿಕೇರಿ ಸೆ.17 : ಪಶ್ಚಿಮ ಬಂಗಾಳದ ಅಸನ್ ಸೋಲ್ ನಲ್ಲಿ ನಡೆದ 32ನೇ ಆಲ್ ಇಂಡಿಯಾ ಜಿ.ವಿ ಮೌಲಾಂಕರ್ ಶೂಟಿಂಗ್ ಚಾಂಪಿಯನ್ ಶಿಪ್ ನ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ನಗರದ ಕೊಡಗು ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿನಿ ಕಾನಡ್ಕ ಧನ್ವಿ ರಾಷ್ಟç ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈಕೆ ಈ ಹಿಂದೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಎನ್.ಆರ್ ವಿಭಾಗದಲ್ಲಿ ಭಾಗವಹಿಸಿ 16 ವರ್ಷದೊಳಗಿನ ಸಬ್ ಯೂತ್ ವಿಭಾಗದಲ್ಲಿ 4ನೇ ಸ್ಥಾನ ಮತ್ತು 19 ವರ್ಷದೊಳಗಿನ ಯೂತ್ ವಿಭಾಗದಲ್ಲಿ 5ನೇ ಸ್ಥಾನ ಗಳಿಸಿದ್ದರು. ಧನ್ವಿ ಮರಗೋಡಿನ ಕೃಷಿಕ ಕಾನಡ್ಕ ಹನೀಶ್ ಹಾಗೂ ಆಶಾ ದಂಪತಿಯ ಪುತ್ರಿ.

Read More

ಮಡಿಕೇರಿ ಸೆ.17 : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮೂರನೇ ದಿನದ ಪಾದಯಾತ್ರೆ ಮುತ್ತ್ನಾಡ್ ಮಂದ್ (ಕಾಲೂರು) ಮತ್ತು ಬದಿಗೇರಿ ನಾಡ್ ಮಂದ್ (ಮುಕ್ಕೋಡ್ಲು) ನಲ್ಲಿ ನಡೆಯಿತು. ಕೊಡವ ಜಾಗೃತಿ ಭಾಷಣ ಮಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ 9 ಪ್ರಧಾನ ಬೇಡಿಕೆಗಳ ಕುರಿತು ಕೊಡವರು ಜಾಗೃತರಾಗಬೇಕು ಮತ್ತು ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಹಕ್ಕೊತ್ತಾಯಗಳ ಕುರಿತು ಸರ್ಕಾರದ ಗಮನ ಸೆಳೆಯಲು ಐದು ಹಂತಗಳಲ್ಲಿ ಪಾದಯಾತ್ರೆ ನಡೆಸುತ್ತಿದ್ದು, ಬೇಡಿಕೆ ಈಡೇರುವವರೆಗೆ ಸಿಎನ್‌ಸಿ ಹೋರಾಟ ಮುಂದುವರೆಯಲಿದೆ ಎಂದರು. ಸೆ.18 ರಂದು ಬೆಳಗ್ಗೆ 10 ಗಂಟೆಗೆ ಸೂರ್ಲಬ್ಬಿ ನಾಡ್ ಮಂದ್ (ಸೂರ್ಲಬ್ಬಿ), ಮಧ್ಯಾಹ್ನ 2.30 ಗಂಟೆಗೆ ಗಡಿ ನಾಡ್ ಮಂದ್ (ಬಿಳಿಗೇರಿ-ಮಾದಾಪುರ), ಸೆ.19 ರಂದು ಬೆಳಗ್ಗೆ 10 ಗಂಟೆಗೆ ಪಾಲೇರಿ ನಾಡ್ ಮಂದ್ (ಪಾಲೇರಿ) ಮತ್ತು ಸಂಜೆ 4.30 ಗಂಟೆಗೆ ಮೂಡಗೇರಿ ನಾಡ್ ಮಂದ್ (ಕೆದಕಲ್) ನಲ್ಲಿ ಮೊದಲ ಹಂತದ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.…

Read More

ಮಡಿಕೇರಿ ಸೆ.16 : ವಿದ್ಯಾರ್ಥಿನಿಯರಿಗೆ ಶೇಕಡ 0.50 ರಷ್ಟು ರಿಯಾಯಿತಿ ದರದಲ್ಲಿ ಶೈಕ್ಷಣಿಕ ಸಾಲ ಒದಗಿಸಲಾಗುವುದು. ಆ ಮೂಲಕ ಅವರು ತಮ್ಮ ಉನ್ನತ ಶಿಕ್ಷಣದ ಕನಸನ್ನು ಈಡೇರಿಸಿಕೊಳ್ಳಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕ ಶೈಲೇಶ್ ಸುರೇಶ್ ನಾಯ್ಕ ಹೇಳಿದರು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನಲ್ಲಿ ನಡೆದ ಬ್ಯಾಂಕ್ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಬ್ಯಾಂಕಿಂಗ್ ಸಾಲ ಸೌಲಭ್ಯ,  ವಿದೇಶಿ ವ್ಯಾಸಂಗಕ್ಕಾಗಿ ನಿಗದಿಪಡಿಸಿದ ಶೈಕ್ಷಣಿಕ ಸಾಲ, ಬ್ಯಾಂಕಿಂಗ್ ಸ್ಪಾಮ್, ಸೈಬರ್ ಸೆಕ್ಯುರಿಟಿಯನ್ನು ಮೀರಿ ಬೆಳೆಯುತ್ತಿರುವ ಸೈಬರ್ ಅಪರಾಧ, ಬ್ಯಾಂಕಿಂಗ ಫ್ರಾಡ್ ಗಳ ಕುರಿತು ತಿಳಿಸಿದರು. ಪ್ರತೀ ತಿಂಗಳು 50 ರೂ.ಗಳನ್ನು ಖಾತೆಗೆ ಜಮಾ ಮಾಡುತ್ತಾ ಬಂದರೆ ನಿಮ್ಮ 60 ನೇ ವರ್ಷಕ್ಕೆ ಪಿಂಚಣಿಯ ರೂಪದಲ್ಲಿ ಆ ಹಣ ಯೋಜಿತ ನೆಲೆಯಲ್ಲಿ ಕೈ ಸೇರಲಿದೆ. ಅಲ್ಲದೆ ಶೂನ್ಯ ಮೊತ್ತದಲ್ಲಿ ನೀವು ತರೆದಿರುವ ವಿದ್ಯಾರ್ಥಿ ಖಾತೆಯನ್ನು ಉದ್ಯೋಗಿಗಳಾದ ಮೇಲೆ ಸಂಬಳದ ಖಾತೆಯಾಗಿ ಪರಿವರ್ತಿಸುವ ಅವಕಾಶ…

Read More

ಮಡಿಕೇರಿ ಸೆ.16 : ಭಾರತೀಯ ಸೇನೆಯಲ್ಲಿ ಸೇವೆಯಲ್ಲಿರುವಾಗಲೇ ಅನಾರೋಗ್ಯದಿಂದ ನಿಧನ ಹೊಂದಿದ ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ಯೋಧ ಯು.ಕೆ.ಜಿತನ್ (33) ಅವರ ಅಂತ್ಯಕ್ರಿಯೆ ಇಂದು ಸ್ವಗ್ರಾಮದಲ್ಲಿ ನಡೆಯಿತು. ಸಕಲ ಸೇನಾ ಗೌರವ ಮತ್ತು ಸರ್ಕಾರಿ ಗೌರವಗಳೊಂದಿಗೆ ಜಿತನ್ ಅವರಿಗೆ ನಮನ ಸಲ್ಲಿಸಲಾಯಿತು. ಸುರಿಯುವ ಮಳೆಯ ನಡುವೆಯೂ ನೂರಾರು ಸಂಖ್ಯೆಯಲ್ಲಿದ್ದ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಉದಿಯನ ಕಾಳಪ್ಪ ಹಾಗೂ ದಮಯಂತಿ ಅವರ ಪುತ್ರ ಜಿತನ್ ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾರತೀಯ ಸೇನೆಯಲ್ಲಿ ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಜಿತನ್ ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಪ್ರಸ್ತುತ ಎಂಇಜಿ ಸೆಂಟರ್ ನಲ್ಲಿ ನಾಯಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಹಾಗೂ ತಂದೆ, ತಾಯಿಯನ್ನು ಅಗಲಿದ್ದಾರೆ.

Read More

ಮಡಿಕೇರಿ ಸೆ.16 : ವಿರಾಜಪೇಟೆಯ ಕೊಳತ್ತೋಡು ಬೈಗೋಡು ಸಮೀಪ ಬೀಟೆ ಮರವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಇಬ್ಬರು ಆರೋಪಿಗಳನ್ನು ಬಂಧಿಸಿ, ರೂ.35 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದೆ. ವಿರಾಜಪೇಟೆಯ ಜೈನರ ಬೀದಿ ನಿವಾಸಿ ಕೆ.ಆರ್.ಪ್ರದೀಪ್ ಹಾಗೂ ಬಿಟ್ಟಂಗಾಲ ನಿವಾಸಿ ಪಿ.ಎಸ್.ಅರ್ಜುನ್ ಬಂಧಿತ ಆರೋಪಿಗಳು. ವಿರಾಜಪೇಟೆ ಅರಣ್ಯ ವಲಯ ವ್ಯಾಪ್ತಿಯ ಕೊಳತ್ತೋಡು ಬೈಗೋಡು ಗ್ರಾಮದ ಸಮೀಪ ಗೋಣಿಕೊಪ್ಪ -ವಿರಾಜಪೇಟೆ ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ಬೀಟೆ ಮರದ 50 ನಾಟಗಳನ್ನು ತುಂಬಿಸಿ ಸಾಗಿಸುತ್ತಿದ್ದ ಇಚರ್ ವಾಹನವನ್ನು ಅರಣ್ಯ ಇಲಾಖಾ ತಂಡ ವಶಪಡಿಸಿಕೊಂಡು, ಆರೋಪಿಗಳನ್ನು ಬಂಧಿಸುವಲ್ಲಿ ಯಶಶ್ವಿಯಾಗಿದೆ. ವಿರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶರಣಬಸಪ್ಪ ಬಿ.ಎಂ. ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೊಚ್ಚೆರ ಎ.ನೆಹರೂರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿರಾಜಪೇಟೆ ವಲಯದ ಅರಣ್ಯ ಅಧಿಕಾರಿ ಕಳ್ಳಿರ ಎಂ.ದೇವಯ್ಯ, ವಿರಾಜಪೇಟೆ ವಲಯದ ಉಪವಲಯ ಅರಣ್ಯಧಿಕಾರಿಗಳಾದ ದೇಯಂಡ ಸಂಜಿತ್ ಸೋಮಯ್ಯ, ಆನಂದ ಕೆ. ಆರ್., ಅನಿಲ್ ಸಿ. ಟಿ.,…

Read More

ಮಡಿಕೇರಿ ಸೆ.16 : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ 9 ಪ್ರಧಾನ ಹಕ್ಕೊತ್ತಾಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಆರಂಭಿಸಿರುವ ಪಾದಯಾತ್ರೆ ಎರಡನೇ ದಿನವಾದ ಇಂದು ಕುಂಯ್ಯಂಗೇರಿ ನಾಡಿನ ಚೋರಂಗೆ ಮಾನಿ ನಾಡ್ ಮಂದ್ (ಹೊದ್ದೂರು-ಬೆಟ್ಟಗೇರಿ), ಕಗ್ಗೋಡು ನಾಡ್ ಮಂದ್-ಹಾಕತ್ತೂರು ಮತ್ತು ಮಡಿಕೇರಿ ನಗರದ ಮಿಡ್ಲ್ ಗ್ರೌಂಡ್ ಮಂದ್‌ನಲ್ಲಿ ನಡೆಯಿತು. ವಿವಿಧೆಡೆ ಕೊಡವ ಜನಜಾಗೃತಿ ಭಾಷಣ ಮಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ದೇಶದ ಸಂವಿಧಾನದಡಿ ನ್ಯಾಯಯುತ ಹಕ್ಕುಗಳನ್ನು ಪಡೆಯಲು ಅತ್ಯಂತ ಸೂಕ್ಷ್ಮ ಜನಾಂಗವಾದ ಕೊಡವರು ಅರ್ಹರಾಗಿದ್ದಾರೆ. ಹಕ್ಕುಗಳ ಬಗ್ಗೆ ಕೊಡವರು ಜಾಗೃತರಾಗಬೇಕು ಎಂದು ಕರೆ ನೀಡಿದರು. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಮೂಲಕ ಕೊಡವರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸಿಎನ್‌ಸಿಯ ಹೋರಾಟಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು. ಸೆ.17 ರಂದು ಬೆಳಗ್ಗೆ 9.30 ಗಂಟೆಗೆ ಮುತ್ತ್ನಾಡ್ ಮಂದ್ (ಕಾಲೂರು), ಮಧ್ಯಾಹ್ನ 12 ಗಂಟೆಗೆ ಬದಿಗೇರಿ ನಾಡ್ ಮಂದ್ (ಮುಕ್ಕೋಡ್ಲು) ಸೆ.18. ರಂದು…

Read More

ಮಡಿಕೇರಿ ಸೆ.16 : ಕೊಡಗು ಜಿಲ್ಲಾ ಮಹಾಬೋಧಿ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ.76,206 ರಷ್ಟು ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಸಿ.ಸತೀಶ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಂಘವು ಪ್ರಸ್ತುತ 1322 ಮಂದಿ ಸದಸ್ಯರುಗಳನ್ನು ಹೊಂದಿದ್ದು, ಸದಸ್ಯರಿಂದ ರೂ.11,47,300 ಲಕ್ಷ ಪಾಲು ಬಂಡವಾಳ ಸಂಗ್ರಹಿಸಲಾಗಿದೆ. ಸಂಘದ ದುಡಿಯುವ ಬಂಡವಾಳವು ರೂ. 16,79,100 ಆಗಿದ್ದು, ಸಂಘ ಪ್ರಸ್ತುತ ರೂ.4,70,040 ರಷ್ಟು ವಿವಿಧ ಠೇವಣಿಗಳನ್ನು ಹೊಂದಿರುತ್ತದೆ. ಹಾಗೂ ಸಂಘವು ಸದಸ್ಯರುಗಳಿಗೆ ಜಾಮೀನು ಸಾಲವನ್ನು ನೀಡುತ್ತಿದ್ದು, ಇದುವರೆಗೆ ರೂ.17,08,549 ಗಳಷ್ಟು ಸದಸ್ಯರಿಗೆ ಜಾಮೀನು ಸಾಲವಾಗಿ ನೀಡಲಾಗಿದೆ ಎಂದು ಹೇಳಿದ್ದಾರೆ. ಸಂಘದಲ್ಲಿರುವ ಠೇವಣಿಗಳಿಗೆ ಕನಿಷ್ಠ ಶೇ.2 ರಿಂದ ಗರಿಷ್ಠ ಶೇ.8 ರವರೆಗೆ ಆಕರ್ಷಕ ಬಡ್ಡಿ ನೀಡಲಾಗುತ್ತಿದೆ. ಹಿರಿಯ ನಾಗರೀಕರಿಗೆ 8.5 ರಷ್ಟು ಬಡ್ಡಿ ನೀಡಲಾಗುತ್ತಿದ್ದು, ಗ್ರಾಹಕರು ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಸಂಘದ ವ್ಯವಹಾರ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಲಾಭದಲ್ಲಿದೆ. ಸಂಘದಲ್ಲಿ ಪ್ರಸ್ತುತ ಮರಣೋತ್ತರ ಸಹಾಯಧನ ನಿಧಿ ಯೋಜನೆ ಜಾರಿಯಲ್ಲಿದೆ. ಹೊಸದಾಗಿ…

Read More

ಮಡಿಕೇರಿ ಸೆ.16 : ಸೆ.18 ರಂದು ನಡೆಯಲಿರುವ ಗೌರಿ- ಗಣೇಶ ಹಬ್ಬದ ಸಂದರ್ಭದಲ್ಲಿ ಯಾರೂ ಕೂಡ ಮಾಲಿನ್ಯಕಾರಿ ಪಿ.ಓ.ಪಿ.ಹಾಗೂ ರಾಸಾಯನಿಕ ಬಣ್ಣದ ಗಣೇಶ ಮೂರ್ತಿಗಳನ್ನು ತ್ಯಜಿಸಿ ಪರಿಸರ ಸ್ನೇಹಿ, ಮಣ್ಣಿನ ಗಣೇಶ ಮೂರ್ತಿ ಬಳಕೆ ಮಾಡುವ ಮೂಲಕ ಜಲಮಾಲಿನ್ಯ ತಡೆದು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಕೆ.ಎಂ.ಸತೀಶ್ ಕುಮಾರ್ ಹೇಳಿದರು. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಮಡಿಕೇರಿ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಘಟಕ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ( ಎನ್‍ಎಸ್‍ಎಸ್)ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ಸಹಯೋಗದಲ್ಲಿ ಮಡಿಕೇರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಇಕೋ ಕ್ಲಬ್…

Read More