ಮಡಿಕೇರಿ ಆ.6 : ಸಾಹಿತಿ ಹಾಗೂ ಸೋಮವಾರಪೇಟೆ ತಾಲ್ಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಕೆ. ಭರತ್ ಅವರು ಬರೆದ ಹನಿಗವನಗಳ ಸಂಕಲನ ‘ಧ್ಯಾನಕ್ಕೆ ಬಿದ್ದ ಅಕ್ಷರಗಳು’ ಕೃತಿ ಬಿಡುಗಡೆಗೊಂಡಿತು. ಕೊಡಗು ಪ್ರೆಸ್ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಅಭಿನಯ ಕಲಾ ಮಿಲನ ಚಾರಿಟೇಬಲ್ ಟ್ರಸ್ಟ್ ಕೊಡಗು ಸಹಯೋಗದಲ್ಲಿ ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಕೃತಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅನಂತಶಯನ, ಗಂಧವನ್ನು ತಿಕ್ಕಿದಷ್ಟು ಸುಗಂಧ ಹರಡುತ್ತದೆ. ಅದೇ ರೀತಿ ಜೀವನದಲ್ಲಿ ಹೆಚ್ಚು ನೋವು ಅನುಭವಿಸಿದವರು ಕವಿಯಾದರೆ ಸುಂದರವಾದ ಕವನ ಹುಟ್ಟುತ್ತೆ. ಕೆಲವರು ಬರೆದಾಗ ಅದರಲ್ಲಿ ಸಂದೇಶ ಇರಲ್ಲ. ಚಂದಕಾಣುತ್ತದೆ ಅಷ್ಟೆ. ಅಂತಹ ಬರಗಾರರು ಹೆಚ್ಚಿದ್ದಾರೆ. ಆದರೆ ಅನುಭವವನ್ನು ಬರಹಕ್ಕೆ ಇಳಿಸುವವರ ಸಂಖ್ಯೆ ಕಡಿಮೆ ಇದೆ ಎಂದು ಅಭಿಪ್ರಾಯಪಟ್ಟರು. ಬರವಣಿಗೆಯಲ್ಲಿ ಆಸಕ್ತಿ ಉಳ್ಳವರು ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ತಾರೆ. ಏಕಾಂಗಿಯಾಗಿದ್ದಾಗ ನಮ್ಮ ಪ್ರತಿಭೆ ತೆರೆದುಕೊಳ್ಳುತ್ತದೆ, ಬೇರೆಯವರೊಂದಿಗೆ…
ಲೇಖಕ: admin
ಮಡಿಕೇರಿ ಆ.6 : ಹವಾಗುಣದಲ್ಲಾಗುತ್ತಿರುವ ಏರುಪೇರಿನಿಂದ ಜಿಲ್ಲೆಯ ರೈತರು ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಕೃಷಿಕರ ಸಾಲಮನ್ನಾಕ್ಕೆ ಕ್ರಮ ಕೈಗೊಳ್ಳಬೇಕು. ರೈತರ ಪರವಾಗಿ ಚೆಟ್ಟಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಮೂಲಕ ರಾಜ್ಯ ಸರಕಾರಕ್ಕೆ ಪತ್ರ ಬರೆದು ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸುವುದಾಗಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ. ಚೆಟ್ಟಳ್ಳಿಯ ನರೇಂದ್ರಮೋದಿ ಭವನದಲ್ಲಿ ನಡೆದ ಚೆಟ್ಟಳ್ಳಿ ಸಹಕಾರ ಸಂಘದ 46ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ಸಂಘ 53.42 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ರಷ್ಟು ಡಿವಿಡೆಂಟ್ ನೀಡಲಾಗುತ್ತಿದೆ. ಸಾಲಮನ್ನಾ ಮತ್ತು ಬಡ್ಡಿಮನ್ನಾದ ಹಣ ಬಂದರೆ ಸಂಘ ಮತ್ತಷ್ಟು ಪ್ರಗತಿ ಸಾಧಿಸಲಿದೆ ಎಂದರು. ಸಂಘದಲ್ಲಿ ಕುಡಿಯುವ ನೀರಿನ ಘಟಕ, ವಸತಿಗ್ರಹ, ವಿವಿಧ ರೀತಿಯ ಸಾಲ ಯೋಜನೆ, ಗೊಬ್ಬರ ಮಾರಾಟ, ಆರ್ಟಿಸಿ ಹಾಗೂ ಛಾಪಾ ಕಾಗದ ಸೌಲಭ್ಯಗಳಿವೆ. ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ನೂತನ ಎಲೆಕ್ಟಿçಕ್ ವಾಹನ ಚಾರ್ಜಿಂಜ್ ಪಾಯಿಂಟ್, ಸಂಘದ ಹಿಂಬದಿಯ…
ಮಡಿಕೇರಿ ಆ.6 : ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಸಭೆ ನಾಪೋಕ್ಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪರಿಷತ್ ಹೋಬಳಿ ಅಧ್ಯಕ್ಷ ನೆರವಂಡ ಎಂ.ಉಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರೌಢ ಶಾಲಾ, ಕಾಲೇಜು ವಿಭಾಗ ಮತ್ತು ಸಾರ್ವಜನಿಕ ವಿಭಾಗಕ್ಕೆ ದೇಶ, ಭಕ್ತಿ ಗೀತೆ ಹಾಗೂ ಜಾನಪದ ಗೀತೆ (ಸಮೂಹ ಗಾಯನ ನಾಲ್ಕು ಮಂದಿ) ಮತ್ತು ಭಾವಗೀತೆ (ವೈಯುಕ್ತಿಕ) ಸ್ಪರ್ಧೆಯನ್ನು ಈ ತಿಂಗಳ ಒಳಗಾಗಿ ನಾಪೋಕ್ಲು ಪದವಿ ಕಾಲೇಜಿನಲ್ಲಿ ನಡೆಸಲು ಸಭೆ ತೀರ್ಮಾನಿಸಿತು. ಸೆ.12 ರಂದು ಮಧ್ಯಾಹ್ನ 3ಗಂಟೆಗೆ ಮುಂದಿನ ಸಭೆಯನ್ನು ನಡೆಸಲಾಗುತ್ತಿದ್ದು, ಸದಸ್ಯರುಗಳು ಖಡ್ಡಾಯವಾಗಿ ಹಾಜರಿರುವಂತೆ ಉಮೇಶ್ ಮನವಿ ಮಾಡಿದರು.
ಮಡಿಕೇರಿ ಆ.6 : ಕೊಡಗು ಹೆಗ್ಗಡೆ ಸಮಾಜದ ಆಡಳಿತ ಮಂಡಳಿ ವತಿಯಿಂದ ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದಲ್ಲಿ ಕಕ್ಕಡ ಪದಿನಟ್ಟ್ ಆಚರಿಸಲಾಯಿತು. ಕೊಡಗು ಹೆಗ್ಗಡೆ ಸಮಾಜ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಮಾತನಾಡಿ ನಮ್ಮ ಹಬ್ಬಗಳೆಲ್ಲವೂ ಕೃಷಿ ಆಧಾರಿತವಾಗಿದೆ. ಯುವ ಸಮೂಹ ಕೃಷಿಯತ್ತ ಚಿತ್ತಹರಿಸಿ ರಾಷ್ಟçದ ಆಹಾರ ಭದ್ರತೆಯನ್ನು ಗಟ್ಟಿಗೊಳಿಸಬೇಕು, ನಮ್ಮ ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು. ಕಕ್ಕಡ ಪದಿನಟ್ಟ್ ರ ವಿಶೇಷ ಖಾದ್ಯಗಳನ್ನು ಮಧ್ಯಾಹ್ನದ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಮಾಜದ ಉಪಾಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ, ಕಾರ್ಯದರ್ಶಿ ಚಂಗಚoಡ ಕಟ್ಟಿ ಕಾವೇರಪ್ಪ. ನಿರ್ದೇಶಕರುಗಳಾದ ಪಡಿಞರಂಡ ಪ್ರಭುಕುಮಾರ್, ಮೂರೀರ ಕುಶಾಲಪ್ಪ, ಕೊಂಗೆಪoಡ ರಘ, ಪಂದಿಕoಡ ಸುನಾ, ಮಲ್ಲಾಡ ಸುತಾ, ಮೂರೀರ ಶಾಂತಿ, ಪದಿಕಂಡ ನಾಗೇಶ್, ಪ್ರಮುಖರಾದ ಮೂರೀರ ಪಾರ್ವತಿ, ಮಲ್ಲಾಡ ಕಟ್ಟಿ ಪೂಣಚ್ಚ, ಪಡಿಞರಂಡ ಗೀತಾ, ಕವಿತಾ, ಕೊರಕುಟ್ಟೀರ ಯಶೋಧ ಮತ್ತಿತರರು ಉಪಸ್ಥಿತರಿದ್ದರು.
ಮಡಿಕೇರಿ ಆ.6 : ಮೂರು ದಿನಗಳ ಹಿಂದೆ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದ ಮಡಿಕೇರಿ ತಾಲ್ಲೂಕಿನ ಇಬ್ಬರು ಬಾಲಕಿಯರ ಪೈಕಿ ಒಬ್ಬಾಕೆ ಕಡಲಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ. ಮಡಿಕೇರಿ ನಗರದ ನಿವಾಸಿ ಮಾನ್ಯ ಎಂಬಾಕೆ ಮೃತಪಟ್ಟ ಬಾಲಕಿಯಾಗಿದ್ದು, ಮತ್ತೋರ್ವ ಬಾಲಕಿಯನ್ನು ರಕ್ಷಿಸಲಾಗಿದೆ. ನಗರದ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿಯ ಇಬ್ಬರು ಬಾಲಕಿಯರು ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ನಂತರ ನಾಪತ್ತೆಯಾಗಿದ್ದರು. ಈ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿ, ಪೊಲೀಸರು ತನಿಖೆ ಕೈಗೊಂಡಿದ್ದರು. ಈ ನಡುವೆ ಶನಿವಾರ ರಾತ್ರಿ 8.30 ಗಂಟೆ ವೇಳೆ ಉಡುಪಿಯ ಮಲ್ಪೆಯಲ್ಲಿ ಬಂಡೆಯೊoದರ ಮೇಲೆ ಕುಳಿತು ಆಟವಾಡುತ್ತಿದ್ದರು. ಈ ವೇಳೆ ಸಮುದ್ರದಿಂದ ದೊಡ್ಡ ಅಲೆಯೊಂದು ಅಪ್ಪಳಿಸಿ ಇಬ್ಬರನ್ನೂ ಸೆಳೆದುಕೊಂಡು ಹೋಗಿದೆ ಎನ್ನಲಾಗಿದೆ. ಮಲ್ಪೆ ಕಡಲಲ್ಲಿ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗೇಳುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಸಮೀಪದಲ್ಲೇ ಇದ್ದ ಮಲ್ಪೆಯ ಸಮಾಜ ಸೇವಕ, ಮುಳುಗು ತಜ್ಞ ಈಶ್ವರ್…
ಮಡಿಕೇರಿ ಆ.6 : ಪೊಲೀಸ್ ಸಿಬ್ಬಂದಿಯೊಬ್ಬರು ಮರದಿಂದ ಬಿದ್ದು ಮೃತಪಟ್ಟಿರುವ ಘಟನೆ ಸುಂಟಿಕೊಪ್ಪದ ಕಾನ್ಬೈಲ್ ನಲ್ಲಿ ನಡೆದಿದೆ. ಮಡಿಕೇರಿ ಕೇತ್ರದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಅವರ ಗನ್ ಮ್ಯಾನ್ ಆಗಿದ್ದ ಲೋಕೇಶ್ ಪೂಜಾರಿ(37) ಮೃತ ದುರ್ದೈವಿಯಾಗಿದ್ದಾರೆ. ತಮ್ಮ ತೋಟದಲ್ಲಿ ಮಾವಿನ ಮರ ಏರಿ ಅದರ ಕೊಂಬೆಗೆ ಕಸಿ ಮಾಡುವ ಸಂದರ್ಭ ರಕ್ತದೊತ್ತಡ ಕಡಿಮೆಯಾಗಿ 50 ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರು ಆ ವೇಳೆಗೆ ಅವರು ಮೃತಪಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮೃತ ಲೋಕೇಶ್ ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಯಾಗಿದ್ದ ಲೋಕೇಶ್ ಕಳೆದ 12 ವರ್ಷಗಳ ಕಾಲ ಅಪ್ಪಚ್ಚು ರಂಜನ್ ಅವರ ಗನ್ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಈ ಘಟನೆ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ::: ಕಂಬನಿ ::: ಲೋಕೇಶ್ ನಿಧನದ ಸುದ್ದಿ…
ಮಡಿಕೇರಿ ಆ.6 : ಕುಶಾಲನಗರ ಅರೆಭಾಷಿಕ ಸಮುದಾಯದ ಪದ್ಮಾವತಿ ಗೌಡ ಮಹಿಳಾ ಒಕ್ಕೂಟ ಹಾಗೂ ಗೌಡ ಮಹಿಳಾ ಸ್ವ – ಸಹಾಯ ಸಂಘದ ವತಿಯಿಂದ ಆಟಿ ಸಂಭ್ರಮ -2023 ಕಾರ್ಯಕ್ರಮ ಸ್ಥಳೀಯ ಗೌಡ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಉದ್ಘಾಟಿಸಿದರು. ಈ ಸಂದರ್ಭ ನಿವೃತ್ತ ಯೋಧ ದೇವಜನ ಚಿಣ್ಣಪ್ಪ, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಮಹಿಳಾ ಒಕ್ಕೂಟದ ಅಧ್ಯಕ್ಷ ಚೀಯಂಡಿ ಶಾಂತಿ, ನಿರ್ದೇಶಕರಾದ ಚೆರಿಯಮನೆ ಪಾರ್ವತಿ, ಗೌಡ ಸ್ವ ಸಹಾಯ ಸಂಘದ ಅಧ್ಯಕ್ಷೆ ಸೂದನ ಲೀಲಾವತಿ, ಶಾರದಾ ಬಸಪ್ಪ, ಪಟ್ಟಂದಿ ಬೀನಾ ಸೀತಾರಾಂ ಮೊದಲಾದವರಿದ್ದರು. ಎಡಿಕೇರಿ ಪ್ರೀತು ಸುಜಿತ್ ಅವರು ಸಿದ್ದಪಡಿಸಿದ್ದ ಮರಗೆಣಸಿನ ಹಪ್ಪಳ, ಚಿಲ್ಲನ ಲತಾ ಗಣಿಪ್ರಸಾದ್ ಅವರ ಮರಕೆಸದ ಪತ್ರೊಡೆ ಹಾಗೂ ಆಟಿಸೊಪ್ಪಿನ ರಸದ ಶಾವಿಗೆ, ನಡುವಟ್ಟಿರ ವನಿತ ಸುಜಿತ್ ಅವರ ಬಾಳೆ ಹೂವಿನ ಪಲ್ಯ, ಕಲಾ ಆನಂದ್ ಅವರ ಡ್ರೈ ಫಿಶ್ ಕರಿ, ಫಿಶ್ ಎಗ್ ರೋಸ್ಟ್ ಇನ್ನು…
ಮಡಿಕೇರಿ ಆ.6 : ಕೊಡವ ಕೂಟಾಳಿಯಡ ಕೂಟ ಸಂಘಟನೆಯು ಇತ್ತೀಚೆಗೆ ಕೊಡವ ಮಕ್ಕಳಿಗಾಗಿ ಆನ್ಲೈನ್ ನಲ್ಲಿ *ಕೊಡಗ್’ರ ಚುಪ್ಪಿ ಕೋಗಿಲೆಯ-ಭಾಗ -3″* ಎಂಬ ಗಾಯನ ಸ್ಪರ್ಧೆಯನ್ನು ಏರ್ಪಡಿಸಿತ್ತು. ಕೊಡಗು ಜಿಲ್ಲೆಯಲ್ಲದೆ ಬೇರೆ ಜಿಲ್ಲೆಯಿಂದ ಹಲವಾರು ಪುಟ್ಟ ಕೊಡವ ಮಕ್ಕಳು ಈ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ತೀರ್ಪುಗಾರರು 15 ಮಕ್ಕಳನ್ನು ಎರಡನೇ ಸುತ್ತಿಗೆ ಆಯ್ಕೆ ಮಾಡಲಾಯಿತು. ಎರಡನೆ ಸುತ್ತಿನಲ್ಲಿ ಭಾಗವಹಿಸಿದ ಸ್ಪರ್ಧಿಗಳ ಪೈಕಿ ಮೊದಲನೇ ಬಹುಮಾನ ರೂ. 25೦೦/ನಗದು ಮತ್ತು *ಕೊಡಗ್’ರ ಚುಪ್ಪಿ ಕೋಗಿಲೆ* ಎನ್ನುವ ಬಿರುದನ್ನು ನಾಪೋಕ್ಲುವಿನ ಚೀಯಕ್’ಪೂವಂಡ ಸ್ವರ ತಂಗಮ್ಮ ತನ್ನದಾಗಿಸಿಕೊಂಡರು. ಎರಡನೆ ಬಹುಮಾನ ರೂ. 2೦೦೦/ನಗದನ್ನು ಕಾಂಡಂಡ ಪರಿಧಿ ಪೂವಮ್ಮ , ನಾಪೋಕ್ಲು ಹಾಗೂ ಮೂರನೇ ಬಹುಮಾನ ರೂ. 15೦೦/ ವನ್ನು ತಾಪಂಡ ಹರ್ಷಿತ್ ಪೊನ್ನಪ್ಪ ಪಡೆದುಕೊಂಡರು. ಉಳಿದಂತೆ ಚೆಯ್ಯಂಡ ದೇಶಿಕ್ ನವೀನ್ ಚೆಯ್ಯಂಡಾಣೆ, ಕೊಟ್ಟಂಗಡ ಅನ್ವಿತ ಬೊಳ್ಳಮ್ಮ ಬಲ್ಯಮಂಡೂರ್, ಕಾಂಡಂಡ ಯಶ್ನ ಪೊನ್ನಕ್ಕ ಕೊಳಕೇರಿ, ನೆಲ್ಲಚಂಡ ಪೊನ್ನಮ್ಮ ನಲ್ವತೊಕ್ಲು, ಮಾದಂಡ ದೀತ್ಯಾ ಕಾವೇರಿ ವಿರಾಜಪೇಟೆ,…
ಮಡಿಕೇರಿ ಆ.6 : ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆ.8 ರಂದು ಮಂಗಳವಾರ ಕೊಡಗು ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಅವರೊಂದಿಗೆ ಸಂವಾದ ಕಾಯ೯ಕ್ರಮ ಆಯೋಜಿಸಲಾಗಿದೆ. ಮಡಿಕೇರಿ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ಕಾನೂನು ಸಮಸ್ಯೆಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ರೋಟರಿ ಸೇರಿದಂತೆ ಜಿಲ್ಲೆಯ ವಿವಿಧ ಸಂಘಸಂಸ್ಥೆಗಳ ಪ್ರಮುಖರೊಂದಿಗೆ ಆ 8 ರಂದು ಮಂಗಳವಾರ ಸಂಜೆ 7 ಗಂಟೆಗೆ ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ಸಂವಾದ ನಡೆಸಲಿದ್ದಾರೆ. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾಯ೯ದಶಿ೯ ರತ್ನಾಕರ್ ರೈ, ಸಹಾಯಕ ಗವನ೯ರ್ ದೇವಣಿರ ತಿಲಕ್ ಪಾಲ್ಗೊಳ್ಳಲಿದ್ದಾರೆ ಎಂದು ಕಾಯ೯ಕ್ರಮ ಸಂಚಾಲಕ ಅನಿಲ್ ಎಚ್.ಟಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ ಆ.6 : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕ್ರೀಡಾ ಸಮಿತಿ ಹಾಗೂ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬ ಕ್ರೀಡಾ ಸಮಿತಿ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರಿಗಾಗಿ ಆಯೋಜಿಸಿದ್ದ ಒಳಾಂಗಣ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಪತ್ರಕರ್ತರು ಕೇರಂ, ಟೇಬಲ್ ಟೆನ್ನಿಸ್, ಚೆಸ್, ಮೈಂಡ್ ಗೇಮ್ ನಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಮಹಿಳೆಯರ ಕೇರಂ ಸಿಂಗಲ್ಸ್ ವಿಭಾಗದಲ್ಲಿ ಬಿ.ಆರ್. ಸವಿತಾ ರೈ ಪ್ರಥಮ, ಉದಿಯಂಡ ಜಯಂತಿ ದ್ವಿತೀಯ ಸ್ಥಾನ ಪಡೆದುಕೊಂಡರು. ಪುರುಷರ ಕೇರಂ ಸಿಂಗಲ್ಸ್ ವಿಭಾಗದಲ್ಲಿ ಶಿವರಾಜು ಪ್ರಥಮ, ನವೀನ್ ಡಿಸೋಜ ದ್ವಿತೀಯ, ಡಬಲ್ಸ್ ವಿಭಾಗದಲ್ಲಿ ವಿನೋದ್, ಜಯಪ್ರಕಾಶ್ ಜೋಡಿ ಪ್ರಥಮ, ಆದರ್ಶ್, ನವೀನ್ ಡಿಸೋಜ ಜೋಡಿ ದ್ವಿತೀಯ ಸ್ಥಾನ ಗಳಿಸಿದರು. ಟೇಬಲ್ ಟೆನ್ನಿಸ್ ಸಿಂಗಲ್ಸ್ ನಲ್ಲಿ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಥಮ, ಅಲ್ಲಾರಂಡ ವಿಠಲ ನಂಜಪ್ಪ ದ್ವಿತೀಯ, ಡಬಲ್ಸ್ ನಲ್ಲಿ ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಂಜು ಸುವರ್ಣ ಜೋಡಿ ಪ್ರಥಮ, ಅಲ್ಲಾರಂಡ ವಿಠಲ, ಗಣೇಶ್ ಜೋಡಿ…






