ಲೇಖಕ: admin

ಕುಶಾಲನಗರ, ಫೆ.1: ಬಲಮುರಿ ಗಣಪತಿ ದೇವಾಲಯದ 25ನೇ ವಾರ್ಷಿಕೋತ್ಸವ ಹಾಗೂ 23ನೇ ವರ್ಷದ ಉತ್ಸವ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಪುರಸಭೆಯ ನೆಹರು ಬಡಾವಣೆಯಲ್ಲಿರುವ ದೇವಾಲಯದಲ್ಲಿ ಕಳೆದ 2 ದಿನಗಳಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಅರ್ಚಕರಾದ ಯೋಗೇಶ್ ಭಟ್‍ಮತ್ತು ಪ್ರಕಾಶ್ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು. ಹೋಮ ನಂತರ ತೀರ್ಥಪ್ರಸಾದ ವಿನಿಯೋಗ ನಡೆದು ಮಧ್ಯಾಹ್ನ ಮಹಾಮಂಗಳಾರತಿ ನಡೆದು ಭಕ್ತಾಧಿಗಳಿಗೆ ಅನ್ನಪ್ರಸಾದ ವಿತರಿಸಲಾಯಿತು. ಕುಶಾಲನಗರ ದೇವಾಲಯ ಒಕ್ಕೂಟದ ಪ್ರತಿನಿಧಿಗಳು ಫಲ ತಾಂಬೂಲಗಳೊಂದಿಗೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಸಂಜೆ ಬಡಾವಣೆಗಳ ಮುಖ್ಯ ಬೀದಿಯಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ಮಂಗಳವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ದೇವಾಲಯ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಡಿ.ಜೆ.ರೇಣುಕುಮಾರ್, ಉಪಾಧ್ಯಕ್ಷರಾದ ಜೆ.ಶಿವರಾಮನ್, ಕಾರ್ಯದರ್ಶಿ ಕೆ.ವಿ.ಅರುಣ, ಖಜಾಂಚಿ ಬಿ.ಸಿ.ಆನಂದ ದೇವಾಲಯ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಎಂ.ಎನ್.ಚಂದ್ರಮೋಹನ್, ಉಪಾಧ್ಯಕ್ಷ ಕೆ.ರಾಮದಾಸ್, ಚಿಕ್ಕೆಗೌಡ, ಚೆಲುವರಾಜ್, ಜಗದೀಶ್, ಮಂಜುನಾಥ್ ದೇವಾಲಯಗಳ ಪ್ರತಿನಿಧಿಗಳು ಮತ್ತು ಬಲಮುರಿ ದೇವಸ್ಥಾನದ ಕಾರ್ಯಾಕಾರಿ ಮಂಡಳಿ ಸದಸ್ಯರು ಹಾಜರಿದ್ದರು.

Read More

ಮಡಿಕೇರಿ ಫೆ.1 : ನಾಪೋಕ್ಲು ಮೂಲದ ಕಲ್ಲೇಂಗಡ ಬಬಿನ್ ಬೋಪಣ್ಣ ಅವರು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾಗಿ ಬಡ್ತಿ ಹೊಂದಿದ್ದಾರೆ. ವಿಜಯಪುರದಲ್ಲಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಕರಾಗಿದ್ದ ಇವರು ಇದೀಗ ಜಂಟಿ ನಿರ್ದೇಶಕರಾಗಿ ಬಡ್ತಿ ಹೊಂದಿ ಕಾರಾವಾರಕ್ಕೆ ವರ್ಗಾವಣೆಗೊಂಡಿದ್ದಾರೆ. ಅಲ್ಲದೆ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿಯಮಿತ ಕಾರಾವಾರದ ವ್ಯವಸ್ಥಾಪಕ ನಿರ್ದೇಶಕರ ಹೆಚ್ಚುವರಿ ಜವಾಬ್ದಾರಿಯನ್ನು ಕೂಡ ನೀಡಲಾಗಿದೆ. ಬಬಿನ್ ಬೋಪಣ್ಣ ಅವರು ನಾಪೋಕ್ಲು ಮೂಲದ ಪ್ರಸ್ತುತ ಮಡಿಕೇರಿ ನಿವಾಸಿಗಳಾಗಿರುವ ದಿ.ಕಲ್ಲೇಂಗಡ ಬೋಪಣ್ಣ (ಬೋಪ್ಣಿ) ಹಾಗೂ ಉಳ್ಳಿಯಡ ಕಾಮವ್ವ ದಂಪತಿ ಪುತ್ರ. ಜಂಟಿ ನಿರ್ದೇಶಕರಾಗಿ ಬಡ್ತಿ ಹೊಂದಿರುವ ಬಗ್ಗೆ ಕಲ್ಲೇಂಗಡ ಮತ್ತು ಉಳ್ಳಿಯಡ ಕುಟುಂಬ ವರ್ಗ ಹಾಗೂ ನಾಪೋಕ್ಲು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಮಡಿಕೇರಿ ಫೆ.1 :  ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗೋಣಿಕೊಪ್ಪಲು,ಪೊನ್ನಂಪೇಟೆ ತಾಲೂಕು ಪರಿಷತ್ತು ಘಟಕ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪಲು ಕಾಮತ್ ನವಮಿ ಸಭಾಂಗಣದಲ್ಲಿ 16ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿ ಸಭೆ ನಡೆಯಿತು.   

Read More

ಕುಶಾಲನಗರ, ಫೆ.1 : ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಫೆ.3 ರಂದು ಕುಶಾಲನಗರ ರೈತ ಸಹಕಾರ ಭವನದಲ್ಲಿ ನಡೆಯಲಿರುವ ಕುಶಾಲನಗರ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ  ಬಿ.ಆರ್.ನಾರಾಯಣ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಹ್ವಾನಿಸಲಾಯಿತು. ಸಮ್ಮೇಳನಾಧ್ಯಕ್ಷ  ಬಿ.ಆರ್.ನಾರಾಯಣ ಅವರಿಗೆ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ಮೂರ್ತಿ ,ಸಮ್ಮೇಳನದ ಆಹ್ವಾನ ಪತ್ರಿಕೆ ನೀಡಿ  ಸ್ವಾಗತಿಸಿದರು. ಕುಶಾಲನಗರ ತಾಲ್ಲೂಕು ರಚನೆಯಾದ ನಂತರ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು‌ ಕಸಾಪ ಅಧ್ಯಕ್ಷ ಮೂರ್ತಿ ಮನವಿ ಮಾಡಿದರು. ನಿಯೋಜಿತ ಸಮ್ಮೇಳನಾಧ್ಯಕ್ಷ ಬಿ.ಆರ್.ನಾರಾಯಣ ಮಾತನಾಡಿ, ಜಿಲ್ಲೆಯ ವಾಣಿಜ್ಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ನಗರಿ ಎನಿಸಿರುವ ಕುಶಾಲನಗರದಲ್ಲಿ ತಾಲ್ಲೂಕು ರಚನೆಯಾದ ನಂತರ ನಡೆಯುತ್ತಿರುವ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಬಗ್ಗೆ ಹೊಸ ತಲೆಮಾರಿನ ಪ್ರತಿಭೆಗಳಿಗೆ ಪರಿಚಯ ಮಾಡಬೇಕಿದೆ. ಸಾಹಿತ್ಯ ಸಮ್ಮೇಳನಗಳು ಕನ್ನಡಿಗರ ಅಸ್ಮಿತೆಯ ಪ್ರದರ್ಶನದೊಂದಿಗೆ ಕನ್ನಡ…

Read More

ಮಡಿಕೇರಿ ಫೆ.1 :  ನಗರದ  ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ  ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ  ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್. ಎಲ್. ದಿವಾಕರ್, ಡಿ.ಎಸ್.ಎಸ್ ನಿಂದ ವಿದ್ಯಾರ್ಥಿಗಳಿಗೆ  ಓದುವಿಕೆಗೆ ಸಿಗುವ ಸೌಲಭ್ಯಗಳ ಕುರಿತು ಮಾರ್ಗದರ್ಶನ ನೀಡಿದರು. ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಹೆಚ್.ಪಿ.ನಿರ್ಮಲಾ ಮಾತನಾಡಿ, ವಿದ್ಯಾರ್ಥಿನಿಯರಿಗೆ ಸಂವಿಧಾನದ ಮಹತ್ವವನ್ನು ಕುರಿತು ಮಾಹಿತಿ ನೀಡಿದರು. ಸಂವಿಧಾನದ ವಿಧಿ, ಮೂಲಭೂತ ಹಕ್ಕು ಹಾಗೂ ಮೂಲಭೂತ ಕರ್ತವ್ಯವನ್ನು ಕುರಿತು ವಿವರಿಸಿದರು. ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿ,  ಗಣರಾಜ್ಯ ಹಾಗೂ ಸಂವಿಧಾನದ ಪಿತಾಮಹ  ಡಾ. ಬಿ. ಆರ್. ಅಂಬೇಡ್ಕರ್ ಅವರ ಕುರಿತು  ವಿದ್ಯಾರ್ಥಿನಿಯರಿಗೆ  ವಿವರಿಸಿದರು. ಪತ್ರಕರ್ತ ಚಂದನ್ ನಂದರಬೆಟ್ಟು ಮಾತನಾಡಿ, ಜಾತಿ ವ್ಯವಸ್ಥೆ ನಮ್ಮ ಸಮಾಜದಲ್ಲಿ ಹೇಗೆ ಬೆಳೆದು ಹೆಮ್ಮರವಾಗಿ ನಿಂತಿದೆ,  ಜಾತಿಯ…

Read More

ಸೋಮವಾರಪೇಟೆ ಫೆ.1 : ಒಂದು ಕಾಲೇಜು ಉಳಿಯಬೇಕಾದರೆ ಪೋಷಕರ ಸಹಕಾರ ಅಗತ್ಯ ಎಂದು ಶಾಸಕ ಅಪ್ಪಚ್ಚು ರಂಜನ್  ಅಭಿಪ್ರಾಯ ವ್ಯಕ್ತಪಡಿಸಿದರು. ಯಡೂರು ಬಿ.ಟಿ.ಸಿ.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪೋಷಕರ ಮತ್ತು ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ  ಪಾಲ್ಗೊಂಡು ಮಾತನಾಡಿದರು. ಸ್ಥಳೀಯರು ತಮ್ಮ ಮಕ್ಕಳನ್ನು ದೂರದ ಊರಿಗೆ ವಿದ್ಯಾಭ್ಯಾಸಕ್ಕೆ ಕಳುಹಿಸಬಾರದು. ಮಕ್ಕಳನ್ನು ಕಾಲೇಜಿಗೆ ಕಳುಹಿಸಿದ ನಂತರ ತನ್ನ ಜವಾಬ್ದಾರಿ ಮುಗಿದಿದೆ ಎಂದು ಭಾವಿಸದೇ ಆಗಿಂದಾಗ್ಗೆ ಮಕ್ಕಳ ಬಗ್ಗೆ ಕಾಳಜಿ ವಹಿಸುವುದರೊಂದಿಗೆ ಪ್ರಾಧ್ಯಾಪಕರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಪೋಷಕರ ಬೇಜಬ್ದಾರಿಯಿಂದ ಮಕ್ಕಳು ತಪ್ಪು‌ದಾರಿ ಹಿಡಿಯುತ್ತಾರೆ ಎಂದರು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ  ಮುಂದಿನ ದಿನಗಳಲ್ಲಿ ಎಂಸಿಎ, ಹೋಟೆಲ್ ಮ್ಯಾನೆಜ್‌ಮೆಂಟ್‌, ಟೂರಿಸಂ ಕೋರ್ಸ್ ಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಹಳೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಆಸಕ್ತಿ ಮತ್ತು ಮುತುವರ್ಜಿ ವಹಿಸಬೇಕು. ಕಾಲೇಜಿನ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಗೆ ಹೆಚ್ಚಿನ ಮುತುವರ್ಜಿ ಇರಬೇಕು.  ಕಾಲೇಜಿನ ವಾತಾವರಣ ಉತ್ತಮ ರೀತಿಯಲ್ಲಿದೆ. ಎಲ್ಲ ಸೌಲಭ್ಯಗಳು ಕೂಡ ಖಾಸಗಿ ಕಾಲೇಜಿಗಿಂತಲೂ‌ ಹೆಚ್ಚಾಗಿದೆ. ಈ ಬಗ್ಗೆ…

Read More

ಮಡಿಕೇರಿ ಫೆ.1 : ಕೊಡಗು ಸಿರಿಗನ್ನಡ ವೇದಿಕೆ ಹಾಗೂ ಜಿಲ್ಲಾ ಮತ್ತು ಮಡಿಕೇರಿ ತಾಲೂಕು ಮಹಿಳಾ ಘಟಕದ ಸಹಯೋಗದಲ್ಲಿ ಶಿವರಾತ್ರಿಯ ಪ್ರಯುಕ್ತ ಕೊಡಗಿನ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ. ಪರ್ವತಗಳಲ್ಲಿ ಉಗ್ರ ನರ್ತನ ಮಾಡಿದ ಶಿವ, ಶಿವನು ಭಿಕ್ಷೆಗೆ ಬಂದಾ ಎಂದು ಹದವಾಗಿ ಹಾಡುತ್ತಾ, ಜೋಳಿಗೆಧಾರಿ, ಹಿಡಿ ಬೆಲ್ಲವ ಬೇಡುವ ಶಿವ, ದೂರದ ಸ್ಮಶಾನದಲ್ಲಿ ಹಸಿ ಶವದ ತಲೆ ಸೀಳಿ ಕಪಾಲಾಕೃತಿಯನ್ನು ತಯಾರಿಸುವ ಶಿವ, ಇನ್ನೆಲ್ಲೋ ಪತ್ರೆಯ (ಭಂಗಿ) ಕಸಿ ಮಾಡಿ ಭಂಗಿಗೆ ಕೆಂಡ ಕಾಯಿಸುವ ಶಿವ, ಬ್ರಹ್ಮನ ತಲೆಯೊಂದನ್ನು ಕಡಿದು ಅದರಿಂದ ಕಪಾಲ ಮಾಡಿ ಆ ಬುರುಡೆಯನ್ನೇ ಭಂಗಿಯ ಕೊಳವೆ ಮಾಡಿಕೊಂಡ ಶಿವ, ಸೋಮರಸ ಪ್ರಿಯ ಶಿವ, ರುಂಡ ಮಾಲಾಧಾರಿ ಶಿವ, ಶ್ರಮಿಕ ವರ್ಗದ ಬೆಳಕಿನ ಶಿವ, ದ್ರಾವಿಡರ ಶಿವ, ನಾಟ್ಯ ಶಿವ, ಬುಡಕಟ್ಟು ಜನಾಂಗದ ಶಿವ, ರುದ್ರಭೂಮಿಯಲ್ಲಿ ಪ್ರೇತಗಳಿಗೆ ಪಾಠ ಮಾಡುವ ಶಿವ ಈ ವಿಷಯದ ಕುರಿತ ಕವನಗಳನ್ನು ಮಾತ್ರ ಪರಿಗಣನೆಗೆ ಒಳಪಡಿಸಲಾಗುವುದು. ಕವನವನ್ನು ಮೊಬೈಲ್‍ನಲ್ಲಿ ಅಕ್ಷರ ತಪ್ಪಿಲ್ಲದಂತೆ ಟೈಪಿಸಿ…

Read More

ಮಡಿಕೇರಿ ಫೆ.1 : ನಗರದ ಸುದರ್ಶನ ಬಡಾವಣೆಯ ಮುನೀಶ್ವರ ಯುವಕ ಸಂಘದ ವತಿಯಿಂದ, ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಸಹಕಾರದೊಂದಿಗೆ ಶಿವರಾತ್ರಿಯ ದಿನವಾದ ಫೆ.18 ರಂದು ನಗರದಲ್ಲಿ ಹೊನಲು ಬೆಳಕಿನ ‘ಎಆರ್‌ಎಸ್ ಸ್ಮರಣಾರ್ಥ ಕಬಡ್ಡಿ-2023’ ಪಂದ್ಯಾವಳಿ ನಗರದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪಿ.ಟಿ.ಉಣ್ಣಿಕೃಷ್ಣ ಪಂದ್ಯಾವಳಿ ಮುನೀಶ್ವರ ದೇವಸ್ಥಾನದ ಮೈದಾನದಲ್ಲಿ ಅಂದು ರಾತ್ರಿ 7 ಗಂಟೆಗೆ ಮ್ಯಾಟ್‌£ಲ್ಲಿ ನಡೆಯಲಿದೆಯೆಂದು ತಿಳಿಸಿದರು. ಇತ್ತೀಚೆಗೆ ನಮ್ಮನ್ನು ಅಗಲಿದ ಬಡಾವಣೆೆಯ ನಿವಾಸಿಗಳಾದ ಪಂದಿಯoಡ ಆಶಾ, ರೋಶನ್ ಶೆಟ್ಟಿ ಹಾಗೂ ಶಶಾಂಕ್ ಅವರ ನೆನಪಿನಲ್ಲಿ ಎಆರ್‌ಎಸ್ ಸ್ಮರಣಾರ್ಥ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ರಾಜ್ಯ ಮತ್ತು ಹೊರ ರಾಜ್ಯ ತಂಡಗಳ ಪಾಲ್ಗೊಳ್ಳುವಿಕೆಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು. ಅಮೆಚೂರು ಕಬಡ್ಡಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಕಪಿಲ್ ದುಗ್ಗಳ ಮಾತನಾಡಿ, ಪಂದ್ಯಾವಳಿಯಲ್ಲಿ ಮೊದಲು ಹೆಸರು ನೋಂದಾಯಿಸಿಕೊಳ್ಳುವ 24 ತಂಡಗಳಿಗೆ ಅವಕಾಶವನ್ನು ನೀಡಲಾಗಿದೆ. ಆಸಕ್ತ ತಂಡಗಳು 2 ಸಾವಿರ ಪ್ರವೇಶ ಶುಲ್ಕದೊಂದಿಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.9448224983, 9448587975, 9591791671, 9902612740…

Read More

ಮಡಿಕೇರಿ ಫೆ.1 : ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂ.ಐ.ಒ) ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆಯ ಮಡಿಕೇರಿ ಶಾಖೆ ಫೆ.4 ವಿಶ್ವ ಕ್ಯಾನ್ಸರ್ ದಿನದಂದು ಕಾರ್ಯಾರಂಭಗೊಳ್ಳಲಿದೆ ಎಂದು ಮುಖ್ಯಕಾರ್ಯನಿರ್ವಹಕ ಅಧಿಕಾರಿ ಡಾ.ಲಾಲ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ವಿವಿಧ ಜಿಲ್ಲೆಗಳ ಕ್ಯಾನ್ಸರ್ ಬಾಧಿತರ ಸೇವೆಗಾಗಿ ಚಿಕ್ಕಮಗಳೂರು, ಉತ್ತರಕನ್ನಡದ ಶಿರಸಿ, ಹೊನ್ನಾವರ, ಉಡುಪಿ ಮೊದಲಾದ ಕಡೆಗಳಲ್ಲಿ ಎಂ.ಐ.ಒ ಕ್ಲಿನಿಕ್‍ಗಳ ಹಿರಿಯ ಕಾನ್ಸರ್ ತಜ್ಞರೇ ಆಗಮಿಸಿ ಕ್ಯಾನ್ಸರ್ ಬಾಧಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಕೊಡಗು ಜಿಲ್ಲೆಯ ಕ್ಯಾನ್ಸರ್ ಬಾಧಿತರು ಚಿಕಿತ್ಸೆ ಮತ್ತು ವೈದ್ಯರ ಮರುಭೇಟಿಗಾಗಿ ಮಂಗಳೂರಿಗೆ ಆಗಮಿಸಬೇಕಾಗಿದ್ದು, ಇದರಿಂದ ರೋಗಿಗಳಿಗೆ ಪ್ರಯಾಣ ಮತ್ತು ಹಣಕಾಸಿನ ಸಮಸ್ಯೆ ಎದುರಾಗಲಿದೆ. ಇದನ್ನು ಮನಗಂಡು ಮಡಿಕೇರಿಯ ರವಿ ಆರ್ಥೋಪೆಡಿಕ್ ಸೆಂಟರ್ ನಲ್ಲಿ ಎಂ.ಐ.ಒ ಕ್ಲಿನಿಕ್ ಅಧಿಕೃತವಾಗಿ ಕಾರ್ಯಾರಂಭಗೊಳ್ಳಲಿದೆ ಎಂದರು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ನಿರ್ದೇಶಕ ಡಾ.ಸುರೇಶ್ ರಾವ್, ರವಿ ಆರ್ಥೋಪೆಡಿಕ್ ಸೆಂಟರ್…

Read More

ಮಡಿಕೇರಿ ಫೆ.1 :  ಪದ್ಮಶ್ರೀ ಪುರಸ್ಕೃತ ಕೊಡಗಿನ ಉಮ್ಮತ್ತಾಟ್ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು  ಕೊಡಗು ಜಿಲ್ಲಾ ಯುವ ಒಕ್ಕೂಟದ ವತಿಯಿಂದ  ಸನ್ಮಾನಿಸಲಾಯಿತು. ರಾಣಿ ಮಾಚಯ್ಯ ಅವರ ನಿವಾಸಕ್ಕೆ  ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ.ಸುಕುಮಾರ್ ಹಾಗೂ ಪದಾಧಿಕಾರಿಗಳು ತೆರಳಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಜಿಲ್ಲಾ ಯುವ ಒಕ್ಕೂಟದ ಸಲಹಗಾರರಾದ ಎಂ.ಕೆ.ವೆಂಕಟೇಶ್. ಎಂ.ಎಸ್ ಶಂಭಯ. ಕಂದ ದೇವಯ್ಯ, ಕಾರ್ಯದರ್ಶಿ ಗಣೇಶ್, ಖಜಾಂಚಿ ಮೋಹನ್, ಮಡಿಕೇರಿ ತಾಲೂಕು ಅಧ್ಯಕ್ಷ ಬಾಳಡಿ ದಿಲೀಪ್ ಕುಮಾರ್, ಕಾರ್ಯದರ್ಶಿ ನೇತ್ರಾವತಿ ಸದಸ್ಯರಾದ ಸಭಾ ಸುಬ್ರಮಣಿ, ನವೀನ್ ದೇರಳ, ಇಂದುಮತಿ, ಹನೀಶ್, ವಿಗ್ನೇಶ್ವರ ಹಾಜರಿದ್ದರು.

Read More