ಮಡಿಕೇರಿ, NEWS DESK ಆ. 22 – ನಗರದ ಸಕಾ೯ರಿ ಪದವಿ ಪೂವ೯ ಕಾಲೇಜಿನಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಿರಿಯ ಜೀವಿಗಳಿಗೆ ಗೌರವ ನಮನ ಆಯೋಜಿಸಲಾಗಿತ್ತು. ಹಿರಿಯರಾದ ಕೆ.ಎಂ. ನಾಣಯ್ಯ, ಡಾ.ಎಂ.ಜಿ. ಪಾಟ್ಟರ್, ಜಿ.ಟಿ. ರಾಘವೇಂದ್ರ ಅವರನ್ನು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು ಸನ್ಮಾನಿತರಾದ ನಿವೖತ್ತ ಶಿಕ್ಷಕ ಕೆ. ಎಂ. ನಾಣಯ್ಯ ಮಾತನಾಡಿ, ಹೊಸ ಬೇರು, ಹಳೆ ಬೇರು ಸೇರಿದರೆ ಮರ ಸೊಗಸು ಎಂಬಂತೆ. ಹಿರಿಯರನ್ನು ಪ್ರೀತಿಸಿ ಗೌರವಿಸಿದರೆ ಅದು ನಿಮಗೆ ದುಪಟ್ಟಾಗಿ ವಾಪಾಸು ಬರುತ್ತದೆ, ಮೊದಲು ಮಾನವರಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹಿರಿಯ ಲೇಖಕ ಜಿ. ಟಿ. ರಾಘವೇಂದ್ರ ಮಾತನಾಡಿ, ಬಾಹ್ಯ ಶುದ್ಧಿಯೊಂದಿಗೆ ಆಂತರಿಕ ಶುದ್ಧಿ ಮುಖ್ಯ ಎಂದು ಹೇಳಿದರು. ಸನ್ಮಾನಿತರಾದ ಡಾ.ಎಂ. ಜಿ. ಪಾಟ್ಕರ್ ಮಾತನಾಡಿ, ಹಿರಿಯರಿಗೆ ಇಂದು ಸಂದ ಗೌರವು ಆದಶ೯ಪ್ರಾಯವಾಗಿದೆ ಎಂದು ಶ್ಲಾಘಿಸಿದರು. ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕಿ ರಶ್ಮಿದೀಪ ಕಾಯ೯ಕ್ರಮದ ಮಹತ್ವ ತಿಳಿಸಿ, ಹಿರಿಯರಿಂದ ಜೀವನ ಪಾಠವನ್ನು ಕಲಿಯುವುದರ…
ಲೇಖಕ: admin
ಮಡಿಕೇರಿ, NEWS DESK ಆ.22- ಹಿರಿಯರನ್ನು ಗುರುತಿಸಿ, ಗೌರವಿಸುವಂಥ ಕಾಯ೯ಕ್ರಮಗಳು ಸಮಾಜದ ಜನತೆಗೆ, ವಿದ್ಯಾಥಿ೯ಗಳಿಗೆ ಹಿರಿಯರ ಅಗತ್ಯವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬೆಟ್ಟಗೇರಿ ಸಕಾ೯ರಿ ಶಾಲೆಯ ನಿವೖತ್ತ ಮುಖ್ಯೋಪಾದ್ಯಾಯ ಕೆ.ಎಸ್. ಪುಟ್ಟಯ್ಯ ಶ್ಲಾಘಿಸಿದರು. ಬೆಟ್ಟಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಹಿನ್ನಲೆ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಯ ಈ ಕಾರ್ಯಕ್ರಮವನ್ನು ಅದ್ಭುತ ಕಾರ್ಯಕ್ರಮ ಎಂದು ಬಣ್ಣಿಸಿದ ಪುಟ್ಟಯ್ಯ, ಇಂತಹ ಕಾರ್ಯಕ್ರಮವು ಖಂಡಿತವಾಗಿಯೂ ಹಿರಿಯರ ಗೌರವ ಸ್ಥಾನಮಾನ ಹೆಚ್ಚಾಗಿ ಅವರು ಅನುಭವಿಸುತ್ತಿರುವ ಕಷ್ಟ ಹಾಗೂ ತೊಂದರೆಗಳಿಗೆ ಪರಿಹಾರ ಸಿಗುತ್ತದೆ ಇದರಿಂದಾಗಿ ಮಕ್ಕಳ ಮನೋಭಾವವು ನಿಚ್ಚಳವಾಗಿ ಬದಲಾಗಿ ಉತ್ತಮ ಸಮಾಜವನ್ನು ಸೃಷ್ಟಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ವೃದ್ರಾಶ್ರಮಗಳ ಬಗ್ಗೆ ಕೆ.ಎಸ್ ಪುಟಯ್ಯ , ಬೇಸರ ವ್ಯಕ್ತಪಡಿಸಿದರು ಶಾಲೆಯ ಹಳೆ ವಿದ್ಯಾರ್ಥಿ, ಖ್ಯಾತ ಕ್ರೀಡಾಪಟು ಹಾಗೂ ಕಾಫಿ ಬೆಳೆಗಾರ…
ಮಡಿಕೇರಿ, NEWS DESK ಆ. 22- ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಅರೆಕಾಡು ಸರ್ಕಾರಿ ಪ್ರೌಡಶಾಲೆಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಗ್ರಾಮದ ಹಿರಿಯ ನಾಗರಿಕರಾದ ಕಮಾಂಡರ್ ಕುಕ್ಕೇರ ಉತ್ತಪ್ಪ, ವೆಂಕಟಯ್ಯ ಹೆಚ್ ಟಿ, ಹಂಸ ಪಿ ಆರ್ ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು. ಶಾಲಾಭಿವೖದ್ದಿ ಸಮಿತಿ ಅಧ್ಯಕ್ಷ ಕೆ. ಎಂ. ಹಸನ್, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿಿ ಪದ್ಮಾವತಿ ಪಿ ಎಂ, ಶಿಕ್ಷಕ ವರ್ಗದವರು ಹಾಜರಿದ್ದರು. ರೋಟರಿ ಮಿಸ್ಟಿ ಹಿಲ್ಸ್ ನ ಮಾಜಿ ಸಹಾಯಕ ಗವನ೯ರ್ ದೇವಣಿರ ತಿಲಕ್ ಪೊನ್ನಪ್ಪ ಮಾತನಾಡಿ, ಹಿರಿಯರನ್ನು ವಿದ್ಯಾಥಿ೯ಗಳು ಗೌರವ ಬಾವನೆಯಿಂದ ಕಾಣಬೇಕೆಂದು ಕರೆ ನೀಡಿದರು. ಮಿಸ್ಟಿ ಹಿಲ್ಸ್ ನಿದೇ೯ಶಕರಾದ ಸ್ನೇಹಿತ್, ಕಟ್ಟೆಮನೆ ಸೋನಾಜಿತ್, ಲವಿನ್ ಹಾಗೂ ಗ್ರಾಮಸ್ಥರಾದ ಕಾಡೆಮಂಡ ವಿನೋದ್ ತಿಮ್ಮಯ್ಯ ಪಾಲ್ಗೊಂಡಿದ್ದರು.
ಮಡಿಕೇರಿ, NEWS DESK ಆ.22- ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಾಕತ್ತೂರುವಿನ ಸರ್ಕಾರಿ ಪ್ರೌಡಶಾಲೆಯಲ್ಲಿ ವಿಶ್ವಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಗ್ರಾಮದ ಹಿರಿಯ ನಾಗರಿಕರಾದ ಪೊಡನೊಳನ ಈಶ್ವರ , ಕನ್ನಚಂಡ ಎಂ. ಕಾರ್ಯಪ್ಪ , ದಂಬೆಕೋಡಿ ಭೀಮಯ್ಯ ದೇವಣೀರ ಮುತ್ತಪ್ಪ ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ನ ಮಾಜಿ ಸಹಾಯಕ ಗವನ೯ರ್ ದೇವಣಿರ ತಿಲಕ್ ಪೊನ್ನಪ್ಪ ಮಾತನಾಡಿ, ಸಮಾಜದಲ್ಲಿ , ಹಿರಿಯರ ಮಹತ್ವದ ಬಗ್ಗೆ ಹಲವು ನಿದರ್ಶನಗಳ ಮೂಲಕ ವಿವರಿಸಿದರು. . ಮಿಸ್ಟಿ ಹಿಲ್ಸ್ ಸದಸ್ಯ ಸ್ನೇಹಿತ್ ನಿವ೯ಹಿಸಿದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರು ಶಮಿ೯ಳಾ , ಶಿಕ್ಷಕರು ಹಾಜರಿದ್ದರು.
ಮಡಿಕೇರಿ, NEWS DESK ಆ.22- ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಿರಿಯ ಜೀವಿಗಳಿಗೆ ಗೌರವ ನಮನ ಕಾಯ೯ಕ್ರಮ ಆಯೋಜಿತವಾಗಿತ್ತು. ಹಿರಿಯ ನಾಗರಿಕರಾದ ವೇದಾವತಿ , ಕೊರನ ವಿಶ್ವನಾಥ್,ನಿವೃತ್ತ ಶಿಕ್ಷಕ ಪಿ ಕೆ ಸೋಮಯ್ಯ ಅವರನ್ನು ಈ ಸಂದಭ೯ ಸನ್ಮಾನಿಸಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕ ಜಗದೀಶ್ ಪ್ರಶಾಂತ್ ಹಿರಿಯರ ದಿನದ ಮಹತ್ವ ವಿವರಿಸಿದರು. ಹಿರಿಯರು ಚೆನ್ನಾಗಿದ್ದರೆ ಮಾತ್ರ ಅಂಥ ಸಮಾಜ ಸುಖಿ, ಸಮೖದ್ದಿಯನ್ನು ಹೊಂದಿರುತ್ತದೆ ಎಂದೂ ಅವರು ಅಭಿಪ್ರಾಯಪಟ್ಟರು. ಕಾಲೇಜು ಪ್ರಾಂಶುಪಾಲ ಮಂದಪ್ಪ ಅವರು ಮಾತನಾಡಿ, ಭಾರತೀಯ ಸಮಾಜದ ಭಾಗವಾಗಿದ್ದ ಅವಿಭಕ್ತ ಕುಟುಂಬವು ಇಂದು ಕಣ್ಮರೆಯಾಗಿದ್ದು ಇದರ ಪರಿಣಾಮ ಈ ಹಿಂದೆ ಹಿರಿಯ ನಾಗರಿಕರಿಗೆ ಸಿಗುತ್ತಿದ್ದ ರಕ್ಷಣೆ ಮತ್ತು ಪೋಷಣೆ ಕಡಿಮೆಯಾಗುತ್ತಿದೆ. ದೇಶದಲ್ಲಿ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿಯಾದ ವಿಚಾರವಾಗಿದೆ ಎಂದರು. ಪ್ರತಿಯೊಬ್ಬರೂ ಹಿರಿಯರ…
ಮಡಿಕೇರಿ NEWS DESK ಆ.22 : ಕೊಡಗು ಗೌಡ ಸಮಾಜಗಳ ಒಕ್ಕೂಟ ಹಾಗೂ ಬೆಂಗಳೂರು ಗೌಡ ಸಮಾಜಗಳ ಮುಖಂಡರು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮುದಾಯದ ವಿವಿಧ ಅಹವಾಲು ಹಾಗೂ ಬೇಡಿಕೆಗಳನ್ನು ಸಲ್ಲಿಸಿದರು. ಗೌಡ ಸಮುದಾಯದ ಅಭ್ಯುದಯಕ್ಕೆ ಸಂಬ0ಧಿಸಿದ ವಿಚಾರಗಳ ಕುರಿತು ಚರ್ಚಿಸಿ ಅಗತ್ಯ ಅನುದಾನಕ್ಕಾಗಿ ಮನವಿ ಮಾಡಿದರು. ಮುಖ್ಯಮಂತ್ರಿಗಳು ಹಾಗೂ ವಿವಿಧ ಖಾತೆ ಸಚಿವರನ್ನು ಭೇಟಿಯಾದ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಅವರು ಕುಶಾಲನಗರ ಸಮಾಜದ ವತಿಯಿಂದ ಸಲ್ಲಿಸಲಾಗಿದ್ದ ರೂ.3 ಕೋಟಿ ಅನುದಾನದ ಬೇಡಿಕೆಯಲ್ಲಿ ರೂ.1 ಕೋಟಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಅರಭಾಷೆ ಗೌಡ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಂಬ0ಧಿಸಿದ ಬೇಡಿಕೆಗೂ ಒಲವು ವ್ಯಕ್ತಪಡಿಸಿದ್ದಾರೆ. ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ವಿವಿಧ ಸಚಿವರನ್ನು ಭೇಟಿ ಮಾಡಿದ ನಿಯೋಗವು ಸಮುದಾಯದ ಹಲವಾರು ಬೇಡಿಕೆಗಳನ್ನು ಸಲ್ಲಿಸಿತು ಎಂದರು. ಬೇಡಿಕೆಗಳ ಮಂಜೂರಾತಿಗಾಗಿ…
ಮಡಿಕೇರಿ, NEWS DESK ಆ.22- ಕಡಂಗ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಹಿರಿಯರ ದಿನಾಚರಣೆ ಅಂಗವಾಗಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆ ವತಿಯಿಂದ ಹಿರಿಯ ಜೀವಿಗಳಿಗೆ ನಮನ ಕಾರ್ಯಕ್ರಮವು ನಡೆಸಲಾಯಿತು ಕಾರ್ಯಕ್ರಮದಲ್ಲಿ ಹಿರಿಯರಾದ ಶಾರದಾ ಕೆ.ಜೆ, ಅಬ್ದುಲ್ಲಾ ಎಂ. ಎ.,, ಕೋಡಿರ ಪ್ರಕಾಶ್ ಈರಪ್ಪ ಅವರನ್ನು ಸನ್ಮಾನಿಸಲಾಯಿತು ಸನ್ಮಾನಿತರು ಮಾತನಾಡಿ, ಹಿಂದಿನ ದಿನಗಳ ಜೀವನಶೈಲಿ, ಸಂಪ್ರದಾಯಗಳು, ಸಂಬಂಧಗಳ ಆತ್ಮೀಯತೆ., ನಮ್ಮ ಆಚರಣೆ, ಭಾಷೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯ ಬೇಕೆಂಬ ಆಶಯ ವ್ಯಕ್ತಪಡಿಸಿದರು.ಹಿರಿಯರನ್ನು ಗೌರವಿಸಿ, ಅವರ ಅನುಭವವನ್ನು ಕೇಳಿ, ಅವರೊಂದಿಗೆ ಸಮಯ ಕಳೆಯುವಂತೆ ಮಕ್ಕಳಿಗೆ ತಸಲಹೆ ನೀಡಿದರು. -ಹಿರಿಯರನ್ನು ಗೌರವಿಸುವುದು ನಮ್ಮ ಕರ್ತವ್ಯ ಮಾತ್ರವಲ್ಲ, ನಮ್ಮ ಸಂಸ್ಕೃತಿಯ ಹೆಮ್ಮೆ. ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ನಮಗೆ ಸದಾ ದಾರಿದೀಪವಾಗಿರಲಿ. ನಿಮ್ಮೆಲ್ಲರಿಗೂ ನಮ್ಮ ಹೃತ್ಪೂರ್ವಕ ನಮನಗಳು. ನಿಮ್ಮ ಬದುಕು ಸದಾ ಆರೋಗ್ಯದಿಂದ, ಸಂತೋಷದಿಂದ ಇರಲಿ ಎಂದು ಹಾರೈಸುತ್ತೇವೆ. ಎಂದು ಮಕ್ಕಳು ಹಾಗೂ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದರು. ವೈದ್ಯಾಧಿಕಾರಿ ಡಾ.ಶುಭಾ…
ಮಡಿಕೇರಿ, NEWS DESK ಆ.22 – ಕಗ್ಗೋಡ್ಲುವಿನ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವ ನಮನ ಆಯೋಜಿಸಲಾಯಿತು ಕೃಷ್ಣಪ್ಪ ಬಿ.ಟಿ, ಮೀನಾಕ್ಷಿ ಹೆಚ್.ಸಿ, ನೀಲ ಹೆಚ್ ಎ. , ಸುಭಾಷ್ ದಂಬೆಕೋಡಿ, ಅಕ್ಕವ್ವ ಕುಂಜಿಲನ ಅವರನ್ನು ಸನ್ಮಾನಿ,ಸಲಾಯಿತು. ನಾವು ಹಿರಿಯರ ಸಲಹೆ ಸ್ವೀಕರಿಸಿದಾಗ ನಮ್ಮ ಜೀವನದಲ್ಲಿ ಮುಂದೆ ಬರಲು ಸಾಧ್ಯ , ಹೀಗಾಗಿ ಹಿರಿಯರಿಗೆ ಗೌರವ ಸಲ್ಲಬೇಕು ಎಂದು ಶಾಲಾ ವಿದ್ಯಾಥಿ೯ಗಳು ತಮ್ಮ ಭಾಷಣದಲ್ಲಿ ಅಭಿಪ್ರಾಯಪಟ್ಟರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್, ನಿಕಟಪೂವ೯ ಅಧ್ಯಕ್ಷ ರತ್ನಾಕರ್ ರೈ, ನಿದೇ೯ಶಕರಾದ ಶಂಕರ ಪೂಜಾರಿ, ಇನ್ನರ್ ವೀಲ್ ನಿದೇ೯ಶಕಿ ನಮಿತರೈ , ಮುಖ್ಯ ಶಿಕ್ಷಕ ಟಿ.ಪಿ. ಸುರೇಶ್ ಹಾಜರಿದ್ದರು. ತಸ್ಮಿ ಪ್ರಾಥಿ೯ಸಿ, ಚಿದಾನಂದ ಹೊನ್ನಕೋಟಿ ನಿರೂಪಿಸಿ, ಮೋಹಿನಿ ಮಂದ್ರೀರ ವಂದಿಸಿದರು.
ಮಡಿಕೇರಿ, NEWS DESK ಆ. 22 – ಮದೆಮಹದೇಶ್ವರ ಸಕಾ೯ರಿ ಅನುದಾನಿತ ಪ.ಪೂ. ಕಾಲೇಜಿನಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಿರಿಯ ನಾಗರಿಕರಿಗೆ ಗೌರವಾಪ೯ಣೆ ಜರುಗಿತು. ಕಾಯ೯ಕ್ರಮದಲ್ಲಿ ಗ್ರಾಮದ ಹಿರಿಯರಾದ ಹುದೇರಿ ರಾಜೇಂದ್ರ, ಬಿ.ಎಸ್. ಚನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ಮದೆ ಮಹದೇಶ್ವರ ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು , ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕರಾದ ಜಯಂತ್ ಪೂಜಾರಿ,, ಲಿಂಗರಾಜು, ಸತೀಶ್ ರೈ ಹಾಗೂ ಕಪಿಲ್ ಕುಮಾರ್ , ಸ್ಲೋಕಸತೀಶ್ ರೈ ಹಿರಿಯರಿಗೆ ಗೌರವ ಸಲ್ಲಿಸುವ ಮಹತ್ವದ ಬಗ್ಗೆ ಮಾಹಿತಿ ನೀಡಿದರು
ಮಡಿಕೇರಿ NEWS DESK ಆ.22 : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರ ಮನೆಗೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ರಾಜ್ಯ ಕ್ರೀಡಾಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಶೌಕತ್ ಆಲೀ, ಪಕ್ಷದ ಮುಖಂಡರಾದ ಶಾಫಿ, ಸೂರಜ್ ಹೊಸೂರು, ಅಪ್ರು ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.






