ಮಡಿಕೇರಿ ಮಾ.31 NEWS DESK : ಪೇರಡ್ಕ-ಗೂನಡ್ಕದಲ್ಲಿ ಸಂಭ್ರಮದ ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಇತಿಹಾಸ ಪ್ರಸಿದ್ಧ ಅತಿ ಪುರಾಣ ಪೇರಡ್ಕ-ಗೂನಡ್ಕ ಮೋಹಿಯದ್ದಿನ್ ಜುಮ ಮಸ್ಜಿದ್ ಖತೀಬ್ ಉಸ್ತಾದ ನಹೀಮ್ ಫೈಜಿ ಅಲ್ ಮಹಬರಿ ಈದ್ ಸಂದೇಶ ನೀಡಿ ಕೋಮು ಸೌಹಾರ್ದತೆ, ಕುಟುಂಬ ಜೀವನ,ರಂಜಾನ್ ಪಾವಿತ್ರತೆ ಬಗ್ಗೆ ತಿಳಿಸಿದರು. ಜಮಾ ಅತ್ ಸರ್ವರೂ ಪಾಲ್ಗೊಂಡು ಪರಸ್ಪರ ಸ್ನೇಹ ಮಿಲನ ಮಾಡಿಕೊಂಡರು. ಮೃತಪಟ್ಟವರಿಗೆ ಖಬರ್ ಸ್ಥಾನದಲ್ಲಿ ಝಿಯಾರತ್ ಮತ್ತು ಪೇರಡ್ಕ ವಲಿಯುಲ್ಲಾಹಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನಡೆಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್, ಪದಾಧಿಕಾರಿಗಳದ ಟಿ.ಬಿ.ಹನೀಫ್, ಪಿ.ಕೆ.ಉಮ್ಮರ್ ಗೂನಡ್ಕ, ತೆಕ್ಕಿಲ್ ಮೊಹಮದ್ ಕುಂಞಿ ಪೇರಡ್ಕ, ಪಾಂಡಿ ಉಸ್ಮಾನ್, ಸಿನಾನ್ ದರ್ಕಾಸ್, ಡಿ.ಎ.ಮೊಯಿದು ದರ್ಕಾಸ್ ಗೂನಡ್ಕ, ಭಾತಿಶ ತೆಕ್ಕಿಲ್ ಸೆಟ್ಟಿಯಡ್ಕ, ಎಂ.ಆರ್.ಡಿ.ಎ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಎಸ್.ಕೆ.ಎಸ್.ಎಸ್.ಎಫ್.ಅಧ್ಯಕ್ಷ ಮುನೀರ್ ಧಾರಿಮಿ, ಅಕ್ಬರ್ ಕರಾವಳಿ, ಪಾಂಡಿ ಅಬ್ಬಾಸ್ ನಿವೃತ್ತ ಅರಣ್ಯ ಅಧಿಕಾರಿ ಯೂಸುಫ್, ತಾಲೂಕು ಕಚೇರಿ ಸಿಬ್ಬಂದಿ ರಜಾಕ್ ಮೊದಲಾದವರು ಭಾಗವಹಿಸಿದರು. …
ಲೇಖಕ: admin
ಮಡಿಕೇರಿ ಮಾ.31 NEWS DESK : ಕೊಡಗು ಮೈಸೂರು ಸಂಸದ ಯದುವೀರ್ ಒಡೆಯರ್ ಅವರು ವಿರಾಜಪೇಟೆ ತಾಲೂಕಿನ ಬೇಟೊಳಿ ಗ್ರಾಮದ ಚಿಟ್ಟಡೆ ಸರ್ಕಾರಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿˌ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿದರು. ನಂತರ ಮಾತನಾಡಿದ ಅವರು ಕೇಂದ್ರ ಸರ್ಕಾರದ ಹಲವಾರು ಗ್ರಾಮ ಕಲ್ಯಾಣ ಯೋಜನೆಗಳ ಮೂಲಕ ಜಿಲ್ಲೆಯಾದ್ಯಂತ ಮೂಲಭೂತ ಸೌಕರ್ಯಗಳ ಸಮಸ್ಯೆಗಳಿಗೆ ಶಾಶ್ವತ ಪರಾಹಾರ ನೀಡುವುದಾಗಿ ಭರವಸೆ ನೀಡಿದರು.
*ಕೃತಜ್ಞತೆ, ಪರಿಶ್ರಮ, ಕ್ಷಮೆ, ಕರುಣೆ ಬಾಳಿನ ಬೆಳಕಾಗಲಿ ಸರ್ವರಿಗೂ ಹಬ್ಬಗಳು ಒಳಿತು ಮಾಡಲಿ*
*ಸೌಹಾರ್ದತೆ ಸಾರುವ ಪವಿತ್ರ ಯುಗಾದಿ ಹಾಗೂ ರಂಜಾನ್ ಹಬ್ಬದ ಶುಭಾಶಯಗಳು…ಸರ್ವರಿಗೂ ದೇವರು ಒಳಿತು ಮಾಡಲಿ*
*ಹಬ್ಬಗಳು ನಾಡಿಗೆ ಹಾಗೂ ನಾಡಿನ ಜನತೆಗೆ ಒಳಿತು ಮಾಡಲಿ… ಸರ್ವರಿಗೂ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು*
*ನಾಡಿನ ಸಮಸ್ತ ಜನತೆಗೆ ಪವಿತ್ರ ಯುಗಾದಿ ಹಾಗೂ ರಂಜಾನ್ ಹಬ್ಬದ ಶುಭಾಶಯಗಳು*
*ಸಹೋದರತೆ, ಸಮಾನತೆ ಮತ್ತು ಪರೋಪಕಾರದ ಸಂದೇಶ ಸಾರುವ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು… ಕೊಡಗಿನ ಸಮಸ್ತ ಜನತೆಗೆ ಯುಗಾದಿ ಹಾಗೂ ರಂಜಾನ್ ಹಬ್ಬ ಶುಭ ತರಲಿ*
*ನಾಡಿನ ಸಮಸ್ತ ಜನತೆಗೆ ಸಹೋದರತೆ ಮತ್ತು ಸಹಬಾಳ್ವೆಯ ಸಂಕೇತವನ್ನು ಸಾರುವ ಈದುಲ್ ಫಿತ್ರ್ ರಂಜಾನ್ ಹಬ್ಬದ ಶುಭಾಶಯಗಳು*
*ಈದುಲ್ ಫಿತ್ರ್ ಹಾಗೂ ಯುಗಾದಿ ಹಬ್ಬದ ಶುಭಾಶಯಗಳು… ಎಲ್ಲರಿಗೂ ದೇವರು ಒಳಿತು ಮಾಡಲಿ ಎಂದು ಪ್ರಾರ್ಥಿಸುತ್ತೇನೆ*
**ಶಾಂತಿ, ಸೌಹಾರ್ದತೆ, ಪ್ರೀತಿ, ವಿಶ್ವಾಸ ಮೂಡಿಸುವ ಪವಿತ್ರ ಯುಗಾದಿ ಹಾಗೂ ರಂಜಾನ್ ಹಬ್ಬದ ಶುಭಾಶಯಗಳು**






