ಮಡಿಕೇರಿ ಮಾ.31 NEWS DESK : ಮುದ್ದಂಡ ಕಪ್ ಹಾಕಿ ಉತ್ಸವ-2025′ : (1/04/25) ರಂದು ನಡೆಯುವ ಪಂದ್ಯಾವಳಿ ಮೈದಾನ ಸಂಖ್ಯೆ 1 ರಲ್ಲಿ :: ಬೆಳಿಗ್ಗೆ 9 ಗಂಟೆಗೆ ಮಂಗೇರಿರ ಮತ್ತು ಅಕ್ಕಪಂಡ, 10 ಗಂಟೆಗೆ ಮಾಣಿಪಂಡ ಮತ್ತು ಮರುವಂಡ, 11 ಗಂಟೆಗೆ ಮಂಡೆಯಂಡ (ಸೂರ್ಲಬ್ಬಿ) ಮತ್ತು ಮಂಡೀರ (ನೆಲಜಿ), ಮಧ್ಯಾಹ್ನ 1 ಗಂಟೆಗೆ ಪಟ್ರಪಂಡ ಮತ್ತು ಬೊಜ್ಜಂಗಡ, 2 ಗಂಟೆಗೆ ಪಟ್ಟಚೆರುವಂಡ ಮತ್ತು ಚೆಟ್ರುಮಾಡ, 3 ಗಂಟೆಗೆ ಪಟ್ಟಡ ಮತ್ತು ಮುಕ್ಕಾಟಿರ (ಕುಂಬಳದಾಳು), 3.30ಕ್ಕೆ ಮೋಟನಾಳಿರ ಮತ್ತು ಬೊಳ್ತಂಡ ಮೈದಾನ ಸಂಖ್ಯೆ 2 ರಲ್ಲಿ :: ಬೆಳಿಗ್ಗೆ 9 ಗಂಟೆಗೆ ಬೇಪಡಿಯಂಡ ಮತ್ತು ಅಲ್ಲಾಂಡ, 10 ಗಂಟೆಗೆ ಕಂಬೆಯಂಡ ಮತ್ತು ಮಚ್ಚೆಟ್ಟಿರ (ಬಾಳುಗೋಡು), 11 ಗಂಟೆಗೆ ಪಾಳೆಯಡ ಮತ್ತು ಚಿಮ್ಮುಣಿರ, ಮಧ್ಯಾಹ್ನ 12 ಮೂಕಳೇರ ಮತ್ತು ಕಾನತಂಡ, 1 ಗಂಟೆಗೆ ಕಾರೇರ ಮತ್ತು ಕಲ್ಲೇಂಗಡ (ಬೆಳ್ಳೂರು), 2 ಗಂಟೆಗೆ ನೆರಪಂಡ ಮತ್ತು ಕಾಂಡಂಡ, 3 ಗಂಟೆಗೆ ಪೂಳಂಡ ಮತ್ತು ಚೆರಿಯಂಡ…
ಲೇಖಕ: admin
ಮಡಿಕೇರಿ, ಮಾ.31 NEWS DESK : ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಾಲಿಬಾಲ್ ಪಂದ್ಯಾವಳಿ ನಡೆಯಿತು. ಪಂದ್ಯಾವಳಿಯ ಉದ್ಘಾಟನೆಯನ್ನು ಕೂಡುಮಂಗಳೂರು ಗ್ರಾ.ಪಂ ಸದಸ್ಯ ಎಂ.ಕೆ.ಚಂದ್ರು ಮೂಡ್ಲಿಗೌಡ, ನೆರವೇರಿ ನಂತರ ಮಾತಾನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟದ ಆಯೋಜನೆಯಿಂದ ಯುವಕರು ಸಂಘಟನ್ಮಾಖವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರವಾಗುವುದು ಎಂದರು. ಕುಶಾಲನಗರ ಸಹಕಾರ ಸಂಘದ ಮಾಜಿ ನಿರ್ದೇಶಕ ಕೆ.ಕೆ.ನಾಗರಾಜಶೆಟ್ಟಿ ಮಾತಾನಾಡಿ, ಮನುಷ್ಯನ ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿ, ಕ್ರೀಡಾ ಮನೋಭಾವವನ್ನು ಪ್ರತಿಯೊಬ್ಬ ಯುವಕರು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಉದ್ಯಮಿ ಉಮಾಶೆಂಕರ್ ಮಾತಾನಾಡಿ, ಯುವ ಜನಾಂಗ ಸಂಘಟನೆಯಾದರೆ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯ. ಗ್ರಾಮಾಂತರ ಕ್ರೀಡಾ ಪ್ರತಿಭೆಗಳ ಪ್ರದರ್ಶನಕ್ಕೆ ಇಂತಹ ಕ್ರೀಡಾಕೂಟಗಳು ಪೂರಕ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಸಂದರ್ಭ ಸದಸ್ಯೆ ಗೌರಮ್ಮ, ಗ್ರಾ.ಪಂ ಮಾಜಿ ಸದಸ್ಯ ಚಂದ್ರಶೇಖರ್, ರಾಜ್ಯ ವಾಲಿಬಾಲ್ ಕ್ರೀಡಾಪಟು ಸೋಮಶೇಖರ್, ಮಹಮ್ಮದ್ ಸೇರಿದಂತೆ ವಾಲಿಬಾಲ್ ತಂಡದ ಮಾಲೀಕರು, ಸಂಘದ ಪದಾಧಿಕಾರಿಗಳಾದ ರವಿ, ಸತೀಶ್,…
ಮಡಿಕೇರಿ ಮಾ.31 NEWS DESK : ಕೇಂದ್ರ ಸರ್ಕಾರದ ಪಿಎಂ ಮಿನಿಸ್ಟರ್ಸ್, ಇಂಟರ್ನ್ಶಿಪ್ ಯೋಜನೆಯಡಿ ಯುವಕ, ಯುವತಿಯರಿಗೆ ಅವಕಾಶ ಒದಗಿಸುವ ಮೂಲಕ ನವೀನ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ವೇದಿಕೆ ಕಲ್ಪಿಸಲಾಗಿದೆ. ಈ ಮೂಲಕ 5 ವರ್ಷಗಳಲ್ಲಿ ಉನ್ನತಮಟ್ಟದ 300ಕ್ಕೂ ಹೆಚ್ಚಿನ ಕಂಪೆನಿಗಳಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅವಧಿಯು 12 ತಿಂಗಳುಗಳಾಗಿದ್ದು ಮಾಸಿಕ ರೂ.5000 ಶಿಷ್ಯವೇತನ ನೀಡಲಾಗುವುದು. ಅಭ್ಯರ್ಥಿಯು ಕನಿಷ್ಟ ಮೂರು ಇಂಟರ್ನ್ಶಿಪ್ಗಳಿಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಕಂಪೆನಿಗಳಲ್ಲಿ ಇಂಟರ್ನ್ಶಿಪ್ ಮಾಡಬೇಕಾಗುತ್ತದೆ. ಅಭ್ಯರ್ಥಿಯು 21 ರಿಂದ 24 ವರ್ಷ ವಯೋಮಿತಿಯೊಳಗಿಬೇಕು. ಯಾವುದೇ ಪದವಿ ಡಿಪ್ಲೋಮಾ ಐಟಿಐ, 10ನೇ ತರಗತಿ ಹಾಗೂ ಪಿಯುಸಿ ಪೂರ್ಣಗೊಳಿಸಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ.8.00 ಲಕ್ಷಗಳಿಗಿಂತ ಹೆಚ್ಚಿರಬಾರದು. ಕುಟುಂಬದ ಸದಸ್ಯರು ಯಾವುದೇ ಸರ್ಕಾರಿ ಉದ್ಯೋಗಿಯಾಗಿರಬಾರದು. ಇಂಟರ್ನ್ಶಿಪ್ ತರಬೇತಿಯು 12 ತಿಂಗಳ ಅವಧಿ ಇರುತ್ತದೆ. ಇಂಟರ್ಶಿಪ್ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕಂಪೆನಿ ಆಯೋಜಿಸಿದ ಸ್ಥಳದಲ್ಲಿ ಹೋಗಿ ತರಬೇತಿ ಪಡೆಯುವುದು. ಆಸಕ್ತಿಯುಳ್ಳ ಅಭ್ಯರ್ಥಿಗಳು www.pminternship.mca.gov.in ಜಾಲತಾಣದಲ್ಲಿ ಅರ್ಜಿ…
ಮಡಿಕೇರಿ ಮಾ.31 NEWS DESK : ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿಯ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯು ನಡೆಯಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ಜೊತೆಗೂಡಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಯುವನಿಧಿಯ 2023-24ರ ವಿಶೇಷ ನೋಂದಣಿ ಅಭಿಯಾನ ನಡೆಸಲಾಯಿತು. ಈ ಸಂದರ್ಭ ಪ್ರಾಂಶುಪಾಲರು ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್ ಮಾತನಾಡಿ ಯುವನಿಧಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿಶೇಷ ನೋಂದಣಿ ಅಭಿಯಾನದ ಮಹತ್ವ ಮತ್ತು ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಹತೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ಮಡಿಕೇರಿ NEWS DESK ಮಾ.31 : ಮಡಿಕೇರಿಯ ಚಾಮುಂಡೇಶ್ವರಿ ನಗರದ ನಿವಾಸಿ ಮಲ್ಲಿಕಮ್ಮ ಎಂಬುವವರು ಕಳೆದ 6 ದಿನಗಳಿಂದ ಕಾಣೆಯಾಗಿದ್ದಾರೆ. ಪಟ್ಟಣಕ್ಕೆ ಹೋದವರು ಮನೆಗೆ ಮರಳಿ ಬಂದಿರುವುದಿಲ್ಲ. ಇವರನ್ನು ಕಂಡಲ್ಲಿ ಅಥವಾ ಇವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಈ 9611101070 ಸಂಖ್ಯೆಯನ್ನು ಸಂಪರ್ಕಿಸುವಂತೆ ಕುಟುಂಬದ ಸದಸ್ಯರು ವಿನಂತಿಸಿಕೊಂಡಿದ್ದಾರೆ.
ಮಡಿಕೇರಿ ಮಾ.31 NEWS DESK : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಲ್ಲಿ 2025 ಏಪ್ರಿಲ್ 1 ರಿಂದ ದಿನದ ಕೂಲಿ ಮೊತ್ತವನ್ನು ರೂ. 349 ರಿಂದ 370ಕ್ಕೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಇನ್ನು ಮುಂದೆ ನರೇಗಾ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ನರೇಗಾ ಯೋಜನೆಯಲ್ಲಿ ಹೆಣ್ಣು ಮತ್ತು ಗಂಡಿಗೆ ಸಮಾನ ಕೂಲಿ ಅಂದರೆ ಒಂದು ದಿನದ ಕೂಲಿಗೆ ರೂ 370 ಪಡೆಯುವ ಹಕ್ಕಿದ್ದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ ಕನಿಷ್ಠ 100 ದಿನಗಳ ಕೂಲಿ ದೊರೆಯುವಂತೆ ಮಾಡುವುದು ಹಾಗೂ 65 ವರ್ಷ ಮೇಲ್ಪಟ್ಟ ವೃದ್ಧರಿಗೆ ಮತ್ತು ವಿಶೇಷಚೇತನರಿಗೆ ಕೆಲಸದಲ್ಲಿ ಶೇ.50 ವಿನಾಯಿತಿ ನೀಡಲಾಗಿದೆ. ಅರ್ಹ ಫಲಾನುಭವಿಗಳ ಒಂದು ಕುಟುಂಬಕ್ಕೆ ಜೀವಿತಾವಧಿಯಲ್ಲಿ ವೈಯಕ್ತಿಕ ಸೌಲಭ್ಯದಡಿ ರೂ.5…
ಮಡಿಕೇರಿ ಮಾ.31 NEWS DESK : ಜಿಲ್ಲೆಯ ಹಾಡಿಗಳಿಗೂ ಸರ್ಕಾರದ ಪಂಚ ಗ್ಯಾರಂಟಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಪಂಚ ಗ್ಯಾರಂಟಿ ಯೋಜನೆ ಸಮಿತಿಯ ಉಪಾಧ್ಯಕ್ಷ ಪಂಕಜ ತಿಳಿಸಿದರು. ನಗರದ ಜಿ.ಪಂ.ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಹಾಡಿಗಳಲ್ಲಿಯೂ ಪದವಿ ಪೂರ್ಣಗೊಳಿಸಿರುವ ಯುವಕರಿದ್ದು, ಅವರಿಗೆ ಯುವನಿಧಿ ಯೋಜನೆಯ ಬಗ್ಗೆ ಮಾಹಿತಿ ನೀಡಿ ನೋಂದಣಿ ಮಾಡಿಸಬೇಕು ಎಂದು ತಿಳಿಸಿದರು. ಸದಸ್ಯರಾದ ಮಂದ್ರೀರ ಮೋಹನ್ದಾಸ್ ಮಾತನಾಡಿ, ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಫಲಾನುಭವಿಗಳಿಂದಲೇ ಅಭಿಪ್ರಾಯ ಸಂಗ್ರಹಿಸುವ ಕಾರ್ಯವಾಗಬೇಕು. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು. ಜಿ.ಪಂ.ಉಪ ಕಾರ್ಯದರ್ಶಿ ಅಬ್ದುಲ್ ನಬಿ ಮಾತನಾಡಿ, ತಾಲೂಕು ಮಟ್ಟದಲ್ಲಿಯೇ ಫಲಾನುಭವಿಗಳ ಯಶೋಗಾಥೆ ಸಂಗ್ರಹ ಕಾರ್ಯವಾಗಬೇಕು ಎಂದರು. ಸಮಿತಿಯ ಉಪಾಧ್ಯಕ್ಷ ನಾಸೀರ್ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ಅಕ್ಕಿ ವಿತರಿಸಬೇಕು. ಯಾವುದೇ ಕಾರಣಕ್ಕು ಹಣ…
ಮಡಿಕೇರಿ ಮಾ.31 NEWS DESK : ಮಡಿಕೇರಿ ನಗರದ ವಿವಿಧೆಡೆ ಮುಸ್ಲಿಂ ಬಾಂಧವರ ಸಂಭ್ರಮದ ಹಬ್ಬ ಈದುಲ್ ಫಿತ್ರ್ ರಂಜಾ಼ನ್ ನನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮಸೀದಿ ಹಾಗೂ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಧರ್ಮಗುರುಗಳು ಧರ್ಮಸಂದೇಶ ನೀಡಿ ಹಬ್ಬಗಳ ಆಚರಣೆಯ ಕುರಿತು ವಿವರಿಸಿದರು. ಲೋಕಕಲ್ಯಾಣಕ್ಕಾಗಿ ಎಲ್ಲರೂ ಪ್ರಾರ್ಥಿಸುವಂತೆ ಕರೆ ನೀಡಿದರು. ಪರಸ್ಪರ ಆಲಿಂಗನದ ಮೂಲಕ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡ ಮುಸ್ಲಿಂ ಬಾಂಧವರು, ಕುಟುಂಬ ವರ್ಗ ಹಾಗೂ ಸ್ನೇಹಿತರೊಂದಿಗೆ ವಿಶೇಷ ಖಾದ್ಯಗಳನ್ನು ಸವಿದರು. ಕಳೆದ ಒಂದು ತಿಂಗಳ ರಂಜಾ಼ನ್ ಉಪವಾಸಕ್ಕೆ ತೆರೆ ಎಳೆದರು.
ಮಡಿಕೇರಿ ಮಾ.31 NEWS DESK : ಮಡಿಕೇರಿಯ ಸಿ.ಪಿ.ಸಿ ಲೇಔಟ್ನ ಮಸ್ಜಿದ್ ಉರ್ ರ್ರಹ್ಮಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಮ್ಮರ್ ಮೌಲವಿ ಮಾತನಾಡಿ ಕಳೆದ ಒಂದು ತಿಂಗಳಿನಿಂದ ರಂಜಾ಼ನ್ ಉಪವಾಸ ವ್ರತದಿಂದ ಲಭಿಸಿದ ತರಬೇತಿ, ದೇವ ಭಯ ಹಾಗೂ ಆಧ್ಯಾತ್ಮಿಕತೆಯನ್ನು ಮುಂದೆಯೂ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು. ನಾವು ಅನುಭವಿಸುತ್ತಿರುವ ಸುಖ ಸೌಕರ್ಯಗಳು, ಆಸ್ತಿ-ಅಂತಸ್ತು ಹಾಗೂ ಸಂಪತ್ತು ಆ ದೇವನ ಅನುಗ್ರಹವಾಗಿದೆ. ಆದರಿಂದ ಅಲ್ಲಾಹನ ಇಷ್ಟ ದಾಸರಾಗಬೇಕು. ಇಂದು ಲೋಕದಲ್ಲಿ ಯಾರದ್ದೊ ಸ್ವಾರ್ಥ ಹಿತಾಸಕ್ತಿಗಳಿಂದಾಗಿ ನಿರಂತರ ಯುದ್ದಗಳ ಪರಿಣಾಮ ಮಕ್ಕಳು, ಮಹಿಳೆಯರು ಸೇರಿದಂತೆ ನಿರಪರಾಧಿಗಳ ಹತ್ಯೆಯಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಅವರ ವಿಮೋಚನೆಗಾಗಿ ಪ್ರಾರ್ಥಿಸಬೇಕು, ಪರಸ್ಪರ ಪ್ರೀತಿ ಮತ್ತು ವಿಶ್ವಾಸ ಹಾಗು ಸೇವಾ ಮನೋಭಾವವನ್ನು ಅಳವಡಿಸಬೇಕು. ಇಂದು ಸಮಾಜಕ್ಕೆ ಮಾರಕವಾಗಿ ಪರಿಣಮಿಸಿರುವ ಮಾದಕ ವ್ಯಸನದ ವಿರುದ್ಧ ಜಾತಿ ಮತ ಬೇಧವಿಲ್ಲದೇ ಒಂದಾಗಿ ಹೋರಾಡಬೇಕು. ಯುವಕರು, ಯುವತಿಯರು ಮತ್ತು ಸಣ್ಣ ಮಕ್ಕಳು ಕೂಡ ಇದಕ್ಕೆ ಬಲಿಯಾಗುತ್ತಿರುವುದು ಅತಿ ದೊಡ್ಡ ದುರಂತ ಇಂತಹ ಸಂದರ್ಭದಲ್ಲಿ ನಾವು ನಮ್ಮ…
ಮಡಿಕೇರಿ ಮಾ.31 NEWS DESK : ಮನುಷ್ಯನ ಮನಸ್ಸು ಶುದ್ಧೀಕರಣಗೊಂಡಲ್ಲಿ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಕಂಡಕರೆ ಮಹಲ್ ಖತೀಬರಾದ ಮುಸ್ತಫಾ ಸಖಾಫಿ ಅಭಿಪ್ರಾಯಪಟ್ಟರು. ಮುಸ್ಲಿಮ್ ಬಾಂಧವರ ಈದುಲ್ ಫಿತ್ರ್ ಹಬ್ಬದ ಈದ್ ನಮಾಝ್ ನೇತೃತ್ವ ವಹಿಸಿ ಕಂಡಕರೆ ಮಸ್ಜಿದ್ ತಖ್ವಾದಲ್ಲಿ ಮಾತನಾಡಿದ ಅವರು, ಮನಸ್ಸಿನಲ್ಲಿ ದ್ವೇಷ,ಅಸೂಯೆ ಇರಿಸಿಕೊಂಡು ಜೀವನ ನಡೆಸಬಾರದು. ಮನುಜರ ಮನಸ್ಸು ಸದಾ ಕಾಲ ಶುದ್ಧೀಕರಣದಿಂದರಬೇಕು. ಅದಲ್ಲದೇ ಮನಸ್ಸಿನಲ್ಲೊಂದು,ಹೊರಗಡೆ ಒಂದು ವ್ಯಕ್ತಿತ್ವ ಇರಬಾರದು. ನಮ್ಮ, ನಡೆ,ನುಡಿ ನೇರವಾಗಿರಬೇಕು ಎಂದು ಹೇಳಿದ ಅವರು, ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳಿಗೆ ಯುವ ಸಮುದಾಯ ಬಲಿಯಾಗುತ್ತಿದ್ದಾರೆ. ಡ್ರಗ್ಸ್, ಗಾಂಜಾ,ಇನ್ನಿತರ ಮಾದಕ ವ್ಯಸನಗಳಿಂದ ಯುವಕರು ದೂರವಿದ್ದು ಸಮಾಜದ ಯಶಸ್ವಿಗೆ ದುಡಿಯಬೇಕು ಎಂದು ಮುಸ್ತಫಾ ಸಖಾಫಿ ಕರೆ ನೀಡಿದರು. ಈದುಲ್ ಫಿತ್ರ್ ನಮಾಝಿನ ಬಳಿಕ ಕಂಡಕರೆ ಖಬರ್ ಸ್ಥಾನದಲ್ಲಿ ಮರಣವೊಂದಿದವರಿಗೆ ವಿಶೇಷ ಪಾರ್ಥನೆ ನೆರವೇರಿಸಲಾಯಿತು. ನಂತರ ಎಲ್ಲರೂ ಪರಸ್ಪರ ಹಸ್ತಲಾಘವ ಮಾಡುವುದರ ಮೂಲಕ ಈದುಲ್ ಫಿತ್ರ್ ಶುಭಕೋರಿದರು. ಈ ಸಂದರ್ಭ ಮಹಮ್ಮದ್ ಮುಸ್ಲಿಯಾರ್,ಕಂಡಕರೆ…






