ಲೇಖಕ: admin

ಕುಶಾಲನಗರ ಏ.1 NEWS DESK : ಕುಶಾಲನಗರದ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ಕೂಡಿಗೆಯ ಶ್ರೀ ಶಕ್ತಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ದಿನ ನಿತ್ಯ ಬಳಕೆಯಾಗುವ ಔಷಧ, ಬಟ್ಟೆ ಮತ್ತು ನಿತ್ಯ ಬಳಕೆಯಾಗುವ ವಸ್ತುಗಳನ್ನು ನೀಡಲಾಯಿತು. ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ಅಧ್ಯಕ್ಷ ಬಿ.ಎಲ್.ಉದಯ್ ಕುಮಾರ್ ಮಾತನಾಡಿ, ಹಿರಿಯ ಚೇತನಗಳನ್ನು ಪ್ರತಿನಿತ್ಯ ಗೌರವಿಸುವ ಕಾಯಕವನ್ನು ಮಾಡಬೇಕು. ಇದರಿಂದ ಅವರ ಮನಸ್ಸಿನಲ್ಲಿ ಸಂತೋಷದ ಭಾವನೆ ಮೂಡುತ್ತದೆ ಮತ್ತು ಬದುಕಿನಲ್ಲಿ ಚೈತನ್ಯ ದೊರೆಯುತ್ತದೆ. ಇಂತಹ ಕಾರ್ಯಗಳಿಂದ ಒಂದು ದಿನದ ಮಟ್ಟಿಗಾದರೂ ಅವರ ಮನಸಿನಲ್ಲಿ ಖುಷಿ ಮೂಡಿಸಿದ ತೃಪ್ತಿ ಸಿಗುತ್ತೆ ಎಂದು ಉದಯ್ ಕುಮಾರ್ ಭಾವುಕರಾದರು. ತಮ್ಮ ತಮ್ಮ ಹಿರಿಯರನ್ನು ತಮ್ಮ ಮನೆಗಳಲ್ಲೇ ಗೌರವ ಪೂರ್ವಕವಾಗಿ ನಡೆಸಿಕೊಳ್ಳಲು ಅವರು ಕರೆ ನೀಡಿದರು. ಟ್ರಸ್ಟ್ ನ ಕಾರ್ಯದರ್ಶಿ ಬಿ.ಎಲ್.ಅಶೋಕ್, ಖಜಾಂಚಿ ಬಿ.ಆರ್.ನಟರಾಜ್, ನಿರ್ದೇಶಕ ಎಂ.ಪಿ.ಸತ್ಯನಾರಾಯಣ ಇತರರು ಹಾಜರಿದ್ದರು.

Read More

ಕುಶಾಲನಗರ ಏ.1 NEWS DESK :  ಕುಶಾಲನಗರದ ಛಾಯಾಗ್ರಾಹಕ ಪ್ರಮೋದ್ ಅವರಿಗೆ ಇತ್ತೀಚಿಗೆ ಪೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ 4500 ರೂಪಾಯಿ ಬಿದ್ದು ಸಿಕ್ಕಿತ್ತು. ಅದನ್ನು ಅಲ್ಲಿಯ ಕರ್ನಾಟಕ ಬ್ಯಾಂಕ್ ಸಿಬ್ಬಂದಿಗಳಿಗೆ ತಿಳಿಸಿದ್ದರು. ಹಣ ಕಳೆದುಕೊಂಡಿದ್ದ ಹೇರೂರು ಗ್ರಾಮದ ಪ್ರಹ್ಲಾದ್ ಅವರು ದೂರವಾಣಿ ಮೂಲಕ ಪ್ರಮೋದ್ ಅವರನ್ನು ಸಂಪರ್ಕಿಸಿ, ಕಳೆದುಕೊಂಡಿರುವ ಹಣದ ಕುರಿತು ಮಾಹಿತಿ ನೀಡಿದ ಮೇರೆಗೆ 4500 ರೂಪಾಯಿ ಹಿಂದಿರುಗಿಸಿ ಸಾರ್ವಜನಿಕರ ಪ್ರಶಂಸೆಗೆ ಪ್ರಮೋದ್ ಪಾತ್ರರಾಗಿದ್ದಾರೆ.   

Read More

ಮಡಿಕೇರಿ ಏ.1 NEWS DESK : ಸೋಮವಾರಪೇಟೆ ಬಸವೇಶ್ವರ ರಸ್ತೆ ನಿವಾಸಿ ದೇಶ್ಮುಖ್ (ಪುಟ್ಟಣ್ಣ)  ಹಾಸನದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆ ಕರ್ಕಳ್ಳಿಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರು ಪತ್ನಿ ಭಗವತಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು, ಬಳಗವನ್ನಗಲಿದ್ದಾರೆ.  90 ದಶಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿ ಯ ಸಕ್ರೀಯ ಕಾರ್ಯಕರ್ತರಾಗಿದ್ದ ಇವರು ಸೋಮವಾರಪೇಟೆ ವೀರಶೈವ ಸಮಾಜದ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದರು.

Read More

ಮಡಿಕೇರಿ ಏ.1 NEWS DESK : ಜನರಲ್ ತಿಮ್ಮಯ್ಯ ಅವರ ಜೀವನಾದಶ೯ ಪ್ರತಿಯೋವ೯ರಿಗೂ ಸದಾ ಆದಶ೯ಪ್ರಾಯವಾಗಿದೆ. ನಾಯಕರು ಅನೇಕರು ಇದ್ದಾರಾದರೂ ಕೆಲವರು ಮಾತ್ರ ಸದಾ ನಮ್ಮ ಮನಸ್ಸಿನಲ್ಲಿ ಇರಲು ಸಾಧ್ಯ. ಇಂಥ ಮಹಾನ್ ಸೇನಾ ನಾಯಕರಾಗಿದ್ದವರು ಜನರಲ್ ತಿಮ್ಯಯ್ಯನವರು ಎಂದು ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿ ವಿನಾಯಕ ನವಾ೯ಡೆ ಹೇಳಿದ್ದಾರೆ. ಕೊಡಗು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜನ್ಮ ನಿವಾಸ ಸನ್ನಿಸೈಡ್ ನಲ್ಲಿರುವ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ತಿಮ್ಮಯ್ಯ ಅವರ 119 ನೇ ಜನ್ಮ ಜಯಂತಿಯನ್ನು ತಿಮ್ಮಯ್ಯ ಭಾವಚಿತ್ರಕ್ಕೆ ಪುಪ್ಪಾಚ೯ನೆ ಮಾಡಿ ಅವರು ಮಾತನಾಡಿದರು. ಜನರಲ್ ತಿಮ್ಮಯ್ಯ ಅವರ ಜೀವನ ಪ್ರತೀಯಬ್ಬರಿಗೂ ಆದಶ೯ಪ್ರಾಯ. ಸೇನೆಯೇ ಅವರ ಆತ್ಮವಾಗಿತ್ತು ಹಾಗೇ ಆತ್ಮದಲ್ಲಿಯೇ ಸೇನಾ ಪ್ರೇಮ ಹುದುಗಿತ್ತು ಎಂದು ಸ್ಮರಿಸಿದರು. ಕೊಡಗಿನ ಜನತೆಗೆ ದೇಶಪ್ರೇಮದ ಮನೋಭಾವನೆ ಸಹಜವಾಗಿಯೇ ಹೆಚ್ಚಾಗಿದೆ. ಭವಿಷ್ಯದಲ್ಲಿ ಕೊಡಗಿನಿಂದ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಪಡೆಗಳಿಗೆ ಯುವಪೀಳಿಗೆ ಸೇಪ೯ಡೆಯಾಗಬೇಕೆಂದೂ ಅವರು ಹಾರೈಸಿದರು.…

Read More

ಮಡಿಕೇರಿ NEWS DESK ಏ.1 : ಕೊಡಗಿನ ಪುರಾತನ ದೇವಾಲಯಗಳಲ್ಲಿ ಒಂದಾದ ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ 14 ದೇವಾನು ದೇವತೆಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವವು ಏ.2 ರಿಂದ 5ರ ವರೆಗೆ ಜರುಗಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಷ್ಠಿಯಲ್ಲಿ ಮಾತನಾಡಿದ ಅವರು, ಏ.2 ರಂದು ಸಂಜೆ 6.30 ರಿಂದ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುನ್ನತ್ತಿಲ್ಲತ್ ಮುರಳಿಕೃಷ್ಣ ನಂಬೂದರಿ ಹಾಗೂ ಪರಿಶಿನಿಕಡವು ಶ್ರೀ ಮುತ್ತಪ್ಪ ಕ್ಷೇತ್ರದ ಆಚಾರಪಟ್ಟ ಮಡೆಯಚ್ಚನ್ ಬ್ಲಾತೂರ್ ಚಂದ್ರನ್ ಮಡೆಯಚ್ಚನ್ ನಾಲ್ಕುದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳು ಜರುಗಲಿದೆ ಎಂದು ತಿಳಿಸಿದರು. ಏ.2 ರಂದು ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಅಂಗವಾಗಿ ಸಂಜೆ 6.30 ರಿಂದ ಶ್ರೀ ಭಗವತಿ ಪೂಜೆ, ಕಳಸ ಪೂಜೆ, ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ, ಪ್ರಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ವಲಿ, ವಾಸ್ತು ಪೂಜೆ, ವಾಸ್ತು ಕಲಶಾಭಿಷೇಕ, ವಾಸ್ತು ಬಲಿ,…

Read More

ಮಡಿಕೇರಿ NEWS DESK ಮಾ.31 : ಕೊಡವ ಬಲ್ಯ ನಮ್ಮೆ ಸಂಪನ್ನ  ಹತ್ತು ಹಲವು ವಿಭಿನ್ನ-ವಿಶೇಷ ಕಾರ್ಯಕ್ರಮಗಳಿಂದ ಸಾವಿರಾರು ಜನರನ್ನು ಆಕರ್ಷಿಸುವಲ್ಲಿ ಎರಡು ದಿನಗಳ ಕೊಡವ ಬಲ್ಯನಮ್ಮೆ ಯಶಸ್ವಿ ಕಂಡಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಅಮ್ಮತ್ತಿ ಕೊಡವ ಸಮಾಜದಲ್ಲಿ ಜರುಗಿನ ಅಕಾಡೆಮಿಯ ಪ್ರಥಮ ಆರ್ಥಿಕ ವರ್ಷದ ಕೊನೆಯ ಕಾರ್ಯಕ್ರಮವಾಗಿ ‘ಕೊಡವ ಬಲ್ಯ ನಮ್ಮೆ’ಯ ಎರಡನೇ ದಿನ ವಿಚಾರಗೋಷ್ಠಿ, ಅಕಾಡೆಮಿ ಗೌರವ ಪ್ರಶಸ್ತಿ, ಪುಸ್ತಕ ಪ್ರಶಸ್ತಿ, ದುಡಿ-ತಾಳ ನೀಡುವ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಅಥಿತಿಗಳ ಭಾಷಣಗಳಿಂದ  ನೆರೆದಿದ್ದ ಸಾವಿರಾರು ಜನರ ತನು-ಮನ ತಣಿಸಿತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ವಿಶೇಷವಾಗಿ ದೇವರಿಗೆ ದೀಪ ಬೆಳಗಿ, ಸ್ತುತಿಸಿ, ಸಾಹಿತ್ಯ ಮಾನ್ಯರ ಭಾವಚಿತ್ರಕ್ಕೆ ಹೂವು-ಅಕ್ಕಿ ಹಾಕಿ ನಮಿಸಿದ ನಂತರ ಸವಿವರವಾಗಿ ಸರ್ವರನ್ನು ಸ್ವಾಗತಿಸಿ ಸರ್ವರ ಸಹಕಾರಕ್ಕೆ ಕೃತಜ್ಞತೆಗಳನ್ನು ಸಮರ್ಪಿಸಿದರು. ಕೊಡವ ಉಡುಪುರ ಭೀರ್ಯ’ ವಿಷಯವಾಗಿ ಕವಯಿತ್ರಿ ಮೂವೆರ ರೇಖ ಪ್ರಕಾಶ್ ವಿಷಯ ಮಂಡಿಸಿ ಕೊಡವ ಪುರುಷರ…

Read More

ಮಡಿಕೇರಿ NEWS DESK ಮಾ.31 : ಅಮರ ಸುಳ್ಯ ಕ್ರಾಂತಿಯ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅವರ ಹೋರಾಟದ ನೆಲವಾದ ಉಬರಡ್ಕದಲ್ಲೇ ಸ್ಥಾಪನೆಯಾದರೆ ಅವರಿಗೆ ಸೂಕ್ತ ಗೌರವ ಲಭಿಸಿದಂತಾಗುತ್ತದೆ. ಹಾಗಾಗಿ ಉಬರಡ್ಕದಲ್ಲೇ ಅವರ ಪ್ರತಿಮೆ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಹೇಳಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯ ಬಳಿಯ ಉಬರಡ್ಕದ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಉಬರಡ್ಕದ ಅಮೈಮಡಿಯಾರು ಶಾಲಾ ವಠಾರದಲ್ಲಿ ನಡೆದ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ಕಾರ್ಯಕ್ರಮ ಇದು ಮೊತ್ತ ಮೊದಲ ಬಾರಿಗೆ ಅಮರ ಸುಳ್ಯ ಕ್ರಾಂತಿಯನ್ನು ಆರಂಭಿಸಿದಂತಹ ನೆಲದಲ್ಲಿ ನಡೆಯುತ್ತಿದ್ದು, ಇನ್ನು ಮುಂದೆ ಪ್ರತೀ ವರ್ಷವೂ ಈ ಕಾರ್ಯಕ್ರಮ ನಡೆಯಬೇಕು ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ಇದರ ನೇತೃತ್ವ ವಹಿಸಿದರೆ ಅಕಾಡೆಮಿ ವತಿಯಿಂದ ಸರ್ವ…

Read More

*ಮೈದಾನ ಸಂಖ್ಯೆ 1*  ಪುಚ್ಚಿಮಾಡ ಮತ್ತು ಮಂಡೀರ (ಮಾದಪುರ) ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಪುಚ್ಚಿಮಾಡ ತಂಡ 3 ಗೋಲುಗಳನ್ನು ಬಾರಿಸಿ ಮಂಡೀರ ತಂಡವನ್ನು ಪರಬಾವಗೊಳಿಸಿತು. ಪುಚ್ಚಿಮಾಡ ತಂಡದ ಯಶ್ವಿನ್ ಗಣಪತಿ 2 ಹಾಗೂ ಭವನ್ ಬೋಪಣ್ಣ 1 ಗೋಲು ದಾಖಲಿಸಿದರು. ಮಂಡೀರ ತಂಡದ ದ್ಯಾನ್ ದೇವಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮುಕ್ಕಾಟಿರ (ಮುವತ್ತೊಕ್ಲು) ಮತ್ತು ಚೆಯ್ಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಯ್ಯಂಡ ತಂಡ ಭರ್ಜರಿ 5 ಗೋಲುಗಳನ್ನು ದಾಖಲಿಸುವ ಮೂಲಕ ಗೆಲುವು ಸಾಧಿಸಿತು. ಚೆಯ್ಯಂಡ ತಂಡದ ನಂದ ನಾಚಪ್ಪ 2, ಪೂವಣ್ಣ ಬಿ., ಅಪ್ಪಚ್ಚು ಹಾಗೂ ಶಂಕರಿ ತಲಾ 1 ಗೋಲು ಬಾರಿಸಿದಿರು. ಮುಕ್ಕಾಟಿರ ಕಾರ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಜನರಾದರು. ಪುಚ್ಚಿಮಂಡ ಮತ್ತು ಕಾಂಗಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಂಗಂಡ ತಂಡ 2-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕಾಂಗಂಡ ತಂಡದ ಪುನೀತ್ 2 ಗೋಲು ದಾಖಲಿಸಿದರು. ಕಾಂಗಂಡ…

Read More

ಕುಶಾಲನಗರ ಮಾ.31 NEWS DESK :  ಕುಶಾಲನಗರ ಮಹಾತ್ಮಾ ಗಾಂಧಿ ಸ್ಮಾರಕ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2024 -25ರ ವಾರ್ಷಿಕ ವಿಶೇಷ ಶಿಬಿರ ಕುಶಾಲನಗರ ಸಮೀಪದ ಯಡವನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಐದು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದು ಸಮಾರೋಪಗೊಂಡಿತು. ಶಿಬಿರ ಅಧಿಕಾರಿ ಕೆ.ಆರ್ಮಂ.ಜೇಶ್ ಮತ್ತು ಪ್ರಾಂಶುಪಾಲರಾದ ಟಿ.ಎ.ಲಿಖಿತ ಅವರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ನಿತ್ಯ ಶಿಬಿರಾರ್ಥಿಗಳಿಗೆ ವ್ಯಾಯಾಮ, ಯೋಗ, ಶ್ರಮದಾನ, ವಿಶೇಷ ಉಪನ್ಯಾಸ ಕಾರ್ಯಕ್ರಮ, ಕ್ರೀಡಾ ಚಟುವಟಿಕೆ, ಸಾಂಸ್ಥಿಕ ಕಾರ್ಯಕ್ರಮ ಸೇರಿದಂತೆ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ, ಶಾಲಾ ಆವರಣ ಸ್ವಚ್ಛತೆ, ಗಿಡಗಳನ್ನು ನೆಡುವ ಕಾರ್ಯಕ್ರಮ, ಗ್ರಾಮದಲ್ಲಿ ಜನರಿಗೆ ರೋಗ, ಗ್ರಾಮ ನೈರ್ಮಲ್ಯ ಆರೋಗ್ಯ ಕುರಿತು ವಿಷಯಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ವ್ಯಕ್ತಿ ವಿಕಸನ ನಾಯಕತ್ವ ತರಬೇತಿ ಮತ್ತಿತರ ಕಾರ್ಯಕ್ರಮಗಳು ನಡೆದವು.  ಎನ್ ಎಸ್ ಎಸ್ ಗುರಿ ಮತ್ತು ಉದ್ದೇಶಗಳು, ಹಳ್ಳಿ ಸೊಗಡನ್ನು ಉಳಿಸುವಲ್ಲಿ ಜನಪದ ಸಾಹಿತ್ಯದ ಪಾತ್ರ, ರೈತ ದೇಶದ ಬೆನ್ನೆಲುಬು…

Read More

ಗೋಣಿಕೊಪ್ಪ ಮಾ.31 NEWS DESK : ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ವಾರ್ಷಿಕ ಮಹಾಸಭೆ ಅಕಾಡೆಮಿಯ ಸ್ಥಾಪಕ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. ಗೋಣಿಕೊಪ್ಪ ಸ್ಪೈಸ್ ರ್ಯಾಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬಾಳೆಕುಟ್ಟಿರ ಕಪ್ ಕೇರ್‍ಬಲಿ ನಮ್ಮೆಯ ಕ್ರೀಡಾಕೂಟ ನಿರ್ದೇಶಕರಾಗಿ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಸಹನಿರ್ದೇಶಕರಾಗಿ ಚೆಟ್ಟಂಗಡ ರವಿ ಸುಬ್ಬಯ್ಯ, ತಾಂತ್ರಿಕ ವೇದಿಕೆಯ ಮುಖ್ಯಸ್ಥರಾಗಿ ಕೊಣಿಯಂಡ ಮಂಜು ಮಾದಯ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಮುಂದಿನ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸ್ಥಾಪಕ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಉಪಾಧ್ಯಕ್ಷರಾಗಿ ಚೆಟ್ಟಂಗಡ ರವಿ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಉಳುವಂಗಡ ಲೋಹಿತ್ ಭೀಮಯ್ಯ, ಸಹ ಕಾರ್ಯದರ್ಶಿಯಾಗಿ ಚೆಟ್ಟಂಗಡ ಕಂಬ ಕಾರ್ಯಪ್ಪ ಪುನರಾಯ್ಕೆಯಾದರು. ಖಜಾಂಚಿಯಾಗಿ ಜಮ್ಮಡ ಗಿಲ್, ಸಹ ಖಜಾಂಚಿಯಾಗಿ ಪೊನ್ನೋಲತಂಡ ಯಶು, ನಿರ್ದೇಶಕರಾಗಿ ಕೊಣಿಯಂಡ ಮಂಜು ಮಾದಯ್ಯ, ಮುಂಡಚಾಡಿರ ಭರತ್, ಪೊನ್ನೋಲತಂಡ ಪ್ರತಿನ್, ಬೊಟ್ಟೋಳಂಡ ಮಿಟ್ಟು ಪೂಣಚ್ಚ, ಪೊನ್ನೋಲತಂಡ ಹರೀಶ್, ಬೊಟ್ಟೋಳಂಡ ಚೇತನ್…

Read More