ಲೇಖಕ: admin

NEWS DESK :: ಅಮ್ಮಾಜಿ ಎಂದೆ ಪ್ರಸಿದ್ದವಾಗಿರುವ ಶ್ರೀ ವೀರನಾಗಮ್ಮ ದೇವಿಯ ದೇವಾಲಯ ಇರುವುದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ವಡ್ಡಗೆರೆ ಗ್ರಾಮದಲ್ಲಿ ಈ ದೇವಾಲಯಕ್ಕೆ ಸುಮಾರು 700 ವರ್ಷಗಳ ಪುರಾತನ ಇತಿಹಾಸ ಇದೆ, ಈ ದೇವಾಸ್ಥಾನದಲ್ಲಿ ಪ್ರತಿ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮ ಜೋತೆಗೆ ಪ್ರತಿ ಸೋಮವಾರದಂದು ಅನ್ನ ಸಂತರ್ಪಣಾ ಕಾರ್ಯವು ನಡೆಯುತ್ತದೆ. ಈ ದೇವಾಲಯದ ವತಿಯಿಂದ ಮದುವೆ ಮತ್ತು ಇತರೆ ಶುಭ ಸಮಾರಂಭಗಳು ನಡೆಯುತ್ತವೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಲಕ್ಷ ದಿಪೋತ್ಸವ ನಡೆಯುತ್ತದೆ. ಜೋತೆಗೆ ಪ್ರತಿ ವರ್ಷ ಯುಗಾದಿ ಹಬ್ಬದ ಮರುದಿನ ಜಾತ್ರಾ ಮಹೋತ್ಸವ ನಡೆಯುತ್ತದೆ. ದೇವಾಸ್ಥಾನದ ಪಕ್ಕದಲ್ಲಿ ಮಜ್ಜನ ಬಾವಿ ಇದ್ದು, ಇದು ಸದಾ ಕಾಲ ನೀರಿನಿಂದ ತುಂಬಿರುತ್ತದೆ.ಮತ್ತು ವಡ್ಡಗೆರೆಯಿಂದ ಸಮಾರು 1 ಕಿ.ಮೀ ದೂರದಲ್ಲಿ ಮದ್ಯಮ್ಮನ ಬೆಟ್ಟವಿದ್ದು, ಇಲ್ಲಿಯೂ ಕೂಡ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ.ವಡ್ಡಗೆರೆ ವ್ಯಾಪ್ತಿಗೆ ಸೇರಿದ ಮಲಪನಹಳ್ಳಿ ಹತ್ತಿರ ತಲಪುರಿಕೆ ಎಂಬ ಸ್ಥಳವಿದ್ದು,ಇಲ್ಲಿ ಸದಾ ಕಾಲ ನೀರು ಉಕ್ಕಿ ಹರಿಯುತ್ತದೆ.…

Read More

ಮಡಿಕೇರಿ ನ.28 NEWS DESK : ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ವಿರಾಜಪೇಟೆ ತಾಲ್ಲೂಕು ಘಟಕ, ಕಡಂಗ ಕೆ.ಡಿ.ಎಸ್.ಮುಸ್ಲಿಂ ಯೂತ್ ಚಾರಿಟಿಯ ಜಂಟಿ ಆಶ್ರಯದಲ್ಲಿ ಮೈಸೂರಿನ ಅಲ್ ಅನ್ಸಾರ್ ಆಸ್ಪತ್ರೆಯ ಸಹಯೋಗದೊಂದಿಗೆ ಡಿ.1 ರಂದು ಕಡಂಗದಲ್ಲಿ ಎರಡನೇ ವರ್ಷದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂನ ವಿರಾಜಪೇಟೆ ತಾಲ್ಲೂಕು ಘಟಕದ ಕೋಶಾಧಿಕಾರಿ ಅಶ್ರಫ್ ಸಿ.ಎ, ಕಡಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳವಂತೆ ಮನವಿ ಮಾಡಿದರು. ಶಿಬಿರ ಪ್ರಮುಖವಾಗಿ ಸ್ತ್ರೀ ರೋಗ ಮತ್ತು ಪ್ರಸೂತಿ, ದಂತ ಚಿಕಿತ್ಸೆ, ವೈದ್ಯಕೀಯ ತಜ್ಞರ ಸಮೀಕ್ಷೆ ಮತ್ತು ಶಸ್ತ್ರ ಚಿಕತ್ಸೆ-ಆರೋಗ್ಯ ತಪಾಸಣೆ ಈ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದಲ್ಲಿ ಮುಟ್ಟಿನ ಸಮಸ್ಯೆ, ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳು…

Read More

NEWS DESK : : ಉತ್ಸವ್ ರಾಕ್ ಗಾರ್ಡನ್ ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೊಟಗೋಡಿಯಲ್ಲಿರುವ ಒಳಾಂಗಣ ಮತ್ತು ಹೊರಾಂಗಣ ಶಿಲ್ಪ ಸಂಗ್ರಹಾಲಯವಾಗಿದೆ. ಉದ್ಯಾನವು ಉತ್ತರ ಕರ್ನಾಟಕ ಸಂಸ್ಕೃತಿಯನ್ನು ಬಿಂಬಿಸುವ ಜೀವಂತ-ಶಿಲ್ಪಗಳನ್ನು ಒಳಗೊಂಡಿದೆ. ವಿವಿಧ ಭಿತ್ತಿಚಿತ್ರಗಳು, ಕೈಯಿಂದ ರಚಿಸಲಾದ ಎಲ್ಲವನ್ನೂ ಗದ್ಯದ ರೀತಿಯಲ್ಲಿ ಜೋಡಿಸಲಾಗಿದೆ. ಹಿಂದಿನ ಉತ್ತರ ಕರ್ನಾಟಕದ ಹಳ್ಳಿಯ ಜೀವನವನ್ನು ಉತ್ಸವ್ ಆರ್ಟ್ ಗಾರ್ಡನ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಕೃಷಿಗೆ ಸಂಬಂಧಿಸಿದ ಭಿತ್ತಿಚಿತ್ರಗಳ ಜೊತೆಗೆ, ನೇಕಾರರು, ಕರಕುಶಲ ಕೆಲಸಗಾರರು, ಲಂಬಾಣಿ ಕಲಾವಿದರು ಮುಂತಾದ ಹಳ್ಳಿಗಳ ವಿವಿಧ ಕುಶಲಕರ್ಮಿಗಳನ್ನು ಉದ್ಯಾನದಲ್ಲಿ ಇರಿಸಲಾಗಿದೆ. ದೋಣಿ ಸವಾರಿಯೊಂದಿಗೆ ಸಣ್ಣ ಸರೋವರವಿದೆ. ಆಹಾರದ ಆಯ್ಕೆಗಳು ಜೋವರ್ ರೋಟಿ ಮತ್ತು ಇತರ ಭಾರತೀಯ ಪ್ರಭೇದಗಳ ಸ್ಥಳೀಯ ಪರಿಮಳವನ್ನು ಒಳಗೊಂಡಿವೆ.   ಇದು ನಮ್ಮ ಹಳೆಯ ಪೀಳಿಗೆ, ಅವರ ಜೀವನ ಶೈಲಿ, ಸಂಸ್ಕೃತಿ, ನಾಟಕಗಳು, ವೃತ್ತಿಗಳು, ವೇಷಭೂಷಣ ಇತ್ಯಾದಿಗಳನ್ನು ಚಿತ್ರಿಸುವ ಆಧುನಿಕ ಮತ್ತು ಸಮಕಾಲೀನ ಕಲೆಯೊಂದಿಗೆ ಬೆರೆತಿರುವ ಸ್ಥಳವಾಗಿದೆ. “ಉತ್ಸವ್” ಎಂಬ ಪದವು ಹಬ್ಬದ ಅರ್ಥವನ್ನು ವ್ಯಾಖ್ಯಾನಿಸುತ್ತದೆ. ಇದು ವಿರಾಮ ಉದ್ಯಾನವನ…

Read More

NEWS DESK :: ಸೌಂದರ್ಯವಷ್ಟೇ ಅಲ್ಲ, ಆರೋಗ್ಯದ ದೃಷ್ಟಿಯಲ್ಲೂ ಹಲ್ಲಿನ ಪಾತ್ರ ಮುಖ್ಯ. ಹಲ್ಲಿನ ಸಮಸ್ಯೆ ದೇಹದ ಇತರೇ ಅಂಗಾಂಗಗಳ ಸಮಸ್ಯೆಗೂ ಗುರಿ ಮಾಡಬಹುದು. ಆದ್ದರಿಂದ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ‘ಹಲ್ಲಿನಲ್ಲಿ ಏನಾದರೂ ತೊಂದರೆ ಇದ್ದರೆ ಅದನ್ನು ಕೀಳಿಸು’ ಎಂಬ ತಪ್ಪು ನಂಬಿಕೆ ಸಾಮಾನ್ಯ. ಸೌಂದರ್ಯ, ಮಾತು, ಮುಖ, ದವಡೆಗಳ ಬೆಳವಣಿಗೆ, ಆಹಾರ ಅಗಿಯಲು ಅವಶ್ಯಕವಾಗಿರುವ ಹಲ್ಲುಗಳು ಆತ್ಮವಿಶ್ವಾಸ ಹೆಚ್ಚಿಸುವ ಅಂಗಗಳೂ ಹೌದು. ಸರಿಯಾದ ರೀತಿಯಲ್ಲಿ ಕಾಳಜಿ ವಹಿಸಿದಾಗ ಶಾಶ್ವತ ಹಲ್ಲುಗಳು ಮಾನವನ ಜೀವಮಾನವಿಡೀ ಬಾಳಿಕೆ ಬರುವುದಾದರೂ, ಕೆಲವೊಂದು ಸಂದರ್ಭಗಳಲ್ಲಿ ಹಲ್ಲನ್ನು ಕೀಳಲೇಬೇಕಾದ ಅನಿವಾರ್ಯ ಎದುರಾಗಬಹುದು. ಮುರಿದು ಹೋದ/ತುಂಡಾದ ಹಲ್ಲು­ಗಳನ್ನು, ಎಲ್ಲರನ್ನು ಕಾಡುವ ಹುಳುಕು ಹಲ್ಲುಗಳನ್ನು ಪ್ರಾರಂಭಿಕ ಹಂತದಲ್ಲೇ ಪ್ರತಿಬಂಧಿಸದಿದ್ದರೆ ಅದು ಬೇರಿನವರೆಗೂ ಹರಡಿ ಹಲ್ಲು ದುರ್ಬಲವಾಗಿ ಮುರಿಯಬಹುದು. ಹಾಗೆಯೇ ಪೆಟ್ಟು ಬಿದ್ದಾಗ, ಅಪಘಾತದಲ್ಲಿ ಹಲ್ಲು ತುಂಡಾಗಿ ಬೇರಾವ ಚಿಕಿತ್ಸೆಯೂ ಸಾಧ್ಯವಾಗದೇ ಇದ್ದಾಗ ಹಲ್ಲು ಕೀಳಬೇಕಾ­ಗಿ ಬರಬಹುದು. ಮನೆಮದ್ದು:  ರಾತ್ರಿಯ ಹೊತ್ತು ನೀವು ಮಲಗಿರುವ ಸಂದರ್ಭದಲ್ಲಿ ಹಲ್ಲುಗಳು ಹುಳುಕಾಗಲು ಆರಂಭವಾಗಬಹುದು. ಆದ್ದರಿಂದ…

Read More

ನವದೆಹಲಿ ನ.28 NEWS DESK : ಕೇರಳದ ವಯನಾಡ್‌ನಿಂದ ನಡೆದ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌‍ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗುರುವಾರ ಲೋಕಸಭೆಯ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ಪ್ರಿಯಾಂಕಾ ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದು, ಪ್ರಿಯಾಂಕಾ ಅವರಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಮಾಣ ವಚನ ಬೋಧಿಸಿದರು.

Read More

ಮಡಿಕೇರಿ ನ.28 NEWS DESK : ಕೇರಳದ ಕಾಸರಗೋಡಿನಲ್ಲಿ ನಡೆದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಭಾಗಮಂಡಲದ ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿನಿ ಹೆಚ್.ಎಂ.ಜಿತಿಕಾ ಬೆಳ್ಳಿಯ ಪದಕ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಚೆಟ್ಟಿಮಾನಿಯ ಮಂಜು ಹಾಗೂ ನಮಿತಾ ದಂಪತಿಯ ಪುತ್ರಿಯಾಗಿರುವ ಜಿತಿಕಾ ಕರಾಟೆ ತರಬೇತುದಾರರಾದ ಕೆ.ಜೆ.ಇಮ್ಯಾನುಯಲ್, ರಾಯ್ ಜೋಸೆಫ್ ಹಾಗೂ ತರಬೇತಿ ಕೇಂದ್ರದ ನಿರ್ದೇಶಕ ನಾಗರಾಜ್ ಅವರುಗಳ ಬಳಿ ತರಬೇತಿ ಪಡೆಯುತ್ತಿದ್ದಾಳೆ.

Read More

ಮಡಿಕೇರಿ ನ.28 NEWS DESK : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿ ನೆಹರು ಯುವ ಕೇಂದ್ರ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವವು ನ.30 ರಂದು ನಡೆಯಲಿದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ. ನಗರದ ಎಫ್‍ಎಂಕೆಎಂಸಿ ಕಾಲೇಜಿನಲ್ಲಿ ಸಭಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಡಾ.ಧನಂಜಯ ಸರ್ಜಿ,…

Read More

ಮಡಿಕೇರಿ NEWS DESK ನ.28 : ದೇಶ ಕಂಡ ಅಪ್ರತಿಮ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರುಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದ ಆರೋಪಿಯನ್ನು ಗಡಿಪಾರು ಮಾಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ವಿಶ್ವಕರ್ಮ ಸಮುದಾಯ ಜಾಗೃತ ಸೇವಾ ಟ್ರಸ್ಟ್ ನ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇಬ್ಬರು ವೀರ ಸೇನಾಧಿಕಾರಿಗಳನ್ನು ಅಪಮಾನಿಸಿರುವ ಪ್ರಕರಣ ದೇಶದ ಇಡೀ ಸೇನಾ ವ್ಯವಸ್ಥೆಗೆ ತೋರಿದ ಅಗೌರವವಾಗಿದೆ. ಆದ್ದರಿಂದ ಇದನ್ನು ದೇಶದ್ರೋಹದ ಪ್ರಕರಣವೆಂದು ಪರಿಗಣಿಸಬೇಕು ಮತ್ತು ಆರೋಪಿಯ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದ್ದಾರೆ. ಭಾರತರತ್ನ ಗೌರವಕ್ಕೆ ಸಮಾನರಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಭಾರತೀಯ ಸೇನೆಗೆ ನೀಡಿದ ಮಹತ್ವದ ಕೊಡುಗೆಗಳ ಬಗ್ಗೆ ಅರಿವಿಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿರುವುದು ಖಂಡನೀಯ. ಭಾರತ ದೇಶದ ಭದ್ರತೆ ಮತ್ತು ಜನರ ರಕ್ಷಣೆಗಾಗಿ ಸೇನಾಪಡೆಯ ಶಕ್ತಿಯನ್ನು ಹೆಚ್ಚಿಸಿ ದೇಶಭಕ್ತಿ ಮೆರೆದ…

Read More

ಪುತ್ತೂರು ನ.28 NEWS DESK : ವಾಲಿಬಾಲ್ ಒಂದು ಪ್ರಾಚೀನ ಕ್ರೀಡೆ. ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಬಯಸುವ ಈ ಕ್ರೀಡೆಗೆ ಇತ್ತಿಚಿನ ದಿನಗಳಲ್ಲಿ ಪ್ರೋತ್ಸಾಹ ಕಡಿಮೆಯಾಗುತ್ತಿರುವುದು ಖೇದಕರ ಎಂದು ಪುತ್ತೂರು ವಾಲಿಬಾಲ್ ಅಸೋಸಿಯೇಶನ್‍ನ ಅಧ್ಯಕ್ಷ ಸತೀಶ್ ರೈ ಕಟ್ಟಾವು ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಂಗಳೂರು ವಿಭಾಗದ ಪುರುಷರ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತಾಡಿದರು. ಅತಿ ಕಡಿಮೆ ಪರಿಕರ ಹಾಗೂ ಜಾಗದ ಅವಶ್ಯಕತೆ ಉಳ್ಳ ಈ ಕ್ರೀಡೆಯನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ಇಂದಿನ ಯುವಜನತೆಗೆ ಇದೆ ಎಂದರು. ಗೌರವ ಅತಿಥಿಗಳಾಗಿ ಆಗಮಿಸಿದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸಂತೋಷ್ ಕುತ್ತಮೊಟ್ಟೆ ಮಾತನಾಡಿ, ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುವ ಕ್ರೀಡೆಗಳು ಶಾರೀರಿಕ ಉತ್ತೇಜನವನ್ನು ನೀಡುತ್ತವೆ. ಇಂಜಿನಿಯರಿಂಗ್ ನಂತಹ ವೃತ್ತಿಪರ ಕಲಿಕಾ ವಿಭಾಗಗಳಲ್ಲಿ ಕ್ರೀಡಾಕೂಟಗಳನ್ನು ಸಂಘಟಿಸುವುದು ಮತ್ತು ಅದರಲ್ಲಿ ಪಾಲ್ಗೊಳ್ಳುವುದು ಕಷ್ಟಕರ. ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು.…

Read More