ಮಡಿಕೇರಿ ಅ.10 : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಕೊಡವ ಸಮಗ್ರ ಕುಲಶಾಸ್ತ್ರ ಅಧ್ಯಯನ, ಕೊಡವ “ಸಂಸ್ಕಾರ ಗನ್” ಸಂವಿಧಾನದ 25 ಮತ್ತು 26ನೇ ವಿಧಿಗಳಡಿಯಲ್ಲಿ ಕೊಡವರ “ಧಾರ್ಮಿಕ ಸಂಸ್ಕಾರ”ವೆಂದು ರಕ್ಷಿಸುವುದು ಸೇರಿದಂತೆ 9 ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.
ತೊಡನಾಡ್ (ಕುಮಟೂರ್-ಶ್ರೀಮಂಗಲ) ಕುರ್ಚಿನಾಡ್ (ಕುರ್ಚಿ-ಬೀರುಗ) (ಪೊನ್ನಂಪೇಟೆ ತಾಲೂಕು) ಅಜ್ಜಮಾಡ ನಾಡ್ ಮಂದ್- ಕುರ್ಚಿಯಲ್ಲಿ ನಡೆದ ಮೂರನೇ ಹಂತದ ಪಾದಯಾತ್ರೆ ಮತ್ತು ಕೊಡವ ಜನಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೀವನದಿ ಕಾವೇರಿಗೆ “ಕಾನೂನು ವ್ಯಕ್ತಿ ಸ್ಥಿತಿಯೊಂದಿಗೆ ಜೀವಂತ ಘಟಕವನ್ನು ನೀಡಬೇಕು. ಕಾವೇರಿಯು ವೇದ ಕಾಲದ 7 ಪವಿತ್ರ ನದಿಗಳಲ್ಲಿ ಒಂದಾಗಿದೆ. ಜಲದೇವತೆ ಕಾವೇರಿಯ ಜನ್ಮಸ್ಥಳವನ್ನು ಸರ್ಕಾರವು ಪೂಜ್ಯ ಭಾವನೆಯಿಂದ ಗೌರವಿಸಬೇಕು. ಯಹೂದಿ ಜನರ ಮೌಂಟ್ ಮೊರೈಯಾ ದೇವನೆಲೆ ಮಾದರಿಯಲ್ಲಿ ಕೊಡವ ಜನಾಂಗದ ಪವಿತ್ರ ತೀರ್ಥಯಾತ್ರ ಕೇಂದ್ರವಾಗಿ ತಲಕಾವೇರಿಯನ್ನು ಪರಿಗಣಿಸಬೇಕು.
ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿನ ಅರಮನೆಯ ಸಂಚಿನಲ್ಲಿನ ಘಟಿಸಿದ ಅಮಾಯಕ ಕೊಡವರ ರಾಜಕೀಯ ಹತ್ಯೆಗಳ ನೆನಪಿನ ಸ್ಮಾರಕಗಳನ್ನು ಸ್ಥಾಪಿಸಬೇಕು. ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಉಲುಗುಲಿ-ಸುಂಟಿಕೊಪ್ಪ ಮತ್ತು ಮುಳ್ಳುಸೋಗೆಯಲ್ಲಿ ಕೊಡವರ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು. ದೇವಾಟ್ ಪರಂಟ್ ನಲ್ಲಿ ಅಂತರರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕಗಳನ್ನು ನಮ್ಮ ಸಂವಿಧಾನದ 49 ವಿಧಿ ಅಡಿಯಲ್ಲಿ ಮತ್ತು 1964 ರ ವೆನಿಸ್ ಘೋಷಣೆ ಯಂತೆ ನಿರ್ಮಿಸಬೇಕು ಸೇರಿದಂತೆ 9 ಹಕ್ಕೊತ್ತಾಯಗಳನ್ನು ಮಂಡಿಸಿದರು.
ಅ.11 ರಂದು ಬೆಳಗ್ಗೆ 10 ಗಂಟೆಗೆ ತಾಳೆರಿನಾಡ್ (ಟಿ.ಶೆಟ್ಟಿಗೇರಿ), ಮಧ್ಯಾಹ್ನ 1.30 ಗಂಟೆಗೆ ಅಂಜಿಗೇರಿನಾಡ್ (ಹುದಿಕೇರಿ-ಬೇಗೂರು) ಮತ್ತು ಸಂಜೆ 4.30 ಗಂಟೆಗೆ ಪೊನ್ನಂಪೇಟೆ ಪಟ್ಟಣದಲ್ಲಿ ಮೆರವಣಿಗೆ ಹಾಗೂ ಸಭೆ ನಡೆಯಲಿದೆ ಎಂದು ನಾಚಪ್ಪ ತಿಳಿಸಿದರು.
ಬಾಚರಣಿಯಂಡ ಚಿಪ್ಪಣ್ಣ, ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ, ಕೊಟ್ರಂಗಡ ಉಷಾ ಮಾದಪ್ಪ, ಕಲ್ಲಂಗಡ ಬೋಪಯ್ಯ, ಅಜ್ಜಿಕುಟೀರ ಲೋಕೇಶ್, ಕೊಟ್ರಂಗಡ ಸನ್ನಿ, ಬೊಟ್ಟಂಗಡ ಸವಿ ಗಿರೀಶ್, ಬಾಚರಣಿಯಂಡ ಪ್ರಮೀಳಾ ಚಿಪ್ಪಣ್ಣ, ಕಲ್ಲಂಗಡ ತುಳಸಿ ಪೊನ್ನಣ್ಣ, ಮಾತ್ರಂಡ ಅನಿತಾ ಮಾದಪ್ಪ, ಮುಕ್ಕಾಟಿರ ದಿವ್ಯ ಸೋಮಣ್ಣ, ಮುಕ್ಕಾಟಿರ ಭವ್ಯ ಸುನಿಲ್, ಚೇಂದಂಡ ವಿಲ್ಮ ದೀಪಕ್, ಕೊಟ್ರಂಗಡ ಜಾಜಿ, ತೀತಿರ ಸೂರಜ್, ಮುಕ್ಕಾಟಿರ ದೇವಯ್ಯ, ಅಳ್ಮೇಂಗಡ ಮೋಟಯ್ಯ, ಕಲ್ಲಂಗಡ ಪೂಣಚ್ಚ, ಕಲ್ಲಂಗಡ ಗಣಪತಿ, ಕೊಟ್ರಂಗಡ ಅಪ್ಪಣ್ಣ, ಬಾಚಂಗಡ ಗಣಪತಿ, ಚೇಂದAಡ ದೀಪಕ್, ತೀರ್ಥೇಶ್ ತಿಮ್ಮಯ್ಯ, ನಿಶಾನ್ ಮಾದಪ್ಪ, ಮುದ್ದಿಯಡ ಸದಾ ಸೋಮಯ್ಯ, ಗುಡಿಯಂಗಡ ರಾಜ, ಮಾತ್ರಂಡ ಪೆಮ್ಮಯ್ಯ, ಕಾಳಿಮಾಡ ಹರೀಶ್, ಕಲ್ಲಂಗಡ ಶರಣು, ಕಲ್ಲಂಗಡ ಪೂವಣ್ಣ, ಮುಕ್ಕಾಟಿರ ಸೋಮಣ್ಣ, ಕಲ್ಲಂಗಡ ಚೆಂಗಪ್ಪ, ಕಲ್ಲಂಗಡ ಪೊನ್ನಣ್ಣ, ಕಲ್ಲಂಗಡ ಜಮುನ, ಅಜ್ಜಮಾಡ ಡೈಜಾ, ಅಜ್ಜಮಾಡ ಸಾವಿತ್ರಿ, ಅಜ್ಜಮಾಡ ಸುಮನ್, ಅಜ್ಜಮಾಡ ಅನಿತಾ, ಅಜ್ಜಮಾಡ ಪ್ರೇಮ ಬೋಪಣ್ಣ, ಅಜ್ಜಮಾಡ ದೀಕ್ಷ ಜಗತ್, ಅಜ್ಜಮಾಡ ತ್ಯಾಗಿ ಚೆಂಗಪ್ಪ, ಅಜ್ಜಮಾಡ ಶಿಲ್ಪ ಮಧು, ಅಜ್ಜಮಾಡ ರಚನ, ಅಜ್ಜಮಾಡ ಶೀಲ, ಅಜ್ಜಮಾಡ ಕಮಲ, ಅಜ್ಜಮಾಡ ಕಮಲ, ಅಜ್ಜಮಾಡ ಗುಲಾಬಿ, ಅಜ್ಜಮಾಡ ಚಿಮ್ಮ, ಅಜ್ಜಮಾಡ ಮೋಹನ, ಅಜ್ಜಮಾಡ ಬೋಪಣ್ಣ, ಅಜ್ಜಮಾಡ ಚೆಂಗಪ್ಪ, ಅಯ್ಯಮಾಡ ಉದಯ, ಅಯ್ಯಮಾಡ ಲೋಕೇಶ್, ಅಜ್ಜಮಾಡ ಲವ ಕುಶಾಲಪ್ಪ, ಅಜ್ಜಮಾಡ ಬಿಪಿನ್, ಅಜ್ಜಮಾಡ ಮಂದಣ್ಣ, ಅಜ್ಜಮಾಡ ರಮೇಶ್, ಎ.ಎಂ.ರಮೇಶ್, ಅಜ್ಜಮಾಡ ಜೀವನ್, ಅಜ್ಜಮಾಡ ಸಿದ್ದು, ಅಜ್ಜಿಕುಟ್ಟಿರ ರಾಯ್, ಅಯ್ಯಮಾಡ ಕಾರ್ಯಪ್ಪ, ಅಜ್ಜಮಾಡ ಸುರೇಶ್, ಅಜ್ಜಮಾಡ ದರ್ಶನ್, ಬೊಟ್ಟಂಗಡ ಜಪ್ಪು, ಜಮ್ಮಡ ಮೋಹನ್, ಕಾಂಡೇರ ಸುರೇಶ್, ಮಂದ್ರಿರ ಕರುಂಬಯ್ಯ, ಪಾರ್ವಂಗಡ ನವೀನ್ ಮತ್ತಿತರರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಭೆಯನ್ನು ಆರಂಭಿಸಲಾಯಿತು.











