ಚೆಟ್ಟಳ್ಳಿ ಡಿ.5 : ಭಾರತೀಯ ತೋಟಗಾರಿಕಾ ಸಂಶೋದನಾ ಸಂಸ್ಥೆ, ಕೇಂದ್ರೀಯ ತೋಟಗಾರಿಕಾ ಕೇಂದ್ರ ಚೆಟ್ಟಳ್ಳಿಯಲ್ಲಿ ಹಣ್ಣುಗಳ- ಅಖಿಲ ಭಾರತ ಸಂಘಟಿತ ಸಂಶೋದನಾ ಯೋಜನೆಯಡಿ ಡಿ.7ರಂದು ಆಫ್ ಸೀಜನ್ ಲಿಚ್ಚಿ ಹಣ್ಣಿನ ಕ್ಷೇತ್ರೋತ್ಸವ ಹಾಗೂ ಬೇಸಾಯ ಕ್ರಮಗಳ ಬಗ್ಗೆ ಕಾರ್ಯಾಗಾರ ನಡೆಯಲಿದೆ ಎಂದು ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಕೇಂದ್ರದ ಮೇಲ್ವಿಚಾರಕ ಡಾ. ರಾಜೇಂದಿರನ್ ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ಐಸಿಎರ್ – ಐಐಹೆಚ್ ಆರ್ ನ ನಿರ್ದೇಶಕ ಡಾ.ಸಂಜಯ್ ಕುಮಾರ್ ಸಿಂಗ್ ವಹಿಸಲಿದ್ದು, ಮುಖ್ಯಅತಿಥಿಗಳಾಗಿ ಐಸಿಏಅರ್ – ಎನ್ಆರ್ ಸಿಯ ನುರಿತ ತಜ್ಞರು ಹಾಗೂ ನಿರ್ದೇಶಕ ಡಾ.ಬಿಕಾಸ್ ದಾಸ್, ಅತಿಥಿಗಳಾಗಿ ಎಐಸಿಆರ್ ಪಿ ಆನ್ ಫೂಟ್ ಐಸಿಎರ್ – ಐಐಹೆಚ್ ಆರ್ ಬೆಂಗಳೂರಿನ ಪ್ರೋಜೆಕ್ಟ್ ಕೋಡಿನೇಟರ್ ಡಾ.ಪ್ರಕಾಶ್ ಪಾಟಿಲ್, ಪ್ರಗತಿಪರ ಕಾಫಿಬೆಳೆಗಾರ ಹಾಗೂ ಕಾಫಿ ಮಂಡಳಿಯ ಮಾಜಿ ಅಧ್ಯಕ್ಷ ಬೋಸ್ ಮಂದಣ್ಣ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ವಸ್ತುಪ್ರದರ್ಶನ, ಕ್ಷೇತ್ರ ಭೇಟಿ, ರತ-ವಿಜ್ಞಾನಿಗಳ ಸಂವಾದ, ಲಿಚ್ಚಿಯಲ್ಲಿ ಗರ್ಡಲಿಂಗ್ ತಂತ್ರಜ್ಞಾನದ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಆಫ್ ಸೀಜನ್ ಲಿಚ್ಚಿ ಹಣ್ಣಿಗೆ ಬರುವ ಸಮಸ್ಯೆಗಳ ಬಗ್ಗೆ ಕೇಂದ್ರ ದ ಹಣ್ಣು ವಿಜ್ಞಾನಿ ಡಾ.ಮುರುಳಿದರ್ ಹಾಗೂ ಯಶಸ್ವಿ ಲಿಚ್ಚಿ ಬೇಸಾಯಕ್ಕೆ ಬೇಕಾಗುವ ತಾಂತ್ರಿಕತೆಗಳು ಎಂಬ ವಿಷಯದ ಬಗ್ಗೆ ಐ.ಸಿ. ಏ. ಅರ್ – ಎನ್.ಆರ್ .ಸಿ ಯ ನುರಿತ ತಜ್ಞರು ಹಾಗೂ ನಿರ್ದೇಶಕ ಡಾ.ಬಿಕಾಸ್ ದಾಸ್ ಬೆಳೆಗಾರರಿಗೆ ಮಾಹಿತಿ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 7892882351, 9005847283 ಅಥವಾ https://forms.gle/pnQiofvu7aaMBZb99 ಲಿಂಕ್ನಲ್ಲಿ
ಹೆಸರು ನೋಂದಾಯಿಸಿಕೊಳ್ಳ ಬಹುದು.








