ಮಡಿಕೇರಿ ಜ.29 NEWS DESK : ಇಂದಿನ ಯುವಪೀಳಿಗೆಗೆ ಚಿತ್ರತಾರೆಯರು, ಕ್ರಿಕೆಟಿಗರು, ಭ್ರಷ್ಟ ರಾಜಕಾರಣಿಗಳೇ ಆದಶ೯ಪ್ರಾಯರಾಗುತ್ತಿದ್ದಾರೆಯೇ ವಿನಾ: ದೇಶಕ್ಕಾಗಿ ಹೋರಾಡುವ ಸೈನಿಕರನ್ನು ಯುವಜನಾಂಗ ಮರೆಯುತ್ತಿದೆ ಎಂದು ನಿವೃತ್ತ ಏರ್ ಮಾಷ೯ಲ್ ಕೆ.ಸಿ. ನಂದಕಾಯ೯ಪ್ಪ ವಿಷಾಧಿಸಿದ್ದಾರೆ.
ಮಡಿಕೇರಿಯಲ್ಲಿನ ಫೀಲ್ಡ್ ಮಾಷ೯ಲ್ ಕೆ.ಸಿ.ಕಾಯ೯ಪ್ಪ ಅವರ ನಿವಾಸ ರೋಶನಾರದಲ್ಲಿರುವ ಕಾಯ೯ಪ್ಪ ಸಮಾಧಿ ಸ್ಥಳದಲ್ಲಿ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರ 125 ನೇ ಜನ್ಮದಿನಾಚರಣೆ ಪ್ರಯುಕ್ತ ಮಗ ನಂದ ಕಾಯ೯ಪ್ಪ ಮಾತನಾಡಿದರು.
ಯುವಪೀಳಿಗೆಗೆ ಸೈನಿಕರ ದೇಶಸೇವೆಯನ್ನು ಪರಿಣಾಮಕಾರಿಯಾಗಿ ತಿಳಿಹೇಳುವ ಅನಿವಾಯ೯ತೆ ಹಿಂದೆಂದಿಗಿಂತ ಹೆಚ್ಚಾಗಿದೆ ಎಂದೂ ಅವರು ಸಲಹೆ ನೀಡಿದರು. ದೇಶಕ್ಕಾಗಿ ಹಗಲಿರುಳು ಹೋರಾಡುವ ಸೈನಿಕರು ಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕು. ಆದಶ೯ವಾಗಬೇಕು. ಸ್ಪೂತಿ೯ಯಾಗಬೇಕೆಂದು ಅವರು ಕರೆ ನೀಡಿದರು. ತನ್ನ ತಂದೆಯ ಪುಣ್ಯ ಸ್ಮರಣೆಯನ್ನು ಕೊಡಗು ವಿದ್ಯಾಲಯ ಶಿಕ್ಷಣ ಸಂಸ್ಥೆಯು ಮಕ್ಕಳ ಸಮ್ಮುಖದಲ್ಲಿ ವಷ೯ಂಪ್ರತಿ ಆಚರಿಸುತ್ತಾ ಬರುತ್ತಿರುವುದು ಶ್ಲಾಘನೀಯ ಎಂದೂ ಕಾಯ೯ಪ್ಪ ಹೇಳಿದರು
ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಿವೖತ್ತ ಕನ೯ಲ್ ಬಿ.ಜಿ.ವಿ. ಕುಮಾರ್ ಮಾತನಾಡಿ, ದೇಶಕ್ಕಾಗಿ ಕಾಯ೯ಪ್ಪ ಅವರ ಕತ೯ವ್ಯಪರತೆಯನ್ನು ಕೊಂಡಾಡಿದರು. ಕಾಯ೯ಪ್ಪ ಅವರು ಸದಾ ದೇಶದ ಬಗ್ಗೆ ಚಿಂತಿಸುತ್ತಿದ್ದರು. ಅನೇಕ ಮಾನವೀಯ ಗುಣಗಳು ಕೂಡ ಅವರಲ್ಲಿ ಹಾಸುಹೊಕ್ಕಾಗಿದ್ದವು. ಬಡವಿದ್ಯಾಥಿ೯ಗಳೂ ಸೇರಿದಂತೆ ಆಥಿ೯ಕ ಅಗತ್ಯವುಳ್ಳವರಿಗೆ ಕಾಯ೯ಪ್ಪ ನೆರವು ನೀಡುತ್ತಿದ್ದರು ಎಂದೂ ಕುಮಾರ್ ಸ್ಮರಿಸಿದರು.
ಫೀಲ್ಡ್ ಮಾಷ೯ಲ್ ಕೆ.ಸಿ.ಕಾಯ೯ಪ್ಪ ಅವರ ಮಕ್ಕಳಾದ ನಿವೖತ್ತ ಏರ್ ಮಾಷ೯ಲ್ ನಂದಾಕಾಯ೯ಪ್ಪ, ನಳಿನಿ ಕಾಯ೯ಪ್ಪ ಸಮಾಧಿ ಸ್ಥಳದಲ್ಲಿ ದೀಪ ಬೆಳಗಿ ಗೌರವ ನಮನ ಸಲ್ಲಿಸಿ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು.
ಪ್ರಬಂಧ ಸ್ಪಧೆ೯ಯಲ್ಲಿ ವಿಜೇತರಾದ ನಾಪೋಕ್ಲುವಿನ ಅಂಕುರ್ ಪಬ್ಲಿಕ್ ಶಾಲಾ ವಿದ್ಯಾಥಿ೯ನಿ ಅಮ್ ಅಬೀಬಾ ಪಿ.ಎಂ. ಅವರಿಗೆ ಏರ್ ಮಾಷ೯ಲ್ ಕಾಯ೯ಪ್ಪ ಮತ್ತು ಮೀನಾ ಕಾಯ೯ಪ್ಪ ಟ್ರೋಫಿ ವಿತರಿಸಿದರು. ವಿದ್ಯಾಥಿ೯ನಿ ಅಕ್ಷರ ಟಿ.ಅಪ್ಪಣ್ಣ ಈ ಸಂದಭ೯ ಫೀಲ್ಡ್ ಮಾಷ೯ಲ್ ಜೀವನ ಕುರಿತಾಗಿ ಮಾತನಾಡಿದರು.
ನಿವೖತ್ತ ಸೇನಾಧಿಕಾರಿಗಳು, ಎನ್ ಸಿಸಿ, ಪೊಲೀಸ್, ಕೂಡಿಗೆ ಸೈನಿಕ ಶಾಲೆಯ ಕೆಡೆಟ್ ಗಳು , ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿದೇ೯ಶಕರು, ಶಿಕ್ಷಕ ವೖಂದ, ವಿದ್ಯಾಥಿ೯ಗಳು, ಕೊಡಗು ವಿದ್ಯಾಲಯದ ಆಪಚ್ಯುನಿಟಿ ಶಾಲೆಯ ಶಿಕ್ಷಕರು, ನಾಗರಿಕ ಪ್ರಮುಖರು ಸೇರಿದಂತೆ ಅನೇಕರು ಪಾಲ್ಗೊಂಡು ರೋಶನಾರದಲ್ಲಿರುವ ಕಾಯ೯ಪ್ಪ ಸಮಾಧಿ ಸ್ಥಳಕ್ಕೆ ಪುಪ್ಪನಮನ ಸಲ್ಲಿಸಿದರು.
ಕೊಡಗು ವಿದ್ಯಾಲಯದ ಶಿಕ್ಷಕಿಯರಾದ ಅಲೆಮಾಡ ಚಿತ್ರನಂಜಪ್ಪ, ಪ್ರತಿಭಾಶೇಟ್ ನೇತೖತ್ವದಲ್ಲಿ ವಿದ್ಯಾಥಿ೯ಗಳು ಕಾಯ೯ಪ್ಪ ಅವರಿಗೆ ಪ್ರಿಯವಾಗಿದ್ದ ಭಜನೆ, ದೇಶಭಕ್ತಿಗೀತೆಗಳನ್ನು ಹಾಡಿದರು. ಕೊಡಗು ವಿದ್ಯಾಲಯದ ಆಡಳಿತ ವ್ಯವಸ್ಥಾಪಕ ರವಿ ಹಾಜರಿದ್ದರು.









