ವಿರಾಜಪೇಟೆ ಡಿ.2 NEWS DESK : ತಿತಿಮತಿ ಸರ್ಕಾರಿ ನಾಟಾ ಸಂಗ್ರಹಾಲಯದಲ್ಲಿ ನೌಕರರಾಗಿರುವ ಈ.ಕೆ.ಸುನಿಲ್ ರಾಜ್ ಅವರಿಗೆ ಮೈಸೂರು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕನ್ನಡ ವಿಕಾಸ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸುನಿಲ್ ರಾಜ್ ಅವರ ಬರಹ ಹಾಗೂ ಲೇಖನ ಬರೆಯುವ ಕೌಶಲ್ಯವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು. ಸುನಿಲ್ ರಾಜ್ ಮೂಲತಃ ತಿತಿಮತಿಯ ನಿವಾಸಿಯಾಗಿದ್ದಾರೆ.











