ಮಡಿಕೇರಿ, ಡಿ.12 NEWS DESK : ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ, ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗ, ಉಡುಪಿಯ ಪೂರ್ಣಪ್ರಜ್ಞ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ, ಡಿ.9 ರಂದು ಉಡುಪಿಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ, ವಿಜೇತರಾದ ಕೊಡಗು ಜಿಲ್ಲೆಯ ಎಂಟು ಮಂದಿ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ. ವಿಭಾಗ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಅರ್ವತ್ತೊಕ್ಲಿನ ವಿದ್ಯಾನಿಕೇತನ ಪ.ಪೂ. ಕಾಲೇಜು ಪ್ರಥಮ ಪಿಯುಸಿಯ ಎಂ.ಹರಿಕೃಷ್ಣನ್ ಪ್ರಥಮ ಸ್ಥಾನ ಗಳಿಸಿದ್ದಾನೆ. ಈತ ಚಿಣ್ಣಪ್ಪ- ಶೋಭಾ ದಂಪತಿಯ ಪುತ್ರ. ಇದೇ ಕಾಲೇಜಿನ ಗುಡ್ಡಾಂಡ ಕಾರ್ಯಪ್ಪ ದ್ವಿತೀಯ ಪಿ.ಯು.ಸಿ. ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಕಾರ್ಯಪ್ಪ, ಮನೋಹರನ್ – ಶ್ರೀದೇವಿ ದಂಪತಿಯ ಪುತ್ರ. ಚರ್ಚಾ ಸ್ಪರ್ಧೆ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಸಿಐಟಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪುಗ್ಗೇರ ಕ್ಷಮಾ ಕಾವೇರಮ್ಮ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈಕೆ ಕಿಶನ್ ಪೂವಣ್ಣ – ದಿವ್ಯ ದಂಪತಿಯ ಪುತ್ರಿ. ಜನಪದ ನೃತ್ಯ ವಿಭಾಗದಲ್ಲಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಇಂಚರ ಎ. ತೃತೀಯ ಸ್ಥಾನ ಗಳಿಸಿದ್ದಾಳೆ. ಈಕೆ ಆನಂದ್ ಕೊಡಗು-ಜಯಂತಿ ದಂಪತಿಯ ಪುತ್ರಿ. ಕುಶಾಲನಗರ ಸರ್ಕಾರಿ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅರಬಿಯಾ, ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾಳೆ. ಈಕೆ ಅಶ್ವಕ್ ಅಹಮದ್-ಉಮೇರ ಬಾನು ದಂಪತಿಯ ಪುತ್ರಿ. ಭಾವಗೀತೆಯಲ್ಲಿ ಕೂಡಿಗೆ ಸರ್ಕಾರಿ ಪಿಯು ಕಾಲೇಜಿನ ಪ್ರಗತಿ ಬಡಿಗೇರ್ ತೃತೀಯ ಸ್ಥಾನ ಪಡೆದಿದ್ದಾಳೆ. ಈಕೆ ಬಸವರಾಜ್ ಬಡಿಗೇರ್- ಚಂದ್ರಕಲಾ ದಂಪತಿಯ ಪುತ್ರಿ. ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಕೂಡಿಗೆ ಸರ್ಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹೆಚ್.ಆರ್. ರಾಜೇಶ್ ದ್ವಿತೀಯ ಸ್ಥಾನ ಗಳಿಸಿದ್ದಾನೆ. ಈತ ರಾಜು ಮತ್ತು ವಿಜಯ ದಂಪತಿಯ ಪುತ್ರ. ಚಿತ್ರಕಲೆಯಲ್ಲಿ ಕುಶಾಲನಗರ ಕನ್ನಡ ಭಾರತಿ ಪ.ಪೂ. ಕಾಲೇಜಿನ ಎಂ.ವಿಸ್ಮಯ ತೃತೀಯಬಹುಮಾನ ಗಳಿಸಿದ್ದಾನೆ. ವಿಸ್ಮಯ, ವೀಣಾ ಕುಮಾರಿ ಅವರ ಪುತ್ರ. ವಿಭಾಗ ಮಟ್ಟದ ಸ್ಪರ್ಧೆಗಳಿಗೆ ಕೊಡಗಿನಿಂದ ವ್ಯವಸ್ಥಾಪಕರಾಗಿ ಡಿ.ಎನ್.ಕುಮಾರ್ ಹಾಗೂ ಜಿ.ಡಿ. ನಂದಿನಿ ವಿದ್ಯಾರ್ಥಿಗಳ ಉಸ್ತುವಾರಿ ವಹಿಸಿಕೊಂಡಿದ್ದರು. ವಿಜೇತ ವಿದ್ಯಾರ್ಥಿಗಳು ಇದೇ ಡಿ.15ರಂದು ತುಮಕೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.


.









