ಮಡಿಕೇರಿ ಅ.10 NEWS DESK : ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಾಲಯದಲ್ಲಿ ನಡೆಯುತ್ತಿರುವ “ಶ್ರೀ ದುರ್ಗಾ ನಮಸ್ಕಾರ ಪೂಜೆ” ನವರಾತ್ರಿ ಉತ್ಸವದ ಕೊನೆಯ ದಿನವಾದ ಅ.12 ರಂದು ಸಂಪನ್ನಗೊಳ್ಳಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಊರಿನ ತಕ್ಕ ಮುಖ್ಯಸ್ಥರು ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ, ಭದ್ರಕಾಳಿ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಅ.3ರಿಂದ ಪ್ರತಿದಿನ ರಾತ್ರಿ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ ನಡೆಯುತ್ತಿದ್ದು, ಅ.11 ರಂದುಸಂಜೆ 4 ಗಂಟೆಗೆ ಆಯುಧ ಪೂಜೆ ಸಲುವಾಗಿ ಸಾಮೂಹಿಕ ವಾಹನ ಪೂಜೆ ನಡೆಯಲಿದೆ. ಸಂಜೆ 7 ಗಂಟೆಗೆ ನವ ರಾತ್ರಿಯ ಪೂಜೆ ಸಂಪನ್ನಗೊಳ್ಳಲಿದೆ. ವಿಜಯ ದಶಮಿಯ ದಿನವಾದ ಅ.12 ರಂದು ಬೆಳಿಗ್ಗೆಯಿಂದಲೇ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿದೆ. ಬೆಳಿಗ್ಗೆ 7 ಗಂಟೆಗೆ “ಗಣಪತಿ ಹೋಮ”, 10.30 ಗಂಟೆಗೆ ಶ್ರೀ…
ಲೇಖಕ: admin
ಮಡಿಕೇರಿ NEWS DESK ಅ.10 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ದಸರಾ ಹಬ್ಬದ ಪ್ರಯುಕ್ತ ದುರ್ಗಾ ದೀಪ ನಮಸ್ಕಾರ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು. ನಗರದ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ನಾಪೋಕ್ಲು ಅ.10 NEWS DESK : ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಸಮಾಜ ವಿಜ್ಞಾನದ ಪ್ರಶ್ನೆ ಪತ್ರಿಕೆಯ ವಿನ್ಯಾಸದ ಸ್ವರೂಪದ ಬದಲಾವಣೆ ಮಾಡುವಂತೆ ಕೊಡಗು ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ರಂಗಧಾಮಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಸಮಾಜ ವಿಜ್ಞಾನದ ಜಿಲ್ಲಾ ಸಂಚಾಲಕ ಎಸ್.ಪಿ ಪರಮೇಶ್, ಮಾತನಾಡಿ, ಕಲಿಕೆಯಲ್ಲಿ ಸರಾಸರಿ ಮಟ್ಟಕ್ಕಿಂತಲೂ ಕೆಳಗಿರುವ ವಿದ್ಯಾರ್ಥಿಗಳು ಸುಲಭವಾಗಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ವಿದ್ಯಾರ್ಥಿ ಸ್ನೇಹಿತ ಪತ್ರಿಕೆ ರೂಪಿಸುವಂತೆ ಮನವಿ ಮಾಡಿದರು. 10ನೇ ತರಗತಿ ವಿದ್ಯಾರ್ಥಿಗಳಿಗೆ ಅಖಿಲ ಪ್ರಶ್ನೆ ಪತ್ರಿಕೆಯನ್ನು ರೂಪಿಸಲಾಗುತ್ತಿದೆ. ಎಸ್ಎಸ್ಎಲ್ಸಿ ಸಮಾಜ ವಿಜ್ಞಾನ ವಿಜ್ಞಾನ, ಗಣಿತ ವಿಷಯಗಳಲ್ಲಿ ಕ್ಲಿಷ್ಟಕರ ಪ್ರಶ್ನೆಗಳನ್ನು ನೀಡಲಾಗುತ್ತಿದೆ ಇದರಿಂದ ಮುತ್ತಿನತೆ ಪ್ರಮಾಣ ಕಡಿಮೆಯಾಗುತ್ತಿದೆ ಎಂದರು. ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಪಲಿತಾಂಶ ಸುಧಾರಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈಚೆಗೆ ವಿಷಯ ಶಿಕ್ಷಕರ ಸಭೆಯಲ್ಲಿ ಚರ್ಚಿಸಲಾಗಿದೆ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆಗಳನ್ನು ಸಮಗ್ರವಾಗಿ ಅವಲೋಕಿಸಿದ್ದು, ಪ್ರಶ್ನೆಗಳ ವಿನ್ಯಾಸದ ಗಮನಹರ ವ್ಯತ್ಯಾಸ ಕಂಡುಬಂದಿದೆ.…
ಮಡಿಕೇರಿ ಅ.10 NEWS DESK : ಗೋಣಿಕೊಪ್ಪ ಕಾವೇರಿ ದಸರಾ ಸಮಿತಿ ವತಿಯಿಂದ ನಡೆಸಲಾದ ಮಕ್ಕಳ ದಸರಾ ಛದ್ಮವೇಷ (4 ವರ್ಷದಿಂದ 5 ವರ್ಷ )ಸ್ಪರ್ಧೆಯಲ್ಲಿ ಸ್ಮೃತಿ ಎಸ್.ಭಾರಧ್ವಜ ಮೊದಲ ಬಹುಮಾನ ಪಡೆದುಕೊಂಡಿದ್ದಾಳೆ. ಅಲ್ಲದೇ ವಿಶ್ವ ಹಿಂದೂ ಪರಿಷತ್, ದೇವಾಸ್ಥಾನಗಳ ಒಕ್ಕೂಟ, ಕುಶಾಲನಗರದ ಸಮಸ್ತ ಭಜನಾ ಮಂಡಳಿಗಳು ಹಾಗೂ ರಂಗಭಾರತಿ ಕಲಾಮಂದಿರಮ್ ಸಹಯೋಗದಲ್ಲಿ ನಡೆದ ಗೋಕುಲೋತ್ಸವ ಕೃಷ್ಣ ವೇಷ (2 ವರ್ಷದಿಂದ 6 ವರ್ಷ) ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾಳೆ.
ಸಿದ್ದಾಪುರ ಅ.10 NEWS DESK : ಒಂದು ಕಾಲದಲ್ಲಿ ಸಮಾಜದ ಕನ್ನಡಿಯಾಗಿದ್ದ ಅವಿಭಕ್ತ ಕುಟುಂಬಗಳು ಶಿಕ್ಷಣ,ಉದ್ಯೋಗ, ವ್ಯಾಪಾರ ಎಂಬ ಇತ್ಯಾದಿ ವ್ಯಾವಹಾರಿಕ ಕಾರಣಗಳಿಂದ ಕುಟುಂಬ ಸರಪಳಿ ತೊರೆದು ದೂರವಾಗಿದ್ದ ಕುಟುಂಬಗಳನ್ನು ಒಂದೇ ಸೂರಿನಡಿ ಕೂಡಿಸುವಲ್ಲಿ ಕೂರ್ಗ್ ಫ್ಯಾಮಿಲಿ ಕ್ರಿಕೆಟ್ ಮತ್ತು ಪುಟ್ಬಾಲ್ ಕಪ್ ಪಂದ್ಯಾವಳಿ ಯಶಸ್ವಿಯಾಗಿದೆ. ವಿರಾಜಪೇಟೆ ಟರ್ಫ್ ಮೈದಾನದಲ್ಲಿ ನಡೆದ ಎರಡು ದಿನಗಳ ಪಂದ್ಯಾವಳಿಯಲ್ಲಿ ಕುಟುಂಬ ಸದಸ್ಯರನ್ನು ಅಜ್ಜಿ,ತಾತಂದಿರು ತಮ್ಮ ಮೊಮ್ಮಕ್ಕಳು,ಮರಿ ಮೊಮ್ಮಕ್ಕಳನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಂಡರು.ಪಂದ್ಯಾವಳಿ ನೆಪ ಮಾತ್ರವಾದರೂ ತಮ್ಮ ಮೊಮ್ಮಕ್ಕಳನ್ನು ಕಂಡ ಒಡನೆ ಆನಂದ ಬಾಷ್ಪ ಹರಿಸಿ ಚುಂಬಿಸಿ ಬಾಚಿ ತಬ್ಬಿಕೊಂಡ ದೃಶ್ಯ ಮನ ಕಲಕಲಕುವಂತಿತ್ತು. ಒಂದೆಡೆ ಕ್ರಿಡಾಕೂಟ ನಡೆಯುತ್ತಿದ್ದರೆ ಮತ್ತೊಂದೆಡೆ ತಮ್ಮ ಮೊಮ್ಮಕ್ಕಳಿಗೆ ಉಣ ಬಡಿಸುತ್ತಿದ್ದ ದೃಷ್ಯ ಮನಮೋಹಕವಾಗಿತ್ತು. ಕುಟುಂಬಕ್ಕೆ ಬಂದು ಸೇರಿದ ನವ ವಧುಗಳು ಪರಸ್ಪರ ಪರಿಚಯ ಮಾಡಿಕೊಳ್ಳುತ್ತ ಇದ್ದರೆ ಮಿಂಚಿ ಮರೆಯಾದ ಅವಿಭಕ್ತ ಕುಟುಂಬಗಳ ಗತಕಾಲದ ವೈಭವವನ್ನು ಸಾರುತ್ತಿದ್ದವು. ಒಟ್ಟು ಎಂಟು ತಂಡಗಳು ಪಾಲ್ಗೊಂಡಿದ್ದ ಕೌಟುಂಬಿಕ ಕ್ರಿಕೆಟ್ ಮತ್ತು ಪುಟ್ಬಾಲ್ ಪಂದ್ಯಾವಳಿಯಲ್ಲಿ ಕ್ರಿಕೆಟ್…
ಸಿದ್ದಾಪುರ ಅ.10 NEWS DESK : ಭಾರತ ಮಾರ್ಕ್ಸವಾದಿ ಕಮ್ಯುನಿಸ್ಟ್ ಸಿ.ಪಿ.ಐ.(ಎಂ) ಪಕ್ಷದ ಮಹಾ ಅಧಿವೇಶನ ಏಪ್ರಿಲ್ ತಿಂಗಳಿನಲ್ಲಿ ತಮಿಳುನಾಡಿನಲ್ಲಿ, ಡಿಸೆಂಬರ್ ತಿಂಗಳಲ್ಲಿ ರಾಜ್ಯ ಸಮ್ಮೇಳನ ತುಮಕೂರಿನಲ್ಲಿ, ನವೆಂಬರ್ ನಲ್ಲಿ ಜಿಲ್ಲಾ ಸಮ್ಮೇಳನ ವಿರಾಜಪೇಟೆಯಲ್ಲಿ ನಡೆಯಲಿದ್ದು, ಅದರ ಭಾಗವಾಗಿ 6ನೇ ಶಾಖಾ ಸಮ್ಮೇಳನವು ನೆಲ್ಯಹುದಿಕೇರಿಯಲ್ಲಿ ನಡೆಯಿತು. ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಪಕ್ಷದ ಕಾರ್ಯಕರ್ತರು ಹಾಗೂ ಪ್ರತಿನಿಧಿಗಳು ಚಂಡೆ ವಾದ್ಯ ಕಲಾ ತಂಡಗಳೊಂದಿಗೆ ಕೆಂಪು ಧ್ವಜಗಳನ್ನ ಹಿಡಿದು ಮುಖ್ಯರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಸಮ್ಮೇಳನ ಆಯೋಜನಗೊಂಡ ನೆಲ್ಯಹುದಿಕೇರಿ ಸೂರ್ಯನಾರಾಯಣರಾವ್ ನಗರಕ್ಕೆ ತಲುಪಿತು. ಕಾಂ. ವೀರಸ್ವಾಮಿ ಸಭಾಂಗಣದ ಕಾಂ. ಆಲ್ಪೋನ್ಸ್ ವೇದಿಕೆಯಲ್ಲಿ ನಡೆದ ಸಮ್ಮೇಳನವನ್ನ ಸಿ.ಪಿ.ಐ.(ಎಂ) ಪಕ್ಷದ ರಾಜ್ಯ ಮುಖಂಡ ಕೆ.ಎನ್.ಮಹಾಂತೇಶ್ ಉದ್ಘಾಟಿಸಿ ಮಾತನಾಡಿ, ಯಾವುದೇ ಸರ್ಕಾರಗಳು ಬಂದರೂ ಶ್ರಮಿಕ ವರ್ಗವನ್ನ ಕಡೆಗಣಿಸುತ್ತಿವೆ. ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿರುವ ದುಡಿಯುವ ವರ್ಗ ಇಂದಿಗೂ ಮೂಲ ಸೌಕರ್ಯ ವಂಚಿತರಾಗಿ ಬದುಕು ಸಾಗಿಸುತ್ತಿದ್ದಾರೆ. ರಾಜಕೀಯ ಪಕ್ಷಗಳು ಶ್ರೀಮಂತ ರಾಜಕಾರಣಿಗಳನ್ನ ಬೆಳೆಸುತ್ತಿದ್ದಾರೆ. ಆ ರಾಜಕಾರಣಿಗಳು ಬಂಡವಾಳ ಶಾಹಿಗಳೊಂದಿಗೆ ಕೈಜೋಡಿಸಿ ಲಾಭ…
ಕುಶಾಲನಗರ ಅ.10 NEWS DESK : ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿರುವ ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ.ವಿ.ಜಿಸ್ನಳಿಗೆ ಶಾಲೆಯ ವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಕ್ರೀಡಾಪಟು ಎಂ.ವಿ.ಜಿಸ್ನ, ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ನಲ್ಲಿ ನಡೆದ ಡಿಸ್ಕಸ್ ಎಸೆತ, ಭಾರದ ಗುಂಡು ಎಸೆತ ಹಾಗೂ ಹ್ಯಾಮರ್ ಎಸೆತದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾಳೆ. ವಿದ್ಯಾರ್ಥಿನಿ ಜಿಸ್ನಳಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಎ.ಜೆ.ಚಂದ್ರಾವತಿ ತರಬೇತಿ ನೀಡಿರುತ್ತಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಬಿ.ಎನ್.ಪುಷ್ಪ ತಿಳಿಸಿದ್ದಾರೆ. ಶಾಲೆಯ ವತಿಯಿಂದ ಕ್ರೀಡಾಪಟು ಜಿಸ್ನಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಜೆಸಿಐ ಸಂಸ್ಥೆಯ ಎಸ್.ಎಂ.ಎ.ವಿಭಾಗದ ವಲಯಾಧ್ಯಕ್ಷ ಎಂ.ಡಿ.ರಂಗಸ್ವಾಮಿ ಮಾತನಾಡಿ, ವಿದ್ಯಾರ್ಥಿನಿ ಜಿಸ್ನಳ ಉತ್ತಮ ಸಾಧನೆಯು ಇತರೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತದೆ. ವಿದ್ಯಾರ್ಥಿನಿ ಜಿಸ್ನ , ಮುಂದಿನ ದಿನಗಳಲ್ಲಿ ಕೂಡ ಕ್ರೀಡಾಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಬಿ.ಎನ್.ಪುಷ್ಪ, ಕಾವೇರಿ ಜೆ.ಸಿ.ಐ.ಸಂಸ್ಥೆಯ ಅಧ್ಯಕ್ಷ ಜಗದೀಶ್,…
ಮಡಿಕೇರಿ ಅ.10 NEWS DESK : ಕಳೆದ ಹತ್ತು ವರ್ಷಗಳಿಂದ ವಿರಾಜಪೇಟೆ ತಾಲ್ಲೂಕಿನ ಹುಂಡಿ ಗ್ರಾಮವನ್ನು ಕೇಂದ್ರೀಕರಿಸಿ ಸಮಾಜಮುಖಿ ಕಾರ್ಯಗಳಿಂದ ತೊಡಗಿಕೊಂಡಿರುವ ಸ್ನೇಹತೀರಂ ಬಳಗದ 2024-25ನೇ ಸಾಲಿನ ನೂತನ ಆಡಳಿತ ಮಂಡಳಿ ರಚನೆಯಾಗಿದೆ. ಟಿ.ಎಂ.ಸುಬೈರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಬೂತಾಹಿರ್ ಲೆಕ್ಕಪತ್ರವನ್ನು ಮಂಡಿಸಿದರು. ನಂತರ ನೂತನ ಸಮಿತಿಯ ರಚನೆ ಮಾಡಲಾಯಿತು. 2024-25ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಎನ್.ಎಂ.ನೌಷಾದ್, ಪಿ.ಐ.ಉನೈಸ್ ಅವರನ್ನು ಉಪಾಧ್ಯಕ್ಷರಾಗಿ ನೇಮಕ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಬಿ.ಕೆ.ಉನೈಸ್, ಸಹ ಕಾರ್ಯದರ್ಶಿಯಾಗಿ ಸಿ.ಎ.ಜಾಫರ್ ಹಾಗೂ ಕೋಶಾಧಿಕಾರಿಗಳಾಗಿ ಪಿ.ಎಂ.ನೌಷಾದ್ ಹಾಗೂ ಪಿ.ಎ.ಹಕೀಂ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಸುಬೈರ್ ಟಿ.ಎಂ, ಇಸ್ಮಾಯಿಲ್ ಬಿ.ಕೆ, ರಝಾಕ್ ಕೆ.ಎಚ್, ಸಲೀಂ ಪಿ.ಎ ನಿಸಾರ್ ಪಿ.ಎಸ್, ಹಕೀಂ ಪಿ.ಎಂ ತನ್ಸೀರ್ ಪಿ.ಐ ಆಯ್ಕೆಯಾಗಿದ್ದಾರೆ. ಸ್ನೇಹತೀರಂ ಬಳಗವು ಕಳೆದ ಹತ್ತು ವರ್ಷಗಳಿಂದ ಗ್ರಾಮದಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಹಾಗೂ ಬಡ ರೋಗಿಗಳಿಗೆ ನೆರವು ನೀಡುತ್ತಾ ಬಂದಿದೆ.
ಮಡಿಕೇರಿ ಅ.10 NEWS DESK : ದಸರಾ ಜನೋತ್ಸವ ಸಂಬಂಧ ಇಂದು (ಅ.10) ಮಡಿಕೇರಿಯ ಗಾಂಧಿ ಮೈದಾನದಲ್ಲಿ ಹಗಲು ಕಬ್ಬಡಿ ಪಂದ್ಯಾವಳಿ ಹಾಗೂ ರಾತ್ರಿ ಯುವ ದಸರಾ ಕಾರ್ಯಕ್ರಮ ಮತ್ತು ಅ.11 ರಂದು ಖ್ಯಾತ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ವಾಹನಗಳಲ್ಲಿ ಆಗಮಿಸುವ ನಿರೀಕ್ಷೆ ಇದ್ದು, ರಾಜಾಸಿಟ್ ರಸ್ತೆಯ ವಾಹನ ಸಂಚಾರವನ್ನು ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿಲಾಗಿದೆ ಎಂದು ಮಡಿಕೇರಿ ಸಂಚಾರಿ ಪೊಲೀಸ್ ಠಾಣಾ ಪ್ರಕಟಣೆ ತಿಳಿಸಿದೆ. ರಸ್ತೆ ಮತ್ತು ಗಾಂಧಿ ಮೈದಾನ ಬಹಳ ಚಿಕ್ಕದಾಗಿರುವುದರಿಂದ ಪಾರ್ಕಿಂಗ್ ವ್ಯವಸ್ಥೆಗೆ ಬಹಳ ಅನಾನುಕೂಲವಾಗಿರುತ್ತದೆ. ಆದ್ದರಿಂದ ಇಂದು (ಅ.10) ಮತ್ತು ಅ.11 ರಂದು ವೇದಿಕೆಯ ಪಕ್ಕದಲ್ಲಿ VIP ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೈದಾನದಲ್ಲಿ ಕೇವಲ ಸಮಿತಿಯ ಮುಖ್ಯ ಸದಸ್ಯರುಗಳಿಗೆ ಮಾತ್ರ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ನಾಡ ಹಬ್ಬ ದಸರಾ ಕಾರ್ಯಕ್ರಮವನ್ನು ಯಶಸ್ವಿ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲಕ್ಕಾಗಿ ಸಂಜೆ 5 ಗಂಟೆಯ ನಂತರ ರಾಜಾಸಿಟ್ ರಸ್ತೆಯ…
ಮಡಿಕೇರಿ ಅ.10 NEWS DESK : ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯದ ಅಧೀನದಲ್ಲಿ ಬರುವ ಸ್ವಾಯತ್ತ ವೈಜ್ಞಾನಿಕ ಸಂಸ್ಥೆಯಾದ ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ ಯು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯದ ನ್ಯಾಷನಲ್ ಕೆರಿಯರ್ ಸರ್ವಿಸ್, ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಸಹಕಾರದೊಂದಿಗೆ ಬೆಂಗಳೂರು ನಗರ ಜಿಲ್ಲೆಯ ಕೆಎಲ್ಇ. ಸಂಸ್ಥೆಯ ಎಸ್ ನಿಜಲಿಂಗಪ್ಪ ಮಹಾವಿದ್ಯಾಲಯ, #1040, 28ನೇ ಕ್ರಾಸ್ ರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10, ಇಲ್ಲಿ ಅ.20 ರಂದು “ಉದ್ಯೋಗ ಮೇಳ” ನಡೆಯಲಿದೆ. ಜಿಲ್ಲೆಯಲ್ಲಿನ ಎಲ್ಲಾ ವಿದ್ಯಾರ್ಹತೆಯ ಉದ್ಯೋಗಾಂಕ್ಷಿಗಳು ಹಾಗೂ ಖಾಸಗಿ ಕಂಪನಿ/ ಪ್ರತಿಷ್ಠಿತ ಬೃಹತ್, ಮಧ್ಯಮ, ಸಣ್ಣ ಉದ್ಯೋಗದಾತರು ಬೃಹತ್ ಉದ್ಯೋಗಮೇಳದಲ್ಲಿ ಭಾಗವಹಿಸಬಹುದು. ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು https://jobfair.calicut.nielit.in/ ಗೆ ಭೇಟಿ ನೀಡಿ ತಮ್ಮ ಸ್ವ-ವಿವರವನ್ನು ನೋಂದಣಿ ಮಾಡುವ ಮೂಲಕ ಉದ್ಯೋಗಮೇಳಕ್ಕೆ ನೋಂದಾಯಿಸಿಕೊಳ್ಳುವಂತೆ…






