ಲೇಖಕ: admin

NEWS DESK *ಹಿಂದೂಗಳ ಹೆಮ್ಮೆಯ ಪ್ರತೀಕ : ಜ.22 ರಾಮದಿನ ಮಹಾದಿನ* (ಸುರೇಶ್ ಮುತ್ತಪ್ಪ, ಕಾರ್ಯಾಧ್ಯಕ್ಷರು, ವಿಶ್ವ ಹಿಂದೂ ಪರಿಷತ್, ಕೊಡಗು ಜಿಲ್ಲೆ)

Read More

NEWS DESK *ಜ.22 ಕೋಟ್ಯಾಂತರ ಹಿಂದೂಗಳಿಗೆ ಮಹಾ ಸುದಿನ* (ತೇಲಪಂಡ ಶಿವಕುಮಾರ್ ನಾಣಯ್ಯ, ಕಾರ್ಯಕಾರಿ ಸಮಿತಿ ಸದಸ್ಯರು, ಕೊಡಗು ಜಿಲ್ಲಾ ಬಿಜೆಪಿ)

Read More

NEWS DESK *ಕೋಟಿ ಕೋಟಿ ಹಿಂದೂಗಳ ಪೂಜೆ ಫಲಿಸಿದೆ* (ಚೆಪ್ಪುಡಿರ ರಾಕೇಶ್ ದೇವಯ್ಯ, ಅಧ್ಯಕ್ಷರು, ಬಿಜೆಪಿ ಕೃಷಿ ಮೋರ್ಚಾ, ಕಿರುಗೂರು ಘಟಕ)

Read More

NEWS DESK *ಶ್ರೀರಾಮ ಅಖಂಡ ಭಾರತದ ಪುರುಷೋತ್ತಮ* (ಸೂದನ ಎಸ್.ಈರಪ್ಪ, ಅಧ್ಯಕ್ಷರು, ಕೊಡಗು ಜಿಲ್ಲಾ ಏಲಕ್ಕಿ ಮಾರಾಟ ಸಹಕಾರ ಸಂಘ)

Read More

NEWS DESK *ಶ್ರೀರಾಮನಾಮ ಸ್ಮರಣೆಯೊಂದಿಗೆ ಭವ್ಯ ಭಾರತಕ್ಕಾಗಿ ಸಂಕಲ್ಪ ತೊಡೋಣ*(ಡಾ.ಬಿ.ಸಿ,ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ)

Read More

NEWS DESK *ನಾವೆಲ್ಲರೂ ಶ್ರೀರಾಮನಾಮ ಸ್ಮರಣೆಯಲ್ಲಿ ಭಾಗಿಗಳಾಗೋಣ* (ಪ್ರತಾಪ್ ಸಿಂಹ, ಸಂಸದರು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ)

Read More

NEWS DESK ಅಯೋಧ್ಯೆಯಲ್ಲಿ ಜ.22ರಂದು ಶ್ರೀಬಾಲರಾಮ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದ್ದು, ಇದು ಭಾರತ ದೇಶದ ಐತಿಹಾಸಿಕ ಕ್ಷಣವಾಗಿದೆ. ಸುಮಾರು 500 ವರ್ಷಗಳ ಹೋರಾಟದ ಫಲವಾಗಿ ಇಂದು ರಾಮನ ಭವ್ಯ ಮಂದಿರ ನಿರ್ಮಾಣವಾಗಿದೆ. ದೇಶದ ಕೋಟ್ಯಾಂತರ ಹಿಂದೂಗಳ ಹಲವು ವರ್ಷಗಳ ಪ್ರಾರ್ಥನೆ ಫಲಿಸಿದೆ ಮತ್ತು ರಾಮನೆಲೆಯ ಕನಸು ನನಸಾಗಿದೆ. ಭಾರತೀಯರಿಗೆ ಮರ್ಯಾದ ಪುರುಷ ಶ್ರೀರಾಮನೇ ಸತ್ಯ, ಶ್ರೀರಾಮನೇ ನಿತ್ಯ. ಇದೇ ಕಾರಣಕ್ಕೆ ಅಯೋಧ್ಯೆಯಲ್ಲೊಂದು ಭವ್ಯ ಮಂದಿರ ನಿರ್ಮಾಣವಾಗಲೇಬೇಕೆಂದು ಸಹಸ್ರ ಸಹಸ್ರ ಮಂದಿ ತನು, ಮನ, ಧನವನ್ನು ತ್ಯಾಗ ಮಾಡಿದ್ದಾರೆ, ಬಲಿದಾನ ಗೈದಿದ್ದಾರೆ. 1989 ರ ನಂತರ ರಾಮಜನ್ಮ ಭೂಮಿ ಹೋರಾಟ ತೀವ್ರಗೊಂಡಿತು, ಹಳ್ಳಿಗಳಲ್ಲಿ ರಾಮನಾಮ ಜಾಗೃತಿ ಕಾರ್ಯಕ್ರಮಗಳು ನಡೆದವು. ಸುಮಾರು 2ಲಕ್ಷಕ್ಕೂ ಅಧಿಕ ಗ್ರಾಮಗಳಿಂದ ರಾಮನಾಮದ ಇಟ್ಟಿಗೆಗಳನ್ನು ಸಂಗ್ರಹಿಸಿ ಅಯೋಧ್ಯೆಗೆ ಕಳುಹಿಸಲಾಯಿತು. ಈ ಹೋರಾಟದಲ್ಲಿ ಕೊಡಗು ಜಿಲ್ಲೆಯ ಜನ ಕೂಡ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೋಟಿ ಕೋಟಿ ಹಿಂದೂಗಳ ಭಕ್ತಿಯ ಪ್ರತೀಕವಾಗಿ ಇಂದು ಎರಡು ಅಂತಸ್ತಿನ ಭವ್ಯ ರಾಮಮಂದಿರ ನಿರ್ಮಾಣಗೊಂಡಿದೆ. ಶ್ರೀಬಾಲರಾಮನ ಪ್ರತಿಷ್ಠಾಪನೆಯಾಗುತ್ತಿದೆ,…

Read More

ಸೋಮವಾರಪೇಟೆ ಜ.21 NEWS DESK : ದಿ.ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಸ್ಥಳೀಯ ಸಾಕಮ್ಮನ ಬಂಗಲೆ ಮೈದಾನದಲ್ಲಿ ನಡೆದ 37ನೇ ವರ್ಷದ ರಾಜ್ಯ ಮ್ಟಟದ ಕಬಡ್ಡಿ ಪ್ರಶಸ್ತಿಯನ್ನು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ತಂಡ ಪಡೆದುಕೊಂಡಿತು. ನಗದು ಮತ್ತು ಪ್ರತಿಷ್ಠಿತ ಟ್ರೋಫಿಯನ್ನು ಪ್ರದಾನ ಮಾಡಲಾಯಿತು. ದ್ವಿತೀಯ ಸ್ಥಾನವನ್ನು ವಾಲ್ನೂರು ಅಜಿತ್ ಫ್ರೆಂಡ್ಸ್ ತಂಡ ಹಾಗು ತೃತೀಯ ಸ್ಥಾನವನ್ನು ಅರುಣ್ ಫ್ರೆಂಡ್ಸ್ ತಂಡ ಪಡೆಯಿತು. 20 ವರ್ಷದೊಳಗಿನ ವಿಭಾಗದಲ್ಲಿ ಸೋಮವಾರಪೇಟೆ ಜೀವನ್ ಫ್ರೆಂಡ್ಸ್ ತಂಡ ಪ್ರಥಮ, ಸೋಮವಾರಪೇಟೆ ರಾಮದೂತ ಬಿ ತಂಡ ದ್ವಿತೀಯ, ಶನಿವಾರಸಂತೆ ಅಜಿತ್ ಫ್ರೆಂಡ್ಸ್ ತಂಡ ತೃತೀಯ ಸ್ಥಾನ ಪಡೆಯಿತು. ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಗುತ್ತಿಗೆದಾರ ರವಿ ತಲ್ತಾರೆ, ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ.ನಾಗರಾಜ್ ಬಹುಮಾನ ವಿತರಿಸಿದರು. ಪ್ರಮುಖರಾದ ಮಧುಸೂದನ, ಎಚ್.ಪಿ.ರಾಜಪ್ಪ ಪುನಿತ್, ಮನೋಜ್, ಮಣೀಕಂಠ ಇದ್ದರು.

Read More

ಮಡಿಕೇರಿ ಜ.21 NEWS DESK : ಸಮಾಜದ ಬಡ ಜನರು, ರೈತಾಪಿ ವರ್ಗಕ್ಕೆ ಆರ್ಥಿಕ ಚೈತನ್ಯವನ್ನು ಒದಗಿಸುವ ಮೂಲಕ ‘ಸಹಕಾರಿ ಚಳವಳಿ’ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಜನಹಿತದ ದೃಷ್ಟಿಯಿಂದ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಯಬಾರದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟಿದ್ದಾರೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿ(ಕೆಡಿಸಿಸಿ)ನ ಶತಮಾನೋತ್ಸವದ ಹಿನ್ನೆಲೆ ನಿರ್ಮಿಸಲಾಗಿರುವ ‘ಉನ್ನತಿ’ ಭವನವನ್ನು ಉದ್ಘಾಟಿಸಿ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜನ ಸಾಮಾನ್ಯರ ಸಬಲೀಕರಣಕ್ಕೆ ಸರ್ಕಾರಗಳು ಮಾಡಲಾಗದ ಕೆಲಸಗಳನ್ನು ಸಹಕಾರ ಕ್ಷೇತ್ರದ ಮೂಲಕ ಮಾಡಲು ಸಾಧ್ಯವಿದೆ. ರೈತ ಸಮೂಹ, ಬಡವರ್ಗದ ಮಂದಿಗೆ ಸಾಲ ಸೌಲಭ್ಯವನ್ನು ನೀಡುವ ಮೂಲಕ ಅವರಲ್ಲಿ ಆರ್ಥಿಕ ಭದ್ರತೆಯನ್ನು ಮೂಡಿಸಲು ಸಾಧ್ಯವಿದೆ. ಈ ಹಿನ್ನೆಲೆ ಸಹಕಾರಿ ಬ್ಯಾಂಕ್‌ಗಳು ಹೆಚ್ಚಿನ ಸಾಲ ಸೌಲಭ್ಯದ ನೆರವನ್ನು ಒದಗಿಸಲು ಮುಂದಾಗುವಂತೆ ಕರೆ ನೀಡಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಶಕ್ತಿಯುತವಾಗಿರುವುದಕ್ಕೆ ಸಹಕಾರಿ ಕ್ಷೇತ್ರವೂ ಕಾರಣವಾಗಿದೆ. ಇಂತಹ ಕ್ಷೇತದಲ್ಲಿ ‘ರಾಜಕೀಯ’ವನ್ನು ದೂರವಿಟ್ಟು ಜನಹಿತಕ್ಕಾಗಿ ಕಾರ್ಯನಿರ್ವಹಿಸುವುದು…

Read More

ಮಡಿಕೇರಿ ಜ.21 : ಸಾಮಾಜಿಕ ಜಾಲತಾಣದ ಮೂಲಕವೇ ಕವಿತೆ ಮತ್ತು ಕಥೆಗಳನ್ನು ಬರೆದುಕೊಳ್ಳುವ ನೂರಾರು ಮಂದಿ ಸಾಹಿತ್ಯಾಸಕ್ತರನ್ನು ಸೇರಿಸಿ ರಚಿಸಿರುವ ಸಾಮಾಜಿಕ ಜಾಲತಾಣದ ಕನ್ನಡ ಸಾಹಿತ್ಯ ಬಳಗ ಕಥಾಗುಚ್ಛದ ಮಂದಿಗೆ ಕಣಿವೆಯ ರಾಮಲಿಂಗೇಶ್ವರ ಸಭಾಂಗಣದಲ್ಲಿ ಭಾನುವಾರ ನಡೆದ “ಸ್ನೇಹ ಕೂಟ” ಕಾರ್ಯಕ್ರಮ ಒಂದೆಡೆ ಸೇರಲು ಉತ್ತಮ ವೇದಿಕೆಯಾಯಿತು. ಸಾಹಿತ್ಯ ಬಳಗದ ಸಂಸ್ಥಾಪಕಿ ಲತಾ ಜೋಷಿ ಅವರ ನೇತೃತ್ವದಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಸಾಹಿತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಹಿತ್ಯ, ಸಂಸ್ಕೃತಿ, ವಿಚಾರ ವಿನಿಮಯ ಮಾಡಿಕೊಂಡರು. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು ಮಾತನಾಡಿ ಅನೇಕ ಜಿಲ್ಲೆಗಳ ಸಾಹಿತ್ಯಾಸಕ್ತರನ್ನು ಸೇರಿಸಿ ಸ್ನೇಹ ಬಳಗ ಕಟ್ಟಿ ಸಾಹಿತ್ಯಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದರು. ಲತಾ ಜೋಷಿ ಮಾತನಾಡಿ, ಫೇಸ್ ಬುಕ್ ಸಾಹಿತ್ಯ ವೇದಿಕೆ 6 ವರ್ಷಗಳ ಹಿಂದೆ ಆರಂಭವಾಯಿತು. ಇದರಲ್ಲಿ ಸಾಹಿತ್ಯ ಕೃಷಿ ಮಾಡುವ ಬೇರೆ ಬೇರೆ ಜಿಲ್ಲೆಗಳ ಸಹಸ್ರಾರು ಮಂದಿ ಸದಸ್ಯರಿದ್ದಾರೆ. ನಮ್ಮಲ್ಲಿರುವ ಸದಸ್ಯರುಗಳೇ ಬರೆಯುವ ಅರ್ಥಗರ್ಭಿತ ಸಾಹಿತ್ಯ ಸಂಗ್ರಹವನ್ನು ಕಲೆ…

Read More