ಲೇಖಕ: admin

ಮಡಿಕೇರಿ ಆ.7 :   ತೋಟದಲ್ಲಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿ ತಾಲೂಕಿನ ಗೂಡ್ಲುರು ಚನ್ನಂಗಿ ಗ್ರಾಮದ ಕೆ.ಆರ್.ಕಿರಣ್ ಬಂಧಿತ ಆರೋಪಿ. ತನ್ನ ಮನೆಯ ಹಿಂಭಾಗದ ಕಾಫಿ ತೋಟದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ಬೆಳೆದಿದ್ದ  31 ಕೆಜಿ 900 ಗ್ರಾಂ ತೂಕದ ಮಾದಕ ಗಾಂಜಾ ಗಿಡಗಳನ್ನು  ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಮಡಿಕೇರಿ ಉಪ ವಿಭಾಗದ ಡಿವೈಎಸ್‍ಪಿ ಎಂ.ಜಗದೀಶ್, ಮಡಿಕೇರಿ ನಗರ ವೃತ್ತ ಅನೂಪ್ ಮಾದಪ್ಪ, ಸಿದ್ದಾಪುರ ಪೊಲೀಸ್ ಠಾಣೆ ಪಿಎಸ್‍ಐ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳನ್ನು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.

Read More

ಮಡಿಕೇರಿ‌ ಅ .6. ಖ್ಯಾತ ಜಾನಪದ ಗಾಯಕ, ಹೋರಾಟಗಾರ ಗದ್ದರ್  ಭಾನುವಾರ ನಿಧನರಾಗಿದ್ದಾರೆ. ಇವರ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡಗು ಜಿಲ್ಲೆ ಲೇಖಕ ಮತ್ತು ಕಲಾವಿದರ ಬಳಗ ಸಂತಾಪ ವ್ಯಕ್ತಪಡಿಸುತ್ತದೆ ಎಂದು ಅಧ್ಯಕ್ಷ ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗದ್ದರ್ ಎಂದೇ ಖ್ಯಾತ ಪಡೆದಿದ್ದ ಕ್ರಾಂತಿಕಾರಿ ಗಾಯಕ 77 ವರ್ಷದ ಗುಮ್ಮಡಿ ವಿಠಲ್ ರಾವ್ ಅವರು ಕಳೆದ ಕೆಲವು ದಿನಗಳಿಂದ ಶ್ವಾಸಕೋಶ ಮತ್ತು ಮೂತ್ರದ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಅಪೋಲೋ ಸ್ಪೆಕ್ಟ್ರಾ ಆಸ್ಪತ್ರೆ ದಾಖಲಾಗಿದ್ದರು. ಆದರೆ  ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರ ತೀವ್ರ ಹೃದ್ರೋಗದಿಂದ ಬಳಲುತ್ತಿದ್ದ ಅವರು ಜುಲೈ 20 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 3 ರಂದು ಅವರಿಗೆ ಬೈಪಾಸ್ ಸರ್ಜರಿ ಮಾಡಲಾಗಿತ್ತು ಮತ್ತು ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ ಆದಾಗ್ಯೂ, ಅವರು ಶ್ವಾಸಕೋಶ ಮತ್ತು ಮೂತ್ರದ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು…

Read More

ಮಡಿಕೇರಿ ಆ.6 : 2018 ರಲ್ಲಿ ಅಂದಿನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ನನಗೆ ನ್ಯಾಯಾಧೀಶನಾಗುವಂತೆ ಆಹ್ವಾನ ನೀಡಿದರು. ಪ್ರಾರಂಭದಲ್ಲಿ ಹಿಂಜರಿದೆನಾದರೂ ಅಜ್ಜಿಕುಟ್ಟೀರ ಜಸ್ಟೀಸ್ ಬೋಪಣ್ಣ ಅವರ ಸಲಹೆ ಮೇರೆಗೆ ನ್ಯಾಯಾಧೀಶನಾಗಲು ಸಮ್ಮತಿ ಸೂಚಿಸಿ ಅದಕ್ಕೆ ಅಗತ್ಯವಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ. 44 ವರ್ಷದವನಾಗಿದ್ದ ನಾನು ಇನ್ನೇನು ಕನಾ9ಟಕದ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ನ್ಯಾಯಾಧೀಶನಾಗುವ ಹಂತದಲ್ಲಿದ್ದೆ. ಆದರೆ ಕೊನೇ ಕ್ಷಣದಲ್ಲಿ ಯಾವುದೇ ಕಾರಣಗಳಿಲ್ಲದೆ ನನಗೆ ಅವಕಾಶ ತಪ್ಪಿಹೋಯಿತು. ಹೀಗಾಗಿ ಮತ್ತೆ ವಕೀಲ ವೃತ್ತಿಯಲ್ಲಿಯೇ ಮುಂದುವರೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ಶಾಸಕನಾಗಿ ಆಯ್ಕೆಯಾಗಿ ಮುಖ್ಯಮಂತ್ರಿಯ ಕಾನೂನು ಸಲಹೆಗಾರನಾಗಿ ನೇಮಕಗೊಂಡೆ. ನ್ಯಾಯಾಧೀಶನಾಗಲಿಲ್ಲ ಎಂದು ನಾನು ಯಾವತ್ತೂ ತಲೆಕೆಡಿಸಿಕೊಳ್ಳಲಿಲ್ಲ. ಯಾವುದನ್ನೂ ಕೇಳದೆ ನನಗೆ ಉತ್ತಮ ಸ್ಥಾನಗಳು ದೊರಕುತ್ತಾ ಬಂದಿದೆ. ಹೀಗಾಗಿ ತಪ್ಪಿಹೋದ ಅವಕಾಶಗಳ ಬಗ್ಗೆ ಚಿಂತೆ ಮಾಡಿಲ್ಲ. (ವಕೀಲರ ಸಂಘದ ಕಾರ್ಯಕ್ರಮದಲ್ಲಿ ಎ.ಎಸ್.ಪೊನ್ನಣ್ಣ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ)

Read More

ಮಡಿಕೇರಿ ಆ.6 : ನಾನು ಶಾಸಕನಾಗಲು ಯೋಚನೆ ಮಾಡಿದ್ದೇ ಒಂದು ಸವಾಲಿನಿಂದಾಗಿ. ಮನೆಯಲ್ಲಿ ತಂದೆಯವರಾದ ಎ.ಮಂಜು ಸಚಿವರಾಗಿದ್ದರು. ಈ ಸಂದರ್ಭ ನನಗೂ ಅವರಿಗೂ ಬಹಳ ಆಸಕ್ತಿದಾಯಕವಾದ ಚರ್ಚೆಗಳಾಗುತ್ತಿದ್ದವು. ಒಂದು ಹಂತದಲ್ಲಿ ನಿಮಗಿಂತ ಉತ್ತಮವಾಗಿ ಅಧಿಕಾರ ನಿರ್ವಹಿಸುವೆ ಎಂದು ಚಾಲೆಂಜ್ ಮಾಡಿ ರಾಜಕೀಯ ಕ್ಷೇತ್ರಕ್ಕೆ ಬಂದೆ. ಹಾಸನದಿಂದ ಸ್ಪರ್ಧಿಸಲು ಚಿಂತಿಸುತ್ತಿದ್ದಾಗ ಎ.ಎಸ್.ಪೊನ್ನಣ್ಣ ಅವರು ವಿಧಾನ ಪರಿಷತ್ ಚುನಾವಣೆಗೆ ಕೊಡಗಿನಿಂದ ಸ್ಪರ್ಧಿಸುವಂತೆ ಆಹ್ವಾನಿಸಿದರು. ಅಂತೆಯೇ ಇಲ್ಲಿ ಬಂದೆ, ಅಲ್ಪಮತಗಳ ಅಂತರದಲ್ಲಿ ಸೋಲು ಕಂಡೆ. ಆದರೂ ಛಲ ಬಿಡದೆ ಆನಂತರದ ದಿನಗಳಲ್ಲಿ ಸರಿ ಸುಮಾರು 15 ತಿಂಗಳು ಮಡಿಕೇರಿ ಕ್ಷೇತ್ರದಲ್ಲಿಯೇ ಜನರೊಂದಿಗೆ ಬೆರೆಯುತ್ತಾ ಹೋದೆ. ಪೊನ್ನಣ್ಣ ಅವರು ಮಡಿಕೇರಿ ಕ್ಷೇತ್ರದಿಂದ ಟಿಕೆಟ್ ದೊರಕುವಲ್ಲಿ ಕಾರಣರಾದರು. ಜನರೊಂದಿಗೆ ವಿಶ್ವಾಸದಿಂದ ಇದ್ದದ್ದು ನಾನು ಶಾಸಕನಾಗಿ ಆಯ್ಕೆಯಾಗಲು ನೆರವಾಯಿತು. (ವಕೀಲರ ಸಂಘದ ಕಾರ್ಯಕ್ರಮದಲ್ಲಿ ಡಾ.ಮಂಥರ್ ಗೌಡ, ಮಡಿಕೇರಿ ಕ್ಷೇತ್ರದ ಶಾಸಕರು)

Read More

ಮಡಿಕೇರಿ ಆ.6 : ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯಿದೆ ಮಂಡಿಸುವ ಮೂಲಕ ವಕೀಲರ ಬಹಕಾಲದ ಬೇಡಿಕೆ ಈಡೇರಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ. ಮಡಿಕೇರಿ ವಕೀಲರ ಸಂಘದ ವತಿಯಿಂದ ನಗರದ ಲಯನ್ಸ್ ಸಭಾಂಗಣದಲ್ಲಿ ಜರುಗಿದ ಶಾಸಕದ್ವಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎ.ಎಸ್.ಪೊನ್ನಣ್ಣ, ಅನೇಕ ರಾಜ್ಯಗಳಲ್ಲಿ ಈಗಾಗಲೇ ವಕೀಲರ ಭದ್ರತೆಗಾಗಿ ರಕ್ಷಣಾ ಕಾಯಿದೆ ಜಾರಿಯಲ್ಲಿದೆ. ಕರ್ನಾಟಕದಲ್ಲಿ ಈ ಕಾಯಿದೆ ಜಾರಿಗೆ ಅನೇಕ ವರ್ಷಗಳಿಂದ ವಕೀಲ ಸಮುದಾಯದ ಒತ್ತಾಯವಿತ್ತು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯೊoದಿಗೆ ಚರ್ಚಿಸಿ ಕಾಯಿದೆಗೆ ಅಂತಿಮ ರೂಪು ನೀಡಲಾಗಿದ್ದು ಮುಂದಿನ ಅದಿವೇಶನದಲ್ಲಿ ಕಾಯಿದೆ ಮಂಡಿಸಿ ಜಾರಿಗೊಳಿಸಲಾಗುತ್ತದೆ. ಆ ಮೂಲಕ ವೈದ್ಯರಂತೆಯೇ ವಕೀಲರ ಸುರಕ್ಷತೆಗೆ ಕೂಡ ಕ್ರಮಕೈಗೊಳ್ಳಲಾಗುತ್ತದೆ ಎಂದರು. ನ್ಯಾಯವಾದಿಗಳು ತಮ್ಮ ಘನತೆ ಉಳಿಸಿಕೊಂಡಾಗ ಮಾತ್ರ ನ್ಯಾಯಾಂಗದ ಘನತೆ ಉಳಿಯುತ್ತದೆ ಎಂದು ವ್ಯಾಖ್ಯಾನಿಸಿದ ಪೊನ್ನಣ್ಣ, ವಕೀಲ ವೃತ್ತಿಯು ಸಮಾಜದಲ್ಲಿ ಅತ್ಯಂತ ಗೌರವದ ವೃತ್ತಿಯಾಗಿದ್ದು, ಇದರ ಘನತೆಗೆ ಎಂದೂ ಕುಂದುಂಟಾಗದಂತೆ ಗಮನ ಹರಿಸಿ ಎಂದು…

Read More

ಮಡಿಕೇರಿ ಆ.6 : ಸಾಹಿತಿ ಹಾಗೂ ಸೋಮವಾರಪೇಟೆ ತಾಲ್ಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಕೆ. ಭರತ್ ಅವರು ಬರೆದ ಹನಿಗವನಗಳ ಸಂಕಲನ ‘ಧ್ಯಾನಕ್ಕೆ ಬಿದ್ದ ಅಕ್ಷರಗಳು’ ಕೃತಿ ಬಿಡುಗಡೆಗೊಂಡಿತು. ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಅಭಿನಯ ಕಲಾ ಮಿಲನ ಚಾರಿಟೇಬಲ್ ಟ್ರಸ್ಟ್ ಕೊಡಗು ಸಹಯೋಗದಲ್ಲಿ ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಕೃತಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅನಂತಶಯನ, ಗಂಧವನ್ನು ತಿಕ್ಕಿದಷ್ಟು ಸುಗಂಧ ಹರಡುತ್ತದೆ. ಅದೇ ರೀತಿ ಜೀವನದಲ್ಲಿ ಹೆಚ್ಚು ನೋವು ಅನುಭವಿಸಿದವರು ಕವಿಯಾದರೆ ಸುಂದರವಾದ ಕವನ ಹುಟ್ಟುತ್ತೆ. ಕೆಲವರು ಬರೆದಾಗ ಅದರಲ್ಲಿ ಸಂದೇಶ ಇರಲ್ಲ. ಚಂದಕಾಣುತ್ತದೆ ಅಷ್ಟೆ. ಅಂತಹ ಬರಗಾರರು ಹೆಚ್ಚಿದ್ದಾರೆ. ಆದರೆ ಅನುಭವವನ್ನು ಬರಹಕ್ಕೆ ಇಳಿಸುವವರ ಸಂಖ್ಯೆ ಕಡಿಮೆ ಇದೆ ಎಂದು ಅಭಿಪ್ರಾಯಪಟ್ಟರು. ಬರವಣಿಗೆಯಲ್ಲಿ ಆಸಕ್ತಿ ಉಳ್ಳವರು ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ತಾರೆ. ಏಕಾಂಗಿಯಾಗಿದ್ದಾಗ ನಮ್ಮ ಪ್ರತಿಭೆ ತೆರೆದುಕೊಳ್ಳುತ್ತದೆ, ಬೇರೆಯವರೊಂದಿಗೆ…

Read More

ಮಡಿಕೇರಿ ಆ.6 : ಹವಾಗುಣದಲ್ಲಾಗುತ್ತಿರುವ ಏರುಪೇರಿನಿಂದ ಜಿಲ್ಲೆಯ ರೈತರು ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಕೃಷಿಕರ ಸಾಲಮನ್ನಾಕ್ಕೆ ಕ್ರಮ ಕೈಗೊಳ್ಳಬೇಕು. ರೈತರ ಪರವಾಗಿ ಚೆಟ್ಟಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಮೂಲಕ ರಾಜ್ಯ ಸರಕಾರಕ್ಕೆ ಪತ್ರ ಬರೆದು ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸುವುದಾಗಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ. ಚೆಟ್ಟಳ್ಳಿಯ ನರೇಂದ್ರಮೋದಿ ಭವನದಲ್ಲಿ ನಡೆದ ಚೆಟ್ಟಳ್ಳಿ ಸಹಕಾರ ಸಂಘದ 46ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ಸಂಘ 53.42 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ರಷ್ಟು ಡಿವಿಡೆಂಟ್ ನೀಡಲಾಗುತ್ತಿದೆ. ಸಾಲಮನ್ನಾ ಮತ್ತು ಬಡ್ಡಿಮನ್ನಾದ ಹಣ ಬಂದರೆ ಸಂಘ ಮತ್ತಷ್ಟು ಪ್ರಗತಿ ಸಾಧಿಸಲಿದೆ ಎಂದರು. ಸಂಘದಲ್ಲಿ ಕುಡಿಯುವ ನೀರಿನ ಘಟಕ, ವಸತಿಗ್ರಹ, ವಿವಿಧ ರೀತಿಯ ಸಾಲ ಯೋಜನೆ, ಗೊಬ್ಬರ ಮಾರಾಟ, ಆರ್‌ಟಿಸಿ ಹಾಗೂ ಛಾಪಾ ಕಾಗದ ಸೌಲಭ್ಯಗಳಿವೆ. ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ನೂತನ ಎಲೆಕ್ಟಿçಕ್ ವಾಹನ ಚಾರ್ಜಿಂಜ್ ಪಾಯಿಂಟ್, ಸಂಘದ ಹಿಂಬದಿಯ…

Read More

ಮಡಿಕೇರಿ ಆ.6 : ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಸಭೆ ನಾಪೋಕ್ಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪರಿಷತ್ ಹೋಬಳಿ ಅಧ್ಯಕ್ಷ ನೆರವಂಡ ಎಂ.ಉಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರೌಢ ಶಾಲಾ, ಕಾಲೇಜು ವಿಭಾಗ ಮತ್ತು ಸಾರ್ವಜನಿಕ ವಿಭಾಗಕ್ಕೆ ದೇಶ, ಭಕ್ತಿ ಗೀತೆ ಹಾಗೂ ಜಾನಪದ ಗೀತೆ (ಸಮೂಹ ಗಾಯನ ನಾಲ್ಕು ಮಂದಿ) ಮತ್ತು ಭಾವಗೀತೆ (ವೈಯುಕ್ತಿಕ) ಸ್ಪರ್ಧೆಯನ್ನು ಈ ತಿಂಗಳ ಒಳಗಾಗಿ ನಾಪೋಕ್ಲು ಪದವಿ ಕಾಲೇಜಿನಲ್ಲಿ ನಡೆಸಲು ಸಭೆ ತೀರ್ಮಾನಿಸಿತು. ಸೆ.12 ರಂದು ಮಧ್ಯಾಹ್ನ 3ಗಂಟೆಗೆ ಮುಂದಿನ ಸಭೆಯನ್ನು ನಡೆಸಲಾಗುತ್ತಿದ್ದು, ಸದಸ್ಯರುಗಳು ಖಡ್ಡಾಯವಾಗಿ ಹಾಜರಿರುವಂತೆ ಉಮೇಶ್ ಮನವಿ ಮಾಡಿದರು.

Read More

ಮಡಿಕೇರಿ ಆ.6 : ಕೊಡಗು ಹೆಗ್ಗಡೆ ಸಮಾಜದ ಆಡಳಿತ ಮಂಡಳಿ ವತಿಯಿಂದ ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದಲ್ಲಿ ಕಕ್ಕಡ ಪದಿನಟ್ಟ್ ಆಚರಿಸಲಾಯಿತು. ಕೊಡಗು ಹೆಗ್ಗಡೆ ಸಮಾಜ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಮಾತನಾಡಿ ನಮ್ಮ ಹಬ್ಬಗಳೆಲ್ಲವೂ ಕೃಷಿ ಆಧಾರಿತವಾಗಿದೆ. ಯುವ ಸಮೂಹ ಕೃಷಿಯತ್ತ ಚಿತ್ತಹರಿಸಿ ರಾಷ್ಟçದ ಆಹಾರ ಭದ್ರತೆಯನ್ನು ಗಟ್ಟಿಗೊಳಿಸಬೇಕು, ನಮ್ಮ ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು. ಕಕ್ಕಡ ಪದಿನಟ್ಟ್ ರ ವಿಶೇಷ ಖಾದ್ಯಗಳನ್ನು ಮಧ್ಯಾಹ್ನದ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಮಾಜದ ಉಪಾಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ, ಕಾರ್ಯದರ್ಶಿ ಚಂಗಚoಡ ಕಟ್ಟಿ ಕಾವೇರಪ್ಪ. ನಿರ್ದೇಶಕರುಗಳಾದ ಪಡಿಞರಂಡ ಪ್ರಭುಕುಮಾರ್, ಮೂರೀರ ಕುಶಾಲಪ್ಪ, ಕೊಂಗೆಪoಡ ರಘ, ಪಂದಿಕoಡ ಸುನಾ, ಮಲ್ಲಾಡ ಸುತಾ, ಮೂರೀರ ಶಾಂತಿ, ಪದಿಕಂಡ ನಾಗೇಶ್, ಪ್ರಮುಖರಾದ ಮೂರೀರ ಪಾರ್ವತಿ, ಮಲ್ಲಾಡ ಕಟ್ಟಿ ಪೂಣಚ್ಚ, ಪಡಿಞರಂಡ ಗೀತಾ, ಕವಿತಾ, ಕೊರಕುಟ್ಟೀರ ಯಶೋಧ ಮತ್ತಿತರರು ಉಪಸ್ಥಿತರಿದ್ದರು.

Read More

ಮಡಿಕೇರಿ ಆ.6 : ಮೂರು ದಿನಗಳ ಹಿಂದೆ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದ ಮಡಿಕೇರಿ ತಾಲ್ಲೂಕಿನ ಇಬ್ಬರು ಬಾಲಕಿಯರ ಪೈಕಿ ಒಬ್ಬಾಕೆ ಕಡಲಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ. ಮಡಿಕೇರಿ ನಗರದ ನಿವಾಸಿ ಮಾನ್ಯ ಎಂಬಾಕೆ ಮೃತಪಟ್ಟ ಬಾಲಕಿಯಾಗಿದ್ದು, ಮತ್ತೋರ್ವ ಬಾಲಕಿಯನ್ನು ರಕ್ಷಿಸಲಾಗಿದೆ. ನಗರದ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿಯ ಇಬ್ಬರು ಬಾಲಕಿಯರು ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ನಂತರ ನಾಪತ್ತೆಯಾಗಿದ್ದರು. ಈ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿ, ಪೊಲೀಸರು ತನಿಖೆ ಕೈಗೊಂಡಿದ್ದರು. ಈ ನಡುವೆ ಶನಿವಾರ ರಾತ್ರಿ 8.30 ಗಂಟೆ ವೇಳೆ ಉಡುಪಿಯ ಮಲ್ಪೆಯಲ್ಲಿ ಬಂಡೆಯೊoದರ ಮೇಲೆ ಕುಳಿತು ಆಟವಾಡುತ್ತಿದ್ದರು. ಈ ವೇಳೆ ಸಮುದ್ರದಿಂದ ದೊಡ್ಡ ಅಲೆಯೊಂದು ಅಪ್ಪಳಿಸಿ ಇಬ್ಬರನ್ನೂ ಸೆಳೆದುಕೊಂಡು ಹೋಗಿದೆ ಎನ್ನಲಾಗಿದೆ. ಮಲ್ಪೆ ಕಡಲಲ್ಲಿ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗೇಳುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಸಮೀಪದಲ್ಲೇ ಇದ್ದ ಮಲ್ಪೆಯ ಸಮಾಜ ಸೇವಕ, ಮುಳುಗು ತಜ್ಞ ಈಶ್ವರ್…

Read More