ಮಡಿಕೇರಿ ಮೇ 11 : ದೇವಸ್ತೂರು ಗ್ರಾಮದ ಮನೆಯೊಂದರಲ್ಲಿ ಸೇರಿಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಪಿಯೂಷ್ ಪೆರೆರಾ ರಕ್ಷಿಸಿ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಟ್ಟರು.
ಲೇಖಕ: admin
ಕೆಲವೊಂದು ಕಡೆಗಳಲ್ಲಿ ಈಗಲೂ ಮಕ್ಕಳನ್ನು ಸ್ನಾನ ಮಾಡಿಸಲು ಕಡಲೆ ಹಿಟ್ಟನ್ನು ಬಳಸುವುದು ಇದೆ. ಕಡಲೆ ಹಿಟ್ಟು ತ್ವಚೆಗೆ ತುಂಬಾ ಒಳ್ಳೆಯದು ಎನ್ನುವ ಕಾರಣಕ್ಕಾಗಿ ಇದನ್ನು ಬಳಸಲಾಗುತ್ತದೆ. ನಾವು ಬಳಸುವಂತಹ ಸೋಪಿಗಿಂತ ಕಡಲೆ ಹಿಟ್ಟು ಚರ್ಮಕ್ಕೆ ಒಳ್ಳೆಯದು. ಕಡಲೆಹಿಟ್ಟಿನಲ್ಲಿ ಯಾವುದೇ ರೀತಿಯ ಹಾನಿಕಾರಕ ಪದಾರ್ಥಗಳು ಇರುವುದಿಲ್ಲ. ನಮ್ಮ ಹಿರಿಯರು ಹಿಂದಿನಿಂದಲೂ ಕಡಲೆಹಿಟ್ಟನ್ನು ಚರ್ಮದ ಆರೈಕೆಗೆ ಬಳಸಿಕೊಂಡು ಬಂದಿದ್ದಾರೆ. ಕಡಲೆಹಿಟ್ಟನ್ನು ಬಳಸಿದರೆ ಚರ್ಮದ ಕಲೆಗಳನ್ನು ನಿವಾರಿಸಬಹುದು. ಕಡಲೆಹಿಟ್ಟಿನಿಂದ ಒಳ್ಳೆಯ ತ್ವಚೆಯನ್ನು ಕೂಡ ಪಡೆಯಬಹುದಾಗಿದೆ. ನಿಯಮಿತವಾಗಿ ದೇಹಕ್ಕೆ ಕಡಲೆಹಿಟ್ಟನ್ನು ಬಳಸುವುದರಿಂದ ಕಾಂತಿಯುತ ತ್ವಚೆಯು ನಮ್ಮದಾಗುತ್ತದೆ. ಕಡಲೆಹಿಟ್ಟನ್ನು ಬಳಸಿ ನಿವಾರಿಸಬಹುದಾದ ಕೆಲವೊಂದು ಸಮಸ್ಯೆಗಳು. ಬಿಸಿಲಿನಲ್ಲಿ ತಿರುಗಾಡಿಕೊಂಡು ಬಂದ ಬಳಿಕ ಮುಖದ ಮೇಲೆ ಕಪ್ಪು ಕಲೆಗಳು ಬಿದ್ದಿದೆಯಾ? ಹಾಗಾದರೆ ಕಡಲೆಹಿಟ್ಟಿನಿಂದ ಇದನ್ನು ನಿವಾರಿಸಬಹುದು. ಎರಡು ಚಮಚ ಕಡಲೆ ಹಿಟ್ಟಿಗೆ ಒಂದು ಹಿಡಿ ಅರಶಿನ, ಕೆಲವು ಹನಿ ನಿಂಬೆರಸ ಮತ್ತು ಮೊಸರು ಹಾಕಿಕೊಂಡು ಬೆರೆಸಿಕೊಳ್ಳಿ. ಇದನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ಒಣಗಲು ಬಿಡಿ. ಕೆಲವು ದಿನಗಳ ಕಾಲ…
ಮಡಿಕೇರಿ ಮೇ 11 : ಕಾಡುಕೋಣ ಡಿಕ್ಕಿ ಹೊಡೆದ ಪರಿಣಾಮ ಆಟೋವೊಂದು ಪ್ರಪಾತಕ್ಕೆ ಬಿದ್ದ ಘಟನೆ ಮಡಿಕೇರಿ ಸಮೀಪದ ಉದಯಗಿರಿಯಲ್ಲಿ ನಡೆದಿದೆ. ಚಂದ್ರಗಿರಿ ನಿವಾಸಿ ಜೈನುದ್ದೀನ್ ಎಂಬುವರಿಗೆ ಸೇರಿದ ಆಟೋ ಸುಮಾರು 30 ಅಡಿ ಪ್ರಪಾತಕ್ಕೆ ಉರುಳಿ ಬಿದ್ದಿದ್ದು, ಅದೃಷ್ಟವಶತ್ ಯಾವುದೇ ಪ್ರಾಣಾಪಯ ಸಂಭವಿಸಿದಲ್ಲ.
ಮಡಿಕೇರಿ ಮೇ 11 : ಕಂಡಕರೆಯ ಗಾಂಧಿ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಕಂಡಕರೆ ಹಾಗೂ ಉಪಾಧ್ಯಕ್ಷ ಸವಾದ್ ಉಸ್ಮಾನ್ ಮತಗಟ್ಟೆ ಸಂಖ್ಯೆ 233 ಪೊನ್ನತ್ಮೊಟ್ಟೆಯಲ್ಲಿ ಮತ ಚಲಾಯಿಸಿದರು.
ಮಡಿಕೇರಿ ಮೇ 10 : ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಶೇ.74.74 ರಷ್ಟು ಮತದಾನವಾಗಿದೆ. ಒಟ್ಟು 4,56,313 ಮತದಾರರಲ್ಲಿ 3,41,046 ಮತದಾರರು ಮತದಾನ ಮಾಡಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,32,148 ಮತದಾರರಲ್ಲಿ 1,75,009 ಮತದಾರರು ಮತ ಚಲಾಯಿಸಿದ್ದು, ಶೇ.75.39 ರಷ್ಟು ಮತದಾನವಾಗಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಒಟ್ಟು 2,24,165 ಮತದಾರರಿದ್ದು, 1,66,037 ಮತದಾರರು ಮತ ಚಲಾಯಿಸಿದ್ದು, ಶೇ.74.07 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ 9 ಗಂಟೆ ವೇಳೆಗೆ ಶೇ.11.74 ರಷ್ಟು, 11 ಗಂಟೆ ವೇಳೆಗೆ ಶೇ.26.52 ರಷ್ಟು, ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.45.64 ರಷ್ಟು, ಮಧ್ಯಾಹ್ನ 3 ಗಂಟೆ ವೇಳೆಗೆ 58.24 ರಷ್ಟು ಮತದಾನವಾಗಿತ್ತು. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದ ಒಟ್ಟು 543 ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬೆಳಗ್ಗಿನ ವೇಳೆಯಲ್ಲಿ ಮತಗಟ್ಟೆ ಕೇಂದ್ರಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸಿದ್ದು ಕಂಡು ಬಂದಿತು. ಮತದಾರರು ಮತಹಕ್ಕು ಚಲಾಯಿಸಿ ಮತಗಟ್ಟೆಯಿಂದ ಹೊರಬರುತ್ತಿದ್ದ ದೃಶ್ಯವು ಮತದಾನದ ಹುಮ್ಮಸ್ಸನ್ನು ಹೆಚ್ಚಿಸಿತು. ಪ್ರಥಮ…
ಮಡಿಕೇರಿ ಮೇ 10 : ‘ಕೊಡಗಿನ ಕಾಫಿ’ ಈ ಬಾರಿಯ ಚುನಾವಣೆಯಲ್ಲಿ ಮತದಾರರನ್ನು ಮತಗಟ್ಟೆಯತ್ತ ಸೆಳೆೆಯುವ ಅಂಶವಾಗಿರುವ ವಿಶೇಷ ಈ ಬಾರಿಯ ಚುನಾವಣೆಯದ್ದು. ಜಿಲ್ಲೆಯ ಮೂರು ಮತಗಟ್ಟೆಗಳು ಕಾಫಿಯ ಚಿತ್ರಣಗಳನ್ನು ಒಳಗೊಂಡು ಅತ್ಯಾಕರ್ಷಕವಾಗಿ ಗಮನ ಸೆಳೆದದ್ದು ವಿಶೇಷ. ನಗರದ ಹಿಲ್ ರಸ್ತೆಯ ಸಿಎಂಸಿ ಮಾದರಿ ಪ್ರಾಥಮಿ ಶಾಲೆಯ 210 ನೇ ಮತಗಟ್ಟೆ ಕಾಫಿ ಹಣ್ಣುಗಳ ಗಿಡ, ಕಾಫಿ ಕೊಯ್ಯುವ ಮಹಿಳೆಯ ಚಿತ್ರಣಗಳೊಂದಿಗೆ ಅತ್ಯಾಕರ್ಷಕವಾಗಿ ಅಲಂಕೃತಗೊoಡಿತ್ತಲ್ಲದೆ, ಬಿಸಿ ಬಿಸಿ ಕಾಫಿ ಸವಿಯಲು ಇಲ್ಲಿ ಅವಕಾಶ ಕಲ್ಪಿಸಿದ್ದು ವಿನೂತನವಾಗಿತ್ತು. ಇದೇ ಮತಗಟ್ಟೆಯಲ್ಲಿ ವಿಶೇಷ ಚೇತನರಿಗಾಗಿ ರ್ಯಾಂಪ್, ರೈಲಿಂಗ್ಸ್, ವೀಲ್ಚೇರ್ ಹಾಗೂ ವಾಹನ ಸೌಲಭ್ಯ ಕಲ್ಪಿಸುವ ಮೂಲಕ ಮಾದರಿ ಮತಗಟ್ಟೆಯನ್ನಾಗಿಯೂ ರೂಪಿಸಲಾಗಿತ್ತು. ನಿರೀಕ್ಷಣಾ ಕೊಠಡಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳು ಕಲ್ಪಿಸಿದ್ದು ಮಾತ್ರವಲ್ಲದೆ, ವಿಶೇಷಚೇತನರು ಹಾಗೂ ಹಿರಿಯ ನಾಗರಿಕ ಮತದಾರರ ಸಹಾಯಕ್ಕಾಗಿ ಸ್ವಯಂ ಸೇವಕರ ಸೇವೆಯನ್ನು ಒದಗಿಸಲಾಗಿತ್ತು. ಈ ರೀತಿಯ ಮತಗಟ್ಟೆಗಳನ್ನು ರಂಗ ಸಮುದ್ರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಪೊನ್ನಂಪೇಟೆ ಜಿಎಂಪಿಎಸ್ ಶಾಲೆಯಲ್ಲೂ ಸಜ್ಜುಗೊಳಿಸಿ…
ಮಡಿಕೇರಿ ಮೇ 10 : ಪ್ರಜಾತಂತ್ರ ವ್ಯವಸ್ಥೆಯ ಅತ್ಯಂತ ಪವಿತ್ರ ‘ಮತದಾನ’ ಪ್ರಕ್ರಿಯೆಯ ಒಟ್ಟು ಪ್ರಮಾಣದ ಹೆಚ್ಚಳಕ್ಕೆ ಪೂರಕವಾಗಿ ಜಿಲ್ಲೆಯ ಎರಡು ಮತ ಕ್ಷೇತ್ರಗಳ ಹತ್ತು ಮತಗಟ್ಟೆಗಳು ‘ಸಖಿ ಮತಗಟ್ಟೆ’ಗಳಾಗಿ ಮತದಾರರ ಗಮನ ಸೆಳೆಯಿತು. ಜಿಲ್ಲಾ ಕೇಂದ್ರ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಮತಗಟ್ಟೆ 199 ಮತ್ತು ಮಹದೇವಪೇಟೆಯ ಸಿಎಂಸಿ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ 201 ಸರ್ವಾಲಂಕೃತಗೊoಡು ‘ಸಖಿ ಮತಗಟ್ಟೆ’ಯಾಗಿ ಗಮನ ಸೆಳೆಯಿತು. ವಿಶೇಷವಾಗಿ ಈ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿಗಳೆಲ್ಲರು ಮಹಿಳೆಯರೇ ಆಗಿದ್ದು, ಅತ್ಯಂತ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾದರು. ‘ನಾನು ಹೆಮ್ಮೆಯ ಮತದಾರ. ನನ್ನ ಮತ, ನನ್ನ ಧ್ವನಿ” ಘೋಷವಾಕ್ಯದ ಆಕರ್ಷಕ ಘೋಷಣೆಯೊಂದಿಗೆ ಸಖಿ ಮತಗಟ್ಟೆಯ ಮುಖ್ಯ ದ್ವಾರ ಮತದಾರರನನ್ನು ತನ್ನೆಡೆಗೆ ಸೆಳೆಯುವುದರೊಂದಿಗೆ, ಘೋಷಣೆಯ ಮೂಲಕ ಗಮನ ಸೆಳೆಯುತಿತ್ತು. ಈ ವಿಶೇಷ ಮತಗಟ್ಟೆಯಲ್ಲಿ ಮತದಾನ ಮಾಡಿದವರು ತಮ್ಮ ಭಾವ ಚಿತ್ರ ತೆಗೆದುಕೊಳ್ಳಲು ಅನುಕೂಲವಾಗುವಂತೆ ‘ಸೆಲ್ಫಿ ಬೂತ್’ ಸಜ್ಜುಗೊಳಿಸಿದ್ದು, ಸಾಕಷ್ಟು ಮತದಾರರು ಈ ಸೆಲ್ಫಿ ಬೂತ್ನಲ್ಲಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು…
ಮಡಿಕೇರಿ ಮೇ 10 : ಕೊಡಗು ಜಿಲ್ಲೆಯಾದ್ಯಂತ ವಿಧಾನಸಭೆಗೆ ಉತ್ಸಾಹದಿಂದ ಮತದಾನ ನಡೆಯಿತು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಮರಗೋಡು ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮತಗಟ್ಟೆಯಲ್ಲಿ ವರ ಹೊಸ್ಕೇರಿ ಗ್ರಾಮದ ಚೋಂದಿರ ಜಗದೀಶ್ ಮತದಾನ ಮಾಡಿದರು. ನಂತರ ಮೂರ್ನಾಡು ಗೌಡ ಸಮಾಜದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮಡಿಕೇರಿ ಮೇ 10 : ನಕ್ಸಲ್ ಪೀಡಿತ ವಣಚಲು ಮತಗಟ್ಟೆಯಲ್ಲಿ ಬೆಳಗ್ಗಿನ ಅವಧಿ ಚುರುಕಿನ ಮತದಾನ ನಡೆಯಿತು. ಮಧ್ಯಾಹ್ನದ ವೇಳೆಗೆ ಶೇ.55ರಷ್ಟು ಮತದಾನ ದಾಖಲಾಯಿತು. ಈ ಮತಗಟ್ಟೆಗೆ ಶಸ್ತ್ರ ಸಜ್ಜಿತ ಪೊಲೀಸರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದಕ್ಷಿಣ ಕೊಡಗಿನ ಕೆಲ ಮತಗಟ್ಟೆಗಳು ವನ್ಯಜೀವಿಗಳ ಉಪಟಳಕ್ಕೆ ತುತ್ತಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ ನಿಯೋಜನೆ ಮಾಡಲಾಗಿತ್ತು.ಭಯ ಮುಕ್ತ ಮತದಾನಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕೈಜೋಡಿಸಿದ್ದರು. ಮಡಿಕೇರಿ ಕ್ಷೇತ್ರದ ಮಾದಾಪುರ ಮತಗಟ್ಟೆಯ ಗೊಂದಲದಿಂದ ಕೆಲ ಕಾಲ ಮತದಾನಕ್ಕೆ ತೊಡಕುಂಟಾಯಿತು. ಈ ಹಂತದಲ್ಲಿ ಮತದಾನಕ್ಕೆ ಕಾಯ್ದು ಬಳಲಿದ್ದ ಮತದಾರರು ಕುಡಿಯುವ ನೀರಿಗಾಗಿ ಪರದಾಡಿ ತಾಳ್ಮೆ ಕಳೆದುಕೊಂಡರು. ಈ ಸಂದರ್ಭ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಅರೆಸೇನಾ ಪಡೆಯ ಸಿಬ್ಬಂದಿ ಲಾಠಿ ಬೀಸಿದ ಪರಿಣಾಮ ಮತದಾರರೊಬ್ಬರ ಕಾಲಿಗೆ ಗಾಯವಾಗಿ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಯಿತು. ನಂತರ ಚುನಾವಣಾಧಿಕಾರಿಗಳು ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ಜಂಬೂರು ಬಾಣೆ ಮತ್ತು ಎಫ್.ಎಂ.ಸಿ ಬಡಾವಣೆಯ (ಪ್ರಕೃತಿ ವಿಕೋಪ ಪುನರ್ವಸತಿ ಬಡಾವಣೆ)…
ಮಡಿಕೇರಿ ಮೇ 10 : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಯುವಕ ಯುವತಿಯರನ್ನು ಒಳಗೊಂಡಂತೆ ಜಿಲ್ಲೆಯ ಎಲ್ಲಾ ಮತದಾರರು ತಮ್ಮ ಕುಟುಂಬದವರೊಂದಿಗೆ ಮತದಾನ ಮಾಡಿ ನಂತರ ಸೆಲ್ಫಿ ಕ್ಲಿಕ್ಕಿಸಿಕೊಂಡು ಗಮನ ಸೆಳೆದರು.






