ಮಡಿಕೇರಿ ಜೂ.12 NEWS DESK : ಕಳೆದ ಎಂಟು ವರ್ಷಗಳಿಂದ ಜಿಲ್ಲೆಯ ವಿವಿಧ ಜನಾಂಗದಲ್ಲಿರುವ ಆಯ್ದ ಸಂಕಷ್ಟ ಕುಟುಂಬಗಳಿಗೆ ಆಹಾರದ ಕಿಟ್, ವೈದ್ಯಕೀಯ ಸೌಲಭ್ಯ ಹಾಗೂ ವಿದ್ಯಾರ್ಥಿಗಳಿಗೆ ಪಠ್ಯ ಪರಿಕರಗಳನ್ನು ವಿತರಿಸುತ್ತಾ ಬರುತ್ತಿರುವ ಮಾನವೀಯ ಸ್ನೇಹಿತರ ಒಕ್ಕೂಟದ ಜಿಲ್ಲಾಮಟ್ಟದ ಕಾರುಣ್ಯ ಕಾರ್ಯಕ್ರಮ ಜೂ.14 ರಂದು ನಡೆಯಲಿದೆ. ಅಂದು ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಪೂರ್ವಾಹ್ನ10.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ವಕ್ತಾರ ಶಶಿಕುಮಾರ್ ಚೆಟ್ಟಳ್ಳಿ ಅವರು ವಹಿಸಲಿದ್ದು, ಮಡಿಕೇರಿ ಪುರಸಭೆಯ ಮಾಜಿ ಅಧ್ಯಕ್ಷ ಎಚ್ಎಂ ನಂದ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಮಂತರ್ ಗೌಡ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್ ಟಿ ಅನಿಲ್, ಒಕ್ಕೂಟದ ಸ್ಥಾಪಕ ಅಡ್ಮಿನ್ ಅನಿಲ್ ರೈ, ಡಾ.ಮುಸ್ತಫ ಮಾದಾಪುರ, ಸುಂಟಿಕೊಪ್ಪದ ಹಿರಿಯ ಸಹಕಾರಿ ಚೆಟ್ರಂಡ ಲೀಲಾ ಮೇದಪ್ಪ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಆಹಾರ, ಆರೋಗ್ಯ,ಶಿಕ್ಷಣ ವಿಭಾಗಗಳಲ್ಲಿ ಅಂದು ಜಿಲ್ಲೆಯ 70ಕ್ಕೂ ಅಧಿಕ ಫಲಾನುಭವಿಗಳಿಗೆ ಒಕ್ಕೂಟದ ವತಿಯಿಂದ ಸವಲತ್ತುಗಳ ವಿತರಣೆ ನಡೆಯಲಿದೆ,ಈ ಉದ್ದೇಶಿತ ಕಾರುಣ್ಯ…
ಲೇಖಕ: admin
ಮಡಿಕೇರಿ ಜೂ.12 NEWS DESK : ರಾಜ್ಯದ ಅತ್ಯಂತ ಪ್ರಸಿದ್ಧ ಮತ್ತು ಸುಂದರಪ್ರವಾಸಿ ತಾಣಗಳಲ್ಲಿ ಒಂದಾದ ಮಡಿಕೇರಿಯ ಮಾಂದಲಪಟ್ಟಿ(ಮುಗಿಲುಪೇಟೆ) ಗಿರಿಧಾಮಕ್ಕೆ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರ ನಿರ್ದೇಶನದ ಮೇರೆಗೆ ನಿರ್ಮಿಸಲಾದ 60 ಲಕ್ಷ ರೂ ವೆಚ್ಚದ 4 ಕಿ.ಮೀ ರಸ್ತೆಯನ್ನು ಹೊದ್ದೂರು ಪಂಚಾಯತ್ ಮಾಜಿ ಅಧ್ಯಕ್ಷರಾದ ಎಚ್.ಎ.ಹಂಸ ಅವರು ಸ್ಥಳೀಯ ಮುಖಂಡರೊಂದಿಗೆ ಶಾಸಕರ ಅನುಪಸ್ಥಿತಿಯಲ್ಲಿ ಉದ್ಘಾಟನೆ ಮಾಡಿದರು. ಸ್ಥಳೀಯ ನಿವಾಸಿಗಳು, ಗ್ರಾಮಸ್ಥರು ಹಾಗೂ ಬಾಡಿಗೆ ಜೀಪ್ ಮಾಲಿಕರ ಕೋರಿಕೆ ಮೇರೆಗೆ ಶಾಸಕರು ಈ ರಸ್ತೆಯನ್ನು ನಿರ್ಮಾಣ ಮಾಡಲು ಅವಕಾಶ ಮಾಡಿದ್ದು ನಿಯಮ ಬಾಹಿರ ಚಟುವಟಿಕೆಗಳು ಪ್ರವಾಸಿ ತಾಣದಲ್ಲಿ ನಡೆಯದಂತೆ ಎಚ್ಚರವಹಿಸಬೇಕು ಎಂದು ಸ್ಥಳಿಯರಿಗೆ ಹಂಸ ಅವರು ಮನವಿ ಮಾಡಿದರು. ಕಾಲೂರು ಗ್ರಾಮಕ್ಕೆ ಬಸ್ ಬರುವ ರಸ್ತೆ ಹದಗೆಟ್ಟಿದ್ದು ತಕ್ಷಣಕ್ಕೆ ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ಡಾ.ಮಂತರ್ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಅವರು ಪ್ರಾಸ್ತವಿಕವಾಗಿ…
ಮಡಿಕೇರಿ ಜೂ.12 NEWS DESK : ಮಕ್ಕಳು ಭವಿಷ್ಯದ ಪ್ರಜೆಗಳಾಗಿದ್ದು, ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಆಟ-ಪಾಠ ಮತ್ತು ಸುರಕ್ಷಿತಾ ಬಾಲ್ಯ ದೊರೆಯುವುದು ಮೂಲಭೂತ ಹಕ್ಕಾಗಿದೆ. ಆ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆಗೆ ಗಮನಹರಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಸಿ.ಕೆ.ಬಸವರಾಜ್ ಅವರು ಕರೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ವಿಶೇಷ ಪೊಲೀಸ್ ಘಟಕ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಮಕ್ಕಳ ರಕ್ಷಣಾ ಘಟಕ, ಮಡಿಕೇರಿ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಡತನ, ಅಜ್ಞಾನ, ನಿರುದ್ಯೋಗ ಮತ್ತು ಸಾಮಾಜಿಕ ಸಮಸ್ಯೆಗಳ ಕಾರಣದಿಂದ ಅನೇಕ ಮಕ್ಕಳು ಕಾರ್ಖಾನೆ, ಹೋಟೆಲ್, ಅಂಗಡಿಗಳಲ್ಲಿ…
ಸುಂಟಿಕೊಪ್ಪ ಜೂ.12 NEWS DESK : ಜಿಟೌನ್ ಸುಂಟಿಕೊಪ್ಪದ ವತಿಯಿಂದ ಫಿಪಾ ವಿಶ್ವಕಪ್ 2026 ಸಂಭ್ರಮದ ಹಿನ್ನಲೆಯಲ್ಲಿ ಫುಟ್ಬಾಲ್ ಪ್ರೇಮಿಗಳು ಚೆಸ್ಕಾಂ ಕಚೇರಿಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸರಿ ಸುಮಾರು 150 ಅಡಿ ಉದ್ದ ಮತ್ತು 10 ಅಡಿ ಎತ್ತರದ ವಿವಿಧ ದೇಶಗಳ ಫುಟ್ಬಾಲ್ ಆಟಗಾರರ ಭಾವಚಿತ್ರಗಳನ್ನು ಅಳವಡಿಸಿದ ಬೃಹತ್ ಪ್ಲೆಕ್ಸ್ ಅನ್ನು ನಿರ್ಮಿಸಿ ಅಳವಡಿಸಿದ್ದಾರೆ. ಇದನ್ನು ಸುಂಟಿಕೊಪ್ಪ ಹಿರಿಯ ಪುಟ್ಬಾಲ್ ಆಟಗಾರರಾದ ವಹೀದ್ಜಾನ್ ಮತ್ತು ಅಬ್ಧುಲ್ ರಹೆಮಾನ್ ಉದ್ಘಾಟಿಸಿದರು. ಈ ಸಂದರ್ಭ ಜಿಟೌನ್ ಸುಂಟಿಕೊಪ್ಪ ಹಿರಿಯ ಮತ್ತು ಕಿರಿಯ ಆಟಗಾರರು ಫುಟ್ಬಾಲ್ ಜೆರ್ಸಿಗಳನ್ನು ಧರಿಸಿ ಪಟಾಕಿ ಸಿಡಿಸಿ ಸಂಭ್ರಮದಿಂದ ಘೋಷಣೆ ಕೂಗಿದರು. ಈ ಸಂದರ್ಭ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರುಗಳಾದ ಕೆ.ಎ.ಉಸ್ಮಾನ್, ಪಿ.ಎಫ್.ಸಬಾಸ್ಟಿನ್, ಶಬ್ಬೀರ್, ರಫೀಕ್ಖಾನ್, ಕೆ.ಎಸ್.ಅನಿಲ್ಕುಮಾರ್, ಆದಂ ರಫೀ, ಬಾಸಿತ್, ಬಿ.ಕೆ.ಪ್ರಶಾಂತ್ (ಕೋಕಾ), ಕೆ.ಎ.ಲತೀಫ್, ಕೊಡಗರಹಳ್ಳಿ ನೇತಾಜಿ ಯುವಕ ಸಂಘದ ಮಾಜಿ ಅಧ್ಯಕ್ಷ ಬಿ.ಸಿ.ದಿನೇಶ್, ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಆಟೋಚಾಲಕರ ಸಂಘದ ಅಧ್ಯಕ್ಷ…
ಸೋಮವಾರಪೇಟೆ ಜೂ.12 NEWS DESK : ಜಿಲ್ಲಾ, ತಾಲೂಕು, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಐಗೂರು ಗ್ರಾಮದಲ್ಲಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಭಿನಂದನಾ ಕಾರ್ಯಕ್ರಮ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪರಿಷತ್ನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಐಗೂರು ಐಸಿರಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ನಂತರ ಅವರು ಮಾತನಾಡಿ, ಗ್ರಾಮೀಣ ಪ್ರದೇಶವಾದ ಐಗೂರು ಗ್ರಾಮದಲ್ಲಿ ಕನ್ನಡ ಮನಸ್ಸು ನಿರಂತರ ಶ್ರಮದಿಂದ ಕನ್ನಡ ಹಬ್ಬ ಯಶಸ್ವಿಯಾಗಿದೆ. 12 ಸಮಿತಿಗಳ ಸದಸ್ಯರುಗಳು ಹೆಚ್ಚಿನ ಆಸಕ್ತಿಯಿಂದ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಶಾಸಕ ಡಾ.ಮಂತರ್ಗೌಡ ಅವರು ಎಲ್ಲ ರೀತಿಯಲ್ಲೂ ಸಹಕಾರ ನೀಡಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭ ವಿವಿಧ ಸಮಿತಿಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದ ಜಲಜಾ ಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂಜಯ್ ಜೀವಿಜಯ, ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ.ಶಿವಕುಮಾರ್, ಕ.ಸಾ.ಪ…
ಮಡಿಕೇರಿ ಜೂ.12 NEWS DESK : ಕೊಡಗು ಪತ್ರಿಕಾ ಭವನ ಟ್ರಸ್ಟ್(ರಿ) ವತಿಯಿಂದ ಜೂ.13 ರಂದು ಮಧ್ಯಾಹ್ನ ಪತ್ರಿಕಾ ಭವನ ಸಭಾಂಗಣದಲ್ಲಿ “ವಿದ್ಯಾನಿಧಿ” ವಿತರಣಾ ಸಮಾರಂಭ ನಡೆಯಲಿದೆ ಎಂದು ಕೊಡಗು ಪತ್ರಿಕಾ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್ ತಿಳಿಸಿದ್ದಾರೆ.
ಚೆಟ್ಟಳ್ಳಿ NEWS DESK ಜೂ.12 : ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರದ ಮುಖ್ಯಸ್ಥರಾಗಿ ಕಾಫಿ ಮಂಡಳಿಯ ಜಂಟಿ ನಿರ್ದೇಶಕರಾದ(ಸಂಶೋಧನೆ) ಡಾ.ಸಿ.ವಬಾಬು ಅಧಿಕಾರ ಸ್ವೀಕಾರಿಸಿದ್ದಾರೆ. ಈ ಹಿಂದೆ ಉಪನಿರ್ದೇಶಕ ಡಾ.ಜೀನಾ ದೇವಸಿಯಾ ಅವರು ಕೇಂದ್ರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಚಿಕ್ಕಮಗಳೂರಿಗೆ ವರ್ಗಾವಣೆಗೊಂಡ ನಂತರ ಡಾ.ಸಿ. ಬಾಬು ರವರನ್ನು ನೇಮಕ ಮಾಡಲಾಗಿದೆ. 2012ರಲ್ಲಿ ಚಿಕ್ಕಮಂಗಳೂರಿನ ಕಾಫಿ ಸಂಶೋದನಾ ಕೇಂದ್ರದಲ್ಲಿ ವಿಜ್ಞಾನಿಗಳಾಗಿ ಸೇವೆ ಸಲ್ಲಿಸಿದ. ಡಾ. ಬಾಬೋವು ಅವರು 2017ರಲ್ಲಿ ಹಿರಿಯ ವಿಜ್ಞಾನಿಗಳಾಗಿ ಕೇರಳದ ವೈನಾಡಿನಲ್ಲಿ ಸೇವೆ ಸಲ್ಲಿಸಿದರು. 2019ರಲ್ಲಿ ತಮಿಳುನಾಡಿನ ಕಾಫಿ ಸಂಶೋದನಾ ಕೇಂದ್ರದಲ್ಲಿ ಉಪನಿದೇಶಕರಾಗಿ ಸೇವೆಸಲ್ಲಿಸಿ 2022ರಲ್ಲಿ ಕೇಂದ್ರದ ಬೇಸಾಯ ಶಾಸ್ತ್ರ ವಿಭಾಗಿಯ ಮುಖ್ಯಸ್ಥರಾಗಿ 2025ಯಲ್ಲಿ ಚಿಕ್ಕಮಗಳೂರಿನ ಕಾಫಿ ಮಂಡಳಿಯಲ್ಲಿ ಜಂಟಿ ನಿದೇಶಕರಾಗಿ ಸೇವೆಸಿದ್ದು ಚೆಟ್ಟಳ್ಳಿ ಕಾಫಿ ಸಂಶೋದನಾ ಉಪಕೇಂದ್ರವನ್ನು ಅಭಿವ್ರದ್ದಿ ಪಡಿಸುವ ನಿಟ್ಟಿನಲ್ಲಿ ಕೇಂದ್ರದ ಮುಖ್ಯಸ್ಥರಾಗಿ ಕಾಫಿಮಂಡಳಿ ನೇಮಕ ಮಾಡಿದೆ.
ಮಡಿಕೇರಿ NEWS DESK ಜೂ.12 : ವಯೋವೃದ್ಧರು ಹಾಗೂ ಆಶ್ರಯ ಇಲ್ಲದವರಿಗೆ ಆಶ್ರಯ ನೀಡಿ ಸಂತೈಸುತ್ತಿರುವ ಮಡಿಕೇರಿಯ ವಿಕಾಸ್ ಜನತಾ ಸೇವಾ ಟ್ರಸ್ಟ್ ನ ವ್ಯವಸ್ಥಾಪನಾ ಸಮಿತಿಯ ನೂತನ ನಿರ್ದೇಶಕರುಗಳಾಗಿ ಓಂ ಪ್ರಕಾಶ್ ರಾತ್ಹೊರೆ, ರಾಜೀವ್, ಪ್ರಸಾದ್ ಕೆ.ಬಿ ಹಾಗೂ ಮಲ್ಲಿಗೆ ಗೋಪಾಲ್ ಆಯ್ಕೆಯಾಗಿದ್ದಾರೆ. ಟ್ರಸ್ಟ್ ನ ಅಧ್ಯಕ್ಷ ನವೀನ್, ಗೌರವಾಧ್ಯಕ್ಷ ಪ್ರಸನ್ನ ಭಟ್ ಹಾಗೂ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ಮಿನಾಜ಼್ ಪ್ರವೀಣ್ ಅವರ ಸಮ್ಮುಖದಲ್ಲಿ ನೂತನ ನಿರ್ದೇಶಕರುಗಳ ಆಯ್ಕೆ ಪ್ರಕಿಯೆ ನಡೆಯಿತು ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ NEWS DESK ಜೂ.12 : ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಗ್ರಾಹಕರಿಗಾಗಿ ಮಳೆಗಾಲದ ವಿಶೇಷ ಖರೀದಿ ಉತ್ಸವ ಮುಂಗಾರು ಮೇಳವನ್ನು ಘೋಷಿಸಿದೆ. ಈ ಮೇಳವು ಜೂನ್ 13ರಿಂದ ಜೂನ್ 22ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಿದೆ. ಮೇಳದ ಅಂಗವಾಗಿ ಚಿನ್ನದ ಸರಗಳ ತಯಾರಿಕೆ ಶುಲ್ಕ ಕೇವಲ 8%ರಿಂದ, ಹಾಗೂ ಆಂಟಿಕ್ ಆಭರಣಗಳ ತಯಾರಿಕೆ ಶುಲ್ಕ 12%ರಿಂದ ಆರಂಭವಾಗುತ್ತದೆ. ಜೊತೆಗೆ EF & VVS ಗುಣಮಟ್ಟದ ವಜ್ರಾಭರಣಗಳು ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದ್ದು, ಇತರೆ ಆಯ್ದ ಆಭರಣಗಳ ಖರೀದಿಯ ಮೇಲೂ ಆಕರ್ಷಕ ರಿಯಾಯಿತಿಗಳನ್ನು ಪಡೆಯಬಹುದು. ಇದಲ್ಲದೆ, ಹಳೆಯ 916 ಹಾಲ್ಮಾರ್ಕ್ ಚಿನ್ನವನ್ನು ಯಾವುದೇ ಕಡಿತವಿಲ್ಲದೆ ಪ್ರಸ್ತುತ ಚಿನ್ನದ ದರದಲ್ಲಿ ಮೌಲ್ಯಮಾಪನ ಮಾಡಿ ಹೊಸ ಆಭರಣಗಳಿಗೆ ವಿನಿಮಯ ಮಾಡಿಕೊಳ್ಳುವ ಸುವರ್ಣಾವಕಾಶವೂ ಗ್ರಾಹಕರಿಗಾಗಿ ಕಲ್ಪಿಸಲಾಗಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಅಭಿರುಚಿಗೆ ತಕ್ಕ ವಿಶೇಷ ಆಭರಣಗಳ ವಿಶಾಲ ಸಂಗ್ರಹ, ಇಂದಿನ ಟ್ರೆಂಡಿಂಗ್ ಡಿಸೈನ್ಗಳ ಅದ್ಭುತ ಕಲೆಕ್ಷನ್ಗಳೊಂದಿಗೆ ನಿಮ್ಮ ಕನಸಿನ ಆಭರಣಗಳನ್ನು ಆಯ್ಕೆಮಾಡುವ ಅವಕಾಶ ಈ ಮುಂಗಾರು…
ಮಡಿಕೇರಿ NEWS DESK ಜೂ.12 : ಮಡಿಕೇರಿ ತಾಲ್ಲೂಕಿನ ನಾಪೋಕ್ಲುವಿನ ಬೇತು ಗ್ರಾಮದ ನಿವಾಸಿ ಮೂಟೇರಿ ಎನ್.ಗಣೇಶ (78) ಅವರು ಗುರುವಾರ ಬೆಳಿಗ್ಗೆ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಗುರುವಾರ ಸಂಜೆ ಅಂತ್ಯಕ್ರಿಯೆ ನಡೆಯಿತು.






