ಮಡಿಕೇರಿ ಜ.10 NEWS DESK : ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಮುಂಭಾಗದಲ್ಲಿ ನೂತನವಾಗಿ ಒಳಚರಂಡಿ ವ್ಯವಸ್ಥೆಯ ಕಾಮಗಾರಿಯನ್ನು ಕೈಗೊಳ್ಳುವಂತೆ ಸಹಕಾರ ಸಂಘ ಮನವಿ ಮಾಡಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರಿಗೆ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಮತ್ತು ಸಂಘದ ಸದಸ್ಯರು ಮನವಿಯನ್ನು ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿ ಮಾತನಾಡಿದ ಶಾಸಕರು ಸ್ಧಳ ವೀಕ್ಷಣೆ ಮಾಡಿ ವಾಹನಗಳ ದಟ್ಟಣೆ ಇರುವ ಸ್ಧಳವಾಗಿರುವ ಕೂಡಿಗೆ ಸಮೀಪದ ಹಾರಂಗಿ ನದಿ ಸೇತುವೆಯ ಸಮೀಪದಿಂದ ಡೈರಿ ಸರ್ಕಲ್ ನವರೆಗೆ ವಾಹನಗಳ ನಿಲುಗಡೆಗೆ ಸುಸಜ್ಜಿತವಾದ ವ್ಯವಸ್ಥೆ ಯನ್ನು ಕಲ್ಪಿಸುವ ಭರವಸೆ ಜೊತೆಯಲ್ಲಿ ಅದಕ್ಕೆ ಸಂಬಂಧಿಸಿದ ಇಲಾಖೆಯ ಮೂಲಕ ಕ್ರಿಯಾ ಯೋಜನೆ ತಯಾರಿಸಿ ಕಾಮಗಾರಿಯನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು. ಈ ಸಂದರ್ಭ ರಾಜ್ಯ ಕಾಂಗ್ರೆಸ್ ಸಮಿತಿ ಸದಸ್ಯ ಮಂಜುನಾಥ ಗುಂಡೂರಾವ್, ಕುಶಾಲನಗರ ಕುಡ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್, ಸಹಕಾರ ಸಂಘದ ಮಾಜಿ…
ಲೇಖಕ: admin
ವಿರಾಜಪೇಟೆ NEWS DESK ಜ.10 : ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ವತಿಯಿಂದ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತದ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಸಮೃದ್ಧಿ ಎ.ವಿ ಶೇ.86 ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಕೊಡಗು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಿದ್ದಾಪುರದ ಪತ್ರಕರ್ತ ಎ.ಎನ್.ವಾಸು ಆಚಾರ್ಯ ಹಾಗೂ ವಿಶಾಲಾಕ್ಷಿ ದಂಪತಿ ಪುತ್ರಿಯಾಗಿರುವ ಇವರು ವಿರಾಜಪೇಟೆಯ ಸ್ವರಾರ್ಣವ ಸಂಗೀತ ಶಾಲೆಯ ಸಂಸ್ಥಾಪಕ ಗುರು ದಿಲಿಕುಮಾರ್ ಅವರಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಸಿದ್ದಾಪುರದ ಶ್ರೀ ಕೃಷ್ಣ ವಿದ್ಯಾ ಮಂದಿರ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಮಡಿಕೇರಿ NEWS DESK ಜ.9 : ಮಡಿಕೇರಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ 15 ಸ್ಥಾನಗಳಿಗೆ ಬಿಜೆಪಿ ಬೆಂಬಲಿತ 15 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಲಗಾರರಲ್ಲದ ಕ್ಷೇತ್ರ ಸಾಮಾನ್ಯ ರವಿ ಕಾಳನ, ಮಡಿಕೇರಿ ಕ್ಷೇತ್ರ ಸಾಮಾನ್ಯ, ನಾಚಪ್ಪ ಮಾದೆಯಂಡ, ಹೊಸ್ಕೇರಿ ಕ್ಷೇತ್ರ ಸಾಮಾನ್ಯ ಪೂಣಚ್ಚ ಅಮ್ಮಾಟಂಡ, ಮೂರ್ನಾಡು ಕ್ಷೇತ್ರ ಸಾಮಾನ್ಯ ಪ್ರೀಣಾ ಮಾಡಯಂಡ, ಕಕ್ಕಬ್ಬೆ ಕ್ಷೇತ್ರ ಸಾಮಾನ್ಯ ರಮ್ಯ ಕೇಟೋಳಿರ, ನಾಪೋಕ್ಲು ಕ್ಷೇತ್ರ ಸಾಮಾನ್ಯ ಮುತ್ತಪ್ಪ ಅಪ್ಪಚಟ್ಟೋಳಂಡ, ಚೇರಂಬಾಣೆ ಕ್ಷೇತ್ರ ಸಾಮಾನ್ಯ, ಮಾದಯ್ಯ ನಾಪಂಡ, ಪೆರಾಜೆ ಕ್ಷೇತ್ರ ಸಾಮಾನ್ಯ ಭುವನೇಶ್ವರ ನಿಡ್ಯಮಲೆ, ಸಂಪಾಜೆ ಕ್ಷೇತ್ರ ಸಾಮಾನ್ಯ ಜಯಪ್ರಕಾಶ್, ಪರಿಶಿಷ್ಟ ಜಾತಿ ವಾಸಪ್ಪ ಹೆಚ್.ಆರ್, ಪರಿಶಿಷ್ಟ ಪಂಗಡ ಕರಿಯಪ್ಪ ನಾಯ್ಕ, ಹಿಂದುಳಿದ ಪ್ರವರ್ಗ-ಎ ಮೀಸಲು ಮಹೇಶ್ ಪಾಡಿಯಮ್ಮನ, ಹಿಂದುಳಿದ ಪ್ರವರ್ಗ-ಬಿ ಮೀಸಲು ಬೀನಾ ಬೊಳ್ಳಮ್ಮ ಅಲ್ಲಾರಂಡ, ಮಹಿಳಾ ಕ್ಷೇತ್ರ – 2 ಸುಶೀಲ ಕೂರನ ಹಾಗೂ ಹೇಮಲತ ಮಂಡೀರ…
ಮಡಿಕೇರಿ ಜ.9 NEWS DESK : 2024-25 ನೇ ಸಾಲಿನಲ್ಲಿ ಬಿ.ಎಡ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅಲ್ವಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ವತಿಯಿಂದ 2024-25 ನೇ ಸಾಲಿನಲ್ಲಿ ಬಿ.ಎಡ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಪಾರ್ಸಿ, ಜೈನ್, ಬೌದ್ಧ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ನೀಡಲು ಸೇವಾಸಿಂಧು ಪೋರ್ಟಲ್ ಆನ್ಲೈನ್ನಲ್ಲಿ (https://sevasindhu.karnataka.gov.in) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ, 20 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಅಲ್ಪಸಂಖ್ಯಾತ ಮಾಹಿತಿ ಕೇಂದ್ರ, ಮೌಲಾನಾ ಆಜಾದ್ ಭವನ,ಎಫ್.ಎಂ.ಸಿ. ಕಾಲೇಜು ಹತ್ತಿರ ಮಡಿಕೇರಿ, ದೂರವಾಣಿ ಸಂಖ್ಯೆ ; 08272-225528 ಎಂದು ಪ್ರಕಟಣೆ ತಿಳಿಸಿದೆ.
ಸಂಪಾಜೆ NEWS DESK ಜ.9 : ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅನಂತ ಎನ್.ಸಿ ಹಾಗೂ ಉಪಾಧ್ಯಕ್ಷರಾಗಿ ಯಶವಂತ ದೇವರಗುಂಡ ಆಯ್ಕೆಯಾಗಿದ್ದಾರೆ. ಸಹಕಾರ ಸಂಘದ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆದ್ದುಕೊಂಡಿದ್ದರು. (ಚಿತ್ರ ವರದಿ : ಶರತ್ ಕೀಲಾರು ಸಂಪಾಜೆ)
ಮಡಿಕೇರಿ ಜ.9 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರು ಭಗವಾನ್ ಮಹವೀರ್ ಜೈನ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ 18 ವಯಸ್ಸಿನ ಒಳಗಿನ ಮಕ್ಕಳಿಗೆ ವಕ್ರ ಬೆನ್ನು ಹುರಿ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಗುರುತಿಸಲಾಗಿರುವ ಮಕ್ಕಳನ್ನು ಕರೆಸಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಭಗವಾನ್ ಮಹವೀರ್ ಜೈನ್ ಆಸ್ಪತ್ರೆಯಿಂದ ತಜ್ಞವೈದ್ಯರು ಬಂದಿದ್ದು, ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವಶ್ಯಕತೆ ಕಂಡುಬರುವ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದ್ದು, ತಪಾಸಣಾ ಶಿಬಿರಕ್ಕೆ ಹಾಜರಾಗಿರುವ ಮಕ್ಕಳ ಪೋಷಕರು ಸದುಪಯೋಗಪಡೆದುಕೊಳ್ಳುವಂತೆ ಕೋರಿದರು. ಭಗವಾನ್ ಮಹವೀರ್ ಜೈನ್ ಆಸ್ಪತ್ರೆಯ ಬೆನ್ನುಹುರಿ ಮೂಳೆ ಶಸ್ತ್ರಚಿಕಿತ್ಸಕ ತಜ್ಞವೈದ್ಯರಾದ ಡಾ.ಡಿ.ರಾಘವೇಂದ್ರ ರಾವ್ ಮಾತನಾಡಿ, ಬೆನ್ನುಮೂಳೆಗಳ ವಿರೂಪಗಳು ಮತ್ತು ಡೊಂಕುತನ ಸರಿಪಡಿಸಲು ನಮ್ಮದೇ…
ಬೆಂಗಳೂರು ಜ.9 NEWS DESK : ಮುಖ್ಯಮಂತ್ರಿಗಳು ಹಾಗೂ ಅರಣ್ಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಆದಿವಾಸಿ ಬುಡಕಟ್ಟು ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಭರವಸೆ ನೀಡಿದರು. ಇಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಸಮ್ಮುಖದಲ್ಲಿ ಸಭೆ ನಡೆಸಿ ಕೊಡಗು ಆದಿವಾಸಿ ಮುಖಂಡರು ಸೇರಿದಂತೆ ರಾಜ್ಯದ ವಿವಿಧ ಆದಿವಾಸಿ ಬುಡಕಟ್ಟು ಪ್ರಮುಖರಿಂದ ಸಮಸ್ಯೆಗಳನ್ನು ಆಲಿಸಿದರು. ನಂತರ ಮಾತನಾಡಿದ ಸಚಿವರು ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು. ಸಭೆಯಲ್ಲಿ ಕರ್ನಾಟಕ ರಾಜ್ಯ ಆದಿವಾಸಿ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ವಿಠಲ್, ಕೊಡಗು ವಿಭಾಗ ಉಪಾಧ್ಯಕ್ಷರಾದ ಜಿ.ಬಿ.ಬೊಜ್ಜಮ್ಮ, ವಿರಾಜಪೇಟೆ ವಿಭಾಗದ ಪ್ರಧಾನ ಕಾರ್ಯದರ್ಶಿ ದಿಡ್ಡಳ್ಳಿ ಮುತ್ತಮ್ಮ, ಮೈಸೂರು ಕಾರ್ಯದರ್ಶಿ ಗಿರೀಶ್ ಬಿ.ಸಿ, ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ,…
ಮಡಿಕೇರಿ ಜ.9 NEWS DESK : ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕ- ಅಧ್ಯಪಕರ ಸಭೆ ನಡೆಯಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್.ಎಂ.ನಾಣಯ್ಯ, ವಿದ್ಯಾರ್ಥಿಗಳ ಶೈಕ್ಷಣಿಕ ವಿಕಸನದಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಹೆಚ್ಚಿನ ಸಮಯವನ್ನು ಓದಿಗೆ ಮೀಸಲಿಡಬೇಕು, ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಎಂ.ಪಿ.ದಮಯಂತಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು, ಪರೀಕ್ಷೆ , ಆಂತರಿಕ ಮೌಲ್ಯಮಾಪನ ಬಗ್ಗೆ ಪೋಷಕರಿಗೆ ತಿಳಿಸಿದರು. ನಂತರ 2025-2026 ನೇ ಸಾಲಿನ ಶೈಕ್ಷಣಿಕ ವರ್ಷದ ಪೋಷಕ ಮತ್ತು ಅಧ್ಯಾಪಕ ಸಭೆಯ ನೂತನ ಉಪಾಧ್ಯಕ್ಷರಾಗಿ ಕೃಪಾ ಚಂಗಪ್ಪ ಹಾಗೂ ಸದಸ್ಯರುಗಳಾಗಿ ಹೆಚ್ ಎನ್. ಶೋಭಾ ಮತ್ತು ಪ್ರವೀಣ್ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು. ಸಭೆಯ ಆರಂಭದಲ್ಲಿ ಹರ್ಷ ಮತ್ತು ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕಿ ಗಾಯತ್ರಿ ನಿರೂಪಿಸಿದರು. ಶಿಕ್ಷಕ ಮತ್ತು ಪೋಷಕ ಸಂಘದ ಸಂಚಾಲಕರಾದ…
ಮಡಿಕೇರಿ ಜ.9 NEWS DESK : ಒಂದು ಕಾಫಿ ಎಷ್ಟು ಕಿಮೀ ಮೈಲೇಜ್ ಕೊಡುತ್ತದೆ. ನನಗಂತೂ ಹದಿನಾರು ಕಿಮೀ ಮೈಲೇಜ್ ಕೊಟ್ಟಿದೆ. ಅದು ನಡೆದಿದ್ದು ಹೀಗೆ. ಎಂದಿನಂತೆ ಹುಬ್ಬಳ್ಳಿ ಮಡಿಕೇರಿ ಮಾರ್ಗಸೂಚಿಯಲ್ಲಿ ದಿನಾಂಕ ಒಂಬತ್ತನೆಯ ಜನವರಿ ಎರಡು ಸಾಸಿರದ ಇಪ್ಪತ್ತೈದರಂದು ಮುಂಜಾನೆ ಮಂಜು ಕವಿದಿದ್ದ ವೇಳೆಗೆ ನಮ್ಮ ಸಂಸ್ಥೆಯ ನಾವು ದುಡಿಯುವ ಮೂಲ ಘಟಕಕ್ಕೆ ಬಂದಿಳಿದೆನಾ……. ಆಗಲೇ ದವಡೆಯ ದಂತಗಳು ದಗದಗಿಸುವಂತೆ ಕಟಕಟಿಸುತ್ತಿದ್ದವು. ಒಂದೆಡೆ ಮೂತ್ರಕೋಶ ಭರ್ತಿಯಾಗಿ ಇನ್ನೇನು ಚೆಲ್ಲುವ ಹಂತ ತಲುಪಿದೆ. ಆದರೆ ಮನಸ್ಸು ಮಾತ್ರ ಯಾವಾಗ ವಾಹನಕ್ಕೆ ಇಂಧನ ತುಂಬಿಸಿ ಘಟಕದ ಮುಂದಣ ಬಾಗಿಲ ಬಿಳಿ ಇರುವ ಕಾವಲುಪಡೆಯ ದಿನವಹಿಯಲ್ಲಿ ರುಜು ಒಪ್ಪಿಸಿ ತಪ್ಪಿಸಿಕೊಳ್ಳುವೇನೋ ಎಂದು ಚಿಂತನೆ ನಡೆಸಿತ್ತು. ಒಂದು ನಿಮಿಷ ತಡವಾದರೂ ನಮ್ಮ ಮೃತ್ಯುಂಜಯ ದೇವಾಲಯದ ಸರ್ವೀಸು ತಪ್ಪಿ ಹೋಗುವುದೆಂಬ ಆತಂಕ. ಏಕೆಂದರೆ ಬೆಳಗಿನ ನಮ್ಮ ಪಯಣಕ್ಕೆ ಅದೊಂದೇ ಬಸ್ಸು. ಅದು ಆರು ನಲವತ್ತೈದಕ್ಕೆ. ನಮ್ಮ ಊರಿನ ಕಡೆಗೆ ಇನ್ನೊಂದು ಬಸ್ಸು ಇದೆ. ಆದರೆ ಅದು ಏಳು…
ವಿರಜಪೇಟೆ ಜ.9 NEWS DESK : ವಿರಾಜಪೇಟೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ‘ಗ್ರಾಮಸ್ಥರಿಗೆ ಹೈನುಗಾರಿಕೆ ಮಾಹಿತಿ ಕಾರ್ಯಕ್ರಮ ನಡೆಯಿತು. ಮೂರ್ನಾಡು ವಲಯದ ಕಿಗ್ಗಾಲು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಕಿಗ್ಗಾಲು ಅಶೋಕ್ ಭಟ್ ಮಾತನಾಡಿ, ಪ್ರಗತಿಪರ ಕೃಷಿಕರು ಹೈನುಗಾರಿಕೆ ಮಾಡುವುದರಿಂದ ಹೆಚ್ಚು ಲಾಭದಾಯಕವಾಗಿದೆ. ಇದರಿಂದ ರೈತರು ಜೀವನ ನಿರ್ವಹಣೆ ಮಾಡಬಹುದು. ಹೈನುಗಾರಿಕೆಯಲ್ಲಿ ಹಲವು ರೀತಿಯ ತಳಿಯ ಹಸುಗಳ ಬಗ್ಗೆ, ಜೈವಿಕ ಗೊಬ್ಬರಗಳ ಬಗ್ಗೆ, ಬೀಜಾಮೃತ ಮತ್ತು ಜೀವಾಮೃತ ನೈಸರ್ಗಿಕ ಕೃಷಿಯಲ್ಲಿ ಜಾನುವಾರಗಳ ಇವುಗಳ ಬಗ್ಗೆ ಉತ್ತಮ ಮಾಹಿತಿ, ಮಾರ್ಗದರ್ಶನ ನೀಡಿದರು. ಕಿಗ್ಗಾಲು ಗ್ರಾಮದ ರೈತ ಮಹಿಳೆಯರಾದ ಲೀಲಾವತಿ ಮತ್ತು ಆಶಾ ಅವರು ಹೈನುಗಾರಿಕೆಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಪಿ.ಕೆ.ಗೌರಿ, ಕೃಷಿ ಮೇಲ್ವಿಚಾರಕರಾದ ವಸಂತ್, ಸೇವಾ ಪ್ರತಿನಿಧಿ ದಿವ್ಯ ಹಾಗೂ ಗ್ರಾಮಸ್ಥರು, ಸಂಘದ ಸದಸ್ಯರು ಈ ಭಾಗವಹಿಸಿದ್ದರು.






