ಮಡಿಕೇರಿ ಜ.22 NEWS DESK : ಜಾರ್ಕಂಡ್ ನಲ್ಲಿ ಜ.29 ರಿಂದ ಫೆ.2ರವರೆಗೆ ನಡೆಯಲಿರುವ 19 ವರ್ಷದೊಳಗಿನ ರಾಷ್ಟ್ರೀಯ ಬಾಲಕರ ಹಾಕಿ ತಂಡಕ್ಕೆ ಕೊಡಗಿನ ಕುಂಭಗೌಡನ ವಿ.ವಿಶ್ವಜಿತ್ ಹಾಗೂ ಪೂಜಿತ್ ರವಿ ಕುಂದಳ್ಳಿ ಆಯ್ಕೆಯಾಗಿದ್ದಾರೆ. ವಿಶ್ವಜಿತ್ ಕುಂಭಗೌಡನ ಮಕ್ಕಂದೂರು ಗ್ರಾಮದ ಕುಂಭಗೌಡನ ವಿನೋದ್ ಕುಮಾರ್ ಹಾಗೂ ಕುಂಭಗೌಡನ ಜಲಜಾಕ್ಷಿ ದಂಪತಿಯ ಪುತ್ರ. ಪೂಜಿತ್ ರವಿ ಕುಂದಳ್ಳಿ ಸೋಮವಾರಪೇಟೆಯ ಕುಂದಳ್ಳಿ ಗ್ರಾಮದ ರವಿ (ರುದ್ರಪ್ಪ, ಮಾಜಿ ಸೈನಿಕ) ಹಾಗೂ ಅಶ್ವಿನಿ ದಂಪತಿಯ ಪುತ್ರ.
ಲೇಖಕ: admin
ಮಡಿಕೇರಿ ಜ.22 NEWS DESK: ಜಾರ್ಕಂಡ್ ನಲ್ಲಿ ಜ.29 ರಿಂದ ಫೆ.2ರವರೆಗೆ ನಡೆಯಲಿರುವ 19 ವರ್ಷದೊಳಗಿನ ರಾಷ್ಟ್ರೀಯ ಬಾಲಕಿಯರ ಹಾಕಿ ತಂಡಕ್ಕೆ ಕೊಡಗಿನ ಚೋಳಂಡ ದೃಶ್ಯ ಅಚ್ಚಪ್ಪ ಆಯ್ಕೆಯಾಗಿದ್ದಾರೆ. ದೃಶ್ಯ ಚೊಳಂಡ ಧನು ಅಚ್ಚಪ್ಪ ಮತ್ತು ದಿವಿನ್ ದೇಚಮ್ಮ (ತಮನೆ ಚೇಂದಿರ) ದಂಪತಿಯ ಪುತ್ರಿ.
ಮಡಿಕೇರಿ ಜ.22 NEWS DESK : ಕುಶಾಲನಗರ ಉಪವಿಭಾಗ, ಕೂಡಿಗೆ ಶಾಖಾ ವ್ಯಾಪ್ತಿಯ, ಎಫ್1 ಹೆಬ್ಬಾಲೆ ಫೀಡರ್ ಮಾರ್ಗದಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುವುದರಿಂದ ಜನವರಿ, 23 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಎಫ್1 ಹೆಬ್ಬಾಲೆ ಫೀಡರ್ನ ಹೆಬ್ಬಾಲೆ, ಕಣಿವೆ, ಹುಲುಸೆ, ಮರೂರು, ಹಳೆಕೋಟೆ, ಹೊಸಕೋಟೆ, ಅಂದಾನಿಪುರ, ಎಫ್15 ಭುವನಗಿರಿ ಫೀಡರ್ನ ಮಲ್ಲೇನಹಳ್ಳಿ, ಮದಲಾಪುರ, ಹುದುಗೂರು, ಭುವನಗಿರಿ, ಸೀಗೆಹೊಸೂರು, ಯಲಕನೂರು ಎಫ್6 ಕೂಡಿಗೆ ಫೀಡರ್ನ ಕೂಡಿಗೆ, ಇಂಡಸ್ಟ್ರೀಯಲ್ ಏರಿಯಾ, ಹಳೆಕೂಡಿಗೆ, ಕೂಡ್ಲೂರು, ಕೂಡುಮಂಗಳೂರು ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ಮಡಿಕೇರಿ ಜ.22 NEWS DESK : ಕೋಟ್ಯಂತರ ಭಾರತೀಯರ ಹೃದಯದಲ್ಲಿ ಮರ್ಯಾದ ಪುರುಷೋತ್ತಮ ಶ್ರೀರಾಮ ಶಾಶ್ವತ ಸ್ಥಾನ ಪಡೆದಿದ್ದು, ಈತನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ‘ಶ್ರೀ ಬಾಲರಾಮನ’ ಪ್ರಾಣ ಪ್ರತಿಷ್ಠೆ ನಡೆದು ವರ್ಷ ತುಂಬಿರುವ ಸಂಭ್ರಮದಲ್ಲಿ ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ನಗರದಲ್ಲಿ ಅನ್ನಸಂತರ್ಪಣಾ ಕಾರ್ಯ ನಡೆಯಿತು. ಭಾರತೀಯರ ಶತ ಶತಮಾನಗಳ ಕನಸು ಕಳೆದ ಸಾಲಿನಲ್ಲಿ ಶ್ರೀ ಬಾಲ ರಾಮನ ಪ್ರತಿಷ್ಠಾಪನೆಯೊಂದಿಗೆ ಅಯೋಧ್ಯೆಯ ಭವ್ಯ ಸುಂದರ ಮಂದಿರ ಭಕ್ತರಿಗೆ ತೆರೆದುಕೊಂಡಿದೆ. ಈ ಸಂಭ್ರಮವನ್ನು ಕಳೆದ ಸಾಲಿನಲ್ಲಿಯೂ ಶ್ರೀರಾಮ ಜನ್ಮಭೂಮಿ ಸೇವಾ ಸಮಿತಿ ಅನ್ನಸಂತರ್ಪಣೆಯ ಮೂಲಕ ಜನ ಮಾನಸದೊಂದಿಗೆ ಹಂಚಿಕೊಂಡಿತ್ತು. ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಬುಧವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆಯವರೆಗೆ ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಅನ್ನಸಂತರ್ಪಣೆ ನಡೆಯಿತು. ಸಮಿತಿಯ ಪದಾಧಿಕಾರಿಗಳು, ನೆರವು ನೀಡಿದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಶ್ರದ್ಧೆಯಿಂದ ಈ ಕಾರ್ಯ ನೆರವೇರಿಸಿದ್ದು ವಿಶೇಷ. ನಗರ ವ್ಯಾಪ್ತಿಯ ಹಾಗೂ ದೂರದೂರುಗಳಿಂದ ಆಗಮಿಸಿದ ನೂರಾರು…
ಮಡಿಕೇರಿ ಜ.22 NEWS DESK : ಉಪನ್ಯಾಸಕಿ ಮತ್ತು ಲೇಖಕಿ ಕೆ.ಜಯಲಕ್ಷ್ಮಿ ಅವರು ಬರೆದಿರುವ ಮತ್ತೆ ವಸಂತ ಹೆಸರಿನ ಕಥಾ ಸಂಕಲನ ಇದೇ ಜ.26 ರಂದು ಲೋಕಾರ್ಪಣೆಯಾಗಲಿದೆ. ನಗರದ ರೆಡ್ ಬ್ರಿಕ್ಸ್ ಇನ್ ಸಭಾಂಗಣದಲ್ಲಿ ಜ.26 ರಂದು ಬೆಳಗ್ಗೆ 10 ಗಂಟೆಗೆ ಮತ್ತೆ ವಸಂತ ಕಥಾ ಸಂಕಲನವನ್ನು ಆಕಾಶವಾಣಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಲೋಕಾರ್ಪಣೆ ಮಾಡಲಿದ್ದಾರೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಟಿ. ಪಿ ರಮೇಶ್ ಅಧ್ಯಕ್ಷತೆಯ ಕಾರ್ಯಕ್ರಮದಲ್ಲಿ ಶಕ್ತಿ ಪತ್ರಿಕೆಯ ಸಂಪಾದಕ ಜಿ .ಚಿದ್ವಿಲಾಸ್, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್ ಟಿ., ಬೆಳ್ತಂಗಡಿಯ ಎನ್. ಜಯಪ್ರಕಾಶ್ ಶರ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮತ್ತೆ ವಸಂತ ಕಥಾ ಸಂಕಲನದ ಕಥೆಗಾರ್ತಿ ಜಯಲಕ್ಷ್ಮಿ ತಿಳಿಸಿದ್ದಾರೆ.
ವಿರಾಜಪೇಟೆ ಜ.22 NEWS DESK : ಹೆಗ್ಗಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾನಿಗಳಾದ ಕುಜ್ಞ0ಡ ಮಹೇಶ್ ಕಂಪ್ಯೂಟರ್ ನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭ ಮಾತನಾಡಿದ ಮಹೇಶ್, ಗ್ರಾಮೀಣ ಶಾಲೆಯ ಮಕ್ಕಳು ಕೂಡ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಧ್ಯಯನ ಮಾಡುವಂತಾಗಬೇಕು. ಕಂಪ್ಯೂಟರ್ ಕಲಿಕೆ ಅತೀ ಮುಖ್ಯವಾಗಿದ್ದು, ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬೇಕೆಂದು ಹೇಳಿದರು. ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದಿಂದಲೇ ಕಂಪ್ಯೂಟರ್ ಶಿಕ್ಷಣ ಪಡೆಯುವಂತಾಗಬೇಕೆಂದು ಅಭಿಪ್ರಾಯಪಟ್ಟರು. ವಿರಾಜಪೇಟೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಹಾಗೂ ಸಮಾಜ ಸೇವಕರಾದ ಪೂಜಾ ಸಜೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಶಾಲೆಗೆ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಲು ಸಹಕಾರವನ್ನು ನೀಡಲಾಗುವುದು ಎಂದರು. ನಮ್ಮ ಗ್ರಾಮದ ಶಾಲೆ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸದಾ ಪ್ರೋತ್ಸಾಹವನ್ನು ನೀಡಲಾಗುವುದು ಎಂದು ಹೇಳಿದರು. ಕಲ್ತೊಡು ಕ್ಲಸ್ಟರ್ ನ ಸಿ.ಆರ್.ಪಿ.ವೆಂಕಟೇಶ್, ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಶಿಲ್ಪಾ, ರಾಝಿಕ್, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ…
ಮಡಿಕೇರಿ ಜ.22 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ವಿರುದ್ಧ ವಿನಾಕಾರಣ ಪ್ರಕರಣ ದಾಖಲಿಸಲಾಗಿದ್ದು, ಇದನ್ನು ಮಡಿಕೇರಿ ಕೊಡವ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಕೊಡವ ಸಮಾಜದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಎನ್.ಯು.ನಾಚಪ್ಪ ಅವರನ್ನು ಬಂಧಿಸಿದರೆ ಕೊಡವ ಸಮಾಜದ ಮೂಲಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಕಳೆದ ಅನೇಕ ವರ್ಷಗಳಿಂದ ಕೊಡಗಿನ ಮೂಲ ನಿವಾಸಿ ಕೊಡವ ಜನಾಂಗದ ಉಳಿವಿಗಾಗಿ ನಿರಂತರ ಪ್ರತಿಭಟನೆ ಮತ್ತು ಕಾನೂನು ಹೋರಾಟಗಳನ್ನು ನಡೆಸಿಕೊಂಡು ಬರುವ ಮೂಲಕ ಕೊಡವ ನಾಯಕರಾಗಿ ಗುರುತಿಸಿಕೊಂಡಿರುವ ಎನ್.ಯು.ನಾಚಪ್ಪ ಅವರ ವಿರುದ್ಧದ ಪ್ರಕರಣಗಳನ್ನು ತಕ್ಷಣ ರದ್ದುಗೊಳಿಸಬೇಕೆಂದು ಒತ್ತಾಯಿಸಿದೆ. ಕಟ್ಟೆಮಾಡು ಗ್ರಾಮದ ಶ್ರೀಮಹಾ ಮೃತ್ಯುಂಜಯ ದೇವಾಲಯದ ಉತ್ಸವದಲ್ಲಿ ಕೊಡವ ಜನಾಂಗಕ್ಕೆ ಆದ ಅವಮಾನವನ್ನು ಎನ್.ಯು.ನಾಚಪ್ಪ ಅವರು ಖಂಡಿಸಿದ್ದಾರೆ. ಕೊಡವರ ಪರ ಧ್ವನಿಯಾಗಿರುವ ನಾಚಪ್ಪ ಅವರ ವಿರುದ್ದ ಕಾನೂನು ಕ್ರಮ ಕೈಗೊಂಡು, ಬಂಧಿಸಿ ಹೋರಾಟವನ್ನು ನಿಗ್ರಹಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದೆ. ಎನ್.ಯು.ನಾಚಪ್ಪ ಅವರ ಬಂಧನವಾದರೆ ಮಡಿಕೇರಿ…
ಮಡಿಕೇರಿ ಜ.22 NEWS DESK : ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗೆ ಪಿ.ಹೆಚ್.ಡಿ ಪದವಿ ಲಭಿಸಿದೆ. ಡಾ.ಸಣ್ಣರಾಮ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಡಾ.ಶಿವಮೂರ್ತಿ ಮುರುಘಾ ಶರಣರ “ಸಾಹಿತ್ಯ ಮತ್ತು ಸಂಸ್ಕೃತಿ ” ಎಂಬ ಮಹಾಪ್ರಬಂಧಕ್ಕೆ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದಲ್ಲಿರುವ ಕುವೆಂಪು ವಿವಿಯ 34ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿ ಗೌರವಿಸಿದರು.
ಮಡಿಕೇರಿ ಜ.22 NEWS DESK : ಮಡಿಕೇರಿ ಡಿವೈಎಸ್ಪಿಯಾಗಿದ್ದ ಮಹೇಶ್ಕುಮಾರ್ ಅವರು ವರ್ಗಾವಣೆಗೊಂಡಿದ್ದಾರೆ. ತೆರವಾದ ಅವರ ಸ್ಥಾನಕ್ಕೆ ಪಿ.ಎ. ಸೂರಜ್ ನೇಮಕಗೊಂಡಿದ್ದಾರೆ. ಕೊಡಗು ಜಿಲ್ಲೆಯ ಟಿ.ಶೆಟ್ಟಿಗೇರಿಯವರಾಗಿರುವ ಪೆಮ್ಮಂಡ ಎ.ಸೂರಜ್ ಅವರು ಈ ಹಿಂದೆ ಚಾಮರಾಜನಗರದಲ್ಲಿ ರಾಜ್ಯ ಗುಪ್ತ ವಾರ್ತೆ ವಿಭಾಗದಲ್ಲಿ ಸಹಾಯಕ ನಿರ್ದೇಶಕ (ಡಿವೈಎಸ್ಪಿ) ಆಗಿದ್ದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ಸೂರಜ್, ಎಸ್ಪಿಯವರ ನಾಯಕತ್ವದಲ್ಲಿ ಹಿಂದಿನ ಡಿವೈಎಸ್ಪಿಯವರು ಮಾಡಿದ್ದ ಒಳ್ಳೆಯ ಕೆಲಸಗಳನ್ನು ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು. ಮಡಿಕೇರಿ ಡಿವೈಎಸ್ಪಿಯಾಗಿದ್ದ ಎಸ್.ಮಹೇಶ್ ಕುಮಾರ್ ಅವರನ್ನು ವೀರಾಜಪೇಟೆಗೆ ವರ್ಗಾವಣೆ ಮಾಡಲಾಗಿದ್ದು, ವೀರಾಜಪೇಟೆ ಡಿವೈಎಸ್ಪಿ ಆರ್. ಮೋಹನ್ಕುಮಾರ್ ಅವರನ್ನು ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆ ಮಾಡಲಾಗಿದೆ.
ಮಡಿಕೇರಿ ಜ.22 NEWS DESK : ಮೀನುಗಾರಿಕೆಯಲ್ಲಿ ಸಾಧನೆ ಮಾಡಿರುವ ಯುವ ಕೃಷಿಕ ಮಂದ್ರೀರ ತೇಜಸ್ ನಾಣಯ್ಯ ಅವರಿಗೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನ ದೊರೆತಿದ್ದು, ವಿಶೇಷ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಗ್ಗೋಡ್ಲು ಗ್ರಾಮದ ಮಂದ್ರೀರ ತೇಜಸ್ ನಾಣಯ್ಯ ಅವರು ಎಲ್ಎಲ್ಬಿ ಪದವೀಧರರಾಗಿದ್ದು, 20 ವರ್ಷಗಳಿಂದ ಸತತವಾಗಿ ಮೀನು ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಇವರು ಯುವ ರೈತ ಪ್ರಶಸ್ತಿ, ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನ್ಯಾಷನಲ್ ಫಿಶ್ ಫಾರ್ಮರ್ಸ್ ಡೇಯಂದು ಕಾಲೇಜ್ ಆಫ್ ಫಿಶರಿಶ್ ಮಂಗಳೂರು ಕೆವಿಎಎಎಫ್ಎಸ್ಯು ಬೀದರ್ ಅವರಿಂದ ಉತ್ತಮ ಮೀನು ಕೃಷಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಆರ್ಥಿಕ ಸಹಾಯ ಪಡೆದು ತಮ್ಮ ಸ್ವಂತ ಜಾಗದಲ್ಲಿ ಜೀವಂತ ಮೀನು ಮಾರಾಟ ಮಳಿಗೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರಲ್ಲಿ ಒಟ್ಟು 8 ಕೆರೆಗಳಿದ್ದು, ಎಲ್ಲಾ ಕೆರೆಯಲ್ಲಿ ವಿವಿಧ ರೀತಿಯ ಮೀನಿನ ತಳಿಗಳಿದ್ದು, ಜಿಲ್ಲಾ ಹಾಗೂ ಹೊರ ಜಿಲ್ಲೆಯವರಿಗೂ. ಜೀವಂತ ಮೀನುಗಳನ್ನು…






