ಗುಡ್ಡೆಹೊಸೂರು ಜ.21 NEWS DESK : ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಶ್ರೀಗಳ ಆರನೇ ವರ್ಷದ ಪುಣ್ಯಸ್ಮರಣೆ ಹಾಗೂ ದಾಸೋಹ ಕಾರ್ಯಕ್ರಮ ನಡೆಯಿತು. ದಿನದ ಅಂಗವಾಗಿ ಶ್ರೀಗಳ ವೃತ್ತವನ್ನು ಪುಷ್ಪಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಗುಡ್ಡೆಹೊಸೂರು ವೀರಶೈವ ಸಮಾಜದ ಅಧ್ಯಕ್ಷ ಬಿ.ಸಿ.ಮಲ್ಲಿಕಾರ್ಜುನ ಮಾತನಾಡಿ, ಶಿವಕುಮಾರ ಸ್ವಾಮೀಜಿ ಇದ್ದಷ್ಟು ದಿನ ಇಡೀ ನಾಡು ಸುಭೀಕ್ಷವಾಗಿತ್ತು. ಎಲ್ಲರೂ ಶ್ರೀಗಳ ಆದರ್ಶಗಳನ್ನು ಪಾಲಿಸಲು ಕರೆ ನೀಡಿದರು. ಶ್ರೀ ಸಿದ್ದಗಂಗಾ ಭಕ್ತಮಂಡಳಿ ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಸಿದ್ದಗಂಗಾ ಕ್ಷೇತ್ರ ಇಡೀ ನಾಡಿನ ಪರಮ ಪುಣ್ಯಕ್ಷೇತ್ರವಾಗಿದ್ದು ಡಾ.ಶಿವಕುಮಾರ ಸ್ವಾಮೀಜಿ ಎಲ್ಲಾ ಕಾಲಕ್ಕೂ ಪ್ರಾತಃಸ್ಮರಣೀಯರಾಗಿ ಉಳಿಯಲಿದ್ದಾರೆ ಎಂದರಲ್ಲದೇ ಶ್ರೀಗಳ ಹೆಸರಲ್ಲಿ ವೃತ್ತ ಮಾಡಲು ಸಹಕರಿಸಿದ ಎಲ್ಲರನ್ನೂ ಈ ಸಂದರ್ಭ ಸ್ಮರಿಸಿದರು. ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷ ಪ್ರವೀಣ್, ಪಿಡಿಒ ಸುಮೇಶ್, ಸದಸ್ಯರಾದ ಲಕ್ಷ್ಮಣ್, ನಾರಾಯಣ್, ಭಕ್ತಮಂಡಳಿ ಸಂಚಾಲಕ ಬಿ.ನಟರಾಜು, ಗುಡ್ಡೆಹೊಸೂರು ವೀರಶೈವ ಸಮಾಜದ ಕಾರ್ಯದರ್ಶಿ ದ್ರಾಕ್ಷಾಯಿಣಿ, ನಿರ್ದೇಶಕರಾದ ಶುಭಶೇಖರ್, ಕಾಶಿ, ಶೋಭಾ,ಕವಿತಾ, ವೈಶಾಲಿ, ಷಣ್ಮುಖ,…
ಲೇಖಕ: admin
ಚೆಟ್ಟಳ್ಳಿ NEWS DESK ಜ.21 : ಜಾರ್ಕಂಡ್ ನಲ್ಲಿ ಜ.29 ರಿಂದ ಫೆ.2ರವರೆಗೆ ನಡೆಯಲಿರುವ 19 ವರ್ಷದೊಳಗಿನ ರಾಷ್ಟ್ರೀಯ ಬಾಲಕರ ಹಾಕಿ ತಂಡಕ್ಕೆ ನಾಪೋಕ್ಲುವಿನ ಬಿದ್ದಾಟಂಡ ಹರ್ಷ ನಾಣಯ್ಯ ಹಾಗೂ ಸ್ವರ್ಣ ದಂಪತಿ ಪುತ್ರ ಬಿದ್ದಾಟಂಡ ಬೋಪಣ್ಣ, ಗೋಣಿಕೊಪ್ಪಲುವಿನ ಕೈಕೇರಿಯ ಬಲ್ಯಂಡ ಪೂಣಚ್ಚ ಹಾಗೂ ಶೀಲಾ ದಂಪತಿ ಪುತ್ರ ಬಲ್ಯಂಡ ಸಂಪನ್ನ್ ಗಣಪತಿ ಮತ್ತು ಹುದಿಕೇರಿಯ ಚಕ್ಕೇರ ರಾಜೇಶ್ ಹಾಗೂ ಆಶಾ ದಂಪತಿ ಪುತ್ರ ವರುಣ್ ಮಾದಪ್ಪ ಆಯ್ಕೆಯಾಗಿದ್ದಾರೆ.
ನಾಪೋಕ್ಲು ಜ.21 NEWS DESK : ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಬದುಕಬೇಕು ಎಂಬುದು ನಮ್ಮ ಧ್ಯೇಯೋದ್ದೇಶವಾಗಿದೆ ಎಂದು ಪುನಶ್ಚೇತನ ಸಂಸ್ಥೆಯ ರೂವಾರಿ ಬೊಪ್ಪಂಡ ಸೂರಜ್ ಹೇಳಿದರು. ನಾಪೋಕ್ಲುವಿನ ಪುನಶ್ಚೇತನ ಸಂಸ್ಥೆಯ ವತಿಯಿಂದ ಆಯೋಜಿಸಿದ ಉಚಿತ ಟೈಲರಿಂಗ್ ತರಬೇತಿಯ ಸಮಾರೋಪದಲ್ಲಿ ಮಾತನಾಡಿದ ಅವರು, ನೂರಾರು ಹೆಣ್ಣು ಮಕ್ಕಳಿಗೆ ನಮ್ಮ ಸಂಸ್ಥೆಯಿಂದ ಕೆಲಸ ಕೊಡಿಸಬೇಕೆಂದಿದ್ದೇವೆ. ಅಲ್ಲದೆ ಸಂಸ್ಥೆಯನ್ನ ಎಲ್ಲರು ಸೇರಿ ಉನ್ನತ ಮಟ್ಟಕ್ಕೆ ಬೆಳೆಸುವುದರ ಜೊತೆಗೆ ಇನ್ನಷ್ಟು ಮಕ್ಕಳಿಗೆ ಉಪಯೋಗ ಆಗುವಂತೆ ಕಾರ್ಯಪ್ರವೃತ್ತರಾಗುವ ಎಂದು ಆಶಿಸಿದರು. ಉದ್ಯಮಿ ಕುಂಡ್ಯೋಳಂಡ ದಿನೇಶ್ ಮಾತನಾಡಿ, ನಾವು ಮಾಡಿರುವ ಒಳ್ಳೆಯ ಕಾರ್ಯಗಳು ನಮ್ಮನ್ನು ಆಪತ್ತಿನಿಂದ ಕಾಪಾಡುತ್ತದೆ ಎಂದು ಅವರು ನಮ್ಮ ಸುತ್ತ ಮುತ್ತ ಎಷ್ಟೋ ಜನ ವಿಕಲಚೇತನ ಮಕ್ಕಳು ಇದ್ದಾರೆ. ಇನ್ನಷ್ಟು ಮಕ್ಕಳಿಗೆ ಉಪಯೋಗ ಆಗುವಂತೆ ಸಂಸ್ಥೆಯನ್ನ ಬೆಳೆಸಲು ನಾವು ನಮ್ಮಿಂದ ಆದಷ್ಟು ಸಹಕಾರಿ ಸಂಸ್ಥೆಯನ್ನ ಬೆಳಸೋಣ ಎಂದರು. ಹಲವಾರು ವರ್ಷದಿಂದ ಸಂಸ್ಥೆಗೆ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಾ ಬರುತ್ತಿರುವ ನಾಪೋಕ್ಲು ಪ್ರೌಢ ಶಾಲಾ ಶಿಕ್ಷಕಿ ಉಷಾರಾಣಿ ಮಾತನಾಡಿ,…
ವಿರಾಜಪೇಟೆ 21 NEWS DESK : ಕೊಡವ ಮುಸ್ಲಿಂ ಮನೆತನಗಳ ನಡುವಿನ ಪ್ರಥಮ ವರ್ಷದ ಹೊನಲು ಬೆಳಕಿನ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿ “ಕೂವಲೆರ ಚಿಟ್ಟಡೆ ಕಪ್ -2025″ರ ವಿನ್ನರ್ಸ್ ಪ್ರಶಸ್ತಿಯನ್ನು ಕತ್ತಣಿರ ತಂಡ ತನ್ನದಾಗಿಸಿಕೊಂಡಿತು. ಈ ಮೂಲಕ ಕೊಡವ ಮುಸ್ಲಿಂ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಯ ಚೊಚ್ಚಲ ಚಾಂಪಿಯನ್ ಆಗಿ ಕತ್ತಣಿರ ತಂಡ ಹೊರಹೊಮ್ಮಿತು. ಪಂದ್ಯಾವಳಿಯ ವಿನ್ನರ್ಸ್ ಪ್ರಶಸ್ತಿ ಪಡೆಯುವ ಹೆಗ್ಗುರಿಯೊಂದಿಗೆ ಫೈನಲ್ ಪ್ರವೇಶಿಸಿದ ಗುಂಡಿಕೆರೆಯ ಮೀತಲತಂಡ (ಎ) ತಂಡ ಪ್ರಬಲ ಹೋರಾಟ ನಡೆಸಿದರೂ ವಿಜಯದ ಮಾಲೆಯನ್ನು ತನ್ನ ಕೊರಳಿಗೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಕೊಡಗಿನ ವಾಲಿಬಾಲ್ ಕ್ರೀಡೆಯಲ್ಲಿ ಬಲಿಷ್ಠ ತಂಡವೆಂದೇ ಪ್ರಸಿದ್ಧಿ ಪಡೆದ ಮೀತಲತಂಡ (ಎ) ಕುಟುಂಬ ತಂಡ ಕತ್ತಣಿರ ತಂಡದ ಎದುರು ಶರಣಾಗಿ ರನ್ನರ್ಸ್ ಪ್ರಶಸ್ತಿಗೆ ಮಾತ್ರ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದರೊಂದಿಗೆ ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ಚಿಟ್ಟಡೆಯ ಕೂವಲೆರ ಕುಟುಂಬಸ್ಥರ ಆತಿಥ್ಯದಲ್ಲಿ ಅಲ್ಲಿನ ಜುಮಾ ಮಸೀದಿ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಕೊಡವ ಮುಸ್ಲಿಂ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಗೆ ವರ್ಣ…
ಮಡಿಕೇರಿ ಜ.21 NEWS DESK : ಗ್ರಾಮೀಣ ಭಾಗಗಳಲ್ಲಿ ಗುಣಮಟ್ಟದ ವಿದ್ಯುತ್ ಎನ್ನುವುದು ಇಂದಿಗೂ ಮರೀಚಿಕೆ. ಇಂತಹ ವಿದ್ಯುತ್ ನಂಬಿ ಕೃಷಿ ಚಟುವಟಿಕೆಗಳಿಗೆ ನೀರಾವರಿ ಮಾಡುವುದೆಂದರೆ ದುಸ್ಸಾಹಸ. ಕೊರತೆಗಳನ್ನು ಮೀರಿ ಇಲ್ಲೊಬ್ಬರು ಕೃಷಿಕರು ‘ಸೋಲಾರ್ ವಿದ್ಯುತ್’ ಮೂಲಕ ತಮ್ಮ ಕಾಫಿ ತೋಟಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿಕೊಂಡು ನೆಮ್ಮದಿಯ ಕೃಷಿ ಜೀವನ ನಡೆಸುತ್ತಿದ್ದಾರೆ. ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಲೂರು ಸೂದನ ಸತೀಶ್ ಅವರು, ವಿದ್ಯುತ್ ಸಮಸ್ಯೆಯಿಂದ ತಮ್ಮ ಕಾಫಿ ತೋಟಕ್ಕೆ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಳ್ಳಲಾಗದೆ ಸಂಕಷ್ಟವನ್ನೆದುರಿಸುತ್ತಿದ್ದರು. ಈ ಹಂತದಲ್ಲಿ ಇವರ ಕೈ ಹಿಡಿದದ್ದು ಸೋಲಾರ್ ವಿದ್ಯುತ್. ಪ್ರಸ್ತುತ ಇವರು 2 ಎಕರೆ ಕಾಫಿತೋಟಕ್ಕೆ ಸೋಲಾರ್ ಪಂಪ್ ಸೆಟ್ನ್ನು ಅಳವಡಿಸಿದ್ದಾರೆ. ಮೊಬೈಲ್ನಲ್ಲೂ ನಿಯಂತ್ರಿಸಬಹುದಾದ ಡಿಜಿಟಲ್ ತಂತ್ರಜ್ಞಾನದ 5ಹೆಚ್.ಪಿ ಪಂಪ್ ಸೆಟ್ನಲ್ಲಿ ಮೂರು ಜೆಟ್ ಅಳವಡಿಸಿಕೊಂಡು ಕೃಷಿ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ವಿದ್ಯುತ್ ಸಮಸ್ಯೆ ಎದುರಾದಾಗ ದುಬಾರಿ ವೆಚ್ಚದೊಂದಿಗೆ ಡೀಸೆಲ್ ಪಂಪ್ ಗಳನ್ನು ಬಳಸಿ ಕೃಷಿ ಫಸಲಿಗೆ ನೀರು ಹಾಯಿಸುವುದು ಸಾಮಾನ್ಯ. ಆದರೆ ಪ್ರಸ್ತುತ ದಿನಗಳಲ್ಲಿ…
ಮಡಿಕೇರಿ NEWS DESK ಜ.21 : ಮರಿಯೊಂದಿಗಿದ್ದ ಕಾಡಾನೆಯೊಂದು ಕ್ಯಾಂಟೀನ್ ಮೇಲೆ ದಾಳಿ ಮಾಡಿದ ಘಟನೆ ನೆಲ್ಲಿಹುದಿಕೇರಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಕ್ಯಾಂಟೀನ್ ನಡೆಸುತ್ತಿದ್ದ ದಂಪತಿ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ನೆಲ್ಲಿಹುದಿಕೇರಿ ಸಮೀಪದ ಅತ್ತಿಮಂಗಲ ತೋಟದಿಂದ ಮರಿಯೊಂದಿಗೆ ರಸ್ತೆ ದಾಟುತ್ತಿದ್ದ ಕಾಡಾನೆ ಏಕಾಏಕಿ ಪಕ್ಕದಲ್ಲಿದ್ದ ಕ್ಯಾಂಟೀನ್ ಮೇಲೆ ದಾಳಿ ಮಾಡಿದೆ. ಕ್ಯಾಂಟೀನ್ ನಲ್ಲಿದ್ದ ವಸ್ತುಗಳು, ಪೀಠೋಪಕರಣಗಳು ಮತ್ತು ತಿಂಡಿ ತನಿಸುಗಳನ್ನು ಎಳೆದು ಬಿಸಾಡಿದ ಕಾಡಾನೆ ಪಕ್ಕದ ಬಸ್ ತಂಗುದಾಣದಲ್ಲಿದ್ದ ಗ್ರಾಮಸ್ಥರ ಕಿರುಚಾಟ ಕೇಳಿ ಅಲ್ಲಿಂದ ಕಾಲ್ಕಿತ್ತಿದೆ. ನಂತರ ನಲ್ವತ್ತೆಕ್ಕರೆ ಗ್ರಾಮದ ಮಾರ್ಗವಾಗಿ ಸಂಚಾರ ಬೆಳೆಸಿದ ಕಾಡಾನೆ ಕಾರೊಂದರ ಮೇಲೂ ದಾಳಿ ನಡೆಸಲು ಯತ್ನಿಸಿದೆ ಎಂದು ತಿಳಿದು ಬಂದಿದೆ. ಕ್ಯಾಂಟೀನ್ ನಲ್ಲಿದ್ದ ಜಬ್ಬಾರ್ ಹಾಗೂ ಅವರ ಪತ್ನಿ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಈ ಸಂದರ್ಭ ಜಬ್ಬಾರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಆತಂಕಗೊಂಡರು. ಅರಣ್ಯ ಇಲಾಖೆ ತಕ್ಷಣ ಕಾಡಾನೆಗಳನ್ನು ಕಾಡಿಗಟ್ಟುವ…
ಸೋಮವಾರಪೇಟೆ ಜ.21 NEWS DESK : ಗೌಡಳ್ಳಿ ಬಿ.ಜಿ.ಎಸ್ ಪಬ್ಲಿಕ್ ಸ್ಕೂಲ್ನಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಸುಗ್ಗಿ ಹಬ್ವವನ್ನು ಸಂಭ್ರಮದಿಂದ ಆಚರಿಸಲಾಯಿತು. ರೈತರ ಕೃಷಿ ಬದುಕನ್ನು ವಿದ್ಯಾರ್ಥಿಗಳಿಗೆ ಅರ್ಥೈಸುವ ಸಲುವಾಗಿ ಎತ್ತಿನ ಗಾಡಿ, ಎತ್ತುಗಳು, ಹುಲ್ಲಿನ ಮೆದೆಯ ಮಾದರಿಗಳು, ಒಕ್ಕಲುತನ ಮಾಡಲು ಬಳಸುವ ಸಲಕರಣೆಗಳನ್ನು ಇಟ್ಟು, ಭತ್ತ, ರಾಗಿ, ಮುಂತಾದ ಧಾನ್ಯಗಳಿಗೆ ಪೂಜೆ ಸಲ್ಲಿಸಲಾಯಿತು. ಮಕ್ಕಳು ಗಾಳಿಪಟ ಹಾರಿಸಿ ಸಂಭ್ರಮಿಸಿದರು. ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕಿ ರತ್ನಮ್ಮ, ಮುಖೋಪಾಧ್ಯಾಯರಾದ ಅನಂದಪ್ಪ ಕಾರ್ಯಕ್ರಮದಲ್ಲಿ ಇದ್ದರು.
ಸೋಮವಾರಪೇಟೆ ಜ.21 NEWS DESK : ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದ ಸಾಕಮ್ಮನ ಬಂಗಲೆ ಮುಂಭಾಗದ ಮೈದಾನದಲ್ಲಿ ನಡೆದ 38ನೇ ವರ್ಷದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಜೀವನ್ ನೇತೃತ್ವದ ತಂಡ ಪ್ರಥಮ ಸ್ಥಾನ ಪಡೆಯಿತು. ಕುಶಾಲನಗರದ ಜಿ.ಬಿ.ಎಸ್. ತಂಡ ದ್ವಿತೀಯ, ಸೋಮವಾರಪೇಟೆಯ ಸತ್ಯ ಸ್ಪೋಟ್ರ್ಸ್ ಕ್ಲಬ್ ತೃತೀಯ ಸ್ಥಾನಗಳಿಸಿತು. 20 ವರ್ಷದೊಳಗಿನವರ ವಿಭಾಗದಲ್ಲಿ ಸೋಮವಾರಪೇಟೆಯ ರಾಮದೂತ ತಂಡ ಪ್ರಥಮ, ತೇಜಾ ಬ್ರೋ ತಂಡ ದ್ವಿತೀಯ, ಕುಶಾಲನಗರದ ಜೈ ಮಾರುತಿ ತಂಡ ತೃತೀಯ ಸ್ಥಾನ ಪಡೆಯಿತು. ಪ್ರಾಥಮಿಕ ಶಾಲಾ ವಿಭಾಗದ ಸ್ಪರ್ಧೆಯಲ್ಲಿ ಜಿಎಂಪಿ ಶಾಲಾ ತಂಡ ಪ್ರಥಮ, ಓಎಲ್ವಿ ಶಾಲಾ ತಂಡ ದ್ವಿತೀಯ ಸ್ಥಾನ ಗಳಿಸಿದವು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹೆಚ್.ಎ.ನಾಗರಾಜು ವಹಿಸಿದ್ದರು. ವಿಜೇತ ತಂಡಗಳಿಗೆ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಮಧುಸೂದನ್, ಪ.ಪಂ.ಸಿಬ್ಬಂದಿ ಜೀವನ್, ನೇಗಳ್ಳೆ ನಿಂಗಪ್ಪ, ತಲ್ತರೆಶೆಟ್ಟಳ್ಳಿ ರವಿ, ಕರ್ಕಳ್ಳಿ ಇಸಾಕ್, ಶಿಕ್ಷಕ ಪ್ರವೀಣ್, ಸತೀಶ್ ಅವರುಗಳು ಬಹುಮಾನ ವಿತರಿಸಿದರು. ಸಂಘದ…
ಸೋಮವಾರಪೇಟೆ ಜ.21 NEWS DESK : ಗ್ರಾಮ ಸಹಾಯಕರ ಸಂಘದಿಂದ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರನ್ನು ಭೇಟಿ ಮಾಡಿ, ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು. ಗ್ರಾಮ ಸಹಾಯಕರುಗಳಿಗೆ ಸೇವಾ ಭದ್ರತೆ, ಕನಿಷ್ಟ ವೇತನ ನಿಗದಿಗೆ ಸರ್ಕಾರದ ಮಟ್ಟದಲ್ಲಿ ಕ್ರಮ ವಹಿಸಬೇಕೆಂದು ಮನವಿ ಸಲ್ಲಿಸಿದರು. ಸಂಘದ ಬೇಡಿಕೆಗಳನ್ನು ಆದ್ಯತೆಯ ಮೇರೆ ಈಡೇರಿಸುವ ಭರವಸೆಯನ್ನು ಶಾಸಕರು ನೀಡಿದರು. ಇದೇ ಸಂದರ್ಭ ಶಾಸಕರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮ ಸಹಾಯಕರ ಸಂಘದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಸುರೇಶ್, ಪದಾಧಿಕಾರಿಗಳಾದ ಶಶಿಕುಮಾರ್, ಲೀನಾ ಸೇರಿದಂತೆ ಸದಸ್ಯರುಗಳು ಉಪಸ್ಥಿತರಿದ್ದರು.
ಸೋಮವಾರಪೇಟೆ ಜ.21 NEWS DESK : ಗಣರಾಜ್ಯೋತ್ಸವ ಆಚರಣೆಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದೆಂದು ಎಂದು ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಹೇಳಿದರು. ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ತಹಶೀಲ್ದಾರ್ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಹಬ್ಬಗಳ ಆಚರಣೆ ಕುರಿತು ನಡೆಸುವ ಸಭೆಗೆ ಪ್ರತಿ ಬಾರಿಯೂ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಿಲ್ಲ. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸು ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕು. ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಕಚೇರಿಯಲ್ಲೂ ಜನವರಿ 26ರ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಿಸಿ ನಂತರ ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು. ಮಾಜಿ ಸೈನಿಕರನ್ನು ಪಥಸಂಚಲನದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಬೇಕು. ಉಳಿದಂತೆ ಪೋಲೀಸ್, ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಸಿ.ಸಿ. ತಂಡಗಳು ಪಥಸಂಚಲನಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳಬೇಕೆಂದು ತಿಳಿಸಿದರು.…






