ಲೇಖಕ: admin

ಮಡಿಕೇರಿ ಜು.10 NEWS DESK : ಮದೆ ಮಹೇಶ್ವರ ವಿದ್ಯಾಸಂಸ್ಥೆಯಲ್ಲಿ 2024-25 ನೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಕಾಲೇಜಿನ ಹಳೆಯ ವಿದ್ಯಾರ್ಥಿ, ಮಡಿಕೇರಿ ನಗರದ ನಿವಾಸಿ, ಪ್ರಸ್ತುತ ಕುಟುಂಬ ಸಮೇತರಾಗಿ ದುಬೈಯಲ್ಲಿ ನೆಲೆಸಿರುವ ಹ್ಯಾರಿಸ್ ಅವರು ನೀಡಿರುವ ಸಮವಸ್ತ್ರಗಳನ್ನು ಮದೆ ಮಹೇಶ್ವರ ವಿದ್ಯಾಸಂಘದ ಅಧ್ಯಕ್ಷ ಹುದೇರಿ ರಾಜೇಂದ್ರ, ಪ್ರಮುಖರಾದ ಉಣ್ಣಿಕೃಷ್ಣ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು. ವಿದ್ಯಾರ್ಥಿಗಳಿಗೆ ಸಮವಸ್ತ್ರದಂತೆ ಸಮಯ ಪಾಲನೆ, ಶಿಸ್ತು ಮತ್ತು ಓದು ಬರಹದಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿ ಮುಂದೆ ತಂದೆ ತಾಯಿಯರಿಗೆ ಮತ್ತು ಊರಿಗೆ ಕೀರ್ತಿಯನ್ನು ತರಬೇಕು ಎಂದು ಕಿವಿಮಾತು ಹೇಳಿದರು. ಕನ್ನಡ ಉಪನ್ಯಾಸಕ ಶ್ರೀನಿವಾಸ್, ಆಂಗ್ಲ ಭಾಷಾ ಉಪನ್ಯಾಸಕ ಹೇಮಂತ್ ಇದ್ದರು. ಕಾಲೇಜಿನ ಪ್ರಾಂಶುಪಾಲರಾದ ಸಿದ್ದರಾಜು ಬೆಳ್ಳಯ್ಯ ಸ್ವಾಗತಿಸಿದರು. ಉಪನ್ಯಾಸಕಿ ಯೋಗಿತಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಪರಶುರಾಮಪ್ಪ ವಂದಿಸಿದರು.   

Read More

ಮಡಿಕೇರಿ ಜು.10 NEWS DESK : ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2002ರ ನ.4 ರಂದು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಪ್ರಾರಂಭಗೊಂಡಿದೆ. ಈ ಸಂಸ್ಥೆ ಮೂಲಕ ‘ಸಾಂತ್ವನ ಮಹಿಳಾ ಸಹಾಯವಾಣಿ’ ಕೊಡಗಿನಾದ್ಯಂತ ಸಮಾಜದ ನೊಂದ ಮಹಿಳೆಯರು ಪ್ರತಿಯೊಂದು ಸ್ತರದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ದಾಖಲಿಸಿಕೊಂಡು ತಕ್ಷಣಕ್ಕೆ ಸರಿಯಾದ ಸಲಹೆ ಸೂಚನೆಗಳನ್ನು ನೀಡಿ ನೆರವು ಕಲ್ಪಿಸುತ್ತಾ ಬಂದಿದೆ. ಸಾಂತ್ವನ ಕೇಂದ್ರದಲ್ಲಿ ಈವರೆಗೆ 5182 ವಿವಿಧ ಸ್ವರೂಪದ ಪ್ರಕರಣಗಳು ದಾಖಲಾಗಿದ್ದು, 5168 ಪ್ರಕರಣಗಳು ಇತ್ಯರ್ಥಗೊಂಡಿರುತ್ತದೆ. 2024-25ನೇ ಆರ್ಥಿಕ ಸಾಲಿನಲ್ಲಿ 65 ಪ್ರಕರಣಗಳು ದಾಖಲಾಗಿ 54 ಪ್ರಕರಣಗಳು ಇತ್ಯರ್ಥಗೊಂಡು ಹಿಂದಿನ ಸಾಲಿನ ಉಳಿಕೆ ಪ್ರಕರಣಗಳು ಸೇರಿ, ಉಳಿದ 14 ಪ್ರಕರಣಗಳು ಇತ್ಯರ್ಥದ ಹಂತದಲ್ಲಿರುತ್ತದೆ. ಈವರೆಗೆ ವಿವಿಧ ಸ್ವರೂಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ರೂ.55 ಸಾವಿರ ಗಳನ್ನು ಸಾಂತ್ವನ ಕೇಂದ್ರ ಹಾಗೂ ನ್ಯಾಯಾಲಯದ ಮೂಲಕ ಫಲಾನುಭವಿಗಳಿಗೆ 2024-25 ನೇ ಸಾಲಿನಲ್ಲಿ ಕೊಡಿಸಿಕೊಡಲಾಗಿದೆ. ಆ ದಿಸೆಯಲ್ಲಿ ಮಹಿಳಾ ಸಹಾಯವಾಣಿಯ ಪ್ರಯೋಜನವನ್ನು…

Read More

ಮಡಿಕೇರಿ ಜು.10 NEWS DESK : ಕೊಡಗು ಜಿಲ್ಲೆಯಲ್ಲಿ ವಾಸಿಸುತ್ತಿರುವ ಯರವರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿ ಸ್ವತಂತ್ರವಾಗಿ ಕೃಷಿ ಮಾಡಿಕೊಂಡು ಜೀವನ ಸಾಗಿಸಲು ಜಮೀನು ನೀಡುವಂತೆ ಒತ್ತಾಯಿಸಿ ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಹೋರಾಟ ಫಲ ನೀಡದ ಕಾರಣ ಸ್ವಾತಂತ್ರ್ಯ ದಿನವಾದ ಆ.15 ರಂದು ಜಿಲ್ಲಾ ನ್ಯಾಯಾಲಯದ ಎದುರು ಅರೆಬೆತ್ತಲೆ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿರುವುದಾಗಿ ಯರವ ಯುವ ಒಕ್ಕೂಟದ ಗೌರವಾಧ್ಯಕ್ಷ ಪಿ.ಎಸ್.ಮುತ್ತ ತಿಳಿಸಿದ್ದಾರೆ. “ಯರವರಿಗೆ ಬದುಕಲು ಭೂಮಿ ಕೊಡಿ” ಎಂದು 2003 ರಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದರೂ ಜಿಲ್ಲಾಡಳಿತ ಯಾವುದೇ ಸ್ಪಂದನೆ ನೀಡಿಲ್ಲವೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ. 2015ರ ಆ.15 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಅರೆಬೆತ್ತಲೆ ಸತ್ಯಾಗ್ರಹ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅಂದಿನ ಜಿಲ್ಲಾಡಳಿತ “ಯರವರ” ಸಮೀಕ್ಷೆ ನಡೆಸಿ ಸುಮಾರು 11 ಸಾವಿರ ಕುಟುಂಬಗಳು ತೋಟದ ಲೈನ್‍ಗಳಲ್ಲಿ ನೆಲೆಸಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಪುನರ್‍ವಸತಿ ಕಲ್ಪಿಸಬೇಕು ಎಂದು ವರದಿ ನೀಡಿತ್ತು. ಆದರೆ, ಇಲ್ಲಿಯವರೆಗೆ ಯಾವುದೇ…

Read More

ಮಡಿಕೇರಿ ಜು.10 NEWS DESK : ಮಣ್ಣಿನ ರಕ್ಷಣೆಯ ಮೂಲಕ ಉತ್ತಮ ಗುಣಮಟ್ಟದ ಅಭಿವೃದ್ಧಿಯೊಂದಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯುವಲ್ಲಿ ಸುಸ್ಥಿರ ಕೃಷಿಪದ್ಧತಿಯನ್ನು ಕಾಫಿ ಉತ್ಪಾದನೆಯಲ್ಲಿ ಅಳವಡಿಕೊಳ್ಳುವ ಮೂಲಕ ಅಭಿವೃದ್ಧಿ ಪಡಿಸಬೇಕೆಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ್ ಎಸ್.ಆಲೂರ ತಿಳಿಸಿದರು. ಚೆಟ್ಟಳ್ಳಿಯ ಕಾಫಿ ಉಪ ಸಂಶೋಧನಾ ಕೇಂದ್ರದಲ್ಲಿ ಕಾಫಿಮಂಡಳಿ ಹಾಗೂ ಸುಡಾನ್ ಕಾಫಿ ಪೈ.ಲಿ. ಸಹಯೋಗದಲ್ಲಿ ಆಯೋಜಿಸಿದ ಕಾಫಿ ಅಭಿವೃದ್ಧಿ ಯೋಜನೆ ಅಡಿ ಕೊಡಗಿನ ಪ್ರದೇಶದ ಕಾಫಿ ಬೆಳೆಗಾರರಿಗೆ ಸುಸ್ಥಿರ ಕಾಫಿ ಉತ್ಪಾದನೆಗೆ ಉತ್ತಮ ಕೃಷಿಪದ್ಧತಿಗಳ ಸಾಮಥ್ರ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಣ್ಣ ಹಾಗೂ ಅತೀ ಸಣ್ಣ ಬೆಳೆಗಾರರು ಒಟ್ಟಾಗಿ ಕೃಷಿಯಲ್ಲಿ ತೊಡಗಿಸಿಕೊಂಡಾಗ ಮಾತ್ರ ನೂತನ ವೈಜ್ಞಾನಿಕ ಕ್ರಮವನ್ನು ಅನುಸರಿಸಲು ಸಾಧ್ಯ ಎಂದರು. ಕಾಫಿ ಮಂಡಳಿಯ ಸದಸ್ಯರಾದ ಟಿ.ಕೆ.ಕಿಶೋರ್ ಕುಮಾರ್ ಮಾತನಾಡಿ, ಕಾಫಿ ತೋಟಗಳಲ್ಲಿ ಉತ್ತಮ ತಳಿಯ ಗಿಡಗಳನ್ನು ಬೆಳೆಸುವ ಮೂಲಕ ಹೆಚ್ಚಿನ ಇಳಿವರಿ ಸಾಧ್ಯ, ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದಲ್ಲಿ ಉತ್ತಮ ಇಳುವರಿ ನೀಡುವ ಕಾಫಿ ಗಿಡಗಳನ್ನು…

Read More

ಮಡಿಕೇರಿ ಜು.10 NEWS DESK : ಬುದ್ಧ ಪ್ರತಿಷ್ಠಾನ ಕೊಡಗು ಶಾಖೆ ವತಿಯಿಂದ 102ನೇ ವಕೀಲರ ದಿನದ ಅಂಗವಾಗಿ ಜು.13 ರಂದು ವಕೀಲರಿಗೆ ಗೌರವ ಸಮರ್ಪಣೆ ಮತ್ತು ಬುದ್ಧ ಪೂರ್ಣಿಮೆ ಅಂಗವಾಗಿ ಶಕ್ತಿ ವೃದ್ಧಾಶ್ರಮದ ಮಾತೃಪಿತೃಗಳಿಗೆ ವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಲಿದೆ ಬುದ್ಧ ಪ್ರತಿಷ್ಠಾನದ ಜಿಲ್ಲಾ ಧಮ್ಮಾಚಾರಿ ಹೆಚ್.ಪಿ.ಶಿವಕುಮಾರ್ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಶಕ್ತಿ ವೃದ್ಧಾಶ್ರಮದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಂ.ಎ.ನಿರಂಜನ್ ಉದ್ಘಾಟಿಸಲಿದ್ದು, ಮುಖ್ಯ ಭಾಷಣಕಾರರಾಗಿ ವಕೀಲ ಕೆ.ಆರ್.ವಿದ್ಯಾಧರ್ ಪಾಲ್ಗೊಳ್ಳಲಿದ್ದಾರೆ. ಅತಿಥಿಗಳಾಗಿ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಕಾವೇರಿ ಮಹಾ ಆರತಿ ಬಳಗದ ಸಂಚಾಲಕರಾದ ವನಿತ ಚಂದ್ರಮೋಹನ್, ಸೋಮವಾರಪೇಟೆ ವಕೀಲರಾದ ಬಿ.ಇ.ಜಯೇಂದ್ರ, ಮಡಿಕೇರಿ ಅಡ್ವೊಕೇಟ್ ನಾಗೇಶ್‍ಕುಮಾರ್, ಕುಶಾಲನಗರ ಪುರಸಭೆಯ ನೂತನ ಕಾನೂನು ಸಲಹೆಗಾರ ಕೆ.ಸಿ.ಶಿವಮೂರ್ತಿ, ಕುಶಾಲನಗರ ಎಪಿಪಿ ಹೆಚ್.ಎನ್.ಜಾನಕಿ, ವಕೀಲರಾದ ದಿವ್ಯ ನಂಜಪ್ಪ, ಜೆ.ಆರ್.ತುಳಸಿ, ವಿರಾಜಪೇಟೆ ಕ.ದ.ಸಂ.ಸ.ರಾಜ್ಯ ಸಮಿತಿ ಸದಸ್ಯ ಪಳನಿ ಪ್ರಕಾಶ್, ಶಕ್ತಿವೃದ್ಧಾಶ್ರಮದ ವ್ಯವಸ್ಥಾಪಕ ಸತೀಶ್, ಬುದ್ಧ ಪ್ರತಿಷ್ಠಾನದ…

Read More

ಮಡಿಕೇರಿ ಜು.10 NEWS DESK : ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಕೂಟದ ವತಿಯಿಂದ ಜು.17 ರಂದು ಬ್ಯಾಂಕಿಂಗ್ ಪರೀಕ್ಷೆ ಕುರಿತು ಶಿವಮೊಗ್ಗದಲ್ಲಿ ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ  ಚಂದನ ಸಭಾಂಗಣ, ಕುವೆಂಪು ರಂಗಮಂದಿರದ ಬಳಿ ಕಾರ್ಯಕ್ರಮ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಬ್ಯಾಂಕಿಂಗ್ ಪರೀಕ್ಷೆ ತರಬೇತುದಾರರಾದ ಆರ್.ಕೆ.ಬಾಲಚಂದ್ರ ಪಾಲ್ಗೊಳ್ಳಲಿದ್ದಾರೆ. ಆಸಕ್ತರು ಗೂಗಲ್ ಫಾರ್ಮ್  https://docs.google.com/forms/d/e/1FAIpQLScrjW_gavx-41Gv6bnPCxACn3j2qtqz9GO_rL5biFQdpv5RnQ/viewform?usp=pp_url ತುಂಬುವ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹರೀಶ್ ಕುಮಾರ್ 9743461647, ಮಂಜುನಾಥ್ – 9742475368, ಸೌಮ್ಯ-9481836251 ಸಂಪರ್ಕಿಸಬಹುದಾಗಿದೆ.

Read More

ವಿರಾಜಪೇಟೆ ಜು.10 NEWS DESK : ವಿರಾಜಪೇಟೆಯಲ್ಲಿ ಅಂತಾರಾಷ್ಟ್ರೀಯ ಚಿತ್ರ ಕಲಾವಿದೆ ಆಶಾ ಮಂದಪ್ಪ ನುಡಿನಮನ ಕಾರ್ಯಕ್ರಮ ನಡೆಯಿತು. ವಿರಾಜಪೇಟೆಯ ಶಾನುಭಾಗ್ ಕಾಂಪ್ಲೆಕ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಲಾಯಿತು. ಈ ಸಂದರ್ಭ ಮಾತನಾಡಿದ ಕಾರ್ಯಕ್ರಮದ ಆಯೋಜಕರು ಹಾಗೂ ವಕೀಲರಾದ ಎಸ್.ಆರ್. ಜಗದೀಶ್, ಮೂಲತಃ ವಿರಾಜಪೇಟೆಯವರಾದ ಆಶಾ ಮಂದಪ್ಪ ಅವರು ದಿ.ಬಿದ್ದಂಡ ಕರ್ನಲ್ ಚಂಗಪ್ಪ ಅವರ ಸೊಸೆಯಾಗಿದ್ದು, ಚಿತ್ರ ಕಲಾವಿದೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಸಿ.ಎಂ.ಪೂಣಚ್ಚ ಅವರ ಪುತ್ರ ಸಿ.ಪಿ.ಬೆಳ್ಳಿಯಪ್ಪ ಮಾತನಾಡಿ, ಆಶಾ ಮಂದಪ್ಪ ಬಹುಮುಖ ಪ್ರತಿಭೆಯಾಗಿದ್ದು, ಅವರು ಯಾವುದೇ ಕಾರ್ಯಕ್ರಮಗಳಿಗೆ ತೆರಳಿದರೂ ಅವರ ಉಪಸ್ಥಿತಿ ಎದ್ದು ಕಾಣುತಿತ್ತು. ಜನರನ್ನು ತಮ್ಮ ಪ್ರತಿಭೆಯಿಂದಲೇ  ಆಕರ್ಷಸುತ್ತಿದ್ದರು ಎಂದು ಹೇಳಿದರು. ವಿರಾಜಪೇಟೆಯ ಸಾಧಿಕ್ ಆರ್ಟ್ಸ್ ನ ಸಾಧಿಕ್ ಮತ್ತು ವೈದ್ಯರಾದ ಫಾತಿಮಾ ಕಾರ್ಯಪ್ಪ ಮಾತನಾಡಿ, ಆಶಾ ಮಂದಪ್ಪ ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡರು. ಈ ಸಂದರ್ಭದಲ್ಲಿ ದಿ. ಆಶಾ ಮಂದಪ್ಪ ಚಿತ್ರ ಕಲಾಕೃತಿಗಳ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ನಂದಕುಮಾರ್…

Read More

ಮಡಿಕೇರಿ ಜು.10 NEWS DESK : ವೀರ ಯೋಧರ ನಾಡು ಕೊಡಗು. ಎಷ್ಟೋ ಆಟಗಾರರನ್ನು ಭಾರತಕ್ಕೆ ಆಡಿಸಿದ ಕೀರ್ತಿ ಕೊಡಗಿಗಿದೆ. ಅದೇ ರೀತಿ ಸೈನ್ಯದಲ್ಲಿ ಕೊಡಗಿನ ವೀರ ಯೋಧರು ಹಾಕಿಯನ್ನು ಆಡಿದ್ದಾರೆ. ಅಂತಹವರಲ್ಲಿ ಪ್ರಥಮ ಗೋಲ್ ಕೀಪರ್ ಆಗಿ ಸರ್ವಿಸಸ್ ಆಡಿದ ಹಾಕಿ ಆಟಗಾರನೇ ರಘು ತಿಮ್ಮಯ್ಯ. ಚೌಕಿಮನೆ ಪುಟ್ಟಪ್ಪ ಹಾಗೂ ಮಾಚಮ್ಮ ದಂಪತಿಯರ ಪುತ್ರನಾಗಿ ರಘು ತಿಮ್ಮಯ್ಯನವರು 15 ಮಾರ್ಚ್ 1959ರಂದು ಜಂಬೂರಿನ ಮಾದಾಪುರದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾದಾಪುರದಲ್ಲಿಯೇ ಮುಗಿಸಿ, ಪ್ರೌಢ ಶಿಕ್ಷಣವನ್ನು ಚೆನ್ನಮ್ಮ ಜೂನಿಯರ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. A.S.C ಗೆ ಸೇರ್ಪಡೆ : ಬಾಲ್ಯದಿಂದಲೇ ಫುಟ್ಬಾಲ್ ನಲ್ಲಿ ಆಸಕ್ತಿ ಇದ್ದಿದ್ದರಿಂದ ಗೋಲ್ ಕೀಪರ್ ಆಗಲು ದಾರಿಯು ಸುಗಮವಾಯಿತು. ಇವರು 1979ರಲ್ಲಿ ಆರ್ಮಿ ಸರ್ವಿಸಸ್ ಕೋರ್(A.S.C) ಗೆ ಪಾದರ್ಪಣೆ ಮಾಡಿದರು. ಪ್ರಥಮವಾಗಿ A.S.C ಪರ ಬೆಂಗಳೂರಿಗೆ, ತದನಂತರ ಜಲಂಧರ್ ಗೆ ಆಡಿದರು. ಪಶ್ಚಿಮ ಕಮಾಂಡ್ : A.S.C ಗೆ ಆಡುವಾಗ ಇವರ ಗೋಲ್ ಕೀಪಿಂಗ್ ನ ಚಾತುರ್ಯತೆಯಿಂದ ಪಶ್ಚಿಮ…

Read More

ನಾಪೋಕ್ಲು ಜು.10 NEWS DESK : ಕಲ್ಲುಮೊಟ್ಟೆ ನಿವಾಸಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಮೊಗೇರ ದಿ.ಮಾಯಿಲ ಅವರ ಪತ್ನಿ ಕಮಲ (85) ನಿಧಾನರಾದರು. ಮೃತರ ಅಂತ್ಯಕ್ರಿಯೆ ಕಲ್ಲುಮೊಟ್ಟೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Read More

ನಾಪೋಕ್ಲು ಜು.10 NEWS DESK : ಹಳೆತಾಲೂಕಿನ ಅಂಕುರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಕೊಡಗು ಅಗ್ನಿಶಾಮಕ ದಳದ ವತಿಯಿಂದ ಅಗ್ನಿ ಅವಘಡ ತಡೆಯುವಿಕೆಯ ಬಗ್ಗೆ ಕಾರ್ಯಾಗಾರ ನಡೆಯಿತು. ಅಗ್ನಿ ಅವಘಡದ ತುರ್ತು ಪರಿಸ್ಥಿತಿಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಕ್ರಮಗಳ ಬಗ್ಗೆ ಅಗ್ನಿ ಶಾಮಕ ದಳದ ಸಿಬ್ಬಂಧಿಗಳು ಪ್ರತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಈ ಸಂದರ್ಭ ಅಗ್ನಿಶಾಮಕ ದಳದ ಅಧಿಕಾರಿ ಶೋಬಿತ್ ಕುಮಾರ್, ಸಿಬ್ಬಂದಿವರ್ಗ, ಶಾಲೆಯ ಅಧ್ಯಕ್ಷೆ ಕೆಟೋಳಿರ ರಾಜ ಚರ್ಮಣ್ಣ, ಕಾರ್ಯದರ್ಶಿ ರತ್ನಾ ಚರ್ಮಣ್ಣ, ಪ್ರಾಂಶುಪಾಲರಾದ ಮಮತ, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವರದಿ : ದುಗ್ಗಳ ಸದಾನಂದ   

Read More