ಲೇಖಕ: admin

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಪ್ರವಾಸಿಗರ ಸ್ವರ್ಗ ಗೋವಾ ನಡುವೆ ವೇಗದ ಸಂಪರ್ಕ ಕಲ್ಪಿಸುವ ದಿಸೆಯಲ್ಲಿ ನೈಋತ್ಯ ರೈಲ್ವೆಯು ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿನ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಈ ಯೋಜನೆಗೆ ರೈಲ್ವೆ ಮಂಡಳಿಯಿಂದ ಅಂತಿಮ ಅನುಮೋದನೆ ಸಿಕ್ಕರೆ, ಗೋವಾ ಕಡಲತೀರಕ್ಕೆ ತೆರಳುವ ಪ್ರವಾಸಿಗರಿಗೆ ಇದೊಂದು ದೊಡ್ಡ ಕೊಡುಗೆಯಾಗಲಿದೆ. ವಾರದಲ್ಲಿ 6 ದಿನ ಸಂಚಾರ; 12 ಗಂಟೆಗಳ ಪಯಣ ಪ್ರಸ್ತುತ ಬೆಂಗಳೂರಿನಿಂದ ಗೋವಾಕ್ಕೆ ಸಂಚರಿಸುವ ವಾಸ್ಕೋ ಡಿ ಗಾಮಾ ಎಕ್ಸ್‌ಪ್ರೆಸ್ ಸುಮಾರು 15 ಗಂಟೆಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ, ವಂದೇ ಭಾರತ್ ರೈಲು ಈ 700 ಕಿಲೋಮೀಟರ್ ದೂರವನ್ನು ಸುಮಾರು 12 ರಿಂದ 12:05 ಗಂಟೆಗಳಲ್ಲಿ ಕ್ರಮಿಸುವ ನಿರೀಕ್ಷೆ ಇದೆ. ಇದು ವಾರದಲ್ಲಿ ಆರು ದಿನಗಳ ಕಾಲ ಸಂಚರಿಸುವ ಸಾಧ್ಯತೆಯಿದೆ. ಘಾಟ್ ಪ್ರದೇಶದಲ್ಲಿ ವೇಗಕ್ಕೆ ಮಿತಿ ವಂದೇ ಭಾರತ್ ರೈಲು 160 ಕಿ.ಮೀ ಗಿಂತಲೂ ಹೆಚ್ಚು ವೇಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದರೂ, ಈ ಮಾರ್ಗದಲ್ಲಿ ಅಷ್ಟು ವೇಗವಾಗಿ ಚಲಿಸಲು ಸಾಧ್ಯವಿಲ್ಲ. ಕೊಂಕಣ ಭಾಗದ…

Read More

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಆಡಳಿತಾರೂಢ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ (LDF) ಸರ್ಕಾರವು ಶಬರಿಮಲೆ ವಿಚಾರದಲ್ಲಿ ಅಚ್ಚರಿಯ ‘ರಾಜಕೀಯ ಯೂ-ಟರ್ನ್’ ತೆಗೆದುಕೊಳ್ಳುವ ಮುನ್ಸೂಚನೆ ನೀಡಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ತೀರ್ಪನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದ ಕಮ್ಯುನಿಸ್ಟ್ ಸರ್ಕಾರ, ಈಗ ಸಂಪ್ರದಾಯ ಮತ್ತು ಭಕ್ತರ ನಂಬಿಕೆಯ ರಕ್ಷಕನಂತೆ ಬಿಂಬಿಸಿಕೊಳ್ಳಲು ಸಜ್ಜಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಯ ಆಘಾತ ಕಳೆದ ಡಿಸೆಂಬರ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡರಂಗಕ್ಕೆ ನಿರೀಕ್ಷಿತ ಯಶಸ್ಸು ಸಿಗದೆ ಮುಗ್ಗರಿಸಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಪ್ರದರ್ಶನ ನೀಡಿದ್ದರೆ, ಬಿಜೆಪಿ ಕೂಡ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಂಡಿತ್ತು. ಈ ಹಿನ್ನಡೆಯ ಹಿಂದೆ ಶಬರಿಮಲೆ ವಿವಾದ ಮತ್ತು ಆಡಳಿತ ವಿರೋಧಿ ಅಲೆ ಪ್ರಮುಖ ಪಾತ್ರ ವಹಿಸಿದೆ ಎಂದು ವಿಶ್ಲೇಷಿಸಲಾಗಿದೆ. ಹಿಂದು ಮತಬ್ಯಾಂಕ್ ಸಂಪೂರ್ಣವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಾಲಾಗುವುದನ್ನು ತಡೆಯುವುದು ಈಗ ಸಿಪಿಐ(ಎಂ)ಗೆ ಅನಿವಾರ್ಯವಾಗಿದೆ. ಶಬರಿಮಲೆ ಚಿನ್ನ ಕಳವು ಪ್ರಕರಣದ ಬಿಸಿ ಬಜೆಟ್ ಅಧಿವೇಶನದಲ್ಲಿ…

Read More

ಮಡಿಕೇರಿ ಫೆ.24 –  ಜೀವ ಸಂರಕ್ಷಕವಾದ ರಕ್ತಕ್ಕೆ  ಕೊಡಗಿನಲ್ಲಿ ದಿನಾ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸ್ವಯಂಪ್ರೇರಿತರಾಗಿ ಜನರು ರಕ್ತದಾನ ಮಾಡಲು ಮುಂದಾಗಬೇಕಾದ ಅತ್ಯಗತ್ಯವಿದೆ ಎಂದು ಜಿಲ್ಲಾ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ರವಿ ಕರುಂಬಯ್ಯ ಕರೆ ನೀಡಿದ್ದಾರೆ. ಮಾಸಿಕ 600 ಯೂನಿಟ್ ರಕ್ತದ ಅಗತ್ಯವಿದ್ದು ಇಷ್ಟೊಂದು ರಕ್ತ ಸಂಗ್ರಹವಾಗದ ಹಿನ್ನಲೆಯಲ್ಲಿ ರಕ್ತದ ಕೊರತೆ ಆಸ್ಪತ್ರೆಗಳಲ್ಲಿ ತೀವ್ರವಾಗಿದೆ ಎಂದೂ ಅವರು ಹೇಳಿದ್ದಾರೆ. ನಗರದ ರೋಟರಿ ಸಬಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್  ವತಿಯಿಂದ ಮಹಿಳೆಯರಿಗಾಗಿಯೇ ರಕ್ತದಾನ ಶಿಬಿರ ಆಯೋಜನಾ ಕಾಯ೯ಕ್ರಮದಲ್ಲಿ ರಕ್ತದಾನ  ತಪ್ಪುಗ್ರಹಿಕೆ ಮತ್ತು ವಾಸ್ತವ ವಿಚಾರದ ಕುರಿತಾಗಿ ಅವರು ಮಾಹಿತಿ ನೀಡಿದರು.  ಕೆಲವು ವಷ೯ಗಳ ಹಿಂದಿನವರೆಗೆ  ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ 100 ಯೂನಿಟ್ ರಕ್ತ ಸಾಕಾಗುತ್ತಿತ್ತು, ಆದರೆ ಕೊಡಗು ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆಯ ಜಿಲ್ಲಾಸ್ಪತ್ರೆ ವಿಸ್ತಾರಗೊಂಡು ಕೊಡಗು ಮಾತ್ರವಲ್ಲದೇ ಪರಜಿಲ್ಲೆಗಳ ರೋಗಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ದಾಖಲಾಗುತ್ತಿರುವುದರಿಂದಾಗಿ ರಕ್ತಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಪ್ರತೀ ತಿಂಗಳು 600 ಯೂನಿಟ್ ರಕ್ತದ ಅಗತ್ಯತೆಯಿದೆ.…

Read More

ಮಡಿಕೇರಿ, NEWS DESK ಫೆ.24 –   ಸಮಾಜದ ಅಗತ್ಯತೆಗೆ ತಕ್ಕಂತೆ ವಿನೂತನವಾದ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಕಾಯ೯ಪ್ರವೖತ್ತವಾಗಬೇಕು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಸಮಾಜದಲ್ಲಿಯೂ ಅಗತ್ಯತೆಗಳ ಬದಲಾವಣೆಗೆ ತಕ್ಕಂತೆ ಯೋಜನೆ ಜಾರಿಯಾಗಬೇಕೆಂದು ರೋಟರಿ ಜಿಲ್ಲೆ 3192 ನ ಬೆಂಗಳೂರು ಪೀಣ್ಯ ರೋಟರಿ ಸಂಸ್ಥೆಯ ಪ್ರಮುಖ ನಾಗೇಂದ್ರಪ್ರಸಾದ್ ಕರೆ ನೀಡಿದ್ದಾರೆ. ನಗರದ ಹೊರವಲಯದಲ್ಲಿನ ಸಂಪಿಗೆ ಇಕೋ  ವಿಲೇಜ್ ರೆಸಾಟ್೯ನಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ವತಿಯಿಂದ ರೋಟರಿ ವಲಯ 6 ರ 14 ರೋಟರಿ ಸಂಸ್ಥೆಗಳಿಗೆ ಸೇರಿದ ಸದಸ್ಯರ   ಸಮ್ಮಿಲನ ಸಮಾರಂಭ ಉದ್ಗಾಟಿಸಿ  ಅವರು ಮಾತನಾಡಿದರು. ರೋಟರಿ ಸಂಸ್ಥೆಗಳಿಗೆ ಯುವಕ, ಯುವತಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ  ಆಕಷಿ೯ಸಬೇಕು.  ಸೇವಾ ಕಾಯ೯ಗಳಿಗೆ ಯುವಪೀಳಿಗೆ  ಮುಂದಾಗುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕೆಂದು ಕರೆ ನೀಡಿದ ಅವರು, ಕೋವಿಡ್ ಲಾಕ್ ಡೌನ್ ಸಂದಭ೯ದಲ್ಲಿಯೂ ರೋಟರಿ ಸಂಸ್ಥೆಗಳು ವಿಶ್ವವ್ಯಾಪಿ ಸಕ್ರಿಯವಾದ ಕಾಯ೯ಚಟುವಟಿಕೆ ಮೂಲಕ ಜನರ ನೆರವಿಗೆ ಮುಂದಾಗಿತ್ತು, ಹಲವೊಮ್ಮೆ ಸಕಾ೯ರಗಳಿಂದಲೂ…

Read More

ಮಡಿಕೇರಿ NEWS DESK ಫೆ.24 : ದಕ್ಷಿಣ ಭಾರತ ಮಿಕ್ಸ್ ಬಾಕ್ಸಿಂಗ್ ಸಂಸ್ಥೆಯ ಉಪಾಧ್ಯಕ್ಷರಾಗಿ ಮಾದಾಪುರದ ಎನ್.ಸಿ.ಸುದರ್ಶನ್ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಮಿಕ್ಸ್ ಬಾಕ್ಸಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಎನ್.ಸಿ.ಸುದರ್ಶನ್ ಅವರು ಕೊಡಗು ಜಿಲ್ಲೆಯ ನೂರಾರು ವಿದ್ಯಾರ್ಥಿಗಳಿಗೆ ಮಿಕ್ಸ್ ಬಾಕ್ಸಿಂಗ್ ತರಬೇತಿಯನ್ನು ನೀಡಿದ್ದಾರೆ. ಅಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪದಕಗಳನ್ನು ಗೆಲ್ಲಲು ಕಾರಣಕರ್ತರಾಗಿದ್ದಾರೆ. ಇಂಡಿಯನ್ ಮಿಕ್ಸ್ ಬಾಕ್ಸಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಎಸ್. ಮಾಸ್ಕರ್ ಅವರು ಎನ್.ಸಿ.ಸುದರ್ಶನ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಪತ್ರ ನೀಡಿದ್ದಾರೆ.

Read More

ಚೆಟ್ಟಳ್ಳಿ ಫೆ.23 NEWS DESK :  ವಿರಾಟ್ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಚೆಟ್ಟಳ್ಳಿಯಲ್ಲಿ ವಿರಾಟ್ ಹಿಂದೂ ಸಂಗಮ ಹಾಗೂ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮ ನಡೆಯಿತು.  ಚೇರಳ, ಶ್ರೀಮಂಗಲ, ಈರಳೆವಳಮುಡಿ, ಕೂಡ್ಲೂರು ಚೆಟ್ಟಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಹಿಂದೂ ಬಾಂಧವರು ಭವ್ಯ ಶೋಭಾಯಾತ್ರೆ ಮತ್ತು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ, ಕಾರ್ಯಕ್ರಮಕ್ಕೆ ಅಪೂರ್ವ ವೈಭವ ನೀಡಿದರು. ಶೋಭಾಯಾತ್ರೆಯು ವ್ಯಾಲಿ ಪ್ಲೇ ಶಾಲೆಯ ಮುಂಭಾಗದಿಂದ ಆರಂಭಗೊಂಡು ವಿವಿಧ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಚೆಟ್ಟಳ್ಳಿ ಪ್ರೌಢಶಾಲಾ ಆಟದ ಮೈದಾನದವರೆಗೆ ಸಾಗಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಸರಿ ಧ್ವಜಗಳ ಹಾರಾಟ, ಧಾರ್ಮಿಕ ಘೋಷಣೆಗಳನ್ನು ಮೊಳಗಿಸುತ್ತ ಶಿಸ್ತುಬದ್ಧವಾಗಿ ಸಾಗಿದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು. ಇದರಿಂದ ಪಟ್ಟಣದೂದ್ದಕ್ಕೂ ಕೇಸರಿಮಯ ವಾತಾವರಣ ನಿರ್ಮಾಣವಾಗಿ, ಚೆಟ್ಟಳ್ಳಿ ಸಂಪೂರ್ಣವಾಗಿ ಹಬ್ಬದ ಸೌರಭದಲ್ಲಿ ಮುಳುಗಿತು. ಶೋಭಾಯಾತ್ರೆಯಲ್ಲಿ ಮಹಿಳೆಯರ ಪೂರ್ಣ ಕುಂಭ ಸ್ವಾಗತ,ನೆಲ್ಲಿಹುದಿಕೇರಿಯಶ್ರೀ ಮೂಕಾಂಬಿಕಾ ಭಜನೆ ಕುಣಿತ ತಂಡ , ಉಡತ್ ಮೊಟ್ಟೆ ಭಜನೆ ಕುಣಿತ, ಬೆಳ್ಳಿ ರಥ, ಶ್ರೀ ಶಬರೀಶ್ ಚೆಂಡೆಮೇಳ ತಂಡ…

Read More

ಸುಂಟಿಕೊಪ್ಪ ಫೆ.22 NEWS DESK :  ಸಮಾಜಕ್ಕೆ ಸೇವೆ ಸಲ್ಲಿಸಲು ಯುವ ಸಂಘಟನೆಗಳು ಬೆಳೆದರೆ ಮಾತ್ರ ಸಮುದಾಯದ ಉನ್ನತಿ ಸಾಧ್ಯ. ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿ ಸಮಾಜದ ಕಟ್ಟಕಡೆಯ ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಅವಕಾಶಕ್ಕೆ ಜೆಸಿಐ ಸಂಸ್ಥೆಯು ನಿರಂತರ ವೇದಿಕೆ ಕಲ್ಪಿಸಿದೆ’ ಎಂದು ಜೆಸಿಐ ವಲಯ-14ರ ನೂತನ ಅಧ್ಯಕ್ಷ ಪ್ರಜ್ವಲ್ ಎಸ್.ಜೈನ್ ಹೇಳಿದರು. ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ವತಿಯಿಂದ ಸಮೀಪದ ಕೆದಕಲ್ ನ ಚೆರ್ರಿ ಲಾಫ್ಟ್ ವಿಹಾರಧಾಮದ ಸಭಾಂಗಣದಲ್ಲಿ ಏರ್ಪಡಿಸಿದ್ದ  ಸುಂಟಿಕೊಪ್ಪ ಜೆಸಿಐ ಸಂಸ್ಥೆಯ 25 ನೇ ವರ್ಷದ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಜೆಸಿಐ ಪದಾಧಿಕಾರಿಗಳಿಗೆ ಅಧಿಕಾರ ಪ್ರಮಾಣ ಬೋಧಿಸಿ ಅವರು ಮಾತನಾಡಿದರು. ಜೆಸಿಐ ಸಂಸ್ಥೆಯು ತನ್ನ ಸಾಮಾಜಿಕ ಕಾರ್ಯಗಳೊಂದಿಗೆ ಉತ್ತಮ ಭವಿಷ್ಯಕ್ಕಾಗಿ ಪ್ರಕೃತಿಗೆ ಪೂರಕವಾದ ಕಾರ್ಯಗಳನ್ನು ಕೈಗೊಳ್ಳಬೇಕು. ಹಾಗೆಯೇ, ಯುವಜನಾಂಗವನ್ನು ಉತ್ತಮ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಜೆಸಿಐ ಸದಸ್ಯರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಉತ್ತಮ ಪರಿಸರ ಕಾಪಾಡುವ ದಿಸೆಯಲ್ಲಿ ನಾವು…

Read More

ವಿರಾಜಪೇಟೆ ಫೆ.23 NEWS DESK : ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಅವಶ್ಯಕ. ಸಾಮಾಜಿಕ ನ್ಯಾಯವು ರಾಷ್ಟ್ರಗಳ ಒಳಗೆ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗೆ ಆಧಾರವಾಗಿರುವ ತತ್ವವಾಗಿದೆ ಎಂದು ವಿರಾಜಪೇಟೆ ಜೆಎಂಎಫ್‍ಸಿಯ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ವಿರಾಜಪೇಟೆ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಆರ್.ಮಂಜುನಾಥ್ ಅಭಿಪ್ರಾಯಪಟ್ಟರು. ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ, ವಿರಾಜಪೇಟೆ ರೋಟರಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಬಿಟ್ಟಂಗಾಲದ ರೋಟರಿ ಪ್ರಾಢಶಾಲೆಯಲ್ಲಿ ನಡೆದ ವಿಶ್ವ ಸಾಮಾಜಿಕ ನ್ಯಾಯ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಾದ್ಯಂತ ಲಿಂಗ, ವಯಸ್ಸು, ಜನಾಂಗೀಯ, ಧರ್ಮ, ಸಂಸ್ಕೃತಿ, ಬಡತನ, ನಿರುದ್ಯೋಗ, ಶಿಕ್ಷಣ, ವಲಸೆ, ಆರ್ಥಿಕ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ತೊಡೆದು ಹಾಕಲು, ಸಾಮಾಜಿಕ ಅಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅದನ್ನು ಸಂಪೂರ್ಣವಾಗಿ ಕಿತ್ತುಹಾಕಲು ಪ್ರತಿ ವರ್ಷ ಫೆಬ್ರವರಿ 20 ರಂದು ವಿಶ್ವ ಸಾಮಾಜಿಕ ನ್ಯಾಯ ದಿನ ಆಚರಿಸಲಾಗುತ್ತದೆ ಎಂದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2007ರ ಫೆಬ್ರವರಿ…

Read More

ವಿರಾಜಪೇಟೆ ಫೆ.23 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್, ವಿರಾಜಪೇಟೆ ತಾಲೂಕು ಮಾಯಮುಡಿ ವಲಯದ ಪೊನ್ನಪ್ಪಸಂತೆ ಕಾರ್ಯಕ್ಷೇತ್ರದ ಕಲ್ಲುಗುಡಿ ಈಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2,50,000 ಸಹಾಯ ಧನವನ್ನು ನೀಡಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಹರೀಶ್ ಪಿ. ಚೆಕ್ ಅನ್ನು ದೇವಾಲಯದ ಅಧ್ಯಕ್ಷ ಎ.ಎ.ಪ್ರದೀಪ್ ಅವರಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭ ದೇವಾಲಯ ಸಮಿತಿಯ ಸದಸ್ಯರಾದ ಕೆ.ಜಿ.ಸೋಮಯ್ಯ, ಬಿ.ಕೆ.ಮೊಣ್ಣಪ್ಪ, ಬಿ.ಎ.ದಿನೇಶ್, ವಿನು ಚಂಗಪ್ಪ, ತರುಣ್ ತಿಮ್ಮಯ್ಯ, ರಾಕಿ ಚಂಗಪ್ಪ, ಎಂ.ಎಂ. ತಿಮ್ಮಯ್ಯ, ವಲಯ ಮೇಲ್ವಿಚಾರಕರಾದ ವಸಂತ್, ಒಕ್ಕೂಟದ ಅಧ್ಯಕ್ಷರಾದ ಸೀನಾ, ಸೇವಾ ಪ್ರತಿನಿಧಿ ಬಿಂದು, ಒಕ್ಕೂಟದ ಪದಾಧಿಕಾರಿಗಳಾದ ಉಷಾ, ಗೀತಾ, ಊರಿನ ಗ್ರಾಮಸ್ಥರು ಇದ್ದರು.

Read More

ನಾಪೋಕ್ಲು ಫೆ.23 NEWS DESK : ಕಾರುಗುಂದ ಗೌಡ ಸಮಾಜ ಮತ್ತು ಚೇರಂಬಾಣೆ ಗೌಡ ಯುವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಗೌಡ ಜನಾಂಗಗಳ ಕ್ಯಾರಂಬೋರ್ಡ್ ಕ್ರೀಡಾಕೂಟದ ಪುರುಷರ ವಿಭಾಗದ ಸಿಂಗಲ್ಸ್ ನಲ್ಲಿ ಇಂದ್ರೇಶ್ ಕುದುಕುಳಿ ಪ್ರಥಮ ಮತ್ತು ಡಬಲ್ಸ್ ನಲ್ಲಿ ಭರತ್ ಕಾವೇರಿಮನೆ ಪ್ರಥಮ, ಮಕ್ಕಳ ಡಬಲ್ಸ್ ವಿಭಾಗದಲ್ಲಿ ಗೌರವ್ ಕುದುಕುಳಿ ಪ್ರಥಮ, ಸಿಂಗಲ್ಸ್ ವಿಭಾಗದಲ್ಲಿ ದ್ರುವ ಸುಳ್ಯಕೋಡಿ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಹರಪ್ಪನಹಳ್ಳಿ ರವೀಂದ್ರ, ಎಡಿಕೇರಿ ಪ್ರಸನ್ನ ಕುಶಾಲಪ್ಪ, ಕೊಡುಪಾಲು ಎಸ್ ಗಣಪತಿ, ಕಡ್ಲೇರ ತುಳಸಿ ಮೋಹನ್, ಕೇಕಡ ದಿನೇಶ್ ಮತ್ತು ಬೆಳ್ಯನ ಚಂದ್ರಪ್ರಕಾಶ್ ಉದ್ಘಾಟಿಸಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. :: ಕ್ರೀಡಾಕೂಟದ ವಿಜೇತರು :: ಪುರುಷರ (ದೊಡ್ಡವರ) ವಿಭಾಗದಲ್ಲಿ ಸಿಂಗಲ್ಸ್ ನಲ್ಲಿ ದ್ವಿತೀಯ-ಕೆದಂಬಾಡಿ ತಿಮ್ಮಯ್ಯ. ಹಾಗೂ ಡಬಲ್ಸ್ ನಲ್ಲಿ ದ್ವಿತೀಯ – ಇಂದ್ರೇಶ್ ಕದುಕುಳಿ . ಹಾಗೂ ಮಕ್ಕಳ ವಿಭಾಗದಲ್ಲಿ ಡಬಲ್ಸ್ ಮೋಹಿತ್ ಕುದುಕುಳಿ ದ್ವಿತೀಯ ಮೋನಿಶ್ ಕೆಟೋಳಿ ಮತ್ತು…

Read More