ಮಡಿಕೇರಿ ಮೇ 19 NEWS DESK : ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಡಿಕೇರಿ ಗಾಳಿಬೀಡಿನಲ್ಲಿರುವ ವಸತಿ ಶಾಲೆ, ಜವಾಹರ್ ನವೋದಯ ವಿದ್ಯಾಲಯದಲ್ಲಿ ಹೆಣ್ಣು ಮಕ್ಕಳನ್ನು ನೋಡಿಕೊಳ್ಳಲು ಅರ್ಹ ಅಭ್ಯರ್ಥಿಗಳನ್ನು ಸಂದರ್ಶಕ್ಕೆ ಕರೆಯಲಾಗಿದೆ. ಮೇ 27 ರಂದು ಬೆಳಗ್ಗೆ 10 ಗಂಟೆಗೆ ಗಾಳಿಬೀಡು ನವೋದಯ ವಿದ್ಯಾಲಯದಲ್ಲಿ ಸಂದರ್ಶನ ನಡೆಯಲಿದೆ. ಇದು ಕಾಂಟ್ರ್ಯಾಕ್ಟ್ ಹುದ್ದೆಯಾಗಿದ್ದು 10 ತಿಂಗಳವರೆಗೆ ಕಾರ್ಯ ನಿರ್ವಹಿಸಬಹುದಾಗಿದೆ. ವಯೋಮಿತಿ 35 ರಿಂದ 55 ವರ್ಷದೊಳಗಿನ ಹೆಣ್ಣು ಮಕ್ಕಳು, ಕನಿಷ್ಠ ಹತ್ತನೇ ತರಗತಿಯನ್ನು ಪಾಸಾಗಿರಬೇಕು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ ನೀಡಲಾಗುವುದು. ವಿವಾಹ, ವಿವಾಹೇತರ, ಮದುವೆಯಾದ ಅಥವಾ ಮದುವೆಯಾಗದ ಅಥವಾ ವಿಧವೆಯರೂ ಸಂದರ್ಶನದಲ್ಲಿ ಭಾಗವಹಿಸಬಹುದು. ಕೌಶಲ್ಯ ರಹಿತ ಕಾರ್ಮಿಕರಿಗೆ ಸರಕಾರದಿಂದ ಕೊಡಮಾಡುವ ವೇತನವನ್ನು ನೀಡಲಾಗುವುದು, ಇತರ ಸೌಲಭ್ಯಗಳು ಊಟ, ವಸತಿ ಮತ್ತು ವಿದ್ಯಾಲಯದಲ್ಲಿರುವ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಉಚಿತವಾಗಿರುತ್ತವೆ ಎಂದು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.
ಲೇಖಕ: admin
ಸುಂಟಿಕೊಪ್ಪ ಮೇ 19 NEWS DESK : ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯ 3ನೇ ದಿನ ನಡೆದ ಪಂದ್ಯಾವಳಿಯಲ್ಲಿ ಮೊಗ್ರಲ್ ಎಫ್.ಸಿ. ಕುಂಬ್ಳೆ ತಂಡ ಮುಂದಿನ ಸುತ್ತಿಗೆ ಪ್ರವೇಶಿಸಿತ್ತು. ಜಿಯಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ 39ನೇ ವರ್ಷದ ಆಯೋಜಿಸಲಾಗಿರುವ ಪುಟ್ಬಾಲ್ ಮೊದಲನೇ ಪಂದ್ಯಾವಳಿಯು ಮೊಗ್ರಲ್ ಎಫ್.ಸಿ ಕುಂಬ್ಳೆ ಹಾಗೂ ಸ್ವರ್ಣ ಎಫ್.ಸಿ.ಮಂಡ್ಯ ತಂಡಗಳ ನಡುವೆ ನಡೆದ ಮೊಗ್ರಲ್ ಎಫ್.ಸಿ ಕುಂಬ್ಳೆ ತಂಡವು ಮೊದಲಾರ್ಧದಲ್ಲಿ 13ನೇ ನಿಮೀಷದಲ್ಲಿ ಅಬಿದ್ ಒಂದು ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ದ್ವಿತೀಯಾರ್ಧದಲ್ಲಿ 2ನೇ ನಿಮಿಷದಲ್ಲಿ ಮೊಗ್ರಲ್ ಎಫ್.ಸಿ ಕುಂಬ್ಳೆ ಅಭೀದ್ ಮತ್ತೊಂದು ಗೋಲುಗಳಿಸುವ ಎದುರಾಳಿ ತಂಡಕ್ಕೆ ಒತ್ತಡವನ್ನು ಹೆಚ್ಚಿಸಿದರು. ಮತ್ತೇ ಮೊಗ್ರಲ್ ಎಫ್.ಸಿ ಕುಂಬ್ಳೆ ತಂಡದ ಆಟಗಾರ 13ನೇ ನಿಮಿಷದಲ್ಲಿ ನಿಶಾದ್ ಮತ್ತೊಂದು ಗೋಲುಗಳಿಸುವ ಮೂಲಕ ಎದುರಾಳಿ ತಂಡಕ್ಕೆ ಒತ್ತಡವನ್ನು ನೀಡಿದರು. 17ನೇ ನಿಮಿಷದಲ್ಲಿ ರಶೀದ್ 1 ಗೋಲುಗಳಿಸುವ ಮೂಲಕ ಎದುರಾಳಿ…
ಸುಂಟಿಕೊಪ್ಪ ಮೇ 19 NEWS DESK : 7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರು ರೆ.ಫಾ.ಸಬಾಸ್ಟಿನ್ ಪೂವತ್ತಗಲ್ (ಸುನಿಲ್) ಬೀಳ್ಕೊಡಲಾಯಿತು. ಕಳೆದ 11 ವರ್ಷಗಳ ಕಾಲ 7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರುಗಳಾಗಿ ಸೇವೆಸಲ್ಲಿಸಿದ ರೆ.ಫಾ.ಸಬಾಸ್ಟಿನ್ ಪೂವತ್ತಗಲ್ (ಸುನಿಲ್) ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಳಂಜ ಗ್ರಾಮದ ಸೆಂಟ್ ಸೆಬಾಸ್ಟಿನ್ ವರ್ಗಾವಣೆಗೊಂಡಿದ್ದು, ಅವರಿಗೆ ಸುಂಟಿಕೊಪ್ಪದ ಇಮ್ಯಾನ್ಯುವೆಲ್ ಸಿಎಸ್ಐ ದೇವಾಲಯದ ಧರ್ಮ ಗುರುಗಳಾದ ಮಧು ಕಿರಣ್ ಮತ್ತು ಉದ್ಯಮಿಗಳಾದ ವಿಲಿಯಂ ಕುಟುಂಬ ವರ್ಗದವರು ಸನ್ಮಾನಿಸಿ ಗೌರವಿಸಿ ಬೋಳ್ಕೊಟ್ಟರು. ಈ ಸಂದರ್ಭ 7ನೇ ಹೊಸಕೋಟೆ ಎಸ್.ಹೆಚ್.ಕನ್ಯಾಸ್ತ್ರೀ ಮಠದ ಮದರ್ ಸೂಪಿರಿಯರ್ ಟೆಸ್ಸಿ ಮ್ಯಾನುವೆಲ್, ಸಿಸ್ಟರ್ಗಳಾದ ಲೀಸಾ ಟೋಮ್, ಅ್ಯನ್ಸಿ, ಜಿನ್ಸಿ ಇವರುಗಳು ಇದ್ದರು.
ಕುಶಾಲನಗರ ಮೇ 19 NEWS DESK : ಬಸವಣ್ಣನವರ ವಚನಗಳು ಹಾಗೂ ಶಿವಶರಣೆಯರ ವಚನಗಳು ಜನಸಾಮಾನ್ಯರ ಬದುಕಿಗೆ ಹತ್ತಿರವಾಗಿವೆ.ವಿಶ್ವ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ಮಹತ್ವದ ಕೊಡುಗೆ ನೀಡಿದೆ ಎಂದು ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಎಸ್.ಎಂ ಸಿದ್ದರಾಜಪ್ಪ ಹೇಳಿದರು. ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ಕುಶಾಲನಗರ ತಾಲ್ಲೂಕು ಘಟಕದ ವತಿಯಿಂದ ಕುಶಾಲನಗರ ಪಟ್ಟಣದ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಐದನೇ ವರ್ಷದ ಬಸವ ಜಯಂತಿ ಕಾರ್ಯಕ್ರಮದಲ್ಲಿ 12 ನೇ ಶತಮಾನದ ವಚನ ಸಾಹಿತ್ಯ ಹಾಗೂ ಶಿವ ಶರಣ- ಶರಣೆಯರ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಭಕ್ತಿ ಭಂಡಾರಿ, ಮಹಾನ್ ಮಾನವತಾವಾದಿ ಹಾಗೂ ಸಾಮಾಜಿಕ ಕ್ರಾಂತಿ ಪುರುಷ ಜಗಜ್ಯೋತಿ ಬಸವಣ್ಣನವರ ವಚನಗಳು ಸಾರ್ವಕಾಲಿಕ ಸತ್ಯವನ್ನು ಸಾರುತ್ತವೆ. ಬಸವಣ್ಣನವರ ಸಾರಥ್ಯದಲ್ಲಿ 12 ನೇ ಶತಮಾನದಲ್ಲಿ ನಡೆದ ವಚನ ಚಳವಳಿಯು ಸಾಮಾಜಿಕ ಚಳವಳಿಯಾಗಿ…
ಮಡಿಕೇರಿ NEWS DESK ಮೇ 18 : ವಾಸ್ತವವಾಗಿ ಭಕ್ತಿ ಆತ್ಮನಿವೇದನೆಗೆ ಮತ್ತು ಸಾಮಾಜಿಕ ಬದುಕಿನಲ್ಲಿ ಸಂಸ್ಕಾರವನ್ನು ಮೂಡಿಸುವುದಕ್ಕೆ ಅಗತ್ಯವಾಗಿದೆ. ಆದರೆ ಇಂದು ಭಕ್ತಿಯನ್ನು ಬೀದಿಯ ಸರಕನ್ನಾಗಿ ನಾವು ನೋಡುತ್ತಿದ್ದೇವೆ ಎಂದು ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟಿದ್ದಾರೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಬೆಂಗಳೂರಿನ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ “ಮುತ್ತು ಬಂದಿದೆ ಕೇರಿಗೆ” ಎಂಬ ರಸ ಗ್ರಹಣ ಶಿಬಿರ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾ.ತ.ಚಿಕ್ಕಣ್ಣ ಅವರು ಕನಕದಾಸರು ಕೇವಲ ಭಕ್ತ ಮಾತ್ರ ಅಲ್ಲ, ಅವರು ಒಬ್ಬ ವಿಚಾರವಾದಿ ಹಾಗೂ ಕವಿಯೂ ಅಗಿದ್ದರು. ಹರಿದಾಸ ಪರಂಪರೆಯಲ್ಲಿ 150 ಹರಿದಾಸರು ಬಂದು ಹೋಗಿದ್ದಾರೆ. ಭಕ್ತಿಯನ್ನು ಸಾಮಾಜಿಕ ಸುಧಾರಣೆಗೆ ಮತ್ತು ಜ್ಞಾನೋಪಾಸನೆಗೆ ಬಳಸಿಕೊಂಡ ಕೀರ್ತನಾಕಾರರಲ್ಲಿ ಮೊದಲು ನಿಲ್ಲುವವರು ಕನಕದಾಸರು ಹಾಗೂ ಪುರಂದರದಾಸರು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ…
ಮಡಿಕೇರಿ NEWS DESK ಮೇ 18 : ಜಗತ್ತಿನ ಸಂಕಟ ವಿಮೋಚನೆಗಾಗಿ ಅನಾದಿಕಾಲದಿಂದಲೂ ಶ್ರೀರುದ್ರ ದೇವನಿಗೆ ಶರಣಾಗುವುದು ನಮ್ಮ ಸಂಸ್ಕೃತಿಯಲ್ಲಿ ಬೆಳೆದು ಬಂದ ಪದ್ಧತಿಯಾಗಿದೆ. ಸಂಕಟ ನಿವಾರಣೆಗೆ ರುದ್ರ ಜಪಯಜ್ಞ ಉತ್ತಮ ಮಾರ್ಗವಾಗಿದೆ ಎಂದು ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಹಾಗೂ ರುದ್ರಾಧ್ಯಾಯಿಕೆ ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ. ತಲಕಾವೇರಿಯ ಕೈಲಾಸಾಶ್ರಮದಲ್ಲಿ ರುದ್ರ ಜಪಯಜ್ಞದ ಮಹತ್ವದ ಕುರಿತು ಉಪನ್ಯಾಸ ನೀಡಿದ ಅವರು ರುದ್ರಮಂತ್ರಗಳಲ್ಲಿ ಭಗವಂತನ ಸರ್ವವ್ಯಾಪಕತ್ವ ವಿವರಿಸಲಾಗಿದೆ. ಅನಂತ ಸ್ವರೂಪಿಯಾದ ಪರಮಾತ್ಮನನ್ನು ಎಲ್ಲದರಲ್ಲೂ ಕಾಣುವುದೇ ಶ್ರೀರುದ್ರ ಜಪ ಕೈಂಕರ್ಯದ ಅಂತರಾರ್ಥವಾಗಿದೆ ಎಂದರು. ತಲಕಾವೇರಿ ಸನ್ನಿಧಿಯಲ್ಲಿ 9ದಿನಗಳ ಕಾಲ ನಡೆದ ಅತಿರುದ್ರ ಜಪಯಜ್ಞವು ಯಶಸ್ವಿಯಾಗಿ ನಡೆಯಲು ನೂರಾರು ಮಂದಿ ಆಸ್ತಿಕರು ಸಹಕಾರ ನೀಡಿರುವುದು ಮಾದರಿಯಾದ ಕಾರ್ಯವಾಗಿದೆ. ಅವಧೂತರಾದ ಶ್ರೀಶ್ರೀ ಕಾಂತಾನಂದ ಸರಸ್ವತಿ ಮಹಾರಾಜರು ಸಂಕಲ್ಪಿಸಿರುವ ಧಾರ್ಮಿಕತೆ ಕೊಡಗು ಮತ್ತು ಕರ್ನಾಟಕದ ಜನತೆಯ ಸೌಭಾಗ್ಯವಾಗಿದೆ. ಈ ಜಪಯಜ್ಞ ಎಲ್ಲಾ ಋತ್ವಿಜರಿಗೂ ಅಲೌಕಿಕವಾದ ಅನುಭವವನ್ನು ತಂದುಕೊಟ್ಟಿದೆ ಎಂದು ನಾಗರಾಜ್ ತಿಳಿಸಿದರು.
ಮಡಿಕೇರಿ NEWS DESK ಮೇ 18 : ನಾಡಿನ ಗತ ಇತಿಹಾಸವನ್ನು ಪುಷ್ಠೀಕರಿಸುವ ಮೂಲಕ, ರಾಜ ವಂಶಸ್ಥರ ಆಳ್ವಿಕೆಯ ಮೇಲೆ ಬೆಳಕು ಚೆಲ್ಲುವ ‘ಪ್ರಾಚೀನ ನಾಣ್ಯ ಮತ್ತು ನೋಟು’ಗಳ ಪ್ರದರ್ಶನ ನಗರದ ಕೋಟೆಯ ಆವರಣದ ವಸ್ತುಸಂಗ್ರಹಾಲಯದಲ್ಲಿ ಅತ್ಯಪೂರ್ವವಾಗಿ ನಡೆಯಿತು. ‘ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ’ಯ ಅಂಗವಾಗಿ ದಿ ಫ್ಯೂಚರ್ ಆಫ್ ಮ್ಯೂಸಿಯಂ ಇನ್ ರ್ಯಾಪಿಡ್ಲಿ ಚೇಜಿಂಗ್ ಕಮ್ಯುನಿಟೀಸ್ ಘೋಷವಾಕ್ಯದಡಿ, ಖ್ಯಾತ ನಾಣ್ಯ ನೊಟು ಸಂಗ್ರಹಕಾರರಾದ ಹುಣಸೂರು ಪಿ.ಕೆ.ಕೇಶವಮೂರ್ತಿ ಅವರ 169ನೇ ‘ಪ್ರಾಚೀನ ನಾಣ್ಯ-ನೋಟುಗಳ ಪ್ರದರ್ಶನ’ ಕುತೂಹಲಕಾರಿಯಾಗಿ ಮೂಡಿ ಬಂದು ನೂರಾರು ಸಂಖ್ಯೆಯ ಜನರನ್ನು ಆಕರ್ಷಿಸಿತು. ಪ್ರಾಚೀನ ನಾಣ್ಯ ಮತ್ತು ನೋಟುಗಳ ಪ್ರದರ್ಶನವನ್ನು ನಾಡಿನ ಖ್ಯಾತ ವೈದ್ಯರು ಹಾಗೂ ನಾಣ್ಯ ಸಂಗ್ರಹಕಾರರೂ ಆಗಿರುವ ಡಾ. ಎಂ.ಜಿ.ಪಾಟ್ಕರ್ ಮತ್ತು ವಿಜಯಲಕ್ಷೀ ಪಾಟ್ಕರ್ ಅವರು ಉದ್ಘಾಟಿಸಿದರು. ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಬಿ.ಪಿ.ರೇಖಾ ಉಪಸ್ಥಿತರಿದ್ದರು. ಪಂಚ್ ಮಾರ್ಕ್ ನಾಣ್ಯಗಳು- ನಾಣ್ಯ ಸಂಗ್ರಹಣೆಯಲ್ಲಿ ಪಂಚ್ ಮಾರ್ಕ್ ನಾಣ್ಯಗಳಿಗೆ ವಿಶೇಷ ಸ್ಥಾನ. ಇವು ಸರಿ ಸುಮಾರು ಕ್ರಿಸ್ತ ಪೂರ್ವ 6…
ಮಡಿಕೇರಿ NEWS DESK ಮೇ 18 : ಲೋಕಕಲ್ಯಾಣಾರ್ಥವಾಗಿ ಶ್ರೀಶ್ರೀ ಕಾಂತಾನAದ ಸರಸ್ವತಿ ಮಹಾರಾಜರು ಸಂಕಲ್ಪಿಸಿರುವಂತೆ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ 11 ದಿನಗಳ ಕೋಟ್ಯಧಿಕ ಶ್ರೀರುದ್ರ ಜಪಯಜ್ಞ ಯಶಸ್ವಿಯಾಗಿ ಮುಂದುವರೆದಿದ್ದು, ಇದು ಕಾವೇರಿ ನಾಡಿನ ಸೌಭಾಗ್ಯ ಎಂದು ಜಪಯಜ್ಞ ಪ್ರತಿನಿಧಿ ಎಸಳೂರು ಉದಯಕುಮಾರ್ ತಿಳಿಸಿದ್ದಾರೆ. ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಪ್ರಾಂಗಣದಲ್ಲಿ ಶ್ರೀ ರುದ್ರ ಜಪ ಕೈಂಕರ್ಯದ ನಂತರ ಮಾತನಾಡಿದ ಅವರು ಈ ಜಪಯಜ್ಞದಲ್ಲಿ ನಾಡಿನ ವಿವಿಧೆಡೆಯ 30ಕ್ಕೂ ಅಧಿಕ ಋತ್ವಿಜರು ಪಾಲ್ಗೊಂಡು ಪ್ರತಿದಿನವೂ ತ್ರಿಕಾಲದಲ್ಲಿ ಜಪ ಮಾಡಿರುವುದರಿಂದ ನಾಡಿಗೆ ಕಲ್ಯಾಣವಾಗಲಿದೆ ಎಂದರು. ಮೇ 20 ರಂದು ಮಡಿಕೇರಿಯ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಶ್ರೀ ರುದ್ರ ಹೋಮ ನಡೆಯಲಿದೆ. 21ರಂದು ಕಾವೇರಿ ತೀರದಲ್ಲಿರುವ ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರೀ ಚಂಡಿಕಾ ಹೋಮ ಹಾಗೂ ಜಪಯಜ್ಞದ ಸಮಾರೋಪ ನಡೆಯಲಿದೆ. ಇಲ್ಲಿಗೆ ಅವಧೂತ ಶ್ರೀ ಕಾಂತಾನAದ ಸರಸ್ವತಿ ಮಹಾರಾಜರು ಆಗಮಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು. ಶ್ರೀಭಗಂಡೇಶ್ವರ ದೇವಾಲಯದ…
ಮಡಿಕೇರಿ NEWS DESK ಮೇ 18 : ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು ಗ್ರಾಮದ ನಿವಾಸಿ ಗುತ್ತಿಗೆದಾರ ಸಂಪತ್ ಶಂಭು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಸೋಮವಾರಪೇಟೆಯ ಹಾನಗಲ್ಲು ಗ್ರಾಮದ ಕಿರಣ್ ಬಿ.ಎಂ (44), ಚೌಡ್ಲು ಗ್ರಾಮದ ಗಣಪತಿ ಪಿ.ಎಂ (44) ಹಾಗೂ ಹಾನಗಲ್ಲು ಗ್ರಾಮದ ಕಿರಣ್ ನ ಪತ್ನಿ ಸಂಗೀತ ಬಂಧಿತ ಆರೋಪಿಗಳು. ಕೃತ್ಯಕ್ಕೆ ಬಳಸಿದ ಕೋವಿ, ಕತ್ತಿ, ದೊಣ್ಣೆ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯ ಎಸಗಲು ಆರೋಪಿಗಳಿಗೆ ಸಹಕರಿಸಿದ ಮತ್ತು ಆರೋಪಿಗಳಾದ ಕಿರಣ್ ಹಾಗೂ ಗಣಪತಿ ತಲೆಮರೆಸಿಕೊಳ್ಳಲು ಸಹಕರಿಸಿದ ಇತರೆ ಆರೋಪಿಗಳನ್ನು ಆದಷ್ಟು ಶೀಘ್ರ ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೇ 9 ರಂದು ತಮ್ಮ ಸ್ನೇಹಿತ ಜಾನ್ ಪೌಲ್ ಅವರ ಕಾರನ್ನು ಕೋರಿಕೆಯ ಮೇರೆಗೆ ತೆಗೆದುಕೊಂಡು ಹೋಗಿದ್ದ ಸಂಪತ್ ಅವರು ಮೇ 10 ರ ರಾತ್ರಿಯಾದರು ಬಾರದೆ ಇದ್ದಾಗ ಕುಶಾಲನಗರ ಪಟ್ಟಣ ಪೊಲೀಸ್…
ಮಡಿಕೇರಿ NEWS DESK ಮೇ 18 : ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಭಯೋತ್ಪಾದಕರ ವಿರುದ್ಧ ದಿಗ್ವಿಜಯ ಸಾಧಿಸಿದ ಭಾರತೀಯ ಸೇನೆಗೆ ಗೌರವ ಸಮರ್ಪಿಸಲು ಇದೇ ಮೇ 23 ರಂದು ಬೆಳಿಗ್ಗೆ 10.30 ಗಂಟೆಗೆ ಮಡಿಕೇರಿಯಲ್ಲಿ ಸಿಂಧೂರ ವಿಜಯೋತ್ಸವ ಮೆರವಣಿಗೆ ನಡೆಯಲಿದೆ. ಶುಕ್ರವಾರ ನಗರದಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಕೊಡಗು ಜಿಲ್ಲಾ ಸಿಂಧೂರ ವಿಜಯೋತ್ಸವ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಮಹದೇವಪೇಟೆಯ ಬನ್ನಿ ಮಂಟಪದಿಂದ ಗಾಂಧಿ ಮೈದಾನದವರೆಗೆ ನಡೆಯುವ ಬೃಹತ್ ಮೆರವಣಿಗೆಯಲ್ಲಿ ಪ್ರತಿ ಮನೆಯ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಆ ಮೂಲಕ ನಮ್ಮೆಲ್ಲರ ನೆಮ್ಮದಿಗಾಗಿ ಹಗಲಿರುಳು ದೇಶ ಕಾಯುತ್ತಿರುವ ಸೈನಿಕರಿಗೆ ಮನಃಪೂರ್ವಕವಾಗಿ ಗೌರವ ಮತ್ತು ಧನ್ಯವಾದ ಸಮರ್ಪಿಸೋಣ ಎಂದು ಸಮಿತಿ ಮನವಿ ಮಾಡಿದೆ.






