ಗೋಣಿಕೊಪ್ಪ ಏ.10 NEWS DESK : ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ಎನ್.ಕೆ.ಜಯಶ್ರೀ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಶಾಲೆಯ ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿ ವತಿಯಿಂದ ಬೀಳ್ಕೊಡಲಾಯಿತು. ಸಹ ಶಿಕ್ಷಕರು ವಿವಿಧ ಉಡುಗೊರೆಗಳನ್ನು ನೀಡುವ ಮೂಲಕ ಜಯಶ್ರೀ ಅವರ ನಿವೃತ್ತ ಜೀವನಕ್ಕೆ ಶುಭಕೋರಿದರು. ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆ.ಕುಮಾರ್ ಮಾರ್ಗದರ್ಶನದಲ್ಲಿ ಸಮಾರಂಭ ನಡೆಯಿತು. ಸನ್ಮಾನಿಸಿ ಮಾತನಾಡಿದ ಮುಖ್ಯ ಶಿಕ್ಷಕ ಕುಮಾರ್, ಕಳೆದ 20 ವರ್ಷಗಳಿಂದ ಶಾಲೆಯಲ್ಲಿ ವಿದ್ಯಾದಾನ ಮಾಡುವ ಮೂಲಕ ಸರ್ವ ಶ್ರೇಷ್ಠವಾದ ಕಾರ್ಯವನ್ನು ನಡೆಸಿದ್ದಾರೆ. ನಿವೃತ್ತಿ ಜೀವನವು ಅಷ್ಟೇ ಸುಂದರವಾಗಿ ನಡೆಯಲಿ ಎಂದು ಹೇಳಿದರು. ಶಾಲಾ ಮೇಲುಸ್ತುವಾರಿ ಮತ್ತುಅಭಿವೃದ್ದಿ ಸಮಿತಿಅಧ್ಯಕ್ಷಜಗದೀಶ್ಜೋಡುಬೀಟಿ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರಗಳನ್ನು ಬಿತ್ತುವ ಮೂಲಕ ಅವರ ಸುಂದರಜೀವನವನ್ನುಕಟ್ಟಿಕೊಡುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದಾಗಿದೆ. ಅಂತಹಜವಾಬ್ದಾರಿಯನ್ನು ನಿಭಾಯಿಸಿದ ಶಿಕ್ಷಕಿ ಜಯಶ್ರೀ ಅವರ ನಿವೃತ್ತಿಜೀವನದ ಬದುಕು ಶಾಂತಿಯುತವಾಗಿ ನಡೆಯಲಿ ಎಂದು ಹಾರೈಸಿದರು. ಸೇವಾ ನಿವೃತ್ತಿ ಹೊಂದಿದ ಶಿಕ್ಷಕಿ…
ಲೇಖಕ: admin
ಸೋಮವಾರಪೇಟೆ ಏ.10 NEWS DESK : ಸೋಮವಾರಪೇಟೆ ಪಟ್ಟಣದ ಸಂತಜೋಸೆಫರ ಪಿಯು ಕಾಲೇಜು ಶೇ.100 ರ ಫಲಿತಾಂಶ ಗಳಿಸಿದೆ. ವಿಜ್ಞಾನದ ವಿಭಾಗದಲ್ಲಿ 28 ಮತ್ತು ವಾಣಿಜ್ಯ ವಿಭಾಗದಲ್ಲಿ 70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 26 ವಿದ್ಯಾರ್ಥಿಗಳು ಉತ್ತಮ ದರ್ಜೆ, 67 ವಿದ್ಯಾರ್ಥಿಗಳು ಪ್ರಥಮ, 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಜಿ.ಆರ್. ಸಾನಿಕ 600ಕ್ಕೆ 571 ಅಂಕಗಳು(ಶೇ.95.16), ಸಿ.ಪಿ.ವರ್ಷಾ 555(92.5),ಡಿ.ಡಿ. ಐಶ್ಚರ್ಯ 541(90.16), ವಾಣಿಜ್ಯ ವಿಭಾಗದಲ್ಲಿ ಇಂಪಾ 573(95.5), ಜಿ.ಆರ್.ಮಿಲನ 565(94.17), ಎ.ಪಿ.ಲೀಲಾ 553(92.16) ಅಂಕ ಗಳಿಸಿದ್ದಾರೆ. ವಿಶ್ವಮಾನವ ವಿದ್ಯಾಸಂಸ್ಥೆಯ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ.100ರಷ್ಟು ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ ಶೇ.98 ರಷ್ಟು ಫಲಿತಾಂಶ ದೊರೆತ್ತಿದೆ. ವಿಜ್ಞಾನ ವಿಭಾಗದಲ್ಲಿ ಎಚ್.ಎನ್.ಪವನ್ 586(ಶೇ.98), ಎಚ್.ಆರ್.ಜೀವಿತ 565(94.16), ಧನ್ಯಶ್ರೀ 564(94), ಇಬ್ಬನಿ ವಿ ಗೌಡ 557(92.8), ವಾಣಿಜ್ಯ ವಿಭಾಗದಲ್ಲಿ ಜಿ.ಜಿ.ಮನಿಷಾ 581(96.18), ಕೆ.ಎಸ್.ಮನಿಷಾ 575(95.8), ಸಿ.ಎಂ. ನಿಕಿಲ್ 568(94.18) ಅಂಕಗಳಿಸಿದ್ದಾರೆ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ…
ಮಡಿಕೇರಿ ಏ.10 NEWS DESK : ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ಕಾಲೇಜಿನ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಅಧ್ಯಯನ (ಎಐ & ಎಂಎಲ್) ವಿಭಾಗದಲ್ಲಿ “ಕೃತಕ ಬುದ್ಧಿಮತ್ತೆ – ಒಬ್ಬ ನಿಜವಾದ ಎಂಜಿನಿಯರ್ ಏನು ಮಾಡುತ್ತಾನೆ?” ಎಂಬ ವಿಷಯದಡಿ ವಿಶೇಷ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಖ್ಯಾತ ತಂತ್ರಜ್ಞಾನ ಉದ್ಯಮಿ ಎಚ್. ರಾಮ್ ಪ್ರಕಾಶ್ ಅವರು “ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಈ ಯುಗದಲ್ಲಿ ಪ್ರತಿಯೊಬ್ಬರೂ ಕೃತಕ ಬುದ್ಧಿಮತ್ತೆಯನ್ನು ಕಲಿಯಬೇಕು, ಅದನ್ನು ಅಭ್ಯಾಸ ಮಾಡಬೇಕು ಮತ್ತು ಅದರೊಂದಿಗೆ ಬದುಕಲು ಕಲಿಯಬೇಕು. ಕೃತಕ ಬುದ್ಧಿಮತ್ತೆ ಮಾನವನಿಗೆ ಬೆದರಿಕೆ ಅಲ್ಲ; ಸರಿಯಾದ ರೀತಿಯಲ್ಲಿ ಬಳಸಿದರೆ ಅದು ಮಾನವ ಜೀವನವನ್ನು ಸುಧಾರಿಸುತ್ತದೆ,” ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಸವರಾಜ್, “ಕೃತಕ ಬುದ್ಧಿಮತ್ತೆ ನಮ್ಮನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು,” ಎಂದು ಹೇಳಿದರು. ಎಐ…
ಮಡಿಕೇರಿ ಏ.10 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.10 ರಂದು ಗೆಲುವು ಸಾಧಿಸಿದ ತಂಡಗಳು. *ಮೈದಾನ 1* ಆಚೆಯಡ ಮತ್ತು ಕರಿನೆರವಂಡ ತಂಡಗಳ ನಡುವಿನ ಪಂದ್ಯದಲ್ಲಿ ಕರಿನೆರವಂಡ 42 ರನ್ ಗಳಿಂದ ಜಯ ಗಳಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರಿನೆರವಂಡ ತಂಡ 6 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 119 ರನ್ ಗಳನ್ನು ಗಳಿಸಿತು. ಆಚೆಯಡ 6 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 77 ರನ್ ಗಳನ್ನಷ್ಟೇ ಸೇರಿಸಿ ಸೋಲೊಪ್ಪಿಕೊಂಡಿತು. ಕಾಟಿಮಾಡ ಮತ್ತು ಬೊಳ್ಳೆಪಂಡ ನಡುವಿನ ಹಣಾಹಣಿಯಲ್ಲಿ ಬೊಳ್ಳೆಪಂಡ ತಂಡ 6 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕಾಟಿಮಾಡ 6 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 89 ರನ್ ಗಳನ್ನು ಸೇರಿಸಿತು. ಬೊಳ್ಳೆಪಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 90…
ಮಡಿಕೇರಿ NEWS DESK ಏ.10 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.11ರ ಪಂದ್ಯಗಳು. *ಮೈದಾನ 1* ಬೆಳಿಗ್ಗೆ 9 ಗಂಟೆಗೆ ಕಟ್ಟೇರ (ಅರಮೇರಿ) ಮತ್ತು ಅಮ್ಮಾಟಂಡ, 10ಕ್ಕೆ ಪಾಲಂದಿರ ಮತ್ತು ಹೊಟ್ಟೆಂಗಡ, 11ಕ್ಕೆ ಕಾಳಚಂಡ ಮತ್ತು ಚಾರಿಮಂಡ, ಮಧ್ಯಾಹ್ನ 12ಕ್ಕೆ ಆಪಟ್ಟಿರ ಮತ್ತು ಮಲ್ಚಿರ, 1ಕ್ಕೆ ತಂಬುಕ್ಕುತ್ತಿರ ಮತ್ತು ಚೆಟ್ಟಿಯಾರಂಡ, 2ಕ್ಕೆ ಸಣ್ಣುವಂಡ ಮತ್ತು ಕುಪ್ಪಂಡ (ನಾಂಗಾಲ), 3ಕ್ಕೆ ಉದ್ದಪ್ಪಂಡ ಮತ್ತು ತಾಚಮಂಡ (ಗರ್ವಾಲೆ) ಹಾಗೂ 4 ಗಂಟೆಗೆ ಬೊಜ್ಜಂಗಡ ಮತ್ತು ಅವರೆಮಾಡಂಡ *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಪರುವಂಡ ಮತ್ತು ನಾಯಕಂಡ, 10ಕ್ಕೆ ಪುದಿಯಂಡ ಮತ್ತು ಬೇರೆರ, 11ಕ್ಕೆ ಮುಂಡೋಟಿರ ಮತ್ತು ಕಾಡ್ಯಮಾಡ, ಮಧ್ಯಾಹ್ನ 12ಕ್ಕೆ ಕರ್ತಮಾಡ ಮತ್ತು ನಾಪಂಡ (ಕಾರುಗುಂದ), 1ಕ್ಕೆ ಚಂಗುಲoಡ ಮತ್ತು ಕೋಡಿಮಣಿಯಂಡ, 2ಕ್ಕೆ ಮಾದೇಟಿರ ಮತ್ತು ಕುಡ್ರಂಡ ಹಾಗೂ 3ಗಂಟೆಗೆ ಪುದಿಯತಂಡ ಮತ್ತು ಕರವಂಡ
ಕುಶಾಲನಗರ ಏ.9 NEWS DESK : ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್.ಬಿ.ಚಂದ್ರಪ್ಪ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಎರಡು ಮಂದಿ ನಾಮಪತ್ರಗಳನ್ನು ಸಲ್ಲಿಸಿದರು. ನಂತರ ನಡೆದ ಚುನಾವಣೆಯಲ್ಲಿ ಒಟ್ಟು 12 ಮಂದಿ ನಿರ್ದೇಶಕರು ಹಾಜರಿದ್ದು , ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೆಚ್.ಬಿ.ಚಂದ್ರಪ್ಪ ಅವರಿಗೆ 7 ಮತಗಳು, ಪ್ರತಿಸ್ಪರ್ಧಿ ಕೆ.ಎಂ.ಪ್ರಸನ್ನ ಅವರಿಗೆ 5 ಮತಗಳು ಬಂದವು. ಚುನಾವಣಾ ಅಧಿಕಾರಿಯಾಗಿ ಸೋಮವಾರಪೇಟೆ ತಾಲ್ಲೂಕಿನ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಅಧಿಕಾರಿ ಪಿ. ಬಿ. ಮೋಹನ್ ಕಾರ್ಯನಿರ್ವಹಿಸಿದರು. ಸಂಘದ ಹಿರಿಯ ಸಹಕಾರಿ ಎಂ.ಎನ್.ಕುಮಾರಪ್ಪನವರು ನಿಧನದಿಂದಾಗಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಚಂದ್ರಕಲಾ, ನಿರ್ದೇಶಕರಾದ ಬಿ.ಎಂ.ಪಾರ್ವತಿ, ಕೆ.ಎಸ್.ಮಂಜುನಾಥ್, ಎನ್.ಸಿ.ಪೊನ್ನಪ್ಪ, ಹೆಚ್.ಜೆ.ಶರತ್, ಬಿ.ಸಿ.ಮಲ್ಲಿಕಾರ್ಜುನ, ಹೆಚ್.ಡಿ.ನಂದಕುಮಾರ್, ಡಿ.ಕೆ.ಗಂಗಾಧರ್, ಹೆಚ್.ಎನ್.ಮಹಾದೇವ ಹಾಗೂ ಡಿಸಿಸಿ ಬ್ಯಾಂಕಿನ ಪ್ರತಿನಿಧಿ ಜಲಜಾ ಶೇಖರ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಜಗದೀಶ್ ಹಾಜರಿದ್ದರು.
ಬೈಲಕೊಪ್ಪಾ ಏ.9 NEWS DESK : ಸಿದ್ದಾರ್ಥ ಗ್ಯಾಸ್ ಗೋದಾಮು ಘಟಕಕ್ಕೆ ಮಂಗಳೂರಿನ ಬಿಪಿಸಿಎಲ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಗ್ರಾಹಕರಿಗೆ ಗೃಹ ಬಳಕೆಯ ಸಿಲಿಂಡರ್ ಸರಬರಾಜಿನಲ್ಲಿ ಸಮಸ್ಯೆ ಇಲ್ಲ. ಹಾಗಾಗಿ ಯಾವುದೇ ಗ್ರಾಹಕರು ಭಯಭೀತರಾಗುವ ಅಗತ್ಯವಿಲ್ಲ. ಹಾಗೂ ಭಯಪೀಡಿತರಾಗಿ ಮುಂಗಡ ಬುಕ್ಕಿಂಗ್ ಮಾಡುವ ಅಗತ್ಯವೇ ಇಲ್ಲ ಎಂದು ಬಿಪಿಸಿಎಲ್ ಉಪವಿಭಾಗ ಅಧಿಕಾರಿ ಸಂದೀಪ್ ರೈನಾ ತಿಳಿಸಿದ್ದಾರೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಕಳೆದ 40 ದಿನಗಳಿಂದ ನಡೆಯುತ್ತಿದ್ದ ಯುದ್ಧ ದಿಂದಾಗಿ ಭಾರತ ದೇಶಕ್ಕೆ ಸರಬರಾಜು ಆಗುತ್ತಿದ್ದ ಗ್ಯಾಸ್ ಸರಬರಾಜು ಆರಂಭದಲ್ಲಿ ಒಂದಷ್ಟು ವಿಳಂಭ ವಾಗಿದ್ದುದು ಸರಿಯಷ್ಟೆ. ಆದರೆ ಈಗ ಆ ಸಮಸ್ಯೆ ಬಗೆಹರಿದಿದೆ. ಸಿದ್ದಾರ್ಥ ಗ್ಯಾಸ್ ಸಂಪರ್ಕ ಪಡೆದಿರುವ ಹಾರನಹಳ್ಳಿ ಹಾಗೂ ಬೈಲಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿನ ಗ್ರಾಹಕರು ಗ್ಯಾಸ್ ಸಿಲಿಂಡರ್ ಪಡೆಯಲು ಭಯಪಡುವ ಅಗತ್ಯವಿಲ್ಲ. ಸಕಾಲಕ್ಕೆ ಸಿಲಿಂಡರ್ ದೊರಕಲ್ಲಾ ಎಂಬ ಆತಂಕವೂ ಬೇಡ. ಹಲವು ಗ್ರಾಹಕರು ಭಯಭೀತರಾಗಿ ಮುಗಿಬಿದ್ದು ಗ್ಯಾಸ್ ಬುಕ್ಕಿಂಗ್ ಮಾಡುತ್ತಿದ್ದ ಕಾರಣ ನೈಜ ಗ್ರಾಹಕರಿಗೆ ಒಂದಷ್ಟು ಅನಾನುಕೂಲ…
ವಿರಾಜಪೇಟೆ ಏ.9 NEWS DESK : ವಿರಾಜಪೇಟೆ ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸಂತ ಅನ್ನಮ್ಮ ಪಿ.ಯು ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸಾಧನೆಯನ್ನು ಮಾಡಿದ್ದು, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶವನ್ನು ಪಡೆದಿದೆ. ವಿಜ್ಞಾನ ವಿಭಾಗದಲ್ಲಿ 41 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 49 ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಉತ್ತೀರ್ಣ ರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 48 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 78 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ಮೂವರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಉತ್ತೀರ್ಣ ರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಜೆಸಿಕಾ ಎನ್. ಎಸ್. ಶೇ.97.67 ಅಂಕಗಳೊಂದಿಗೆ ಪ್ರಥಮ ಸ್ಥಾನ, ಪಿ.ಕೆ.ರಕ್ಷಿತ್ 95.83% ದ್ವಿತೀಯ ಸ್ಥಾನ, ಹಾಗೂ ತೇಜಸ್ವಿನಿ ಟಿ.ಎಂ ಶೇ.95.33 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ನಿಶಿಕ ದೇಚಮ್ಮ ಎಂ.ಎಲ್. ಶೇ.98 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ, ಕೆ. ಜೆ. ಮೇಘ ಶೇ.97.33 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಹರ್ಷಿತಾ ಎಸ್ …
ಮಡಿಕೇರಿ ಏ.9 NEWS DESK : ಮಡಿಕೇರಿ ನಗರದ ಕನ್ನಂಡಬಾಣೆ ನಿವಾಸಿಗಳು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರನ್ನು ಭೇಟಿ ಮಾಡಿ ತಡೆಗೋಡೆ ನಿರ್ಮಿಸುವಂತೆ ಮನವಿ ಸಲ್ಲಿಸಿದರು. ಕನ್ನಂಡಬಾಣೆಗೆ ಸುಸಜ್ಜಿತವಾದ ಕಾಂಕ್ರೀಟ್ ರಸ್ತೆ ನಿರ್ಮಿಸಿದ ಹಿನ್ನಲೆಯಲ್ಲಿ ಧನ್ಯವಾದಗಳನ್ನು ಸಲ್ಲಿಸಿದ ನಿವಾಸಿಗಳು ರಸ್ತೆಯ ಅಂಚಿನಲ್ಲಿ(ಕನ್ನಂಡಬಾಣೆ ಕೃಷ್ಣ ಲೈನ್ ದಾರಿ) ಅಪಾಯಕಾರಿ ತಿರವು ಇದ್ದು ವಾಹನಗಳು ಗುಂಡಿಗೆ ಬೀಳುವ ಸಾಧ್ಯತೆ ಹೆಚ್ಚಿರುವುದರಿಂದ ತಡಗೋಡೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಮನವಿಯನ್ನು ಆಲಿಸಿದ ಶಾಸಕರು ಈ ವರ್ಷದ ತಮ್ಮ ಶಾಸಕರ ನಿಧಿಯಿಂದ ತಡೆಗೋಡೆ ನಿರ್ಮಿಸಿಕೊಡುವ ಭರವಸೆ ನೀಡಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರೊಂದಿಗೆ ತೆರಳಿದ ನಿಯೋಗದಲ್ಲಿ ದೇವಯ್ಯ, ಪಿ.ಎಂ.ಜಗದೀಶ್,ಬಾಳಾಡಿ ಪ್ರತಾಪ್ ಕುಮಾರ್,ಪ್ರಸನ್ನ, ಭರತ್, ಯತೀನ್ ಮತ್ತಿತರರು ಉಪಸ್ಥಿತರಿದ್ದರು.
ಮಡಿಕೇರಿ ಏ.9 NEWS DESK : ನಗರದ ನಗರಸಭೆ ಆವರಣದಲ್ಲಿರುವ ಹಳೆಯ ಕಾವೇರಿ ಕಲಾಕ್ಷೇತ್ರ(ಟೌನ್ ಹಾಲ್) ಕಟ್ಟಡವನ್ನು ತೆರವುಗೊಳಿಸಿ ಸುಸಜ್ಜಿತವಾದ ಎರಡು ಅಂತಸ್ತಿನ ವಾಹನ ನಿಲುಗಡೆ ಹಾಗೂ 450 ಆಸನ ಒಳಗೊಂಡ ಸಭಾಭವನ ಕಟ್ಟಡ ನಿರ್ಮಾಣಕ್ಕೆ ಶಾಸಕರಾದ ಡಾ.ಮಂತರ್ ಗೌಡ ಅವರು ಗುರುವಾರ ಭೂಮಿ ಪೂಜೆ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚುರಂಜನ್, ಎಂ.ಸಿ.ನಾಣಯ್ಯ, ನಗರಸಭೆ ಉಪಾಧ್ಯಕ್ಷರಾದ ಮಹೇಶ್ ಜೈನಿ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಮಂದ್ರೀರ ಮೋಹನ್ದಾಸ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಾಳಚಂಡ ಅಪ್ಪಣ್ಣ, ಎಸ್.ಸಿ.ಸತೀಶ್, ಅರುಣ್ ಶೆಟ್ಟಿ, ಶಾರದಾ ನಾಗರಾಜ್, ನಗರಸಭೆ…






