ಲೇಖಕ: admin

ಮಡಿಕೇರಿ, NEWS DESK ಫೆ.13:-ತಾಲ್ಲೂಕಿನ ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 100 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಶುಕ್ರವಾರ ಚಾಲನೆ ನೀಡಿದರು. ಕಾಟಕೇರಿ ಬಳಿಯ ಕಾಸ್ಪಾಡಿ ರಸ್ತೆ, ಭಗವತಿ ದೇವಸ್ಥಾನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ, ಅಪ್ಪೇಂದ್ರೀಯಪ್ಪ ದೇವಸ್ಥಾನ ರಸ್ತೆ ಉದ್ಘಾಟನೆ, ಕಾಟಕೇರಿ ಗೋಳಿಕಟ್ಟೆ ಮುಖ್ಯ ರಸ್ತೆ, ಮದೆನಾಡು ಬೈರೆಟ್ಟಿರ ಜಂಕ್ಷನ್ ರಸ್ತೆ ಮತ್ತು ಮದೆನಾಡು ಮಠದ ಮನೆ ರಸ್ತೆಯನ್ನು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಉದ್ಘಾಟಿಸಿದರು. ಬಳಿಕ ಗೋಳಿಕಟ್ಟೆ ಸರ್ಕಾರಿ ಶಾಲೆ ಪರಿಶೀಲಿಸಿದರು, ಕೋಲ್ಪೆ ದೈವಸ್ಥಾನ ರಸ್ತೆ ಉದ್ಘಾಟಿಸಿದರು. ಹಾಗೆಯೇ ದೇಶ್‍ಕೋಡಿ, ಸಾಲಾಪು ರಸ್ತೆ ಭೂಮಿ ಪೂಜೆ ನೆರವೇರಿಸಿದರು. ನಂತರ ಕೋಲ್ಚಾರು ರಸ್ತೆ ಉದ್ಘಾಟನೆ, ಕೆಮ್ಮಾರನ ಶಿರಾಜ್ ರಸ್ತೆ ಉದ್ಘಾಟಿಸಿದರು. ಬಳಿಕ ನೆರಿಯನ ಐನ್‍ಮನೆಗೆ ಭೇಟಿ ನೀಡಿದರು, ಹಾಗೆಯೇ ಈಶ್ವರಪ್ಪ ಮಾದೂರಪ್ಪ ರಸ್ತೆ ಉದ್ಘಾಟಿಸಿದರು. ಜೋಡುಪಾಲ ಕಿರಿಕಿಲ್ ರಸ್ತೆ ಭೂಮಿಪೂಜೆ, ಅಬ್ಬಿಕೊಲ್ಲಿ ರಸ್ತೆ ಉದ್ಘಾಟಿಸಿದರು. ಕುಡಿಯರ ಕಾಲೋನಿಯಲ್ಲಿ…

Read More

ಕೊಡಗಿನ ಮಳೆಬೆಳೆಗಳ ವರದಾತ, ಭಕ್ತರ ರಕ್ಷಕ, ಭವರೋಗ ನಿವಾರಕನೆಂದೇ ಖ್ಯಾತಿವೆತ್ತ ಪಾಡಿ ಶ್ರೀ ಇಗ್ಗುತಪ್ಪ ದೇವರ *ಕುಂಬ್ಯಾರ್ ಕಲಾಡ್ಚ ವಾರ್ಷಿಕೋತ್ಸವವು* ಇದೇ ಮಾರ್ಚ್ 2 ರ ಸೋಮವಾರ ವಿಜ್ರಂಭಣೆಯಿಂದ ನಡೆಯಲಿದೆ ಎಂದು ತಕ್ಕಮುಖ್ಯಸ್ಥ ರು ಹಾಗು ಭಕ್ತ‌ಜನ ಸಂಘದ ಪಧಾಧಿಕಾರಿಗಳು ತಿಳಿಸಿದ್ದಾರೆ. *ದೇವಕಟ್ಟು* ಈ ಪ್ರಯುಕ್ತ ಇದೇ ಫೆಬ್ರವರಿ 17 ರಂದು ಮಂಗಳವಾರ ಅಮಾವಾಸ್ಯೆಯ ದಿನದಂದು ಅಪರಾಹ್ನ ಆದಿಸ್ಥಾನ “ಮಲ್ಮ” ದಲ್ಲಿ ಸಂಪ್ರದಾಯದಂತೆ ದೇವರ ಕಟ್ಟುಬೀಳಲಿದೆ.(ನಾಲ್ಕು ನಾಡಿಗೆ ಸೀಮಿತ). ಹಾಗಾಗಿ ಹಬ್ಬ ಸಂಪನ್ನವಾಗುವತನಕ ಯಾವುದೇ ತುಲಾಭಾರ ಸೇವೆ , ನಾಮಕರಣ, ವಿಶೇಷ ಪೂಜೆಗಳು ನಡೆಯುವದಿಲ್ಲ . ಮಾರ್ಚ್ 2ರ ಸೋಮವಾರ ಬೆಳಿಗ್ಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರು ಹಾಗು ಬಟ್ಯತ್ ವಕ್ಕ ಪೇರಿಯಂಡ ಕುಟುಂಬಸ್ತರ ಹಾಗೂ ಸಂಭಂದಪಟ್ಟ ಇತರ ಕುಟುಂಬಸ್ಥರ ಐನ್ಮನೆಗಳಿಂದ ಜೋಡೆತ್ತು ಪೋರಾಟ,ಪಾಲ್ ಬೈಯ್ಯಾಡ್ ನೊಂದಿಗೆ ಶಾಸ್ತ್ರೋಕ್ತ ವಾಗಿ ಬಂದು ದೇವಳ ತಲುಪುವುದರೊಂದಿಗೆ ಕಲಾಡ್ಚ ಹಬ್ಬ ಪ್ರಾರಂಭವಾಗುವುದು. ಮದ್ಯಾಹ್ನ ನಿತ್ಯ ಪೂಜೆಯೊಂದಿಗೆ ಪ್ರಸಾದವಿತರಣೆ ಹಾಗು ಅನ್ನ ಸಂತರ್ಪಣೆ ನೆರವೇರಲಿದೆ. ನಂತರ ಚಂಡೆ…

Read More

ಮಡಿಕೇರಿ NEWS DESK ಫೆ.13 :  ಬ್ರೈನೋಬ್ರೈನ್  ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ನಡೆದ “16ನೇ ಅಂತರಾಷ್ಟ್ರೀಯ ಮಟ್ಟದ ಆನ್‌ಲೈನ್  ಬ್ರೈನೋಬ್ರೈನ್  ಸ್ಪರ್ಧೆ-2026” ರಲ್ಲಿ ಮಡಿಕೇರಿಯ  ʼಬ್ರೈನೋಬ್ರೈನ್” ಕೇಂದ್ರದ 101 ವಿದ್ಯಾರ್ಥಿಗಳು ಕೇವಲ 4 ನಿಮಿಷಗಳಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮಾಡಿ ಪದಕ ಗೆದ್ದಿದ್ದಾರೆ. ಸ್ಪರ್ಧೆಯಲ್ಲಿ 30 ಚಾಂಪಿಯನ್ ಟ್ರೋಫಿ, 37 ಚಿನ್ನದ ಪದಕ ಮತ್ತು 34 ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. *ಚಾಂಪಿಯನ್ ಟ್ರೋಫಿ ವಿಜೇತರು* ಸೋನ್ಹ್ ಸೋಮಣ್ಣ ಪಿ.ಸಿ, ಅನ್ವಿತ್ ಎಸ್, ಆರುಷಿ ಕೆ.ಸಿ, ದಿಯ ವೈ.ಬಿ, ಶ್ರೀಹಾನ್ ಸಂಜಯ್ ಜಿತ್ತಿ, ತನುಷ್ ಪೂವಣ್ಣ ಸಿ.ಪಿ, ರುಶಾಲಿ ಪಿ.ಜೆ, ತಪಸ್ಯ ಗೌರಿ ಎಂ, ವಿ.ಕೃಷ್ಣ ಸಾಹಿಲ್, ವಂಶಿ ಕೆ.ಎಂ, ಚಿನ್ಮಯಿ ಪಿ, ದೀಕ್ಷ ಭರತ್ ಎನ್, ಧ್ರುವತೇಜ್ ಪಿ, ದಿಗಂತ್ ಸಿ.ಪಿ, ಕನಿಷ್ಕ ಪಿ.ಸಿ, ಲಕ್ಷಿತ ಬಿ.ಆರ್., ನೇಹಲ್ ಡಿ.ವಿ, ನಿಲ್ಹಾ ಜೆ ತಾರಕನ್, ಹರ್ಷಿಣಿ ಎಂ.ಕೆ, ರೋನಿತ್…

Read More

ಚೆಟ್ಟಳ್ಳಿ: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಶ್ರೀ ವೀರಾಂಜನೇಯ ಯುವಕ ಸಂಘ, ಚೆಟ್ಟಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಆರನೇ ವರ್ಷದ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ವನ್ನು ದಿನಾಂಕ 15-02-2026 ಭಾನುವಾರ ಸಂಜೆ 6 ಗಂಟೆಗೆ ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಈರಳೆ ವಳಮುಡಿ ಗ್ರಾಮದಲ್ಲಿರುವ ಪಂಚಮುಖಿ ವಾಯುಪುತ್ರ ಮೂರ್ತಿ ಹಾಗೂ ಸಂಘದ ಮುಖ್ಯ ಕಚೇರಿಯಲ್ಲಿರುವ ಶ್ರೀ ವಿನಾಯಕ, ಪಶುಪತಿನಾಥ, ಶ್ರೀ ಕಾವೇರಿಮಾತೆ, ಶ್ರೀ ಕೃಷ್ಣ, ಗೋಮಾತೆ, ಶ್ರೀ ಆಂಜನೇಯ ಮತ್ತು ಶ್ರೀಮಹಾವಿಷ್ಣು ಮೂರ್ತಿಗಳಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಲಿದೆ. ಸಂಜೆ 7 ಗಂಟೆಯಿಂದ ಕುಶಾಲನಗರದ ವಿದೂಷಿ ಶ್ರೀಮತಿ ವಿನುತ ಹೇಮಂತ್ ಅವರಿಂದ ಭರತನಾಟ್ಯ ಕಾರ್ಯಕ್ರಮ, ನಂತರ ಬ್ಲೂಸ್ಟಾರ್ ಬೀಟ್ಸ್, ಕುಶಾಲನಗರ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

Read More

ಮುಂಬೈ: ದೇಶಭ್ರಷ್ಟ ಆರ್ಥಿಕ ಅಪರಾಧಿ ವಿಜಯ್ ಮಲ್ಯ ಅವರಿಗೆ ಬಾಂಬೆ ಹೈಕೋರ್ಟ್ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಉದ್ದೇಶಪೂರ್ವಕವಾಗಿ ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ವ್ಯಕ್ತಿ ಯಾವುದೇ ನ್ಯಾಯಯುತ ಪರಿಹಾರ ಪಡೆಯಲು ಸಾಧ್ಯವಿಲ್ಲ ಎಂದು ಛೀಮಾರಿ ಹಾಕಿರುವ ನ್ಯಾಯಾಲಯ, ಭಾರತಕ್ಕೆ ಮರಳಲು ಅವರಿಗೆ ಕೊನೆಯ ಅವಕಾಶ ನೀಡಿದೆ. ನ್ಯಾಯಾಲಯದ ಕಠಿಣ ನಿಲುವು: ಕೇಂದ್ರ ಸರ್ಕಾರದ ‘ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ’ (FEOA) ಅಡಿಯಲ್ಲಿ ತಮ್ಮನ್ನು ‘ದೇಶಭ್ರಷ್ಟ’ ಎಂದು ಘೋಷಿಸಿರುವುದನ್ನು ಪ್ರಶ್ನಿಸಿ ವಿಜಯ್ ಮಲ್ಯ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಗೌತಮ್ ಅನ್ಬಾಡ್ ಅವರಿದ್ದ ಪೀಠವು ಮಲ್ಯ ಅವರ ನಡೆಯನ್ನು ಕಟುವಾಗಿ ಟೀಕಿಸಿತು. “ನೀವು ಉದ್ದೇಶಪೂರ್ವಕವಾಗಿ ನ್ಯಾಯಾಲಯದ ವ್ಯಾಪ್ತಿಯಿಂದ ಮತ್ತು ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿದ್ದೀರಿ ಎಂಬುದು ದಾಖಲೆಗಳಿಂದ ಸ್ಪಷ್ಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ನ್ಯಾಯಾಲಯದಿಂದ ಯಾವುದೇ ಪರಿಹಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ,” ಎಂದು ಪೀಠವು ಸ್ಪಷ್ಟಪಡಿಸಿತು. ಕೊನೆಯ ಅವಕಾಶ: ನ್ಯಾಯಾಲಯವು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ…

Read More

ವಿರಾಜಪೇಟೆ, NEWS DESK ಫೆ.13: ಪಟ್ಟಣದ ಐತಿಹಾಸಿಕ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕ ಮಹೋತ್ಸವ ಹಾಗೂ ಲೂರ್ದು ಮಾತೆಯ ವಾರ್ಷಿಕ ಮಹೋತ್ಸವವನ್ನು ಸಂಭ್ರಮದಿಂದ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪ್ರತೀ ವರ್ಷದಂತೆ ಈ ವರ್ಷವು ಫೆಬ್ರವರಿ 11 ರಂದು ಸಂಜೆ ವಿವಿಧ ಧಾರ್ಮಿಕ ಆಚರಣೆಯೊಂದಿಗೆ ಮಹೋತ್ಸವವನ್ನು ಆಚರಿಸಲಾಯಿತು. ಹಬ್ಬದ ಹಿಂದಿನ ಮೂರು ದಿವಸಗಳ ಕಾಲ ಚರ್ಚ್ ನಲ್ಲಿ ಆಧ್ಯಾತ್ಮಿಕ ಸಿದ್ಧತೆಯು ನಡೆಯಿತು. ಧ್ವಜಾರೋಹಣ, ಜಪಸರ, ಬಲಿಪೂಜೆ ಹಾಗೂ ನವೇನ ಪ್ರಾರ್ಥನೆಯು ಜರುಗಿತು. ಬೆಂಗಳೂರಿನ ರಕ್ಷಕರ ಸಭೆಯ ಗುರುಗಳಾದ ಫಾ. ರಾಬಿನ್ ರವರು ಈ ಮೂರು ದಿವಸಗಳ ಕಾಲ ಪ್ರವಚನವನ್ನು ನೀಡಿದರು. ಬುಧವಾರ ವಾರ್ಷಿಕ ಮಹೋತ್ಸವದ ದಿನದಂದು ಸಂಜೆ ಮೈಸೂರು ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರವೋ ರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಹಿಂದೆ ವಿರಾಜಪೇಟೆಯನ್ನು ಆಳಿದ ವೀರ ರಾಜರು ಸಂತ ಅನ್ನಮ್ಮ ಚರ್ಚ್ ಗೆ ಕೊಡುಗೆಯಾಗಿ ನೀಡಿದ ದೀಪಗಳನ್ನು ಧರ್ಮಾಧ್ಯಕ್ಷರು ಬೆಳಗಿಸುವುದರ ಮೂಲಕ ಧಾರ್ಮಿಕ ಆಚರಣೆಗಳಿಗೆ ಚಾಲನೆಯನ್ನು ನೀಡಲಾಯಿತು. ಬೈಬಲ್…

Read More

ಮಡಿಕೇರಿ, NEWS DESK ಫೆ.10:-ಶಾಲಿವಾಹನ ಶಕವರ್ಷ 1947 ನೇ ವಿಶ್ವಾವಸು ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘಮಾಸ ಕೃಷ್ಣಪಕ್ಷ ತ್ರಯೋದಶಿ ಫೆಬ್ರವರಿ, 15 ರಂದು ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದ್ ಸ್ವೀಕರಿಸಿ, ಭಗವಂತನ ಕೃಪೆಗೆ ಪಾತ್ರರಾಗುವಂತೆ ಶ್ರೀ ಓಂಕಾರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಕೋರಿದ್ದಾರೆ. ಪೂಜಾ ಕಾರ್ಯಕ್ರಮದ ವಿವರ: ಫೆಬ್ರವರಿ, 15 ರಂದು ಬೆಳಗ್ಗೆ 6.45 ಗಂಟೆಗೆ ಮಹಾಪೂಜೆ, ಬೆಳಗ್ಗೆ 7.15 ಗಂಟೆಗೆ ನಿತ್ಯ ಸೇವೆಗಳ ಆರಂಭ, ಬೆಳಗ್ಗೆ 9.30 ಗಂಟೆಗೆ ರುದ್ರಹೋಮ ಸಂಕಲ್ಪ(ಸಾಮೂಹಿಕ) ಏಕದರ್ಶ ರುದ್ರಾಭಿಷೇಕ(ಸಾಮೂಹಿಕ), ಬೆಳಗ್ಗೆ 10 ಗಂಟೆಗೆ ರುದ್ರ ಹೋಮ ಪ್ರಾರಂಭ(ಸಾಮೂಹಿಕ), ಮಧ್ಯಾಹ್ನ 12 ಗಂಟೆಗೆ ರುದ್ರಹೊಮ ಪೂರ್ಣಾಹುತಿ (ಸಾಮೂಹಿಕ), ಮಧ್ಯಾಹ್ನ 12.30 ಗಂಟೆಗೆ ಕಳಶಾಭಿಷೇಕ, ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಮಧ್ಯಾಹ್ನ 1.30 ಗಂಟೆಗೆ ತೀರ್ಥ ಪ್ರಸಾದ ವಿತರಣೆ(ವಿನಿಯೋಗ), ಸಂಜೆ 4 ಗಂಟೆಗೆ ದೇವರ ದರ್ಶನ ಹಾಗೂ…

Read More

ಮಡಿಕೇರಿ NEWS DESK ಫೆ.13 : ಬೆಂಗಳೂರಿನ ಪ್ರತಿಷ್ಠಿತ ಕೊಡಗು ಗೌಡ ಸಮಾಜದ ನೂತನ ಅಧ್ಯಕ್ಷರಾಗಿ ವಿಂಗ್ ಕಮಾಂಡರ್ (ನಿವೃತ್ತ) ಮನೋಜ್ ಕುಮಾರ್ ಅಯ್ಯೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ರತ್ನ ಉತ್ತಪ್ಪ ಚೆಟ್ಟಿಮಾಡ, ಮೋಹನ್ ಕುದುಪಜೆ, ಕಾರ್ಯದರ್ಶಿಯಾಗಿ ಬಿಪಿನ್ ಬೇಕಲ್, ಖಜಾಂಚಿಯಾಗಿ ಆಶಾ ಅರುಣ್ ಪಾರೆಮಜಲು, ಸಹ ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಗೋವಿಂದಮ್ಮನ, ಸಹಾಯಕ ಕಾರ್ಯದರ್ಶಿಯಾಗಿ ವಿನಯ್ ಪೊನ್ನಪ್ಪ ಪೊಯ್ಯಕಂಡೀರ ಹಾಗೂ ಕಾನೂನು ಸಲಹೆಗಾರರಾಗಿ ಪ್ರಕಾಶ್ ನಿಡ್ಯಮಲೆ ಆಯ್ಕೆಯಾಗಿದ್ದಾರೆ ಎಂದು ಬೆಂಗಳೂರಿನ ಕೊಡಗು ಗೌಡ ಸಮಾಜದ ಪ್ರಕಟಣೆ ತಿಳಿಸಿದೆ.

Read More

ಚಿಕ್ಕಬಳ್ಳಾಪುರ: ವಿಶ್ವ ಪ್ರೇಮಿಗಳ ದಿನಾಚರಣೆಯ ಸಂಭ್ರಮದಲ್ಲಿ ನಂದಿಬೆಟ್ಟಕ್ಕೆ ಭೇಟಿ ನೀಡಲು ಯೋಜಿಸಿದ್ದ ಪ್ರವಾಸಿಗರಿಗೆ ಹಾಗೂ ಪ್ರೇಮಿಗಳಿಗೆ ಜಿಲ್ಲಾಡಳಿತ ನಿರಾಸೆ ಮೂಡಿಸಿದೆ. ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಫೆಬ್ರವರಿ 14 ರಂದು ನಂದಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ. ಪ್ರಭು ಆದೇಶ ಹೊರಡಿಸಿದ್ದಾರೆ. ನಿರ್ಬಂಧಕ್ಕೆ ಮುಖ್ಯ ಕಾರಣಗಳೇನು? ಜಿಲ್ಲಾಡಳಿತವು ಈ ಕಠಿಣ ನಿರ್ಧಾರ ತೆಗೆದುಕೊಳ್ಳಲು ಪ್ರಮುಖವಾಗಿ ಮೂರು ಕಾರಣಗಳನ್ನು ನೀಡಿದೆ: ಆತ್ಮಹತ್ಯೆ ತಡೆ ಮತ್ತು ಬೆಟ್ಟದ ಗೌರವ: ಹಿಂದೆ ಪ್ರೇಮಿಗಳ ದಿನದಂದು ನಡೆದಿದ್ದ ಆತ್ಮಹತ್ಯೆ ಪ್ರಕರಣಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಅಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ತಡೆಯಲು ಮತ್ತು ಬೆಟ್ಟದ ಘನತೆಯನ್ನು ಕಾಪಾಡಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅತಿಯಾದ ಜನದಟ್ಟಣೆ (Crowd Control): ಈ ಬಾರಿ ಪ್ರೇಮಿಗಳ ದಿನವು ತಿಂಗಳ ಎರಡನೇ ಶನಿವಾರ ಬಂದಿರುವುದರಿಂದ, ಸುಮಾರು 15,000 ದಿಂದ 20,000 ಪ್ರವಾಸಿಗರು ಬರುವ ನಿರೀಕ್ಷೆಯಿದೆ. ಕೇವಲ ಒಂದು ಸಂಪರ್ಕ ರಸ್ತೆ ಇರುವುದರಿಂದ ಇಷ್ಟೊಂದು…

Read More

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತಾದ ಚರ್ಚೆಗಳ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವೃತ್ತಿಜೀವನದ ದಾಖಲೆಯ 17ನೇ ಬಜೆಟ್ ಮಂಡಿಸಲು ದಿನಾಂಕ ನಿಗದಿಪಡಿಸಿದ್ದಾರೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಮಾರ್ಚ್ 6 ರಿಂದ ಮಾರ್ಚ್ 27ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಬಜೆಟ್ ಮಂಡನೆಯ ಮುಹೂರ್ತ ಫಿಕ್ಸ್: ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರು ಮಾರ್ಚ್ 6 ರಂದು 2026-27ನೇ ಸಾಲಿನ ಆಯವ್ಯಯವನ್ನು ಮಂಡಿಸಲಿದ್ದಾರೆ. ಈ ಮೂಲಕ ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ಈಗಾಗಲೇ ವಿವಿಧ ಇಲಾಖೆಗಳು, ಹಿಂದುಳಿದ ವರ್ಗಗಳ ಸಂಘಟನೆಗಳು ಹಾಗೂ ಮುಖಂಡರೊಂದಿಗೆ ಸಿಎಂ ಸರಣಿ ಸಭೆಗಳನ್ನು ನಡೆಸಿ ಸಿದ್ಧತೆ ಚುರುಕುಗೊಳಿಸಿದ್ದಾರೆ. ಸಚಿವ ಸಂಪುಟದ ಪ್ರಮುಖ ನಿರ್ಧಾರಗಳು: ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ಕೈಗೊಂಡಿರುವ ಪ್ರಮುಖ ನಿರ್ಧಾರಗಳನ್ನು ಹಂಚಿಕೊಂಡಿದ್ದಾರೆ: ಕ್ಯಾನ್ಸರ್…

Read More