ಲೇಖಕ: admin

ಮಡಿಕೇರಿ ಮಾ.29 : ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ.4 ರಷ್ಟು ಮೀಸಲಾತಿಯನ್ನು ರದ್ದು ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹ ಗೊಳಿಸಿರುವುದನ್ನು ಖಂಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಅವರ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರಮುಖರು ಹಾಗೂ ಕಾರ್ಯಕರ್ತರು ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಪಿ.ಸಿ.ಹಸೈನಾರ್ ಹಾಜಿ ಬಿಜೆಪಿ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಒಕ್ಕಲಿಗ ಮತ್ತು ಲಿಂಗಯತ ಸಮುದಾಯಕ್ಕೆ ಶೇ.10 ಮಿಸಲಾತಿಯನ್ನು ನೀಡಿ ಮುಸಲ್ಮಾನರಿಗೆ ಶೇ.5ಕ್ಕೆ ಏರಿಸಬೇಕಿತ್ತು. ಆದರೆ ಇತರ ಸಮುದಾಯದ ಓಲೈಕೆಗಾಗಿ ಮುಸಲ್ಮಾನರ 2ಬಿ ಅಡಿಯಲ್ಲಿದ್ದ ಶೇ.4 ರಷ್ಟು ಮೀಸಲಾತಿಯನ್ನು…

Read More

ಮಡಿಕೇರಿ ಮಾ.29 : ಮುಸಲ್ಮಾನರಿಗಾಗಿ ಮೀಸಲಿದ್ದ 2 ಬಿ ಯಲ್ಲಿನ ಶೇ.4 ರಷ್ಟು ಮೀಸಲಾತಿಯನ್ನು ರದ್ದುಪಡಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿರುವ ಕೊಡಗು ಮುಸ್ಲಿಂ ಅಸೋಸಿಯೇಷನ್  ಒಕ್ಕಲಿಗರು ಮತ್ತು ಲಿಂಗಾಯಿತರಿಗೆ ತಲಾ ಶೇ.10 ಮತ್ತು ಮುಸ್ಲಿಮರಿಗೆ ಶೇ.5ರಷ್ಟು ಮೀಸಲಾತಿಯನ್ನು ನೀಡಬೇಕೆಂದು ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ.ಹಸೈನಾರ್ ಹಾಜಿ ಮುಖ್ಯಮಂತ್ರಿಗಳು ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು. ಮುಸಲ್ಮಾನರ ಮೀಸಲಾತಿಯನ್ನು ಕಸಿದುಕೊಂಡು ಒಕ್ಕಲಿಗರು ಮತ್ತು ಲಿಂಗಾಯಿತರಿಗೆ ಹಂಚಿಕೆ ಮಾಡುವ ಮೂಲಕ ನಮ್ಮೊಳಗೆ ಕಲಹ ಏರ್ಪಡಲಿ ಎನ್ನುವ ಭ್ರಮೆಯಲ್ಲಿ ಸರ್ಕಾರವಿತ್ತು. ಆದರೆ ನಾವು ಒಕ್ಕಲಿಗರು ಮತ್ತು ಲಿಂಗಾಯಿತರೊಂದಿಗೆ ಜಗಳ ಮಾಡುವುದಿಲ್ಲ, ಬದಲಿಗೆ ಅವರಿಗೆ ತಲಾ ಶೇ.10 ರಷ್ಟು ಮೀಸಲಾತಿ ನೀಡಬೇಕು ಮತ್ತು ಮುಸಲ್ಮಾನರ ಮೀಸಲಾತಿಯನ್ನು ಶೇ.5 ಕ್ಕೆ ಏರಿಕೆ ಮಾಡಬೇಕೆಂದು ಮುಂದೆ ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಆಗ್ರಹಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಉಪಾಧ್ಯಕ್ಷ ಪಿ.ಎಂ.ಖಾಸಿಂ ಮಾತನಾಡಿ ಈ ಹಿಂದೆ ಹೆಚ್.ಡಿ.ದೇವೇಗೌಡರು ಘೋಷಿಸಿದ ಶೇ.4ರಷ್ಟು ಮೀಸಲಾತಿಯಿಂದ ಮುಸಲ್ಮಾನರ ಶಿಕ್ಷಣ…

Read More

ಮಡಿಕೇರಿ ಮಾ.29 : ಇಬ್ನಿವಳವಾಡಿ ಗ್ರಾಮದ ಶ್ರೀ ಭದ್ರಕಾಳಿ ದೇವಾಲಯದ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಮುಂಜಾನೆಯಿಂದಲೇ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಮಧ್ಯಾಹ್ನ ಕೊಡಿಯಾಟ್, ಆಂಗೋಲ ಪೋಂಗೊಲ, ಪೀಲಿ ಆಟ್, ಕೊಂಬಾಟ್ ಮತ್ತು ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ನಡೆಯಿತು. ವಿವಿಧ ಗ್ರಾಮಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Read More

ಮಡಿಕೇರಿ ಮಾ.29 : ಇಂದು ಭ್ರಮೆ ಮತ್ತು ವಾಸ್ತವದ ನಡುವೆ ಹೋರಾಟಗಳು ನಡೆಯುತ್ತಿದೆ, ಮಾನವನ ಮನೋಬಲ ಧ್ವಂಧ್ವದಲ್ಲಿ ಸಿಲುಕಿದೆ. ಅಶ್ಲೀಲತೆಯ ಕಡೆ ಆಕರ್ಷಣೆ ಹೆಚ್ಚಾಗುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ವಿಷಾದ ವ್ಯಕ್ತಪಡಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಕೊಡವ ಮಕ್ಕಡ ಕೂಟದ 64ನೇ ಪುಸ್ತಕ ಬರಹಗಾರ್ತಿ, ಚಿತ್ರ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಅವರು ಬರೆದಿರುವ ಮಹಿಳಾ ಪ್ರಧಾನವಾದ “ಅಗ್ನಿಯಾತ್ರೆ” ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ವಾಸ್ತವತೆಯನ್ನು ಮರೆಮಾಚಿ ಭ್ರಮಾಲೋಕವನ್ನು ಸೃಷ್ಟಿಸುವ ಕಾಲ ಇದಾಗಿದ್ದು, ಗೌರವಯುತ ಸ್ಥಾನದಲ್ಲಿರುವ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಸ್ತ್ರೀಯ ಬಗ್ಗೆ ಕಾಮನೆಗಳ ವಿಕೃತಿ ಮೆರೆಯುತ್ತಿದೆ, ಇತ್ತೀಚೆಗೆ ಮಕ್ಕಳ ಆಲೋಚನಾ ಲಹರಿ ಕೂಡ ಇದೇ ರೀತಿಯದ್ದಾಗಿದ್ದು, ಇದು ಅತ್ಯಂತ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು. ದೇವತೆಯ ಪ್ರತಿರೂಪವಾಗಿರುವ ಸ್ತ್ರೀಕುಲಕ್ಕೆ ತನ್ನದೇ ಆದ ಗೌರವವಿದೆ. ಆದರೆ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಯುವತಿಯರೇ ಮದ್ಯ ಮತ್ತು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ, ಅಶ್ಲೀಲತೆಗೆ ಮಾರು ಹೋಗುತ್ತಿದ್ದಾರೆ…

Read More

ನಾಪೋಕ್ಲು ಮಾ.29 :  ಗ್ರಾಮ ಪಂಚಾಯಿತಿಯ 2023 -24ನೇ ಸಾಲಿನ ಹರಾಜು ಪ್ರಕ್ರಿಯೆಯು ಪಂಚಾಯತಿ ಅಧ್ಯಕ್ಷರಾದ ಪಾರ್ವತಿ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾ.ಪಂ ಸಭಾಂಗಣದಲ್ಲಿ ನಡೆದ ಹರಾಜಿನ ಮೊದಲ ಭಾಗವಾದ ಸಂತೆ ಸುಂಕ ಎತ್ತಾವಳಿ ಮತ್ತು ವಾಹನ ಸುಂಕ ಎತ್ತಾವಳಿ ಸರ್ಕಾರದ ಬಿಡ್ದುವರೆಗು ಬಾರದೆ ಇರುವುದರಿಂದ ಇದನ್ನು ಮುಂದೂಡಲಾಯಿತು. ಹಸಿಮೀನು ಮಾರಾಟಕ್ಕೆ ಸರ್ಕಾರಿ ಬಿಡ್ಡು 2,76000ಕ್ಕೆ ನಡೆದ ಎರಡು ಲೈಸನ್ಸ್ ಮೂರು ಜನ ಬಿಡ್ಡುದಾರರ ಮಧ್ಯೆ ನಡೆದ ಜಿದ್ದಾಜಿದ್ದಿನ ಪೈಪೋಟಿಯಿಂದ ಲೈಸೆನ್ಸ್ ಒಂದಕ್ಕೆ ಬರೋಬ್ಬರಿ 10 ಲಕ್ಷದ 800 ರೂ.ಗಳಿಗೆ ಹೋದರೆ, ಹಸಿಮೀನು ಮಾರಾಟದ ಮತ್ತೊಂದು ಲೈಸನ್ಸ್ ಬರೋಬ್ಬರಿ 13 ಲಕ್ಷದ 25ಸಾವಿರಕ್ಕೆ ಹರಾಜು ಮಾಡಲಾಯಿತು. ಕುರಿಮಾಂಸ ಎರಡು ಲೈಸನ್ಸ್ ನಲ್ಲಿ ಒಂದು 1,39200ಕ್ಕೆಹರಾಜಾದರೆ ಮತ್ತೊಂದು 2,50,100ಕ್ಕೆ ಹರಾಜು ಮಾಡಲಾಯಿತು. ಅದರಂತೆ ಕೋಳಿ ಮಾಂಸ ಮಳಿಗೆ ಒಂದಕ್ಕೆ 55,100 ರಂತೆ ಆರು ಮಳಿಗೆ ಲೈಸೆನ್ಸ್ ಹೋದರೆ, ಹಂದಿಮಾಂಸ ಮಳಿಗೆ ಒಂದು 22,100ಕ್ಕೆ ಹರಾಜು ಮಾಡಲಾಯಿತು. ಈ ಸಂದರ್ಭ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಹಿತಿ…

Read More

ಮಡಿಕೇರಿ,ಮಾ.29 :  ಯೋಗ, ಪ್ರಾಣಾಯಾಮ ಮಾಡುವದರಿಂದ ಏಕಾಗ್ರತೆಯೊಂದಿಗೆ ಮನಸ್ಸು ಸದೃಢವಾಗುತ್ತದೆ ಎಂದು ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಯೋಗ ಶಿಕ್ಷಕ ಕೆ.ಕೆ.ಮಹೇಶ್‌ಕುಮಾರ್ ಹೇಳಿದರು. ವಾಂಡರ‍್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ  ನಗರದ  ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉಚಿತ ಕ್ರೀಡಾ ಶಿಬಿರದಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಯೋಗ ಸಹಕಾರಿಯಾಗಲಿದೆ. ಪ್ರಾಣಾಯಾಮದ ಮೂಲಕ ದೇಹದ ತಾಪಮಾನವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು. ದೀರ್ಘ ಉಸಿರಾಟದಿಂದ ಕಾಯಿಲೆಗಳನ್ನು ತಡೆಗಟ್ಟುವುದರೊಂದಿಗೆ ಆಯಸ್ಸನ್ನು ವೃದ್ಧಿಸಿಕೊಳ್ಳಬಹುದೆಂದು ತಿಳಿ ಹೇಳಿದರು. ಇದೇ ಸಂದರ್ಭ ಕೆಲವೊಂದು ಪ್ರಾಣಾಯಾಮಗಳನ್ನು ಮಕ್ಕಳಿಗೆ ಹೇಳಿಕೊಟ್ಟರು. ಶಿಬಿರದ ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರಾದ ಎಸ್.ಟಿ.ವೆಂಕಟೇಶ್, ಶಾಂ ಪೂಣಚ್ಚ, ಗಣೇಶ್, ಜಯಸೂರ್ಯ, ಸಂತೋಷ್, ಪೋಷಕರು ಹಾಜರಿದ್ದರು.

Read More

ಚೆಯ್ಯಂಡಾಣೆ, ಮಾ 29 :  ಚೆಯ್ಯಂಡಾಣೆಯ ಸಂಜೀವಿನಿ ಒಕ್ಕೂಟದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಥಳೀಯ ಮಹಿಳಾ ಸಮಾಜದಲ್ಲಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಚೇತನ್,  ಮಹಿಳೆಯರು ಆಟೋಟಗಳಲ್ಲಿ ಭಾಗವಹಿಸಿಸುವುದು ಮುಖ್ಯ. ಸೋಲು, ಗೆಲುವು ಮುಖ್ಯವಲ್ಲ ಎಂದು ಕಾರ್ಯಕ್ರಮಕ್ಕೆ ಶುಭಾ ಹಾರೈಸಿದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಜೀವಿಸಲು ಸರಕಾರ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಹಿಳೆಯರು ಇದರ ಸದುಪಯೋಗ  ಪಡಿಸಿಕೊಳ್ಳುವಂತಾಗಬೇಕು ಎಂದರು. ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರತ್ತು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ  ಉಪಾಧ್ಯಕ್ಷೆ ಬಿ.ಎಸ್.ಪುಷ್ಪ, ಸದಸ್ಯರಾದ ಮಂಜುಳಾ, ಪೆಮ್ಮಂಡ ಕಾವೇರಮ್ಮ, ವಾಣಿ, ಬೀನ ಕುಮಾರಿ,  ಮೀನಾಕ್ಷಿ, ಸಂಜೀವಿನಿ ಒಕ್ಕೂಟದ ಸದಸ್ಯರು ಇದ್ದರು. ಎಬಿಕೆ ವಸಂತಿ  ಸ್ವಾಗತಿಸಿದರು. ನಳಿಸಿ ಕಳೆದ ಸಾಲಿನ ವರದಿ ವಾಚಿಸಿದರು. ಆಟೋಟ ಸ್ವರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಕಳೆದ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವರದಿ : …

Read More

ಮಡಿಕೇರಿ ಮಾ.29 : 15ನೇ ವಿಧಾನಸಭೆಯ ಅವಧಿ ಮೇ 24, 2023 ಕ್ಕೆ ಕೊನೆಗೊಳ್ಳಲಿದೆ. ಅದಕ್ಕೆ ಮೊದಲು ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬರುವಂತೆ ಇದೀಗ ಚುನಾವಣಾ ದಿನಾಂಕ ನಿಗದಿಯಾಗಿದೆ. 2018ರಲ್ಲಿ ರಾಜ್ಯದಲ್ಲಿ ಶೇ. 72.4 ಮತದಾನ ನಡೆದಿತ್ತು, ಬೆಂಗಳೂರಿನಲ್ಲಿ ಕೇವಲ ಶೇ. 50 ಸರಾಸರಿ ಮತದಾನವಾಗಿತ್ತು. ಅದನ್ನು ಹೆಚ್ಚಿಸಲು ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸಯನ್ಸ್ ಜೊತೆಗೂಡಿ ಐಟಿ ಕ್ಷೇತ್ರದವರ ಸಹಕಾರ ಪಡೆದು ಎಲೆಕ್ ತಾನ್ ಎಂಬ ಅಭಿಯಾನ ನಡೆಸಲಾಗುತ್ತಿದೆ. ಯಾವುದೇ ಹಿಂಸಾಚಾರವಿಲ್ಲದೆ, ಎಲ್ಲಿಯೂ ಮರು ಮತದಾನ ನಡೆಯುವ ಪ್ರಮೇಯ ಬಾರದ ಹಾಗೆ ಚುನಾವಣೆ ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ. ಈಗಿರುವ ಹಾಲಿ ವಿಧಾನಸಭೆಯಲ್ಲಿ ಬಿಜೆಪಿಯ 119, ಕಾಂಗ್ರೆಸ್ ನ 69 ಹಾಗು ಜೆಡಿಎಸ್ ನ 31 ಶಾಸಕರಿದ್ದಾರೆ. ಬಿಎಸ್ಪಿಯ ಒಬ್ಬ ಶಾಸಕ ಮಹೇಶ್ ಬಿಜೆಪಿ ಸೇರಿದ್ದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡದೇ ಇರುವುದರಿಂದ ಬಿಎಸ್ಪಿ ಶಾಸಕರಾಗಿ ಗುರುತಿಸಲ್ಪಡುತ್ತಾರೆ. ಇಬ್ಬರು ಪಕ್ಷೇತರ ಶಾಸಕರಾದ ಶರತ್ ಬಚ್ಚೇ ಗೌಡ ಹಾಗು…

Read More

ಮಡಿಕೇರಿ ಮಾ.29 :  ವಿರಾಜಪೇಟೆ – ಚೆoಬೆಬೆಳ್ಳೂರು – ಒಂಟಿಯಾoಗಡಿ ಲೋಕೋಪಯೋಗಿ ರಸ್ತೆಯ ಅಗಲೀಕರಣ ಮತ್ತು ಡಾಂಬರಿಕಾರಣಕ್ಕೆ ರೂ.2 ಕೋಟಿ ಮಂಜೂರಾಗಿದ್ದು,  ಶಾಸಕ ಕೆ.ಜಿ.ಬೋಪಯ್ಯ ಕಾಮಗಾರಿಗೆ  ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ವಿಧಾನಪರಿಷತ್ ಸದಸ್ಯ  ಸುಜಾ ಕುಶಾಲಪ್ಪ, ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

Read More

ಮಡಿಕೇರಿ ಮಾ.29 : ಗೋಣಿಕೊಪ್ಪದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಸರಕಾರದಿಂದ ರೂ.5 ಕೋಟಿ ಅನುದಾನ  ಮಂಜೂರಾಗಿದ್ದು.  ಕಾಮಗಾರಿಗೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಿದರು. ಈ ಸಂದರ್ಭ  ಗ್ರಾ.ಪಂ ಸದಸ್ಯರು ಮತ್ತು ಸ್ಥಳೀಯರು  ಹಾಜರಿದ್ದರು.

Read More