ಲೇಖಕ: admin

ಚೆಯ್ಯಂಡಾಣೆ ಫೆ.21 :  ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಎಡಪಾಲ ಶಾಖೆಯ ವಾರ್ಷಿಕ ಮಹಾ ಸಭೆ ನಡೆಯಿತು. ಸಭೆಯಲ್ಲಿ ಎಸ್‍ವೈಎಸ್  ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಸ್‍ವೈಎಸ್ ಪದಾಧಿಕಾರಿಗಳು ::  ಅಧ್ಯಕ್ಷರಾಗಿ ಖಾದರ್ ಸಅದಿ, ಉಪಾಧ್ಯಕ್ಷರಾಗಿ ಎ.ಎಂ.ಮಹ್ಮೂದ್ , ಪಿ.ಎ.ಬಷೀರ್ , ಕಾರ್ಯದರ್ಶಿಯಾಗಿ ಎಂ.ಇ.ಹಂಝ , ಕೋಶಾಧಿಕಾರಿಯಾಗಿ ಕೆ.ಯು.ಸಿದ್ದೀಕ್ , ದಅವಾ ಕಾರ್ಯದರ್ಶಿಯಾಗಿ ಶರೀಫ್ ಝೈನಿ, ಜೊತೆ ಕಾರ್ಯದರ್ಶಿಯಾಗಿ ಆಸಿಫ್, ಕಾರ್ಯಕಾರಿಣಿ ಸದಸ್ಯರಾಗಿ ಮಜೀದ್, ಹಮೀದ್, ಲತೀಫ್, ಝುಬೈರ್, ನಾಸಿರ್, ಮಜೀದ್ ಪಿ.ಎ, ರಶೀದ್, ಅದ್ದು, ಶಂಸು ಅವರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ಮುಸ್ಲಿಂ ಜಮಾಅತ್ ಪದಾಧಿಕಾರಿಗಳು :: ಅಧ್ಯಕ್ಷರಾಗಿ ಉಮ್ಮರ್ ಸಿ ಆರ್ ಪಿ, ಉಪಾಧ್ಯಕ್ಷರಾಗಿ ಕೆ.ಇ.ಅಬ್ದುಲ್ಲ , ಎ.ಎಂ.ಅಬ್ದುಲ್ಲ , ಕಾರ್ಯದರ್ಶಿಯಾಗಿ ಸಿ.ಎ.ಅಬೂಬಕ್ಕರ್ , ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಸಖಾಫಿ, ಕೋಡಿನೆಟರ್ ಆಗಿ ಖಾದರ್ ಮುಸ್ಲಿಯಾರ್,ಜೊತೆ ಕಾರ್ಯದರ್ಶಿಯಾಗಿ ಹುಸೈನಾರ್ ಪಿ.ಎಸ್, ಮುಹಮ್ಮದ್ ಕುಂಞಿ ಕಾರ್ಯಕಾರಿಣಿ…

Read More

ಚೆಯ್ಯಂಡಾಣೆ, ಫೆ.21. ನರಿಯಂದಡ ಗ್ರಾ.ಪಂ  ಗೆ ಒಳಪಟ್ಟ ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಚೇಲಾವರದ ಕಬ್ಬೆ ಜಲಪಾತ ಹಾಗೂ ಸಮೀಪದ ಬೆಟ್ಟ ಪ್ರದೇಶದಲ್ಲಿ ತಮಾರಾ ರೆಸಾರ್ಟ್ ವತಿಯಿಂದ ಸ್ವಚ್ಛತಾ ಶ್ರಮದಾನ ನಡೆಯಿತು. ಚೇಲಾವರದ ಕಬ್ಬೆ ಜಲಪಾತಕ್ಕೆ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಿದ್ದು, ಪ್ಲಾಸ್ಟಿಕ್ ತ್ಯಾಜ್ಯಗಳು ಹಾಗೂ ಬಾಟಲಿಗಳನ್ನು ಅಲ್ಲೇ ಬಿಟ್ಟು ತೆರಳಿದ್ದನ್ನು ಮನಗಂಡು ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಸಿಬ್ಬಂದಿಗಳು ಸುಮಾರು 13 ಕ್ಕೂ ಹೆಚ್ಚು ಚೀಲ ಕಸ, ಪ್ಲಾಸ್ಟಿಕ್,ಬಾಟಲಿಗಳನ್ನು ಸಂಗ್ರಹಿಸಿ, ರೆಸಾರ್ಟ್ ಗೆ ತಂದು ವಿಲೇವಾರಿ ಮಾಡಲಾಯಿತು. ಕಾರ್ಯಕ್ರಮದ ನೇತೃತ್ವವನ್ನು ತಮಾರಾ ರೆಸಾರ್ಟ್ ನ ವ್ಯವಸ್ಥಾಪಕರಾದ ಕೃಷ್ಣ ಕುಮಾರ್ ಬಾಜ್ ಪೈ ಹಾಗೂ ಗಿರೀಶ್ ಸುಬ್ಬಯ್ಯ ವಹಿಸಿದರು. ಈ ಸಂದರ್ಭ ರೆಸಾರ್ಟ್ ನ ನೀತು ಬೋಪ್ಪಣ್ಣ, ಶಾಮ್ ಸಾಜಿ ರಾಮ್, ಡಾಕ್ಟರ್ ಸುನೀತಾ, ಅಂಜಿತ್, ಚಂಗಪ್ಪ ಹಾಗೂ ಸಿಬ್ಬಂದಿಗಳು ಮತ್ತಿತರರು ಇದ್ದರು. ವರದಿ :ಅಶ್ರಫ್ 

Read More

ವಿರಾಜಪೇಟೆ ಫೆ.21 : ಬಿಟ್ಟಂಗಾಲ ಸಮೀಪದ ವಿ.ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ವಿರಾಜಪೇಟೆ ತಾಲೂಕಿನ 3 ನಾಡುಗಳ ವ್ಯಾಪ್ತಿಯ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯು ಫೆ.22 ರಿಂದ ಆರಂಭಗೊಳ್ಳಲಿದೆ. ವಿ. ಬಾಡಗದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಟ್ಟು 5 ದಿನಗಳ ಕಾಲ ನಡೆಯಲಿರುವ ಹಾಕಿ ಪಂದ್ಯಾವಳಿಗಾಗಿ ಈಗಾಗಲೇ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿದೆ. ವಿರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ ಕೊಡವ ಕುಟುಂಬ ತಂಡಗಳಿಗಾಗಿ ಆಯೋಜಿಸಲಾಗಿರುವ ಈ ಹಾಕಿ ಪಂದ್ಯಾವಳಿಯು ವಿ.ಬಾಡಗ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದ್ದು, ಇದಕ್ಕಾಗಿ ಗ್ರಾಮದ ಯುವಕರು ಪಂದ್ಯಾವಳಿಯ ಯಶಸ್ವಿಗಾಗಿ ಉತ್ಸಹದಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಕಿ ಕೂರ್ಗ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯು ಹಾಕಿ ಕರ್ನಾಟಕ ಸಂಸ್ಥೆಯ ನಿಯಮಾವಳಿಗೆ ಬದ್ಧವಾಗಿ ನಾಕ್ ಔಟ್ ಮಾದರಿಯಲ್ಲಿ ನಡೆಯಲಿದೆ. ಈಗಾಗಲೇ 17 ಕೊಡವ ಕುಟುಂಬಗಳು ಹೆಸರು ನೋಂದಾಯಿಸಿಕೊಂಡಿವೆ. ಪಂದ್ಯಾವಳಿಯು ಸಂಪೂರ್ಣವಾಗಿ ದಾನಿಗಳ ನೆರವಿನಿಂದಲೇ ಆಯೋಜನೆಗೊಂಡಿದೆ. ಈ…

Read More

ವಿರಾಜಪೇಟೆ ಫೆ.21 : ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆಯ ಮತ್ತು ದಕ್ಷಿಣ ಭಾರತ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಕೊಡಗಿನ ಸಿ.ಎಸ್. ಅರುಣ್ ಮಾಚಯ್ಯ ಅವರ ನೇತೃತ್ವದ ಕರ್ನಾಟಕ ಕರಾಟೆ ತಂಡ ಎರಡು ಚಿನ್ನದ ಪದಕ ಸೇರಿದಂತೆ ಒಟ್ಟು 4 ಪ್ರಶಸ್ತಿಗಳನ್ನು ಪಡೆದು ಸಾಧನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕರಾಟೆ ತಂಡ ಮುಂಬರುವ ಜೂನ್ ತಿಂಗಳಿನಲ್ಲಿ ಮಲೇಷ್ಯಾದಲ್ಲಿ ನಡೆಯಲಿರುವ ಏಷ್ಯನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾರತ ಕರಾಟೆ ತಂಡವನ್ನು ಪ್ರತಿನಿಧಿಸಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದೆ. ಫೆ.16 ರಿಂದ 19 ರವರೆಗೆ ಡೆಹ್ರಾಡೂನ್‍ನಲ್ಲಿ ನಡೆದ ಕರಾಟೆ ಇಂಡಿಯಾ ಆರ್ಗನೈಸೇಶನ್ ಅಖಿಲ ಭಾರತ ಹಿರಿಯರ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್-2023ನಲ್ಲಿ ಅರುಣ್ ಮಾಚಯ್ಯ ನೇತೃತ್ವದಲ್ಲಿ ಒಟ್ಟು 27 ಕರಾಟೆಪಟುಗಳ ಕರ್ನಾಟಕದ ತಂಡ ಪಾಲ್ಗೊಂಡಿತ್ತು. ಈ ಪೈಕಿ 21 ವರ್ಷದೊಳಗಿನ ಕಟ್ಟಾ ವಿಭಾಗದಲ್ಲಿ ಕರ್ನಾಟಕದ ಜಾಗೃತ್ ಗೌಡ, ವಿಘ್ನೇಶ್, ದಿಲೀಪ್ ಮತ್ತು ಅತೀಶ್ ಅವರನ್ನೊಳಗೊಂಡ ತಂಡ ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆಲ್ಲುವ…

Read More

ಮಡಿಕೇರಿ ಫೆ.21 : ನೆಲ್ಯಹುದಿಕೇರಿಯ ಪುರಾತನ ಶ್ರೀ ಸತ್ಯನಾರಾಯಣ ದೇವಾಲಯದ ವಾರ್ಷಿಕೋತ್ಸವವು ಮಾ.19, 20 ಹಾಗೂ 21ರ ವರೆಗೆ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ನಡೆಯಲಿದೆ. ಮಾ.19 ರಂದು ಪ್ರಾತಕಾಲ 6.30 ರಿಂದ ಗಣಹೋಮ ಉತ್ಸವ ಪ್ರಾರಂಭವಾಗಲಿದೆ. ಸಂಜೆ 6.30 ಗಂಟೆಗೆ ತಕ್ಕರ ಮನೆಯಿಂದ ಭಂಡರಾ ಇಳಿಸುವುದು, 7 ಗಂಟೆಗೆ ಪ್ರಾರಂಭ ಶುದ್ಧ ಕಳಸ, ದೇವರ ಬಲಿ ನಡೆಯಲಿದೆ. ಮಾ.20 ರಂದು ಬೆಳಿಗ್ಗೆ 10.30 ಗಂಟೆಗೆ ಸಾಮೂಹಿಕ ಆಶ್ಲೇಷಬಲಿ, ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಪಟ್ಟಣಿ, ಶ್ರೀ ಪೊದಮ್ಮ ದೇವಾಲಯದಲ್ಲಿ ಸಂಜೆ 5 ಗಂಟೆಗೆ ಅಕ್ಕಿಹೇರುವುದು, ದೇವರ ಮೆರವಣಿಗೆ ಮತ್ತು ಮಹಾಪೂಜೆ ಜರುಗಲಿದ್ದು, ಮಂಗಳಾರತಿ ನಂತರ ಶ್ರೀ ಸತ್ಯನಾರಾಯಣ ದೇವಾಲಯದಲ್ಲಿ ದೇವರ ಮೆರವಣಿಗೆ, ಮಂಗಳಾರತಿ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ಮಾ.21 ರಂದು ಬೆಳಿಗ್ಗೆ 9.30 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದ್ದು, ಮಧ್ಯಾಹ್ನ 1.30 ಗಂಟೆಗೆ ಮಹಾಪೂಜೆ, 2 ಗಂಟೆಗೆ ಅನ್ನದಾನ ಜರುಗಲಿದೆ. ಸಂಜೆ 3.30 ಗಂಟೆಗೆ ಹಿರಿಯರು ಹಾಗೂ ಮಕ್ಕಳು…

Read More

ಮಡಿಕೇರಿ ಫೆ.21 : ಮೊದ್ದೂರು ಗ್ರಾಮದಲ್ಲಿ ಡಿ.ಬ್ಲಾಕ್ ಗ್ರಾಮದ 2 ಕಿಂಡಿ ಅಣೆಕಟ್ಟು ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಾಮಗಾರಿ ಪರಿಶೀಲನೆಗೆ ಸ್ಥಳಕ್ಕೆ ಆಗಮಿಸಿದ  ಗ್ರಾಮಸ್ಥರು  ಗ್ರಾ.ಪಂ  ಅಧ್ಯಕ್ಷ ರು, ಉಪಾಧ್ಯಕ್ಷ ಹಾಗೂ ಸದಸ್ಯರು ಮತ್ತು ಅಧಿಕಾರಿಯೊಂದಿಗೆ ಕಾಮಗಾರಿ ಸ್ಥಗಿತಗೊಳಿಸುವಂತೆ  ಪಟ್ಟು ಹಿಡಿದು ಚರ್ಚೆಯಲ್ಲಿ ತೊಡಗಿರುವುದು. ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು ಇದ್ದರು.

Read More

ಮಡಿಕೇರಿ ಫೆ.21 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವು ಫೆ.22 ರಂದು ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಗೋಣಿಕೊಪ್ಪ ದಿಂದ ವಿರಾಜಪೇಟೆಗೆ ಬೈಕ್ ರ‍್ಯಾಲಿ ನಡೆಯಲಿದ್ದು, 10.30ಕ್ಕೆ  ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ  ವಿರಾಜಪೇಟೆ ಸೆರನಿಟಿ ಸಭಾಂಗಣದಲ್ಲಿ ಸಮಾವೇಶ  ನಡೆಯಲಿದೆ. ಸಮಾವೇಶದಲ್ಲಿ ಎಐಸಿಸಿ ಉಸ್ತುವಾರಿ  ರೋಸಿ ಜಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ  ಆರ್ ಧ್ರುವನಾರಾಯಣ್, ಕೆಪಿಸಿಸಿ ಉಪಾಧ್ಯಕ್ಷ  ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥ  ಎ.ಎಸ್ ಪೊನ್ನಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ  ಹಾಗೂ  ಇತರ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಜೆಡಿಎಸ್ ಮುಖಂಡ  ಸಂಕೇತ್ ಪೂವಯ್ಯ  ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆ ಯಾಗಲಿದ್ದಾರೆ.

Read More

ಮಡಿಕೇರಿ ಫೆ.21 : ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡದ ರಾಜ್ಯ ಸರ್ಕಾರ ಕೊಡವರನ್ನು ನಿರಂತರವಾಗಿ ಕಡೆಗಣಿಸುತ್ತಲೇ ಬರುತ್ತಿದೆೆ ಎಂದು ಆರೋಪಿಸಿರುವ ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ, ಸರ್ವ ಕೊಡವರು ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಇತ್ತೀಚೆಗೆ ಘೋಷಿಸಿದ ಬಜೆಟ್ ಕೊಡವರ ನಿರೀಕ್ಷೆಗಳನ್ನು ಹುಸಿ ಮಾಡಿದೆ. ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದ್ಯತೆ ನೀಡದೆ ನಿರ್ಲಕ್ಷಿಸಲಾಗಿದೆ. ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವ ಬಗ್ಗೆಯೂ ಆಸಕ್ತಿ ತೋರಿಲ್ಲ ಎಂದು ಆರೋಪಿಸಿದ್ದಾರೆ. ಕೊಡಗು ಪುಟ್ಟ ಜಿಲ್ಲೆಯಾದರೂ ಕಾವೇರಿ ನದಿ ಮತ್ತು ವಾಣಿಜ್ಯ ಬೆಳೆಗಳ ಮೂಲಕ ಇಡೀ ರಾಜ್ಯಕ್ಕೆ ದೊಡ್ಡ ಕೊಡುಗೆಯನ್ನೇ ನೀಡುತ್ತಾ ಬರುತ್ತಿದೆ. ಇಲ್ಲಿನ ಮೂಲ ನಿವಾಸಿಗಳಾದ ಕೊಡವರು ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಅನೇಕರು ಇಂದಿಗೂ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಕಡಿಮೆ ಜನಸಂಖ್ಯೆ ಹೊಂದಿರುವ ಕೊಡವರ ಅಭಿವೃದ್ಧಿ…

Read More

ಮಡಿಕೇರಿ ಫೆ.21 : ಮಡಿಕೇರಿ ತಾಲೂಕು ಸವಿತಾ ಸಮಾಜದ ವತಿಯಿಂದ ಫೆ.26 ರಿಂದ 28ರ ವರೆಗೆ ಜಿಲ್ಲಾ ಮಟ್ಟದ ಕ್ರೀಡೋತ್ಸವ ನಡೆಯಲಿದೆ ಎಂದು ಸಮಾಜದ ಕ್ರೀಡಾ ಅಧ್ಯಕ್ಷ ಮಧು ಚೆಟ್ಟಿಮಾನಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಫೆ.26, 27 ಹಾಗೂ 28 ರಂದು ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಮಟ್ಟದ ಕ್ರೀಡೋತ್ಸವದಲ್ಲಿ ಶಟಲ್ ಬ್ಯಾಡ್‍ಮಿಂಟನ್, ಸೂಪರ್ ಕ್ರಿಕೆಟ್, ಥ್ರೋಬಾಲ್ ಪಂದ್ಯಾವಳಿ ನಡೆಯಲಿದ್ದು, ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ, 50 ಮೀ. ಓಟ, 100 ಮೀ. ಓಟ, 200 ಮೀ. ಓಟ ಹಾಗೂ ಮಹಿಳೆಯರಿಗೆ ಹಾಗೂ ಪುರುಷರಿಗೆ ಭಾರದ ಗುಂಡು ಎಸೆತ, ಹಗ್ಗಜಗ್ಗಾಟ, 50 ವರ್ಷ ಮೇಲ್ಪಟ್ಟ ಪುರುಷ, ಮಹಿಳೆಯರಿಗೆ ಕಣ್ಣು ಕಟ್ಟಿ ಮಡಿಕೆ ಒಡೆಯುವುದು, ಬಾಂಬ್ ಇನ್ ದಿ ಸಿಟಿ ಸೇರಿದಂತೆ ಇತರೆ ಕ್ರೀಡಾಕೂಟಗಳು ನಡೆಯಲಿದೆ ಎಂದು ತಿಳಿಸಿದರು. ತಾಲೂಕು ಅಧ್ಯಕ್ಷ ಎಂ.ಟಿ.ಮಧು ಮಾತನಾಡಿ, ಫೆ.26…

Read More

ಸುಂಟಿಕೊಪ್ಪ ಫೆ.21 : ಬಜರಂಗದಳದ ವತಿಯಿಂದ ಐಗೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ಬಜರಂಗದಳದ ಪ್ರಮುಖರು ಛತ್ರಪತಿ ಶಿವಾಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ  ಮಾಡಿದರು. ಈ ಸಂದರ್ಭ ಛತ್ರಪತಿ ಶಿವಾಜಿ ಅಭಿಮಾನಿ ಸಂಘದ ಅಧ್ಯಕ್ಷ ಯತೀಶ್ ರೈ, ಐಗೂರು ಬಜರಂಗದಳದ ಅಧ್ಯಕ್ಷ ಭರತ್ (ಸಜಿ), ಐಗೂರು ಗ್ರಾ.ಪಂ ಸದಸ್ಯ ಜಿ.ಕೆ.ವಿನೋದ್, ಐಗೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎಂ.ಎ.ಪ್ರಭಾಕಾರ, ದಿನೇಶ್ ಶೆಟ್ಟಿ, ಅವಿಲಾಷ್, ಜಯಂತ್, ಬಿ.ದರ್ಶಿತ್,ವಿಪಿನ್ ರೈ, ಅನಂತ ಹಾಗೂ ಜಾರ್ಜ್ ಉಪಸ್ಥಿತಿದ್ದರು.

Read More