ಲೇಖಕ: admin

ಮಡಿಕೇರಿ ಫೆ.15 :  ಭಾರತ ಸ್ಕೌಟ್ಸ್ ಮತ್ತು ಗೈಡ್‍ನ ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ಕೊಡಗು ಜಿಲ್ಲೆಗೆ ಹೊಸದಾಗಿ ಆಗಮಿಸಿರುವ ಪೊಲೀಸ್ ವರಿಷ್ಠಾಧಿಕಾರಿಗಳು ಆದ ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷರೂ ಆಗಿರುವ ಕೆ.ರಾಮರಾಜನ್ ಅವರನ್ನು ನಗರದ ಎಸ್.ಪಿ. ಕಚೇರಿಯಲ್ಲಿ ಭೇಟಿ ಮಾಡಿದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಅವರು ಗೈಡ್‍ನ ಸ್ಕಾರ್ಫ್ ಧರಿಸುವುದರ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು. ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಬೇಬಿ ಮ್ಯಾಥ್ಯೂ ಸಂಸ್ಥೆಯ ಚಟುವಟಿಕೆಗಳಿಗೆ ಸಹಕರಿಸುವಂತೆ ಎಸ್.ಪಿ.ಅವರಲ್ಲಿ ಮನವಿ ಮಾಡಿದರು. ಈ ಸಂದರ್ಭ ಸ್ಕೌಟ್ಸ್ ಆಯುಕ್ತರಾದ  ಜಿಮ್ಮಿ  ಸ್ವಿಕೇರಾ, ಸ್ಥಾನಿಕ ಆಯುಕ್ತ ಹೆಚ್.ಆರ್ ಮುತ್ತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಂ ವಸಂತಿ, ಜಿಲ್ಲಾ ಸಂಘಟಕರಾದ ಯು.ಸಿ.ದಮಯಂತಿ ಹಾಗೂ ಜಿಲ್ಲಾ ಸಹಕಾರ್ಯದರ್ಶಿ  ಬೊಳ್ಳಜಿರ ಬಿ. ಅಯ್ಯಪ್ಪ ಹಾಜರಿದ್ದರು.

Read More

ನಾಪೋಕ್ಲು  ಫೆ.15 :  ಸಮಾಜದಲ್ಲಿ ಎಲ್ಲಾ ಧರ್ಮದ ಜನಾಂಗದವರು ಯಾವುದೇ ಬೇಧ ಭಾವವಿಲ್ಲದೆ ಸೌಹಾರ್ದತೆಯಿಂದ ಇದ್ದರೆ ಮಾತ್ರ ಶಾಂತಿ ಕಾಣಲು ಸಾಧ್ಯ ಎಂದು ಶುಹೈಬ್ ಫೈಝಿ ಹೇಳಿದರು. ನಾಪೋಕ್ಲುವಿನ ಇತಿಹಾಸ ಪ್ರಸಿದ್ಧ ಚೆರಿಯಪರಂಬು ಮಖಾಂ ಉರೂಸ್ ಸಮಾರಂಭದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗಾರರಾಗಿ ಪಾಲ್ಗೊಂಡು  ಮಾತನಾಡಿದರು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಭಾರತ ದೇಶದಲ್ಲಿ ಎಲ್ಲಾ ಧರ್ಮದ ವಿವಿಧ ಜಾತಿಯ ಜನರು ದೇಶದ ಸಂವಿಧಾನದ ಅಡಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಜಗತ್ತಿನಲ್ಲಿ ಉದಯಿಸಿ ಬಂದಂತಹ ಯಾವುದೇ ಧರ್ಮದ ಪ್ರವಾದಿಗಳಿರಲಿ, ಸಂತರಿರಲಿ,  ಪವಾಡ ಪುರುಷರಾಗಿರಲಿ, ಯಾವುದೇ ಪಂಡಿತರಿರಲಿ ಯಾರೂ ಸಹ ಸಮಾಜದಲ್ಲಿ ಅಶಾಂತಿಯನ್ನು ಮೂಡಿಸಲು ಹೇಲಿಲ್ಲ. ನಾವೆಲ್ಲರೂ ಭಾರತೀಯರು ನಮ್ಮಲ್ಲಿ ಯಾವುದೇ ಧರ್ಮ ಭೇದವಿಲ್ಲ ನಾವೆಲ್ಲರೂ ಸಹೋದರರಂತೆ ಜೀವನ ನಡೆಸಬೇಕು. ಪ್ರಸ್ತುತ ಕಾಲದಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಕೆಲವು ಸಂಘಟನೆಗಳ ಹೆಸರಿನಲ್ಲಿ ಧರ್ಮಗಳ ಮದ್ಯೆ ಒಡಕನ್ನು ತಂದು ಜನರ ಸೌಹಾರ್ದತೆಗೆ ದಕ್ಕೆಬರುವಂತ ಕೃತ್ಯ ನಡೆಸುತ್ತಿದೆ. ಅಂತವರ ವಿರುದ್ಧ  ಧ್ವನಿ ಎತ್ತಬೇಕಿದೆ ಎಂದು ಹೇಳಿದರು.…

Read More

ಮಡಿಕೇರಿ ಫೆ.15 :  ಶನಿವಾರಸಂತೆಯ ದಿ.ಗಂಗಪ್ಪ ಕರ್ಕೇರ ಅವರ ಮಗ ಹಾಗೂ ಶಕ್ತಿ ದಿನ ಪತ್ರಿಕೆಯ ಹಿರಿಯ ಪತ್ರಕರ್ತ  ನರೇಶ್ ಚಂದ್ರ ದೈವಾಧೀನರಾಗಿದ್ದಾರೆ. ಕಳೆದ 32 ವರ್ಷಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿ ಈ ಭಾಗದಲ್ಲಿ ಸೇವೆ ಸಲ್ಲಿಸಿದರು. ಇವರ ಹಲವಾರು ಸಾಮಾಜಿಕ ಲೇಖನಗಳಿಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ಲಭಿಸಿದೆ.

Read More

ಮಡಿಕೇರಿ  ಫೆ.14 : ಪುಲ್ವಾಮ ಭಯೋತ್ಪಾದಕ ಧಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಮಡಿಕೇರಿಯ ಯುದ್ಧ ಸ್ಮಾರಕದಲ್ಲಿ ಇಂದು ಸಂಜೆ  ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.  ಕಾಶ್ಮೀರದ ಪುಲ್ವಾಮ ಹೆದ್ದಾರಿಯಲ್ಲಿ ಭಯೋತ್ಪಾದಕರು ಆತ್ಮಾಹುತಿ ಧಾಳಿ ನಡೆಸಿ 40 ಭಾರತೀಯ ಯೋಧರನ್ನು ಕೊಂದು ಹಾಕಿ ತಮ್ಮ ವಿಕೃತಿ ಮೆರೆದರು. ಈ ಭೀಕರ ಭಯೋತ್ಪಾದಕ ಧಾಳಿಯಲ್ಲಿ  ಹುತಾತ್ಮರಾದ ಎಲ್ಲಾ ಭಾರತೀಯ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲು ಹಾಗೂ ಹುತಾತ್ಮ ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಣೆ ಮಾಡಿಕೊಂಡು 40 ಹಣತೆಗಳನ್ನು ಹಚ್ಚಿ ಗೌರವಪೂರ್ವಕ ನಮನ ಸಲ್ಲಿಸಲಾಯಿತು.  ಕಾರ್ಯಕ್ರಮವನ್ನುದ್ದೇಶಿಸಿ ಸಾಮಾಜಿಕ ಕಾರ್ಯಕರ್ತರಾದ ಧನಂಜಯ ಆಗೋಳಿಕಜೆ ಹಾಗೂ ಹಿಂ.ಜಾ.ವೇ.ಕೊಡಗು ಜಿಲ್ಲಾ ಸಂಚಾಲಕ್ ಕುಕ್ಕೇರ ಅಜಿತ್ ಮಾತನಾಡಿದರು. ಹಿಂದೂ ಸಂಘಟನೆಗಳ ಪ್ರಮುಖರು ಹಾಗೂ ಸಾರ್ವಜನಿಕರು ಹುತಾತ್ಮ ಯೋಧರಿಗೆ ಗೌರವ ಅರ್ಪಿಸಿದರು.

Read More

ಮಡಿಕೇರಿ ಫೆ.4 : ಇತ್ತೀಚಿನ ದಿನಗಳನ್ನು ನಾನು ಸೇರಿದಂತೆ ನನ್ನ ಆಪ್ತವಲಯದ ಕೆಲವು ಜನರು ವಿಚಿತ್ರವಾದ  ತೊಂದರೆಗೆ ತುತ್ತಾದೆವು. ಮಡಿಕೇರಿಯಿಂದ ಬೆಂಗಳೂರಿಗೆ ನೈಟ್ ಬಸ್ಸಿನಲ್ಲಿ ಪ್ರಯಾಣಿಸುವಾಗ ಮುಂಜಾನೆ ಐದು ಗಂಟೆಗೆ ಈ ಹಿಂದೆ ತಲುಪುತ್ತಿದ್ದ ಬಸ್ಸುಗಳು ನಮ್ಮನ್ನು ಮುಂಜಾನೆ ಮೂರುಗಂಟೆಯ ಆಸುಪಾಸಿಗೆ ಮೆಜೆಸ್ಟಿಕ್ ತಲುಪಿಸಿ ನಮ್ಮನ್ನು  ತ್ರಿಶುಂಕು ಸ್ಥಿತಿಯಲ್ಲಿ ಇಟ್ಟುಬಿಟ್ಟವು. ಬೆಂಗಳೂರಿನಲ್ಲಿ ಯಾವುದೇ ಸರಕಾರಿ ಕೆಲಸ ಅಥವಾ ವೈಯುಕ್ತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದಿದ್ದರೆ ಮಡಿಕೇರಿಯಿಂದ ನೈಟ್ ಬಸ್ ಹತ್ತಿ ಹೆಚ್ಚಿನ ಶ್ರೀಸಾಮಾನ್ಯರು   ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ಹೆಂಗಸರಿಗೆ, ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಈ ರಾತ್ರಿ ಬಸ್ಸಿನ ಪ್ರಯಾಣ ಸಮಸ್ಯೆಯಾಗುತ್ತದೆ. ಸುಮಾರು ಆರರಿಂದ-  ಏಳು ಗಂಟೆಗಳ ಪ್ರಯಾಣದ ನಂತರ ಬೆಂಗಳೂರು ತಲುಪಿದ ಬಳಿಕ ಫ್ರೆಶ್ ಆಗಲು ಹೋಟೆಲು ಅಥವಾ ಅತಿಥಿ ಗೃಹಗಳ ವ್ಯವಸ್ಥೆ ಮಾಡಿಕೊಳ್ಳುವ ಆರ್ಥಿಕ ಹೊರೆಯೂ ಈ  ಜನರ ಮೇಲೆ ಇರುತ್ತಿತ್ತು. ವಾಪಾಸು ಕೊಡಗಿಗೆ ಬರಲು ಮತ್ತೆ ನೈಟ್ ಬಸ್ ಹಿಡಿಯಬೇಕಾಗಿದ್ದರಿಂದ ಎರಡು ರಾತ್ರಿಗಳ ನಿದ್ದೆ ಹಾಳಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌…

Read More

ಮಡಿಕೇರಿ ಫೆ.14 : ಪೊನ್ನಂಪೇಟೆ ತಾಲೂಕಿನ ಕೆ.ಬಾಡಗ ಗ್ರಾಮದ ಚೂರಿಕಾಡು ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳ ಜೀವ ಬಲಿ ಪಡೆದ ವ್ಯಾಘ್ರನನ್ನು ಮಂಗಳವಾರ ಮಧ್ಯಾಹ್ನದ ವೇಳೆಗೆ ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು ಆನೆಯ ಸಹಾಯದಿಂದ ಒಟ್ಟು 4 ಸಾಕಾನೆಗಳು, 150ಕ್ಕೂ ಹೆಚ್ಚು ಅರಣ್ಯ ಇಲಾಖೆಯ ನುರಿತ ಸಿಬ್ಬಂದಿಗಳು ನಾಣಚ್ಚಿ ಗೇಟ್ ಬಳಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ 6 ಗಂಟೆಯಿAದ ಸಾಕಾನೆ ಅಭಿಮನ್ಯು ನೇತೃತ್ವದಲ್ಲಿ ಚಿಕ್ಕಭೀಮ, ದೊಡ್ಡಭೀಮ, ಅಶ್ವತ್ಥಾಮ ಹಾಗೂ ಶ್ರೀಕಂಠ ಆನೆಗಳ ಸಹಾಯದಿಂದ ನಾಗರಹೊಳೆ ಅರಣ್ಯಕ್ಕೆ ಹೊಂದಿಕೊAಡಿರುವ ಪ್ರದೇಶಗಳಲ್ಲಿ ಕೂಂಬಿAಗ್ ಕಾರ್ಯಾಚರಣೆ ನಡೆಸಲಾಯಿತು. ಹುಲಿ ಹೆಜ್ಜೆಯ ಜಾಡು ಅರಸಿದ ಕೂಂಬಿAಗ್ ತಂಡ ಮಧ್ಯಾಹ್ನ 2.30ರ ವೇಳೆಗೆ ನಾಣಚ್ಚಿ ಗೇಟ್ ಬಳಿ ವ್ಯಾಘ್ರವನ್ನು ಮೊದಲಿಗೆ ಪತ್ತೆ ಹಚ್ಚಿತ್ತು. ಈ ವೇಳೆ ಮಾನವ ಜೀವ ಬಲಿ ಪಡೆದ ಹುಲಿಯ ಗುರುತನ್ನು ಖಾತರಿಪಡಿಸಲಾಯಿತು. ಬಳಿಕ ಟೈಗರ್ ಸ್ಕಾ÷್ವಡ್‌ನ ವೈದ್ಯಾಧಿಕಾರಿ ಡಾ.ರಂಜನ್ ಅವರು ಆನೆ ಮೇಲಿಂದ ಅರವಳಿಕೆ ಚುಚ್ಚು ಮದ್ದನ್ನು…

Read More

ಮಡಿಕೇರಿ ಫೆ.14 : ಕೊಡವ ಮಕ್ಕಡ ಕೂಟ ಮತ್ತು ಕಾವೇರಿ ಕೇರಿ ಕೊಡವ ಸಂಘದ ಸಂಯುಕ್ತಾಶ್ರಯದಲ್ಲಿ ಫೆ.19 ರಂದು ವಕೀಲ, ಕ್ರೀಡಾಪಟು ಹಾಗೂ ಬರಹಗಾರ ಬಾಳೆಯಡ ಕಿಶನ್ ಪೂವಯ್ಯ ಅವರು ಬರೆದಿರುವ ಎರಡು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಅಂದು ಬೆಳಿಗ್ಗೆ 10.30 ಗಂಟೆಗೆ ನಗರದ ಪತ್ರಿಕಾಭವನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ ಉದ್ಘಾಟಿಸಲಿದ್ದು, ಕಾವೇರಿಕೇರಿ ಕೊಡವ ಸಂಘದ ಅಧ್ಯಕ್ಷರಾದ ಬಲ್ಯಾಟಂಡ ಲತಾ ಚಂಗಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ರಾಜಕೀಯ ಮತ್ತು ಪ್ರಕೃತಿ ಪುಸ್ತಕವನ್ನು ಸಾಹಿತಿ ಹಾಗೂ ವಕೀಲರಾದ ಕೆ.ಪಿ.ಬಾಲಸುಬ್ರಹ್ಮಣ್ಯ (ಕಂಜರ್ಪಣೆ), ವ್ಯಕ್ತಿ ಪರಿಚಯ ಮತ್ತು ಸಾಮಾಜಿಕ ಚಿಂತನೆ ಪುಸ್ತಕವನ್ನು ಎಕ್ಸ್ಪ್ರೆಸ್ ಲಿ. ಸೌತ್ ಬ್ಲೂ ಡಾರ್ಟ್ ನ ಹಿರಿಯ ಉಪಾಧ್ಯಕ್ಷ ಹಾಗೂ ಪ್ರಾದೇಶಿಕ ಮುಖ್ಯಸ್ಥ ಬಾಳೆಯಡ ಸಿ.ಕಾಳಪ್ಪ ಅವರು ಬಿಡುಗಡೆ ಮಾಡಲಿದ್ದಾರೆ. ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರು ಪುಸ್ತಕ ಪರಿಚಯ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಹಾಗೂ ಬರಹಗಾರ…

Read More

ಸೋಮವಾರಪೇಟೆ ಫೆ.14 :  ಪ.ಪಂ  ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಗರೋತ್ಥಾನ ಕಾಮಗಾರಿ ಕಳಪೆಯಾಗಿರುವ ದೂರಿನ ಹಿನ್ನಲೆಯಲ್ಲಿ ಇಲಾಖೆಯ ಅಧಿಕಾರಿಗಳು ದೌಡಾಯಿಸಿ ಬಂದರೆ, ಗುತ್ತಿಗೆದಾರ ಸ್ಥಳಕ್ಕೆ ಬಾರದೆ ಗೈರಾಗಿ ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದ್ದಾರೆ. ಪಟ್ಟಣದ ವಿವಿಧೆಡೆ 2.26ಕೋಟಿ ವೆಚ್ಚದ ಚರಂಡಿ ಹಾಗೂ ರಸ್ತೆ ಕಾಮಗಾರಿ ಗುತ್ತಿಗೆದಾರನ ನಿರ್ಲಕ್ಷ್ಯ ಹಾಗೂ ಅಸಡ್ಡೆಯಿಂದ ಆರಂಭದಲ್ಲೇ ವಿವಾದಕ್ಕೆ ಕಾರಣವಾಗಿದೆ. ಇಲ್ಲಿನ ವಲ್ಲಭಭಾಯಿ ರಸ್ತೆ ಹಾಗೂ ರೇಂಜರ್ ಬ್ಲಾಕಿನಲ್ಲಿ ನಿರ್ಮಾಣಗೊಂಡಿರುವ ಚರಂಡಿ ಕಳಪೆ ಕಾಮಗಾರಿ ಯಾಗಿರುವ ಬಗ್ಗೆ ಪ.ಪಂ  ಸದಸ್ಯರ ಆರೋಪದ ಹಿನ್ನಲೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಶಿವಪ್ರಕಾಶ್ ಇಂದು ಪಟ್ಟಣಕ್ಕೆ ದೌಡಾಯಿಸಿ ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಿದರು. ಈ ಸಂದರ್ಭ ಗುತ್ತಿಗೆದಾರರು ಗೈರಾಗಿರುವ ಬಗ್ಗೆ ಸದಸ್ಯರುಗಳು ಆಕ್ಷೇಪಿಸಿದ್ದರಿಂದ ಅಧಿಕಾರಿಗಳು ಪೇಚಿಗೆ ಸಿಲುಕುವಂತಾಯಿತು. ಕಾಮಗಾರಿ ಆರಂಭಿಸುವಾಗ ಪಂಚಾಯ್ತಿ ಆಡಳಿತಕ್ಕೆ ಮತ್ತು ವಾರ್ಡ್ ಸದಸ್ಯರಿಗೆ ಮಾಹಿತಿಯೇ ನೀಡಿಲ್ಲ. ಅಲ್ಲದೆ ಕೆಲವೇ ಕಾರ್ಮಿಕರನ್ನು ಇಟ್ಟುಕೊಂಡು ಬೇಕಾಬಿಟ್ಟಿ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಸದಸ್ಯರು…

Read More

ಮಡಿಕೇರಿ ಫೆ.14 : ಕೊಡಗಿನ ಬಾಣೆ ಜಾಗಕ್ಕೆ ಸಂಬಂಧಿಸಿದ ಗೊಂದಲಗಳು ಈಗಾಗಲೇ ನ್ಯಾಯಾಲಯದಲ್ಲಿ ನಿವಾರಣೆಯಾಗಿದೆ. ಆದರೆ ಕಂದಾಯ ಸಚಿವರು ಇತ್ತೀಚಿಗೆ ನೀಡಿರುವ ಹೇಳಿಕೆ ಜಿಲ್ಲೆಯ ಬೆಳೆಗಾರರಲ್ಲಿ ಗೊಂದಲ ಮತ್ತು ಆತಂಕವನ್ನು ಸೃಷ್ಟಿಸಿದೆ ಎಂದು ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಹಂಚೆಟ್ಟಿರ ಮನು ಮುದ್ದಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಜಿಲ್ಲೆಯ ಜಮ್ಮಾ ಜಾಗದ ಕುರಿತು ಸರಿಯಾಗಿ ಅರ್ಥಮಾಡಿಕೊಂಡು ಸಚಿವರು ಹೇಳಿಕೆಗಳನ್ನು ನೀಡಬೇಕು, ಈಗ ನೀಡಿರುವ ಹೇಳಿಕೆಯನ್ನು ವಾಪಾಸ್ಸು ಪಡೆದು ಜಿಲ್ಲೆಯ ಜನ ನಿಶ್ಚಿಂತೆಯಿAದ ಬದುಕುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಬೆಳೆಗಾರರ ಜಮ್ಮಾ ಜಾಗದ ಮೇಲೆ ಸರ್ಕಾರ ಹಿಡಿತ ಸಾಧಿಸುವುದು ಸರಿಯಲ್ಲ. ಜಮ್ಮಾ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗುವುದು ಎಂದು ಕಂದಾಯ ಸಚಿವರು ಹೇಳಿಕೆ ನೀಡಿರುವುದು ಅರ್ಥಹೀನ. 1992 ರಲ್ಲಿ ಚಕ್ಕೇರ ಪೂವಯ್ಯ ಅವರ ಪ್ರಕರಣದ ಸಂದರ್ಭವೇ ನ್ಯಾಯಾಲಯ ಜಮ್ಮಾ ಹಿಡುವಳಿದಾರರ ಪರ ತೀರ್ಪು ನೀಡಿದೆ. ಅಲ್ಲದೆ ಕರ್ನಾಟಕ ರಾಜ್ಯವ್ಯಾಪಿ ಕಂದಾಯ ಕಾನೂನು ಒಂದೇ ಆಗಿದ್ದು, ಕೊಡಗಿಗೆ ಪ್ರತ್ಯೇಕ…

Read More

ಮಡಿಕೇರಿ ಫೆ.14 : ವಿವಿಧ ಇಲಾಖೆಗಳಲ್ಲಿ ಬಳಕೆಯಾಗದೆ ಉಳಿದಿರುವ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ನಿಯಮಾನುಸಾರ ಬಳಕೆ ಮಾಡಿ ಮಾರ್ಚ್ ತಿಂಗಳ ಒಳಗಾಗಿ ಸಂಪೂರ್ಣ ಪ್ರಗತಿ ಸಾಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ಸೂಚಿಸಿದ್ದಾರೆ. ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸಾಮಥ್ರ್ಯ ಸೌಧದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಲಜೀವನ್ ಮಿಷನ್, ಸ್ವಚ್ಚ ಭಾರತ್ ಮಿಷನ್ ಹಾಗೂ ಇತರ ಇಲಾಖೆಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮಾರ್ಚ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಿ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು. ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಬೇಕು. ತಾಲ್ಲೂಕಿನಲ್ಲಿ ಬಿಟ್ಟು ಹೋದಂತಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ವಿವಿಧ ಇಲಾಖೆಗಳಲ್ಲಿ ದೊರೆಯುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮಾಡಲು ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲೆಯ 103 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುವ್ಯವಸ್ಥಿತವಾದ ಡಿಜಿಟಲ್ ಗ್ರಂಥಾಲಯಗಳಿದ್ದು, ವಿರಾಜಪೇಟೆ ತಾಲ್ಲೂಕಿನಲ್ಲಿ 25,216 ಶಾಲಾ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಅದರಲ್ಲಿ 6,222 ಮಕ್ಕಳು…

Read More