ಮಡಿಕೇರಿ ಜ.2 : ಸೋಮವಾರಪೇಟೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ವತಿಯಿಂದ ಜ.9 ರಂದು ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಬಸ್ಸು ನಿಲ್ದಾಣ ಉದ್ಘಾಟನೆ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಜೆ.ಸಿ.ವೇದಿಕೆಯಿಂದ ವಿವಿಧ ಕಲಾ ತಂಡಗಳು ಹಾಗೂ ಪೂರ್ಣ ಕುಂಭ ಕಳಸದೊಂದಿಗೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರ ಮೆರವಣಿಗೆ ನಡೆಯಲಿದೆ. ನಂತರ 10 ಗಂಟೆಗೆ ತುಮಕೂರು ಶ್ರೀ ಸಿದ್ದಗಂಗಾ ಮಠದ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ವಿರಾಜಪೇಟೆ ಅರಮೇರಿ, ಕಳಂಚೇರ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಅಮ್ಮತ್ತಿ ಕನ್ನಡಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲುಮಠದ ಸದಾಶಿವ ಸ್ವಾಮೀಜಿ, ಬಸವಪಟ್ಟಣ ತೋಂಟದಾರ್ಯ ಸಂಸ್ಥಾನಮಠದ ಸ್ವತಂತ್ರ ಬಸವಲಿಂಗ ಸ್ವಾಮಿಜಿ, ತೊರೆನೂರು ವಿರಕ್ತಮಠದ ಮಲ್ಲೇಶ ಸ್ವಾಮೀಜಿ, ಅಂಕನಳ್ಳಿ ಮನೆಹಳ್ಳಿಮಠದ ತಪೋಕ್ಷೇತ್ರ ಮಹಾಂತ ಶಿವಲಿಂಗ ಸ್ವಾಮೀಜಿ, ಮಾದ್ರೆ ಮುದ್ದಿನಕಟ್ಟೆಮಠ ಅಭಿನವ ಸಿದ್ದಲಿಂಗ ಶಿವಾರ್ಚರ್ಯ ಸ್ವಾಮೀಜಿ, ಕೆಸವತ್ತೂರುಮಠದ ಬಸವರಾಜೇಂದ್ರ ಸ್ವಾಮಿಜಿ,…
ಲೇಖಕ: admin
ಮಡಿಕೇರಿ ಜ 2 : ಮಡಿಕೇರಿ ಇನ್ನರ್ ವೀಲ್ ಸಂಸ್ಥೆ ವತಿಯಿಂದ ನಗರದ ಚೌಡೇಶ್ವರಿ ದೇವಾಲಯದ ಬಳಿಯಲ್ಲಿನ ಅಂಗನವಾಡಿ ಕೇಂದ್ರಕ್ಕೆ ಕುಚಿ೯ , ಬೋಡ್೯ ಕೊಡುಗೆಯಾಗಿ ನೀಡಲಾಯಿತು. ಮಡಿಕೇರಿ ನಗರಸಭೆಯ ಉಪಾಧ್ಯಕ್ಷೆ ಸವಿತಾ ರಾಕೇಶ್ ಮಾತನಾಡಿ, ಮಕ್ಕಳಿಗೆ ಉಪಯುಕ್ತವಾದ ಕೊಡುಗೆ ನೀಡಿರುವ ಇನ್ನರ್ ವೀಲ್ ತಂಡದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಡಾ.ರೇಣುಕಾಸುಧಾಕರ್, ಕಾಯ೯ದಶಿ೯ ಲಲಿತಾ ರಾಘವನ್, ನಿದೇ೯ಶಕಿಯರಾದ ಶಫಾಲಿ ರೈ, ಶಮ್ಮಿ ಪ್ರಭು, ಉಮಾಗೌರಿ, ಮಲ್ಲಿಗೆ ಪೈ, ರಶ್ಮಿ ಪ್ರವೀಣ್ , ಆಗ್ನೇಸ್ ಮುತ್ತಣ್ಣ, ಹಾಜರಿದ್ದರು.
ಮಡಿಕೇರಿ ಜ.2 : ಬ್ರಹ್ಮಕುಮಾರಿ ಮಡಿಕೇರಿ ಶಾಖೆಯಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಗಾಯತ್ರಿ ಅವರು ಹೊಸ ವರ್ಷದ ಪ್ರೇರಣೆಗಳನ್ನು ನೀಡಿ, ಜೀವನದಲ್ಲಿ ಬರುವ ಪರಿಸ್ಥಿತಿಯನ್ನು ಎದುರಿಸಲು ಪರಮಾತ್ಮನ ಶಕ್ತಿಯ ಅವಶ್ಯಕತೆ ಇದೆ. ಆದ್ದರಿಂದ ಜ್ಞಾನದ ಮಹತ್ವ ಅಗತ್ಯ ಎಂದು ಅಶೀರ್ವಾಚನ ನೀಡಿದರು. ಶಾಖೆಯ ಸಭಾಂಗಣದಲ್ಲಿ ಪರಮಾತ್ಮ ಶಿವನ ಸ್ಮೃತಿಯಲ್ಲಿ ಜ್ಯೋತಿ ಬೆಳೆಗಿಸಿ, ಕೇಕ್ ಕತ್ತರಿಸಿ ನೆರೆದಿದ್ದವರಿಗೆ ಪ್ರಸಾದ ವಿತರಿಸಲಾಯಿತು.
ಮಡಿಕೇರಿ ಜ.2 : ಜಿಲ್ಲಾ ದಿವ್ಯಾಂಗರ ಒಕ್ಕೂಟ ಹಾಗೂ ಮಡಿಕೇರಿ ನಗರಸಭೆ ಸಂಯುಕ್ತಾಶ್ರಯದಲ್ಲಿ ಜ.4 ರಂದು ದಿವ್ಯಾಂಗರ ದಿನಾಚರಣೆ ಹಾಗೂ ದಿವ್ಯಾಂಗರ ಕುಂದುಕೊರತೆ ಸಭೆ ನಡೆಯಲಿದೆ. ಅಂದು ಬೆಳಿಗ್ಗೆ 10.30 ಗಂಟೆಗೆ ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಸಕಾಲ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾಕುಶಾಲಪ್ಪ, ಮಡಿಕೇರಿ ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಸಮಾಜ ಸೇವಕರಾದ ತೇಲಪಂಡ ಶಿವಕುಮಾರ್ ನಾಣಯ್ಯ, ಎ.ಎಸ್.ಪೊನ್ನಣ್ಣ, ಡಾ.ಮಂಥರ್ ಗೌಡ, ಸಂಕೇತ್ ಪೂವಯ್ಯ, ನಾಪಂಡ ಮುತ್ತಪ್ಪ, ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ರವಿ ಗೌಡ, ಜಿಲ್ಲಾ ದಿವ್ಯಾಂಗರ ಒಕ್ಕೂಟದ ಅಧ್ಯಕ್ಷೆ ಎನ್.ಕೆ.ಈಶ್ವರಿ ಪಾಲ್ಗೊಳ್ಳಲಿದ್ದಾರೆ.
ವಿರಾಜಪೇಟೆ ಜ.2 : ಮಲೆತಿರಿಕೆ ಬೆಟ್ಟದ ಶ್ರೀ ಅಯ್ಯಪ್ಪ ಸ್ಪಾಮಿ ದೇವಾಲಯದ ವಾರ್ಷಿಕ ಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು. ಶ್ರೀ ಅಯ್ಯಪ್ಪ ಸ್ಪಾಮಿ ಚಲನವಲನಉಳ್ಳ ಸ್ತದ್ಧಚಿತ್ರ, ಅಯ್ಯಪ್ಪ ಸ್ಪಾಮಿ ಮಾಲಾಧರಿಗಳ ಭಜನೆ, ದೀಪಾರತಿಯ ಶೋಭಯಾತ್ರೆಯೊಂದಿಗೆ ವಾರ್ಷೀಕ ಉತ್ಸವ ತೆರೆಕಂಡಿತು. ಮುಂಜಾನೆಯಿಂದಲೇ ಶ್ರೀ ಅಯ್ಯಪ್ಪ ಸ್ವಾಮಿಗೆ ಗಣಪತಿ ಹೊಮ, ಲಕ್ಷ್ಮೀ ಪೂಜೆ ಸರಸ್ಪತಿ ಪೂಜೆ, ತುಲಭಾರ ಸೇವೆ ಲಕ್ಷಾರ್ಚನೆ ಹಾಗೂ ಮಾಹಾಪೂಜೆ ಜರುಗಿತು. ನಂತರ ಗರುಡ ಪಕ್ಷಿಯ ಆಗಮಾನಗೊಂಡು ಗರುಡಕಂಭಕ್ಕೆ ಮೂರು ಸುತ್ತಿನ ಪ್ರದಕ್ಷಿಣೆಯೊಂದಿಗೆ ಹಿಂದಿರುಗಿತು. ಮಾಹಾಪೂಜೆ ಬಳಿಕ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಬೆಟ್ಟದ ತಪ್ಪಲಿನಿಂದ ಶ್ರೀ ಅಯ್ಯಪ್ಪ ಸ್ಪಾಮಿಯ ಶೋಭಯಾತ್ರೆ ಆರಂಭಗೊಂಡಿತು. ಮೆರವಣಿಗೆಯು ತೆಲುಗರ ಬೀದಿ, ದೊಡ್ಡಟ್ಟಿ ಚೌಕಿ, ಎಫ್.ಎಂ.ಸಿ ರಸ್ತೆ, ಮಲಬಾರ್ ರಸ್ತೆಯ ಶ್ರೀ ಚೈತನ್ಯ ಮಠಪುರ, ಮುತ್ತಪ್ಪ ದೇವಾಲಯದಲ್ಲಿ ಕೊನೆಗೊಂಡಿತು. ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ದೇವಾಲಯಕ್ಕೆ ಆಗಮಿಸಿ ಶ್ರೀ ಸ್ವಾಮಿಯ ದರ್ಶನ ಪಡೆದರು. ಶೋಭಯಾತ್ರೆಯಲ್ಲಿ ಹೆಣ್ಣು ಮಕ್ಕಳ ದೀಪಾರತಿ ಸೇವೆ, ಶ್ರೀ ಅಯ್ಯಪ್ಪ…
ಮಡಿಕೇರಿ ಜ.2 : ಸಾಹಿತ್ಯ ಹಾಗೂ ಪತ್ರಿಕೋದ್ಯಮದ ಅನನ್ಯ ಸೇವೆಗಾಗಿ ಮೈಸೂರು ಹಾಗೂ ಹಾಸನ ಬ್ಯುರೊ ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಐತಿಚಂಡ ರಮೇಶ್ ಉತ್ತಪ್ಪ “ಕಾವೇರಿ ಕರ್ನಾಟಕ ರತ್ನ” ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಾವೇರಿ ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಅಕಾಡೆಮಿ ಈ ಪ್ರಶಸ್ತಿ ಕೊಡಮಾಡುತ್ತಿದೆ. ಕಳೆದ 28 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಗಲೇ ಮೈಸೂರಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ವಿದ್ಯಾನಿಧಿ ಪ್ರಶಸ್ತಿ, ಪತ್ರಿಕೋದ್ಯಮದಲ್ಲಿ ರಾಜ್ಯಮಟ್ಟದ 10 ಪ್ರಶಸ್ತಿ, ಯುಜಿಸಿಯಿಂದ ಚಿನ್ನದ ಪದಕ ಪಡೆದಿದ್ದಾರೆ. ಇಲ್ಲಿಯವರೆಗೆ 31 ಕೃತಿಗಳನ್ನು ಬರೆದಿದ್ದಾರೆ.
ಮಡಿಕೇರಿ ಜ.2 : ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮುಂದಿನ 3 ವರ್ಷ ಅವಧಿಗೆ ಅಧ್ಯಕ್ಷರಾಗಿ ಹೆಚ್.ಪಿ.ರವೀಶ್ ಮರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವೀಣಾ, ಖಜಾಂಚಿಯಾಗಿ ರಾಜಶೇಖರ ಆಯ್ಕೆಯಾಗಿದ್ದಾರೆ. ರಾಜ್ಯ ಪರಿಷತ್ ಸ್ಥಾನಕ್ಕೆ ಉಳಿದ 6 ಪದಾಧಿಕಾರಿಗಳು ಆಯ್ಕೆಯಾಗಿದ್ದು, ಕಕ್ಕಬ್ಬೆ ಗ್ರಾ.ಪಂ ಪಿಡಿಒ ಅಶೋಕ್ ಕುಮಾರ್ ಬಿ.ವೈ, ಉಪಾಧ್ಯಕ್ಷ ರಾಗಿ ವಾಲ್ನೂರು ತ್ಯಾಗತ್ತೂರು ಪಿಡಿಒ ಲೋಕೇಶ್, ಸಂಘಟನಾ ಕಾರ್ಯದರ್ಶಿಯಾಗಿ ಪೊನ್ನಂಪೇಟೆ ಪಿಡಿಒ ಪುಟ್ಟರಾಜು, ಲಿಖಿತಾ, ಕ್ರೀಡಾ ಕಾರ್ಯದರ್ಶಿಯಾಗಿ ಮದೆನಾಡು ಪಿಡಿಒ ನಂಜುಂಡಸ್ವಾಮಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಾಳಿಬೀಡು ಪಿಡಿಒ ಶಶಿಕಿರಣ್ ಅವಿರೋಧ ಆಯ್ಕೆಯಾಗಿದ್ದಾರೆ. ಮಡಿಕೇರಿ ತಾ.ಪಂ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿ ಮೋಹನ್ ಕುಮಾರ್,ಚುನಾವಣಾ ಸಿಬ್ಬಂದಿಗಳಾದ ಹುಸೇನ್ ಮುಲ್ಲಾ, ದೀಪ್ತಿ ಚುನಾವಣಾ ಪ್ರಕ್ರಿಯೆ ಹಾಗೂ ಮತ ಎಣಿಕೆ ಪ್ರಕ್ರಿಯೆ ನಡೆಸಿದರು. ನೊಂದಣಿಯಾದ 78 ಮತದಾರರಲ್ಲಿ 75 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಮತದಾರರಿಗೆ ಇಲಾಖೆ ಆಯುಕ್ತರು ಓಓಡಿ ಸೌಲಭ್ಯ ಕಲ್ಪಿಸಿದ್ದ ರು. ಕಾನೂನು ಸಲಹೆಗಾರ ಹಾಗೂ ಗೌರವಾಧ್ಯಕ್ಷ ಹುದ್ದೆಗೆ ಜಿಲ್ಲಾ ಸಮಿತಿ…
ಮಡಿಕೇರಿ ಜ.2 : ಗೋಣಿಕೊಪ್ಪಲು ಬೈಪಾಸ್ ಕಾಂಕ್ರೀಟ್ ರಸ್ತೆ ಯನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿದರು. ಗೋಣಿಕೊಪ್ಪಲು ಗ್ರಾ.ಪಂ.ಬೈಪಾಸ್ ರಸ್ತೆ ರೂ.55 ಲಕ್ಷ, ಗೋಣಿಕೊಪ್ಪಲು ಜ್ಯೂಸ್ ಫ್ಯಾಕ್ಟರಿ ರಸ್ತೆ ಅಭಿವೃದ್ಧಿ ರೂ.8 ಲಕ್ಷ, ಗೋಣಿಕೊಪ್ಪಲು ಸಂತ ಥೋಮಸ್ ಶಾಲಾ ಭಾಗದ ರಸ್ತೆ ಅಭಿವ್ಯಕ್ತಿ ರೂ.6.25 ಲಕ್ಷ, ಗೋಣಿಕೊಪ್ಪಲು ಅಂಚೆ ಕಚೇರಿ ರಸ್ತೆ ಅಭಿವೃದ್ಧಿ ರೂ.4.75 ಲಕ್ಷ, ಗೋಣಿಕೊಪ್ಪಲು ಮಾರ್ಕೆಟ್ ಹಿಂಭಾಗ ರಸ್ತೆ ಅಭಿವೃದ್ಧಿ ರೂ.5 ಲಕ್ಷ,, ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಮುಂಭಾಗ ರಸ್ತೆ ಅಭಿವೃದ್ಧಿ ರೂ.4.00 ಲಕ್ಷ,, ಸರ್ಕಾರಿ ಆಸ್ಪತ್ರೆ ಹಿಂಭಾಗ ರಸ್ತೆ ಅಭಿವೃದ್ಧಿ ರೂ.3.75 ಲಕ್ಷ, ಆಟೋ ಮಾಲೀಕರ, ಚಾಲಕರ ಸಂಘದ ಕಟ್ಟಡ ಮೇಲ್ಛಾವಣಿ ನಿರ್ಮಾಣ ರೂ.3 ಲಕ್ಷ, ಒಂದನೇ ವಿಭಾಗ ರಸ್ತೆ ಅಭಿವೃದ್ದಿ ರೂ.1.50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಗೋಣಿಕೊಪ್ಪಲು, ಜ.2 : ಕಾನೂರು ಸಮೀಪದ ಬೊಮ್ಮಾಡು ಸರ್ಕಾರಿ ಆಶ್ರಮ ಶಾಲೆಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಹೊಸ ವರ್ಷವನ್ನು ವಿಶೇಷವಾಗಿ ಆಚರಿಸಿದರು. ಎನ್ ಎಸ್ ಎಸ್ ಅಧಿಕಾರಿಗಳಾದ ಎಂ.ಎನ್.ವನಿತ್ ಕುಮಾರ್ ಮತ್ತು ಎನ್.ಪಿ.ರೀತಾ ಅವರ ನೇತೃತ್ವದಲ್ಲಿ ಬೊಮ್ಮಾಡು ಆಶ್ರಮ ಶಾಲೆಗೆ ತೆರಳಿದ ಸ್ವಯಂ ಸೇವಕರು ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ವಿದ್ಯಾರ್ಥಿಗಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು. ನಂತರ ವಿದ್ಯಾರ್ಥಿಗಳಿಗೆ ವಿವಿಧ ಮನರಂಜನ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ನೃತ್ಯ ಹಾಗೂ ಹಾಡಿನ ಮೂಲಕ ರಂಜಿಸಿದರು. ಕಾರ್ಯಕ್ರಮದಲ್ಲಿ ಕಾವೇರಿ ಕಾಲೇಜು ಉಪನ್ಯಾಸಕ ಎ.ಎ.ಪೊನ್ನಪ್ಪ, ರಂಜಿತ್, ಆಶ್ರಮ ಶಾಲೆ ಸಿಬ್ಬಂದಿಗಳು, ಎನ್ ಎಸ್ ಎಸ್ ನಾಯಕ ದರ್ಶನ್, ಕಲನ್ ಕಾರ್ಯಪ್ಪ, ರೋಷನ್, ಮಿಥುನ್ ಹಾಗೂ ಸ್ವಯಂ ಸೇವಕರು ಇದ್ದರು.
ಬೆಂಗಳೂರು ಜ.2 : ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಡಾ. ತಂಬಂಡ ವಿಜಯ್ ಪೂಣಚ್ಚ ಬರೆದಿರುವ ಮೂರು ಇತಿಹಾಸ ಪುಸ್ತಕಗಳನ್ನ ಆದಿ ಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿಗಳು ಬಿಡುಗಡೆ ಮಾಡಿದರು. ಬೆಂಗಳೂರಿನ ಅರಮನೆ ರಸ್ತೆಯಯಲ್ಲಿರುವ ಕೊಂಡಜ್ಜಿ ಬಸಪ್ಪ ಸದಾನಂದ ಗೌಡ ಸಭಾಂಗಣದಲ್ಲಿ ಪುಸ್ತಕಗಳನ್ನ ಬಿಡುಗಡೆಗೊಳಿಸಲಾಯಿಯಿತು. ಮಾಜಿ ಕೇಂದ್ರ ಸಚಿವ ಸದಾನಂದಗೌಡ, ಸಂಸದ ತೇಜಸ್ವಿ ಸೂರ್ಯ, ಚಾಣಕ್ಯ ವಿವಿ ಸಂಶೋಧಕ ಪ್ರೊ. ಮತ್ತಿಘಟ್ಟ ಎಸ್. ಚೈತ್ರ, ಹಂಪಿ ಕನ್ನಡ ವಿವಿ ಕುಲಪತಿ ಸ.ಚಿ. ರಮೇಶ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಡಾ.ತಂಬಂಡ ವಿಜಯ್ ಪೂಣಚ್ಚ ಅವರ ರಾಜೇಂದ್ರ ನಾಮೆ ಮರು ಓದು, ಅಮರ ಸುಳ್ಯ ಸಂಗ್ರಾಮ 1837 ಮತ್ತು ಕಾಡು ಮಕ್ಕಳ ಕೂಗು ಪುಸ್ತಕಗಳನ್ನು ಗಣ್ಯರ ಅನಾವರಣಗೊಳಿಸಿದರು. ಸಮಾರಂಭದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಬಹಳಷ್ಟು ಸಂದರ್ಭಗಳಲ್ಲಿ ಇತಿಹಾಸವನ್ನು ರಾಜಕೀಯ ಕರಪತ್ರಗಳಂತೆ ರಚಿಸಲಾಗಿದ್ದು, ಇತಿಹಾಸ ದರ್ಶನ ಮತ್ತು ಮರು ದರ್ಶನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟುರು. ಇದೇ ಸಂದರ್ಭ ಮಾತನಾಡಿದ ಸದಾನಂದ…






