ನಾಪೋಕ್ಲು ಆ.28 NEWS DESK : ಕೊಡಗು ಜಿಲ್ಲೆ ತಲತಲಾಂತರ ತನ್ನದೇ ಆದ ವಿಶೇಷ ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ ಪರಂಪರೆಯನ್ನು ಹೊಂದಿದೆ. ಇವುಗಳಲ್ಲಿ ಸಾಮೂಹಿಕವಾಗಿ ಭಾಗವಹಿಸಿ ಆಚರಿಸಲ್ಪಡುವ ಕಾವೇರಿ ಸಂಕ್ರಮಣ, ಹುತ್ತರಿ(ಪುತ್ತರಿ) ಪ್ರಮುಖ ಹಬ್ಬಗಳಲ್ಲಿ ಕೈಲ್ ಪೊಳ್ದ್ ಒಂದು. ಇದನ್ನು ನಾಲ್ಕು ನಾಡು ವ್ಯಾಪ್ತಿಯಲ್ಲಿ ಆ.28 ರಂದು ಈ ಹಬ್ಬವನ್ನು ಆಚರಿಸುವುದು ಸಾಂಪ್ರದಾಯಿಕವಾಗಿ ಬಂದಿದೆ. ಕೈಲ್ ಎಂದರೆ ಆಯುಧ. ಪೊಳ್ದ್ ಎಂದರೆ ಪೂಜೆ ಎಂದರ್ಥ. ಅಂತೆಯೇ “ಕೈಲ್ ಪೊಳ್ದ್ ” ಎಂದರೆ ಆಯಧ ಪೂಜೆ. ಹಿಂದೆ ಪ್ರಾಣಿಗಳ ಬೇಟೆಗೆ ಕೋವಿ ಕತ್ತಿ ವಿವಿಧ ಆಯುಧಗಳನ್ನು ಬಳಸುತ್ತಿದ್ದರು. ಆದರೆ ವ್ಯವಸಾಯದ ಸಂದರ್ಭದಲ್ಲಿ ಅಂದರೆ ಸಿಂಹ ಮಾಸದಲ್ಲಿ ಈ ಆಯುಧಗಳನ್ನು ಉಪಯೋಗಿಸುವುದಿಲ್ಲ. ಕೃಷಿ ಕಾರ್ಯ ಮುಗಿದ ನಂತರ ಕೃಷಿ ಪರಿಕರಗಳಿಗೆ ಹಾಗೂ ಆಯುಧಗಳಿಗೆ ಪೂಜೆ. ಈ ಕೆಲವು ಆಯುಧಗಳನ್ನು ದೇವರ ಕೋಣೆ (ಕನ್ನಿಕೋಂಬರೆ) ಯಿಂದ ಹೊರ ತೆಗೆದು ಸಾಂಪ್ರದಾಯದೊಂದಿಗೆ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಕೋವಿಯನ್ನು ಪೂಜಿಸಲು ಈ ಸಂದರ್ಭ ವಿಶೇಷವಾಗಿ ಕಾಡಿನಲ್ಲಿ ದೊರಕುವ…
ಲೇಖಕ: admin
ಮಾದಾಪುರ NEWS DESK ಆ.27 : ಮಳೆಹಾನಿ ಸಂತ್ರಸ್ತರೊಂದಿಗೆ ಗಣೇಶ ಚತುರ್ಥಿ ಆಚರಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಹಬ್ಬವನ್ನು ಅರ್ಥಪೂರ್ಣಗೊಳಿಸಿದರು. ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಮಾದಾಪುರ ಗ್ರಾಮ ಪಂಚಾಯಿತಿಯ ಗರಗಂದೂರು ಮುರಾರ್ಜಿ ವಸತಿ ಶಾಲೆಯ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರನ್ನು ಶಾಸಕರು ಭೇಟಿಯಾದರು. ಇಂದು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಿದ ಶಾಸಕರು ತಾವೇ ಖುದ್ದು ಸಂತ್ರಸ್ತರಿಗೆ ಊಟ ಬಡಿಸಿ, ತಾವು ಕೂಡ ಊಟ ಮಾಡಿದರು. ಸಿಹಿ ಹಂಚಿ ಅಹವಾಲುಗಳನ್ನು ಆಲಿಸಿ ಧೈರ್ಯ ತುಂಬಿದರು.
ಮಡಿಕೇರಿ NEWS DESK ಆ.27 : ಕೊಂಡಗೇರಿಯಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ಸಣ್ಣುವoಡ ರಶ್ಮಿ ಪೊನ್ನಮ್ಮ, ಬೊಳ್ಳೆ ಪoಡ ದೀಪ್ತಿ ತಂಗಮ್ಮ, ಪಳೆಯಂಡ ಕಾಜಲ್ ಪಿ.ಸಿ, ಸೃಷ್ಟಿ ಬಿ.ಸ್, ಹೈಜಾ ಬಿ.ಐ,ನಿಲ್ಮಾಡ್ ತನ್ಯಾ ರೈ, ಕುಟ್ಟನ ಎo. ಯಶ್ಮಿತ, ಪುಚ್ಚಿ ಮಂಡ ಯು ತನಿಶಾ ವಿಜೇತ ವಿದ್ಯಾರ್ಥಿಗಳಾಗಿದ್ದಾರೆ. ಶಾಲೆಯ ದೈಹಿಕ ಶಿಕ್ಷಕರುಗಳಾದ ಮೋನಿಕಾ ಬಿ.ಎಸ್ ಹಾಗೂ ಲಾವಣ್ಯ ಮಾರ್ಗದರ್ಶನ ನೀಡಿದ್ದಾರೆ. ಈ ತಂಡದ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕಿ, ಸಂಯೋಜಿಕಿ ಹಾಗೂ ಬೋಧಕ ಬೋಧಕೇತರ ವೃಂದದವರು, ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
*ಹಿಂದೂ, ಮುಸ್ಲಿಂ, ಕ್ರೈಸ್ತರು ಎನ್ನುವ ಬೇಧಭಾವವಿಲ್ಲದೆ ಎಲ್ಲರೂ ಒಗ್ಗೂಡಿ ಸೂರ್ಯಕಾಂತಿ ಎಲೆಯಲ್ಲಿ ಮೂಡಿದ ಗಣಪತಿ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಿದ ಪುಟಾಣಿನಗದ ಯುವಕರು* ಮಡಿಕೇರಿ NEWS DESK ಆ.27 : ಗಣೇಶೋತ್ಸವದ ಸಡಗರ ನಾಡಿನಲ್ಲಿ ಮನೆ ಮಾಡಿದೆ. ವಿಘ್ನ ನಿವಾರಕ ವಿನಾಯಕನ ಸ್ಮರಣೆ ಜೋರಾಗುತ್ತಿದ್ದು, ಮಡಿಕೇರಿ ನಗರದಲ್ಲೂ ಹಬ್ಬದ ವಾತಾವರಣವಿದೆ. ಉತ್ಸವದ ವಿಶೇಷ ಆಕರ್ಷಣೆಯಾದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ವಿವಿಧ ಬಡಾವಣೆಗಳಲ್ಲಿ ಮಾಡಲಾಗಿದೆ. ನಗರದ ಪುಟಾಣಿನಗರ ಉದ್ಭವ ವಿನಾಯಕ ಸೇವಾ ಸಮಿತಿಯ ಸದಸ್ಯರು 32ನೇ ವರ್ಷದ ಅದ್ದೂರಿ ಗಣೇಶೋತ್ಸವವನ್ನು ಒಗ್ಗಟ್ಟಿನಿಂದ ಆಚರಿಸುತ್ತಾ ಸಂಭ್ರಮಿಸುತ್ತಿದ್ದಾರೆ. ಮಡಿಕೇರಿಯ ಕಲಾವಿದ ರವಿ ಅವರ ಕೈಯಲ್ಲಿ ಅರಳಿದ ಸೂರ್ಯಕಾಂತಿ ಎಲೆಯಲ್ಲಿ ಮೂಡಿದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಮುಂದಿನ 9 ದಿನಗಳ ಕಾಲ ಬಡಾವಣೆಯ ನಿವಾಸಿಗಳ ಮನೆ ಮನೆಯಿಂದಲ್ಲೂ ಗಣಪತಿ ಮೂರ್ತಿಗೆ ಸಂಕಲ್ಪ ಪೂಜೆಗಳು ನಡೆಯಲಿದೆ. ಕೆಲವು ವರ್ಷಗಳ ಹಿಂದೆ ಕೇವಲ ಬೆರಳೆಣಿಕೆಯಷ್ಟು ಸದಸ್ಯರನ್ನು ಹೊಂದಿದ್ದ ಉದ್ಭವ ವಿನಾಯ ಸೇವಾ ಸಮಿತಿಯ ಸದಸ್ಯರು ಪೆಂಡಲ್ ನಲ್ಲಿ ವಿನಾಯಕನ ಅರಾದನೆ ಮಾಡುತ್ತಿದ್ದರು. ಅಂದು…
ಸೌತಡ್ಕ NEWS DESK ಆ.27 : ಬಯಲು ಆಲಯ ಗಣಪತಿ ಹಾಗೂ ಗಂಟೆ ಗಣಪತಿ ಎಂಬ ಖ್ಯಾತಿಯ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಸಮೀಪದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಗಣೇಶ ಚತುರ್ಥಿ ಉತ್ಸವವನ್ನು ಶ್ರದ್ಧಾಭಕ್ತಿ, ವಿಜೃಂಭಣೆಯಿಂದ ಆಚರಿಸಲಾಯಿತು. 108 ಕಾಯಿ ಗಣಹೋಮ, ರಂಗಪೂಜೆ ಮತ್ತು ಮಹಾಪೂಜೆ ನೆರವೇರಿತು. ನಂತರ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ದಿನೇಶ್ ಮೆಹಂದಳೆ ಅವರ ನೇತೃತ್ವದಲ್ಲಿ ನೂರು ಮಂದಿ ಬಾಣಸಿಗರ ತಂಡ 600 ತೆಂಗಿನಕಾಯಿ, 230 ಕೆಜಿ ಬೆಲ್ಲ, 50 ಲೀಟರ್ ತುಪ್ಪ ಹಾಗೂ 2.5 ಕ್ವಿಂಟಾಲ್ ಮೈದಾ ಬಳಸಿ 30 ಸಾವಿರ ಮೋದಕಗಳನ್ನು ತಯಾರಿಸಿ, ಶ್ರೀ ಮಹಾಗಣಪತಿಗೆ ನೈವೇದ್ಯವಾಗಿ ಸಲ್ಲಿಸಿದರು. 12 ಸಾವಿರ ಅವಲಕ್ಕಿ ಪಂಚಕಜ್ಜಾಯ, 4 ಕ್ವಿಂಟಾಲ್ ಕಡಲೆ ಪಂಚಕಜ್ಜಾಯ ಹಾಗೂ 5,000 ಲಾಡುಗಳನ್ನು ತಯಾರಿಸಲಾಗಿತ್ತು. ಇದಕ್ಕಾಗಿ 5,000 ತೆಂಗಿನಕಾಯಿ, 3,600 ಕೆಜಿ ಅವಲಕ್ಕಿ ಮತ್ತು 1,200 ಕೆಜಿ ಬೆಲ್ಲ ಬಳಸಲಾಗಿತ್ತು.
ಮಡಿಕೇರಿ NEWS DESK ಆ.27 : ಮಡಿಕೇರಿ ನಗರದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಶ್ರೀಗಣೇಶ ಚತುರ್ಥಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಗ್ಗಿನಿಂದಲೇ ಹೋಮಹವನಾದಿ ವಿಶೇಷ ಪೂಜೆಗಳು ಜರುಗಿದವು. ಅಭಿಷೇಕ, ಅಲಂಕಾರ ಪೂಜೆ, ಅರ್ಚನೆ, ಮಹಾಪೂಜೆಗೆ ಅಧಿಕ ಸಂಖ್ಯೆಯ ಭಕ್ತರು ಸಾಕ್ಷಿಯಾದರು. ಹರಕೆಯ ರೂಪದಲ್ಲಿ ಭಕ್ತರು ಸಾವಿರಾರು ಸಂಖ್ಯೆಯ ಈಡುಗಾಯಿ ಸೇವೆ ಅರ್ಪಿಸಿದರು. ಮಹಾ ಮಂಗಳಾರತಿಯ ನಂತರ ಭಕ್ತ ಸಮೂಹಕ್ಕೆ ಪ್ರಸಾದ ವಿತರಿಸಲಾಯಿತು.
ಮಡಿಕೇರಿ NEWS DESK ಆ.27 : ಕೊಡವರ ಬಾಹುಳ್ಯದ ಮೂಲ ನೆಲೆಯಾದ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯ ಸಂಕೋಲೆಗಳಾದ ಮರೆನಾಡಿನಿಂದ ಸೂರ್ಲಬ್ಬಿನಾಡ್ ವರೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಅಕ್ರಮ ಬಾಂಗ್ಲಾ ದೇಶಿಗರು ಹಾಗೂ ರೋಹಿಂಗ್ಯಗಳಿಗೆ ಆಶ್ರಯ ಕಲ್ಪಿಸಲು ಷಡ್ಯಂತ್ರ ನಡೆದಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಆರೋಪಿಸಿದ್ದಾರೆ. ರಾಷ್ಟ್ರೀಯ ಜನಗಣತಿ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಸೇರಿಸಬೇಕೆಂದು ಒತ್ತಾಯಿಸಿ ವಿರಾಜಪೇಟೆಯಲ್ಲಿ ಸಿಎನ್ಸಿ ವತಿಯಿಂದ ನಡೆದ 11ನೇ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಕ್ರಮ ವಲಸಿಗರಿಗೆ ಆಶ್ರಯ ಕಲ್ಪಿಸುವ ಏಕೈಕ ಉದ್ದೇಶದಿಂದ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಲಾಗುತ್ತಿದ್ದು, ದೊಡ್ಡ ಜಾಲವೊಂದು ಕಾರ್ಯಾಚರಿಸುತ್ತಿದೆ. ಬಾಂಗ್ಲಾ ದೇಶಿಗರು ಹಾಗೂ ರೋಹಿಂಗ್ಯಗಳು ಕಾನೂನು ಬಾಹಿರವಾಗಿ ಕೊಡವ ಲ್ಯಾಂಡ್ ನಲ್ಲಿ ಆಶ್ರಯ ಪಡೆದು ತಮ್ಮ ಇರುವಿಕೆಯನ್ನು ಸಕ್ರಮಗೊಳಿಸಿಕೊಳ್ಳಲು ಮುಂದಾಗಿರುವುದು, ಸರಕಾರಿ ಯಂತ್ರಗಳು ಆಶ್ರಯ ನೀಡಲು ಹವಣಿಸುತ್ತಿರುವುದು ಮತ್ತು ದೊಡ್ಡ ದೊಡ್ಡ ಕಂಪೆನಿಗಳು ಬೆಂಬಲಕ್ಕೆ ನಿಂತಿರುವುದು…
ಸೋಮವಾರಪೇಟೆ NEWS DESK ಆ.27 : ವೀರಭದ್ರೇಶ್ವರ ವರ್ಧಂತಿ ಮಹೋತ್ಸವದ ಅಂಗವಾಗಿ ಸೋಮವಾರಪೇಟೆ ತಾಲ್ಲೂಕಿನ ಕಿರಿಕೊಡ್ಲಿ ಮಠದಲ್ಲಿ ವಿಶೇಷ ಪೂಜೆ ನಡೆಯಿತು. ಭಾದ್ರಪದ ಮಾಸದ ಮೊದಲ ಮಂಗಳವಾರ ವೀರಭದ್ರಸ್ವಾಮಿ ಅವತರಿಸಿದರೆಂದು ಪ್ರತೀಥಿ ಇದ್ದು, ಈ ಭಾರಿ ಗೌರಿಹಬ್ಬದ ದಿನವೇ ಬಂದಿರುವುದು ವಿಶೇಷ. ಮಠದಲ್ಲಿ ಶ್ರೀಸದಾಶಿವ ಸ್ವಾಮೀಜಿ ವೀರಭದ್ರ ದೇವರಿಗೆ ಅಷ್ಟೋತ್ತರ, ಅರ್ಚನೆ ನಂತರ ಮಹಾಮಂಗಳಾರತಿ ನೆರವೇರಿಸಿದರು.
ಮಡಿಕೇರಿ NEWS DESK ಆ.27 : ಸಹೋದರ ಸಹೋದರಿಯರ ನಡುವಿನ ಪ್ರೀತಿ ವಾತ್ಸಲ್ಯ ಮತ್ತು ರಕ್ಷಣೆಯ ಬಾಂಧವ್ಯ ಬೆಸೆಯುವ ರಾಕಿ ಹಬ್ಬದ ಪ್ರಯುಕ್ತ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಮಡಿಕೇರಿಯ ಪ್ರಜಾಪಿತ ಬ್ರಹ್ಮಕುಮಾರಿಸ್ ಸಂಸ್ಥೆಗೆ ಭೇಟಿ ನೀಡಿದರು. ರಾಕಿಯನ್ನು ಕಟ್ಟಿದ ಪ್ರಜಾಪಿತ ಬ್ರಹ್ಮಕುಮಾರಿಸ್ ನ ಪ್ರಮುಖರು ಶಾಸಕರಿಗೆ ಶುಭ ಹಾರೈಸಿದರು.
ಬಾಳೆಲೆ NEWS DESK ಆ.27 : ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ 21 ದಿನಗಳ ಕಾಲ ಬಾಳೆಲೆಯಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ನೇರವಾಗಿ ಗ್ರಾಮೀಣ ಜೀವನಕ್ಕೆ ಪರಿಚಯಿಸಿ, ಸಮಾಜಮುಖಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿಸುವುದರ ಜೊತೆಗೆ ಗ್ರಾಮೀಣ ಅಭಿವೃದ್ಧಿಗೆ ಸಹಕಾರಿ ಆಗುವ ಉದ್ದೇಶ ಹೊಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದರು. ವನಮಹೋತ್ಸವದ ಮಹತ್ವವನ್ನು ವಿವರಿಸಿ, ಹಸಿರು ಸಂರಕ್ಷಣೆ, ಪರಿಸರ ಸಮತೋಲನ ಮತ್ತು ಮುಂದಿನ ಪೀಳಿಗೆಯ ಹಿತಕ್ಕಾಗಿ ಸಸಿ ನೆಡುವುದು ನಮ್ಮ ಪ್ರತಿಯೊಬ್ಬರ ಕರ್ತವ್ಯವೆಂದು ಕರೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಸ್ಮಿತಾ ಪೊನ್ನಣ್ಣ, ಉಪಾಧ್ಯಕ್ಷ ನವೀನ್, ಪಿಡಿಒ ಪರಮೇಶ್ವರ, ಪಶುವೈದ್ಯ ಇಲಾಖೆಯ ಹಿರಿಯ ಅಧಿಕಾರಿ ಡಾ.ಬವೀಶ್, ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯ ಗ್ರಾಮಸ್ಥರು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವಿದ್ಯಾರ್ಥಿಗಳು, ಅತಿಥಿಗಳು ಹಾಗೂ ಗ್ರಾಮಸ್ಥರು ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ…






