ಲೇಖಕ: admin

ಸೋಮವಾರಪೇಟೆ ಮೇ 19 NEWS DESK : ಜಿಲ್ಲಾ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡುವ ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿಗೆ ತಾಲ್ಲೂಕಿನ ಬೆಂಕಳ್ಳಿ-ಕೊತ್ನಳ್ಳಿ ಗ್ರಾಮದ ವಿದ್ಯಾರ್ಥಿನಿ ಸಿ.ಎಸ್.ಆದ್ವಿ ಭಾಜನರಾಗಿದ್ದಾರೆ. 2024-25ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 623 ಅಂಕಗಳನ್ನು ಪಡೆದು ಜಿಲ್ಲೆಯ ಟಾಪರ್ ಅಗಿದ್ದರು. ಶೇ. 99.68 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ 4ನೇ ಸ್ಥಾನ ಗಳಿಸಿದ್ದರು. ಸೋಮವಾರಪೇಟೆ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿದ್ದರು. ಬೆಂಕಳ್ಳಿ ಗ್ರಾಮದ ರೈತರಾದ ಸಿ.ಎಸ್.ಪ್ರಗತಿ, ಸಿ.ಟಿ.ಸತೀಶ್ ಅವರ ಪುತ್ರಿಯಾಗಿರುವ ಆದ್ವಿ, ತಮ್ಮೂರಿಗೆ ಸರ್ಕಾರಿ ಬಸ್ ಸೌಲಭ್ಯವಿಲ್ಲದ ಹಿನ್ನೆಲೆಯಲ್ಲಿ ಸರ್ಕಾರದ ಬಾಲಕಿಯರ ಹಾಸ್ಟೇಲ್‍ನಲ್ಲಿ ವಾಸವಿದ್ದು, ಪರೀಕ್ಷೆಗೆ ತಯಾರಿ ನಡೆಸಿ ಯಶ ಕಂಡಿದ್ದರು.

Read More

ಗೋಣಿಕೊಪ್ಪ ಮೇ 19 NEWS DESK : ಕೊಡಗು ಹಿಂದೂ ಮಲಯಾಳಿ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತು ಮಹಾಸಭೆಯು ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷರಾದ ಕೆ.ಪಿ.ಪ್ರಶಾಂತ್‍ಕುಮಾರ್ ಅವರು, ಎಲ್ಲರೂ ಒಗ್ಗಟ್ಟಿನಿಂದ ಮುಂದುವರಿದರೆ ಸಮಾಜದ ಅಭಿವೃದ್ಧಿ ಸಾಧ್ಯವಿದೆ. ಸದಸ್ಯತ್ವ ಅಭಿಯನದೊಂದಿಗೆ ಮರಣ ನಿಧಿ ಸ್ಥಾಪಿಸುವುದು ಕೂಡ ಸದಸ್ಯರ ಕುಟುಂಬಕ್ಕೆ ನೆರವಾಗಲಿದೆ. ಸಮಾಜದಲ್ಲಿ ಆರ್ಥಿಕ ಕ್ರೋಡೀಕರಣದ ಮೂಲಕ ಸ್ವಂತಜಾಗ ಖರೀದಿಸಿ ಸಮಾಜದ ಕಟ್ಟಡ ನಿರ್ಮಿಸಲು ಮುಂದಾಗಲು ಎಲ್ಲರ ಸಹಕಾರ ಅಗತ್ಯ ಎಂದರು. ಗೌರವ ಅಧ್ಯಕ್ಷ ಪಿ.ಎಸ್.ಶರತ್‍ಕಾಂತ್, ಖಜಾಂಜಿ ಶಾಜಿಅಚ್ಚುತನ್, ಉಪಾಧ್ಯಕ್ಷರುಗಳಾದ ಕೆ.ಜಿ.ಪ್ರಸಾದ್, ಸಿ.ಕೆ.ವೇಣುಗೋಪಾಲ್, ಪುಷ್ಪ ಮನೋಜ್, ಶ್ರೀಜಾ ಪ್ರದೀಪ್, ಸಂಘಟನಾ ಕಾರ್ಯದರ್ಶಿ ಟಿ.ಜಿ.ಮನು ಕುಮಾರ್, ಸರಳ ಮಣಿಲಾಲ್, ಸಹ ಕಾರ್ಯದರ್ಶಿ ಬಿಂದು ಸಾಜಿ, ಕಾನೂನು ಸಲಹೆಗಾರ ಕೆ.ಬಿ.ಸಂಜೀವ್, ನಿರ್ದೇಶಕರುಗಳಾದ ಪಿ.ಜಿ.ರಾಜಶೇಖರ್, ಪಿ.ವಿ.ಚಂದ್ರ, ರತೀಶ್‍ಕುಮಾರ್, ವಿ.ಎನ್.ರೀನಾ, ಸುನಿತಾಕಣ್ಣನ್, ಪಾಲಿಬೆಟ್ಟ ಉಪ ಸಮಿತಿಯಅಧ್ಯಕ್ಷಪಿ.ವೈ. ಮುರುಳಿ, ಕಾರ್ಯದರ್ಶಿ ಮನೋಜ್‍ಕುಮಾರ್ ಬಂಡೆ ಇದ್ದರು. : ಸನ್ಮಾನ :…

Read More

ಮಡಿಕೇರಿ ಮೇ 19 NEWS DESK : ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಭಗವತಿ ದೇವಿ, ಪಾರ್ವತಿ ದೇವಿ, ಸರಸ್ವತಿ, ಮಹಾಲಕ್ಷ್ಮಿ ಹಾಗೂ ದುರ್ಗಿ ಸಂಕಲ್ಪದಲ್ಲಿರುವ ದೇವಿಗೆ ಮೇ 31 ರಂದು “ಪೊಂಗಾಲ ಸೇವೆ” ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಮುತ್ತಪ್ಪ ದೇವಾಲಯ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ರಾಮನ್ ಅವರು ಭಾನುವಾರ ಬೆಳಿಗ್ಗೆ 8.30 ರಿಂದ ಆರಂಭಗೊಳ್ಳುವ “ಪೊಂಗಾಲ ಉತ್ಸವ” ದ ಕುರಿತು ಮಾಹಿತಿ ನೀಡಿದರು. ಪೊಂಗಾಲ ಮಹೋತ್ಸವವು ಕೇರಳದ ತಿರುವನಂತಪುರಂನಲ್ಲಿರುವ ಅಟ್ಟುಂಗಾಲ್ ಭಗವತಿ ಕ್ಷೇತ್ರದಲ್ಲಿ ಲಕ್ಷಾಂತರ ಮಹಿಳಾ ಭಕ್ತಾದಿಗಳಿಂದ ನಡೆಸಲ್ಪಡುವ ಶ್ರೇಷ್ಠವಾದ ಸೇವೆಯಾಗಿರುತ್ತದೆ. ಇತ್ತೀಚೆಗೆ ಇನ್‍ಫೆÇೀಸಿಸನ ಡಾ| ಸುಧಾ ಮೂರ್ತಿಯವರು ಕೂಡ ಈ ಪೊಂಗಾಲ ಸೇವೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದರು. ಅಂತಹ ಪವಿತ್ರವಾದ ಪೂಜೆಯನ್ನು ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಭಗವತಿ ದೇವಿಯ ಸನ್ನಿಧಿಯಲ್ಲಿ ನಡೆಯಲಿರುವುದು ಕೊಡಗಿನ ಸರ್ವ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ದೊರಕಿದ ಸದಾವಕಾಶವಾಗಿದೆ ಎಂದರು.…

Read More

ಮಡಿಕೇರಿ ಮೇ 19 NEWS DESK : ಮಂಡ್ಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯ ಮಡಿಕೇರಿ ವಿಸ್ತರಣಾ ಘಟಕ ಹಾಗೂ ಅರಣ್ಯ ಮಹಾ ವಿದ್ಯಾಲಯ, ರೇನ್ಫೊರೆಸ್ಟ್ ಮತ್ತು ಬೈಫ್ ಸಬಲ ಯೋಜನೆಯ ವತಿಯಿಂದ ಮೇ 23 ರಂದು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ “ವಿಶ್ವ ಜೇನು ದಿನಾಚರಣೆ-2026” ನಡೆಯಲಿದೆ. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ.ಆರ್.ಎನ್.ಕೆಂಚರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿ, ಕೃಷಿಯಲ್ಲಿನ ರಾಸಾಯನಿಕ ಗೊಬ್ಬರಗಳ ಬಳಕೆ, ಆಹಾರದ ಅಲಭ್ಯತೆ ಮೊದಲಾದ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಜೇನುಹುಳುಗಳ ಸಂಖ್ಯೆ ಕ್ಷೀಣಿಸುತ್ತಿದೆ.ಈ ಹಿನ್ನೆಲೆಯಲ್ಲಿ ವಿವಿಧ ಬೆಳೆಗಳಲ್ಲಿ ಪರಾಗಸ್ಪರ್ಶಕ್ಕೆ ಅತ್ಯವಶ್ಯಕವಾಗಿರುವ ಜೇನು ಹುಳುಗಳನ್ನು ಸಂರಕ್ಷಿಸುವ ಮತ್ತು ಜೇನು ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ವಿಶ್ವ ಜೇನು ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆಯೆಂದು ಮಾಹಿತಿಯನ್ನಿತ್ತರು. ವಿಶ್ವ ಜೇನು ದಿನಾಚರಣೆಯನ್ನು ಅಂದು ಬೆಳಗ್ಗೆ 10.30 ಗಂಟೆಗೆ ಮಂಡ್ಯದ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ.ಕೆ.ಸಿ.ನಾರಾಯಣ ಸ್ವಾಮಿ ಉದ್ಘಾಟಿಸಲಿದ್ದಾರೆ. ಮುಖ್ಯ…

Read More

ಮಡಿಕೇರಿ ಮೇ 19 NEWS DESK : “ಆನ್ ಲೈನ್” ಔಷಧಿಗಳ ಮಾರಾಟವನ್ನು ಸ್ಥಗಿತಗೊಳಿಸಬೇಕೆನ್ನುವ ಪ್ರಮುಖ ಬೇಡಿಕೆಯನ್ನು ಮುಂದಿರಿಸಿಕೊಂಡು ಮೇ 20 ರಂದು ನಡೆಯಲಿರುವ ಔಷಧಿ ವ್ಯಾಪಾರಸ್ಥರ ರಾಷ್ಟ್ರೀಯ ಮಟ್ಟದ ಪ್ರತಿಭಟನೆಯ ಭಾಗವಾಗಿ ಕೊಡಗು ಜಿಲ್ಲಾ ವ್ಯಾಪ್ತಿಯ ಎಲ್ಲಾ ಔಷಧಿಯಂಗಡಿಗಳು ಅಂದು ಮುಚ್ಚಲ್ಪಡಲಿವೆ. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘಟನೆಯ ಅಧ್ಯಕ್ಷರು, ರಾಜ್ಯ ಸಂಘÀಟನೆಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಸಂಘಟನೆಯ ಸಂಘಟನಾ ಕಾರ್ಯದರ್ಶಿಗಳಾದ ಎ.ಕೆ.ಜೀವನ್ ಪ್ರತಿಭಟನೆಯ ಕುರಿತು ಮಾಹಿತಿ ನೀಡಿದರು. ರಾಷ್ಟ್ರವ್ಯಾಪಿ 12.50 ಲಕ್ಷ ಔಷಧಿ ವ್ಯಾಪಾರಸ್ಥರಿದ್ದಾರಾದರೆ, ರಾಜ್ಯದಲ್ಲಿ 26 ಸಾವಿರ ಹಾಗೂ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ 200 ಔಷಧ ವ್ಯಾಪಾರಸ್ಥರಿದ್ದಾರೆ. ಇವರೆಲ್ಲರೂ ತಮ್ಮ ಔಷಧಿಯಂಗಡಿಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚಿ ಪ್ರತಿಭಟನೆ ನಡೆಸಲಿದ್ದಾರೆಂದು ತಿಳಿಸಿದರು. ಪ್ರತಿಭಟನೆಯ ಸಂದರ್ಭ ಸಾರ್ವಜನಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗಬಾರದೆನ್ನುವ ಉದ್ದೇಶದಿಂದ ಆಸ್ಪತ್ರೆಗಳಲ್ಲಿ ಇರುವ ಔಷಧಿಯಂಗಡಿಗಳನ್ನು ತೆರೆದಿಡಲು ಅವಕಾಶ ನೀಡಲಾಗಿದೆಯೆಂದು ಜೀವನ್ ಮಾಹಿತಿಯನ್ನಿತ್ತರು. :: ಕೊರೋನ ಸಂದರ್ಭದ ಆದೇಶ ಹಿಂಪಡೆಯಿರಿ :: ಕೊರೋನಾ ಮಹಾ ಮಾರಿ…

Read More

ಕುಶಾಲನಗರ ಮೇ 19 NEWS DESK : ವಿದ್ಯಾರ್ಥಿಗಳು ತರಗತಿಯಪಾಠಗಳಿಗೆ ಮಾತ್ರ ಸೀಮಿತವಾಗದೇ ಸಂಗೀತ, ಕಲೆ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಕೌಶಲ್ಯ, ಸಾಮಥ್ರ್ಯವನ್ನು ಪ್ರದರ್ಶಿಸಬೇಕು. ಅದಕ್ಕೆ ಈ ಯುವ ವೈಭವ ಕಾರ್ಯಕ್ರಮ ಅತ್ಯುತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಸಾಂಸ್ಕೃತಿಕ ಸ್ಪರ್ಧೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ರಹದಾರಿ. ಇಂತಹ ಪ್ರಯತ್ನಗಳು ಹೀಗೆಯೇ ಮುಂದುವರೆಯಲಿ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾಕ್ಟರ್ ಮಂತರ್ ಗೌಡ ಅಭಿಮತ ವ್ಯಕ್ತಪಡಿಸಿದರು. ಚಿಕ್ಕ ಅಳುವಾರದ ಜ್ಞಾನ ಕಾವೇರಿ ಆವರಣದ ಕೊಡಗು ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಅಂತರ್ ಕಾಲೇಜು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವ “ಯುವ ವೈಭವ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಇದ್ದರೂ ಎಲ್ಲ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಬೇರೆ ಜಿಲ್ಲೆಯ ವಿಶ್ವವಿದ್ಯಾಲಯಗಳತ್ತ ಮುಖ ಮಾಡುತ್ತಿರುವುದು ಬೇಸರದ ಸಂಗತಿ. ನಮ್ಮ ಜಿಲ್ಲೆಯ ವಿಶ್ವವಿದ್ಯಾಲಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪಾಲಕರು, ಶಿಕ್ಷಕರು ಮಕ್ಕಳಿಗೆ ನಮ್ಮ ವಿಶ್ವವಿದ್ಯಾಲಯದಲ್ಲಿ ಕಲಿಯಲು ಪ್ರೋತ್ಸಾಹ ನೀಡಿ ವಿವಿಯನ್ನುಹೆಮ್ಮರವಾಗಿ…

Read More

ಮಡಿಕೇರಿ ಮೇ 19 NEWS DESK :  ಕೇರಳದಲ್ಲಿ (ಯುಡಿಎಫ್ ) ದಾಖಲಿಸಿದ ಐತಿಹಾಸಿಕ ಜಯದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಕೆ.ಎ.ಯಾಕುಬ್ ಅವರು ಅಭಿನಂದನೆ ಸಲ್ಲಿಸಿದರು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ರಾಷ್ಟ್ರೀಯ ಸಮಿತಿಯ ಅಧ್ಯಕ್ಷರು ಹಾಗೂ ಕೇರಳ ಮುಸ್ಲಿಂ ಲೀಗ್ ಅಧ್ಯಕ್ಷ ಸೈಯದ್ ಸಾದಿಕ್ ಆಲಿ ಶಿಹಾಬ್ ತಂಗಳ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಸಮಾಲೋಚಿಸಿದರು. ನಂತರ ಮಾತನಾಡಿದ ಕೆ.ಎ.ಯಾಕುಬ್  2026ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವು 140 ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ. ಇದು 1977ರ ನಂತರದ ಅತಿದೊಡ್ಡ ಜನಾದೇಶವಾಗಿದ್ದು, ಸುಮಾರು ಒಂದು ದಶಕದ LDF ಆಡಳಿತಕ್ಕೆ ತೆರೆ ಎಳೆದಿದೆ ಎಂದರು. ಈ ಐತಿಹಾಸಿಕ ವಿಜಯದಲ್ಲಿ ಕಾಂಗ್ರೆಸ್ 63 ಸ್ಥಾನಗಳನ್ನು ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್  22 ಸ್ಥಾನಗಳನ್ನು ಗೆದ್ದು ಮೈತ್ರಿಕೂಟದ ಬಲಿಷ್ಠ ಏಕತೆ ಹಾಗೂ ಜನರ ವಿಶ್ವಾಸವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.…

Read More

ಮಡಿಕೇರಿ ಮೇ 19 NEWS DESK : 2025-26ನೇ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಗಳಿಸಿದ ಜಿಲ್ಲೆಯ ಪ್ರೌಢ ಶಾಲೆಗಳಿಗೆ ಕನ್ನಡಸಿರಿ ಸ್ನೇಹ ಬಳಗದ ಕೊಡಗು ಜಿಲ್ಲಾ ಘಟಕದ ವತಿಯಿಂದ ಸಾಧನಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಮೇ 22 ರಂದು ಮಡಿಕೇರಿಯ ಗಾಂಧಿ ಭವನದಲ್ಲಿ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡಸಿರಿ ಸ್ನೇಹ ಬಳಗದ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಬಿ.ಎಸ್ ಅವರು ಬೆಳಿಗ್ಗೆ 10.30 ಗಂಟೆಗೆ ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಪೆರಿಗ್ರಿನ್ ಎಸ್.ಮಚಾಡೊ ಅವರು ಅಭಿನಂದನಾ ನುಡಿಯಾಡಲಿದ್ದಾರೆ. ರೋಟರಿ ಸಂಸ್ಥೆ ಕುಶಾಲನಗರದ ಸಹಾಯಕ ರಾಜ್ಯಪಾಲ ಎಂ.ಡಿ.ರಂಗಸ್ವಾಮಿ ಅವರು ಪ್ರಾಸ್ತಾವಿಕ ನುಡಿಗಳಾಡಲಿದ್ದಾರೆ. ಅತಿಥಿಗಗಳಾಗಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಸವರಾಜ್,…

Read More

ಮಡಿಕೇರಿ NEWS DESK ಮೇ 19 : ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆ “ಕಂಜನ್” ನಿಂದ ದಾಳಿಗೊಳಗಾಗಿದ್ದ ಮಕ್ನಾ ಆನೆ ಮಾರ್ತಾಂಡ (34) ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದೆ. ದುಬಾರೆ ಸಾಕಾನೆ ಶಿಬಿರ ವ್ಯಾಪ್ತಿಯ ನದಿಯಲ್ಲಿ ಸೋಮವಾರ “ಕಂಜನ್” ಏಕಾಏಕಿ ಮಾರ್ತಾಂಡನ ಮೇಲೆ ದಾಳಿ ಮಾಡಿತ್ತು. “ಕಂಜನ್” ನಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಘಾಸಿಗೊಂಡಿದ್ದ ಮಾರ್ತಾಂಡನಿಗೆ ದುಬಾರೆ ಸಾಕಾನೆ ಶಿಬಿರದ ವೈದ್ಯಾಧಿಕಾರಿ ಡಾ.ಮುಜೀಬ್ ಅವರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮಾರ್ತಾಂಡ ಕೊನೆಯುಸಿರೆಳೆದಿದೆ. “ಕಂಜನ್” ಮಾರ್ತಾಂಡನ ಮೇಲೆ ದಾಳಿ ಮಾಡುವ ಸಂದರ್ಭ ಮಾವುತರು ಹಾಗೂ ಕಾವಡಿಗರು ನಿಯಂತ್ರಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಾರ್ತಾಂಡ ಬಿದ್ದ ಪರಿಣಾಮ  ಚೆನ್ನೈ   ಮೂಲದ ಪಲ್ಲಾವರಂ ನ ನಿವಾಸಿ ಜುನೆಸ್ಸಿ (33) ಮೃತಪಟ್ಟಿದ್ದರು. ಮೃತ ಮಹಿಳೆಯ ಕುಟುಂಬಕ್ಕೆ ರೂ.20 ಲಕ್ಷ ಪರಿಹಾರ ನೀಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ದುರ್ಘಟನೆಯ ಹಿನ್ನೆಲೆ ಪ್ರವಾಸಿತಾಣ ದುಬಾರೆಗೆ ಪ್ರವಾಸಿಗರ ಪ್ರವೇಶವನ್ನು ಎರಡು ದಿನಗಳ ಕಾಲ ನಿರ್ಬಂಧಿಸಲಾಗಿದೆ. ಅನಾಹುತಕ್ಕೆ ಕಾರಣನಾದ “ಕಂಜನ್” ನನ್ನು…

Read More

ಮಡಿಕೇರಿ ಮೇ 18 NEWS DESK  : ಐಗೂರು ಸೊಸೈಟಿ ಹಾಲ್ ನಲ್ಲಿ ಅಭಿನಯ ನೃತ್ಯ ಕೇಂದ್ರದ ವಿದ್ಯಾರ್ಥಿಗಳ ಗೆಜ್ಜೆ ಪೂಜೆ ಕಾರ್ಯಕ್ರಮ ನಡೆಯಿತು. ನಾಟ್ಯ ದೇವತೆ ನಟರಾಜನ ಪೂಜೆ ಮಾಡಿದ ನಂತರ ನೃತ್ಯ ಗುರುಗಳಾದ ಭವ್ಯ ಸುಕನ್ ಅವರಿಂದ ವಿದ್ಯಾರ್ಥಿಗಳಿಗೆ ಗೆಜ್ಜೆ ಹಸ್ತಾಂತರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನೆರವೇರಿತು. ಮಕ್ಕಳ ಪೋಷಕರು, ಸ್ಥಳೀಯರು ಹಾಗು ಹಿರಿಯ ನೃತ್ಯ ಕಲಾವಿದರು ಈ ಸಂದರ್ಭದಲ್ಲಿ ಹಾಜರಿದ್ದರು. ಕೊಡಗಿನಾದ್ಯಂತ ನೃತ್ಯ ವಿದ್ಯಾರ್ಥಿಗಳನ್ನು ಹೊಂದಿರುವ ಅಭಿನಯ ನೃತ್ಯ ಶಾಲೆಯ ವಿದ್ಯಾರ್ಥಿಗಳು ರಾಜ್ಯ, ದೇಶ ಮಟ್ಟದಲ್ಲಿ ನೃತ್ಯದಲ್ಲಿ ಛಾಪು ಮೂಡಿಸಿದ್ದು, ಈಗ ಇನ್ನಷ್ಟು ಹೊಸ ವಿದ್ಯಾರ್ಥಿಗಳು ಗೆಜ್ಜೆ ಪೂಜೆಯ ಮೂಲಕ ನೃತ್ಯವೈಭವದ ಮುನ್ನುಡಿ ಬರೆಯಲು ಮೆಟ್ಟಿಲೇರಿದ್ದಾರೆ.

Read More