ಲೇಖಕ: admin

ನಾಪೋಕ್ಲು ಜೂ.17 NEWS DESK : ಹಳೆ ತಾಲೂಕು ಶ್ರೀ ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ  ಆಯೋಜಿಸಿದ  ಪಕ್ಷದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತ ಅಭಿನಂದನಾ ಸಮಾರಂಭದಲ್ಲಿ ಕುಂಡ್ಯೋಳಂಡ ಕುಟುಂಬಸ್ಥರಿಂದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕುಂಡ್ಯೋಳಂಡ ಕೊಡವ ಕೌಟುಂಬಿಕ ಹಾಕಿ ಉತ್ಸವ-2024 ಹಾಕಿ ಉತ್ಸವ  ಗಿನ್ನಿಸಿ  ದಾಖಲೆ ಮಾಡಿದ್ದು, ಈ ಉತ್ಸವದದಲ್ಲಿ ಒಡೆಯರು ಭಾಗವಹಿಸಿದ್ದರು. ಚುನಾವಣೆ ನೀತಿ ಸಂಹಿತೆ ಇದ್ದ ಕಾರಣ ಅವರನ್ನು ಗೌರವಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಈ ಕಾರ್ಯಕ್ರಮದಲ್ಲಿ ಆಯೋಗಿಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್  ಅವರಿಗೆ ಕುಂಡ್ಯೋಳಂಡ ಕುಟುಂಬಸ್ಥರ ಪರವಾಗಿ  ಹಾಕಿ ಕಾರ್ನಿವಲ್ ಸಮಿತಿ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ , ಖಜಾಂಚಿ ವಿಷು ಪೂವಯ್ಯ, ಕಾರ್ಯದರ್ಶಿ ಬಿಪಿನ್,  ವಿಜಯ ಮುತ್ತಣ್ಣ,  ಬೋಪಣ್ಣ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿ ಗೌರವಿಸಿದರು. ಈ ಸಂದರ್ಭ ವಿಧಾಮ ಪರಿಷತ್ ಸದಸ್ಯ ಮಂಡೆಪಂಡ  ಸುಜಾ ಕುಶಾಲಪ್ಪ, ಮಾಜಿ…

Read More

ನಾಪೋಕ್ಲು ಜೂ.17 NEWS DESK  : ಹೊದ್ದೂರು ಗ್ರಾ.ಪಂ ಯ ವಾಟೆಕಾಡು ಸ.ಹಿ.ಪ್ರಾ.ಶಾಲೆ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಜನಶಕ್ತಿ ಸಂಸ್ಥೆ ವತಿಯಿಂದ ಉಚಿತ ನೋಡ್ ಪುಸ್ತಕ ವಿತರಣೆ ಮಾಡಲಾಯಿತು. ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಹೇಮಂತ್ ಕೊಡುಗೆಯಾಗಿ ನೀಡಿದ ನೋಟ್ ಪುಸ್ತಕವನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಜುಬೆರಿಯ ಅವರ ಉಪಸ್ಥಿತಿಯಲ್ಲಿ ಪಾಲೆಮಾಡು ಭೂಮಿ ಮತ್ತು ಹಕ್ಕು ವಂಚಿತ ಹೋರಾಟಗಾರರ ಸಮಿತಿಯ ಅಧ್ಯಕ್ಷ ಹಾಗೂ ಹೂದ್ದೂರು ಗ್ರಾ.ಪಂ ಮತ್ತು ಶಾಲಾ ಎಸ್.ಡಿ.ಎಂ.ಸಿ ಸದಸ್ಯರಾದ ಮೊಣ್ಣಪ್ಪ, ಗ್ರಾ.ಪಂ ಸದಸ್ಯರಾದ ಕುಸುಮ ಹಾಗೂ ಸಂಪನ್ಮೂನ ವ್ಯಕ್ತಿಗಳಾದ ಉಷಾ ವಿದ್ಯಾರ್ಥಿಗಳಿಗೆ ವಿತರಿಸಿದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಹಾಗೂ ಶಿಕ್ಷೃಕ ವೃಂದ ಹಾಜರಿದ್ದರು. ವರದಿ : ದುಗ್ಗಳ ಸದಾನಂದ

Read More

ಕುಶಾಲನಗರ ಜೂ.17 NEWS DESK : ತ್ಯಾಗ, ಬಲಿದಾನದ ಹಬ್ಬವಾದ ಬಕ್ರೀದ್ ಹಬ್ಬವನ್ನು ಕುಶಾಲನಗರದ ಶಾಫಿ ಹಾಗೂ ಹನಫಿ ಬಾಂಧವರು ಸಂಭ್ರಮದಿಂದ ಆಚರಿಸಿದರು. ಬಕ್ರೀದ್ ಹಬ್ಬದ ಪ್ರಯುಕ್ತ ಬೆಳಿಗ್ಗೆ ಮಸೀದಿಗೆ ಆಗಮಿಸಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿದ ಮುಸಲ್ಮಾನರು, ಒಳ್ಳೆಯ ಮಳೆ, ಬೆಳೆಗಾಗಿ ಪ್ರಾರ್ಥಿಸಿದರು. ನಂತರ ಸರ್ವರಿಗೂ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಸರ್ವರೂ ಸಾಮರಸ್ಯದಿಂದ ಬದುಕುವಂತೆ ಮನವಿ ಮಾಡಿದರು. ಕುಶಾಲನಗರದ ಹಿಲಾಲ್ ಮಸೀದಿ, ಜಾಮಿಯಾ ಮಸೀದಿ, ತಕ್ವಾ ಮಸೀದಿ, ದಂಡಿನಪೇಟೆ, ಜನತಾ ಕಾಲೋನಿ, ಕೂಡಿಗೆ, ನಂಜರಾಯಪಟ್ಟಣ, ಕೊಡಗರಹಳ್ಳಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ಎಲ್ಲಾ ಮಸೀದಿಗಳ ಮುಂಭಾಗ ಪೊಲೀಸರು ಬಂದೋಬಸ್ತ್ ನೀಡಿದ್ದರು. ಈ ಸಂದರ್ಭ ಕುಶಾಲನಗರದ ಹಿಲಾಲ್ ಮಾಸೀದಿ ಧರ್ಮಗುರುಗಳಾದ ನಾಸರ್ ಫೈಜಿ಼, ಹಿಲಾಲ್ ಮಸೀದಿ ಅಧ್ಯಕ್ಷ ಹುಸೇನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ದಾರುಲ್ ಉಲೂಂ ಮದ್ರಸದ ಪ್ರಾಂಶುಪಾಲ ತಮ್ಲೀಕ್ ದಾರಿಮಿ ಬಕ್ರೀದ್ ಹಬ್ಬದ ಕುರಿತು ಮಾತನಾಡಿದರು.

Read More

ಬೆಂಗಳೂರು ಜೂ.17 NEWS DESK : ಕಾರ್ಗಿಲ್ ಯುದ್ಧದ ವೀರರ ಶೌರ್ಯ ಮತ್ತು ತ್ಯಾಗಕ್ಕೆ ಗೌರವವಾಗಿ, ಭಾರತೀಯ ಸೇನೆಯು 1999 ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ 25 ನೇ ವಾರ್ಷಿಕೋತ್ಸವದ ನೆನಪಿಗಾಗಿ ಪ್ಯಾನ್-ಇಂಡಿಯಾ ಮೋಟಾರ್‌ಸೈಕಲ್ ಎಕ್ಸ್‌ಪೆಡಿಶನ್ ಅನ್ನು ಪ್ರಾರಂಭಿಸಿದೆ. ರಾಷ್ಟ್ರೀಯ ಮಿಲಿಟರಿ ಶಾಲೆಯ ಚಾಣಕ್ಯ ಆಡಿಟೋರಿಯಂನಲ್ಲಿ ಕಮಾಂಡೆಂಟ್ ಬ್ರಿಗ್ ಅಜಯ್ ಸಿಂಗ್ ಠಾಕೂರ್ ಧ್ವಜಾರೋಹಣದ ಮೂಲಕ ಯಾತ್ರ ತಂಡಕ್ಕೆ ಚಾಲನೆ ನೀಡಿದರು. ತಂಡವು ಹಿಮಾಚಲ ಪ್ರದೇಶದ ಮನಾಲಿ, ಸರ್ಚು ಮತ್ತು ಲಡಾಖ್‌ನ ನ್ಯೋಮಾ ಮೂಲಕ ಸುಮಾರು 4000 ಕಿಲೋಮೀಟರ್‌ಗಳನ್ನು ರಸ್ತೆಯ ಮೂಲಕ ಕ್ರಮಿಸಿ  ಸೈನಿಕರಿಗೆ ಗೌರವ ಸಲ್ಲಿಸಲಿದೆ. ಈ ಐತಿಹಾಸಿಕ ಪಯಣದಲ್ಲಿ ತಲಾ ಎಂಟು ಮೋಟಾರ್‌ಸೈಕ್ಲಿಸ್ಟ್‌ಗಳ ಮೂರು ತಂಡಗಳು ದೇಶದ ಮೂರು ಮೂಲೆಗಳಿಂದ ಹೊರಟಿವೆ – ಪೂರ್ವದಲ್ಲಿ ದಿಂಜಾನ್, ಪಶ್ಚಿಮದಲ್ಲಿ ದ್ವಾರಕಾ ಮತ್ತು ದಕ್ಷಿಣದಲ್ಲಿ ಧನುಷ್ಕೋಡಿ. ಈ ಯಾತ್ರೆಯು ಅಂತಿಮವಾಗಿ ದ್ರಾಸ್‌ನ ಗನ್ ಹಿಲ್‌ನಲ್ಲಿ ಕೊನೆಗೊಳ್ಳುತ್ತದೆ. ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಫ್ಲಾಗ್-ಆಫ್ ಮತ್ತು ಫ್ಲ್ಯಾಗ್-ಇನ್ ಸಮಾರಂಭಗಳನ್ನು ಹಿರಿಯ…

Read More

ಕಡಂಗ ಜೂ.17 NEWS DESK : ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಕಡಂಗದಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು. ವಿಶ್ವ ದಲ್ಲಿ ಶಾಂತಿ, ಸೌಹಾರ್ದತೆ ನೆಲಸಲಿ ಎಂದು ಸಮುದಾಯ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬದ್ರಿಯ ಸುನ್ನಿ ಮಸೀದಿಯ ಈದ್ ನಮಾಜಿಗೆ ಖತೀಬ್ ಸತ್ತಾರ್ ಅಹಸನಿ ಮತ್ತು ಮೊಯದ್ದೀನ್ ಜುಮಾ ಮಸೀದಿಯ ಈದ್ ನಮಾಜಿಗೆ ರಫೀಕ್ ಲತೀಫಿ ನೇತೃತ್ವ ವಹಿಸಿದರು. ಬದ್ರಿಯ ಜಮಾಹತ್ ಅಧ್ಯಕ್ಷ ಉಸ್ಮಾನ್, ಮೊಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ಲಾ, ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

Read More

ಮಡಿಕೇರಿ ಜೂ.17 NEWS DESK : ಮಡಿಕೇರಿಯ ಸಿ.ಪಿ.ಸಿ ಲೇಔಟ್‍ನ ಮಸ್ಜಿದ್ ಉರ್ ರ್ರಹ್ಮಾ ಮಸೀದಿಯಲ್ಲಿ ಬಲಿದಾನ ಸಂಕೇತವಾದ ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಯಯಿಂದ ಆಚರಿಸಲಾಯಿತು. ಮುಂಜಾನೆ ಮಸೀದಿಯಲ್ಲಿ ಮುಸಲ್ಮಾನ ಬಾಂಧವರು ಜಮಾಜ್ ಸಲ್ಲಿಸಿದರು. ನಂತರ ವಿಶೇಷ ಸಿಹಿ ಖಾದ್ಯಗಳನ್ನು ನೀಡಿ ಪರಸ್ಪರ ಶುಭ ಹಾರೈಸಿದರು.

Read More

ಕುಶಾಲನಗರ, ಜೂ.17 NEWS DESK : ಹೆಬ್ಬಾಲೆ ಪ್ರೌಢಶಾಲೆಯ 8ನೇ ತರಗತಿ, 9ನೇ ತರಗತಿ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ನೀಡಿರುವ ಪಠ್ಯ ಪುಸ್ತಕಗಳನ್ನು ಹೆಬ್ಬಾಲೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ  ಹೆಚ್.ಪಿ.ಶಿವಪ್ಪ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಸ್ತು, ಸಂಯಮದಿಂದ ಉತ್ತಮ ಶಿಕ್ಷಣ ಪಡೆಯುವ ಮೂಲಕ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು. ಉತ್ತಮ ಓದಿನೊಂದಿಗೆ ಉತ್ತಮ ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತರಬೇಕು. ಪುಸ್ತಕಗಳನ್ನು ಓದುವ ಮೂಲಕ ಉತ್ತಮ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಶಿವಪ್ಪ ಸಲಹೆ ನೀಡಿದರು. ವಿದ್ಯಾರ್ಥಿಗಳು ಕ್ಷೀರ ಭಾಗ್ಯ, ಪ್ರಧಾನಮಂತ್ರಿ ಪೋಷಣ್ ಭಾಗ್ಯ ಅಕ್ಷರ ದಾಸೋಹ ಇತ್ಯಾದಿಗಳ ಫಲಾನುಭವಿಗಳು ವಿದ್ಯಾರ್ಥಿಗಳಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತ ರೀತಿಯಲ್ಲಿ ಜಾರಿಗೆ ತರಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ ಎಚ್.ಪಿ.ಉದಯಕುಮಾರ್,  ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಎಂ.ಎನ್.ವೆಂಕಟನಾಯಕ್. ಶಿಕ್ಷಕರಾದ ಸಿ.ಡಿ ಲೋಕೇಶ್, ಡಿ.ಕವಿತಾ, ಎ.ಕೆ.ಅನಂತ, ಶ್ವೇತ ಹಾಜರಿದ್ದರು.

Read More

ಚೆಟ್ಟಳ್ಳಿ ಜೂ.17 NEWS DESK : ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಕಂಡಕರೆಯಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು. ಬೆಳಗ್ಗೆ ಈದ್ ನಮಾಝ್ ನೇತೃತ್ವವನ್ನು ಮಹಲ್ ಖತೀಬರಾದ ಮುಸ್ತಫಾ ಸಖಾಫಿ ವಹಿಸಿದ್ದರು. ಮೃತಮಟ್ಟ ಸಾಮುದಾಯ ಬಂಧವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಯುವಕರು ಪರಸ್ಪರ ಶುಭಕೋರಿದರು.

Read More

ಮಡಿಕೇರಿ ಜೂ.17 NEWS DESK : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಉಪನ್ಯಾಸಕಿ ಎಸ್.ಎನ್.ಸೌಮ್ಯ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ ಪದವಿ ದೊರೆತಿದೆ. ಡಾ.ಉದಯ್ ಕುಮಾರ್ ಅವರ ಮಾರ್ಗದರ್ಶನದಲ್ಲಿ “ಸೋಷಿಯಲ್ ಎಂಟರ್ಪ್ರೈನರ್ಷಿಪ್ ಇನ್ ಟೂರಿಸಂ ಇಂಡಸ್ಟ್ರೀ ವಿತ್ ರೆಫರೆನ್ಸ್ ಟು ಕೊಡಗು ಡಿಸ್ಟ್ರಿಕ್ಟ್ ಆಫ್ ಕರ್ನಾಟಕ” (“Social entrepreneurship in tourism industry with reference to Kodagu district of Karnataka”) ಎಂಬ ವಿಷಯದ ಕುರಿತು ಮಹಾ ಪ್ರಬಂಧವನ್ನು ಮಂಡಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವದಲ್ಲಿ ಈ ಪದವಿಯನ್ನು ಪ್ರದಾನ ಮಾಡಲಾಯಿತು.  

Read More

ತ್ಯಾಗ ಹಾಗೂ ಸಹೋದರತೆಯ ಸಂದೇಶ ಸಾರುವ ಬಕ್ರೀದ್, ಈದ್-ಉಲ್-ಅದಾ ಹಬ್ಬ ನಿಮಗೆಲ್ಲರಿಗೂ ಸಂತೋಷ ಮತ್ತು ಶುಭವನ್ನು ತರಲಿ.

Read More