ಲೇಖಕ: admin

ನಾಪೋಕ್ಲು  ಏ.6 NEWS DESK : ಪೊನ್ನುಮುತ್ತಪ್ಪ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಉತ್ಸವದ ಅಂಗವಾಗಿ ಗಣಪತಿ ಹೋಮ ಹಾಗೂ ಶುದ್ಧ ಕಳಸ ನಡೆಯಿತು. ಕೇರಳದ ನೀಲೇಶ್ವರದ ಮುರಳಿ ಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ಗುರು ಪೂಜೆ ಹಾಗೂ ಶ್ರೀದೇವಿ ಪೂಜೆ ನಡೆಯಿತು. ಸಂಜೆ ಮುತ್ತಪ್ಪ ದೇವರ ಕಳಸ ಜರುಗಿತು. ಕಾವೇರಿ ನದಿಯಲ್ಲಿ ಸ್ನಾನದ ನಂತರ ಪ್ರಖ್ಯಾತ ಕೇರಳದ ಚಂಡೆಯೊಂದಿಗೆ ಪಟ್ಟಣದ ಮುಖ್ಯಬೀದಿಯಲ್ಲಿ ಮೆರವಣಿಗೆ ನೆರವೇರಿತು. ಮೆರವಣಿಗೆಯಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಕೇರಳದ ಚಂಡೆ ಹಾಗೂ ನೃತ್ಯ ಜನಮನ ಸೆಳೆಯಿತು. ಆಕರ್ಷಕ ಬಿರುಸು ಬಾಣದ ಪ್ರದರ್ಶನವು ನಡೆಯಿತು. ಬಳಿಕ ಮುತ್ತಪ್ಪ ದೇವರ ವೆಳ್ಳಾಟಂ, ಕುಟ್ಟಿಚ್ಚಾತ ದೇವರ ಹಾಗೂ ಗುಳಿಗ ದೇವರ ವೆಳ್ಳಾಟಂ ನಡೆಯಿತು. ತಿರುವಪ್ಪ ಮತ್ತು ಮುತ್ತಪ್ಪ ಕೊಲಗಳು ಜನರನ್ನು ಆಕರ್ಷಿಸಿದವು. ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಭಕ್ತಾರಿಗೆ ಅನ್ನದಾನ ನಡೆಯಿತು. ವಿವಿಧೆಡೆಯಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಅಧ್ಯಕ್ಷ ಎ.ಕೆ.ಚಂದ್ರನ್,…

Read More

ನಾಪೋಕ್ಲು ಏ.6 NEWS DESK  : ಕಕ್ಕುಂದಕಾಡು ಶ್ರೀ ಕರಿಚಾಮುಂಡಿ ದೈವಸ್ಥಾನದ ವಾರ್ಷಿಕೋತ್ಸವವು ಏ.13 ಮತ್ತು 14 ರಂದು ನಡೆಯಲಿದೆ. ಏ.13 ರಂದು ರಾತ್ರಿ 8.30 ಗಂಟೆಗೆ ಭಂಡಾರ ಹೊರಡುವುದು, ನಂತರ ತೋತ, ಚನ್ನಾಲೆ ಮೂರ್ತಿ, ತಮ್ಮಚ್ಚ, ಪೊಟ್ಟುಗುಳಿಗ, ಕೊರತಿ, ಅಂಗಾರೆ ದೈವಗಳ ಕೋಲ ನಡೆಯಲಿದೆ. ಏ.14 ರಂದು ಬೆಳಗ್ಗೆ 10 ಗಂಟೆಗೆ “ಗುಳಿಗ ” ಕೋಲ ಜರುಗಲಿದೆ. ಪ್ರಸಾದ ವಿತರಣೆ ನಂತರ ಮಧ್ಯಾಹ್ನ 2 ಗಂಟೆಗೆ “ಶ್ರೀ ಚಾಮುಂಡಿ” ದೈವದ ಕೋಲ ಜರುಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ. ವರದಿ : ದುಗ್ಗಳ ಸದಾನಂದ.  

Read More

 ಬೆಂಗಳೂರು ಏ.6 NEWS DESK :  ಭಾರತೀಯ ಜನತಾ ಪಾರ್ಟಿ ಸ್ಥಾಪನಾ ದಿನದ ಅಂಗವಾಗಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಪಕ್ಷದ ಹಿರಿಯರನ್ನು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭ ಪರಿಷತ್‌ ಸದಸ್ಯ  ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ  ಸಪ್ತಗಿರಿ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ   ಎಸ್. ಹರೀಶ್, ಪ್ರಮುಖರು ಮತ್ತು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು  ಹಾಜರಿದ್ದರು.

Read More

ಮಡಿಕೇರಿ ಏ.5 NEWS DESK  : ಕೊಡಗಿನ ಪುರಾತನ ದೇವಾಲಯಗಳಲ್ಲೊಂದಾದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ 14 ದೇವಾನು ದೇವತೆಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ದೇವಾಲಯದ ತಂತ್ರಿಗಳಾದ ಕೇರಳದ ಪಯ್ಯನ್ನೂರಿನ ಬ್ರಹ್ಮಶ್ರೀ ಕುನ್ನತ್ತಿಲ್ಲತ್ತ್ ಮುರಳಿಕೃಷ್ಣನ್ ನಂಬೂದರಿ ಹಾಗೂ ಪರಿಶಿನಿಕಡವು ಶ್ರೀ ಮುತ್ತಪ್ಪ ಕ್ಷೇತ್ರದ ಆಚಾರಪಟ್ಟ ಮಡೆಯಚ್ಚನ್ ಬ್ಲಾತೂರ್ ಚಂದ್ರನ್ ಮಡೆಯಚ್ಚನ್ ನಾಲ್ಕುದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿತು. ಏ.3 ರಂದು ಸಂಜೆ ಯಿಂದ ಆರಂಭಗೊಂಡ ಜಾತ್ರಮಹೋತ್ಸವದಲ್ಲಿ ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಪೂಜೆ, ವಾಸ್ತು ಕಲಶಾಭಿಷೇಕ, ವಾಸ್ತು ಬಲಿ, ವಾಸ್ತು ಪುಣ್ಯಾಹ, ಮಹಾ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮದ ಪ್ರಯುಕ್ತ ಗಣಪತಿ ಹೋಮ, ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಅಷ್ಟಾಭಿಷೇಕ, ಶ್ರೀ ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ, ಶ್ರೀ ನಾಗ ದೇವರಿಗೆ ತಂಬಿಲ…

Read More

ಮಡಿಕೇರಿ ಏ.6 NEWS DESK :  ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಡಾ.ಮಮತಾ ಕೇಶವ್ ಗೆ  ಹೊಸುರು ಏಷ್ಯಾ ಕಲ್ಚರಲ್ ಯೂನಿವರ್ಸಿಟಿ‌  ಗೌರವ‌ ಡಾಕ್ಟರೇಟ್ ಲಭಿಸಿದೆ. ಮಮತಾ ಕೇಶವ್ ಕಳೆದ ಅನೇಕ ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇವರ ಸೇವಾ ಮನೋಭಾವವನ್ನು ಗುರುತಿಸಿ ಹೊಸುರು ಏಷ್ಯಾ ಕಲ್ಚರಲ್ ಯೂನಿವರ್ಸಿಟಿ‌  ಗೌರವ‌ ಡಾಕ್ಟರೇಟ್ ನೀಡಿ ಗೌರವಿಸಿದೆ. ಅಲ್ಲದೆ  ದೆಹಲಿಯಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ರಾಷ್ಟ್ರೀಯ ಐಕಾನಿಕ್ ಪ್ರಶಸ್ತಿ , ಹೃದಯ ವಾಹಿನಿ ಲಯನ್ಸ್ ಇಂಟರ್ ನ್ಯಾಷನಲ್ ಅವರಿಂದ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಗ್ಲೋಬಲ್ ಮೆನ್ ಅವಾರ್ಡ್,  ಅಂತರಾಷ್ಟ್ರೀಯ ಸಾಧನೆ ಐಕಾನ್ ಪ್ರಶಸ್ತಿ , ಕರ್ನಾಟಕ ಸೇವಾ ರತ್ನ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಗಿದೆ.

Read More

ಮಡಿಕೇರಿ ಏ.6 NEWS DESK : ಕೊಡವ ಕೂಟಾಳಿಯಡ ಕೂಟದ ವತಿಯಿಂದ ಏ.7 ರಂದು  “ಪೆತ್ತವಡ ಆರೈಕೆ” ಎನ್ನುವ ನೂತನ ಕೊಡವ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯಲಿದ್ದು, ಇದರೊಂದಿಗೆ  ಸಂಘಟನೆಯು ಇದುವರೆಗೆ ನಡೆಸಿದ ಕೊಡಗ್’ರ ಚುಪ್ಪಿ ಕೋಗಿಲೆಯ, ಸಮ್ಮಂದ ಅಡ್ಕುವ ಶಿಬಿರದ ಹಾಗೂ ಆಟ್ ಪಾಟ್ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ. ಕೊಡವಾಮೆಲ್ ಪೆತ್ತವಡ ಆರೈಕೆ ಎನ್ನುವ ವಿಷಯದ ಬಗ್ಗೆ ಮಾಹಿತಿ, ಸಾಂಸ್ಕೃತಿಕ ಕಾರ್ಯಕ್ರಮ, ಸಮ್ಮಂದ ಅಡ್ಕುವ ಪುಸ್ತಕ, ಮತ್ತು ಪೆತ್ತವಡ ಆರೈಕೆ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ಮೇಳವು ಇರಲಿದೆ ಎಂದು ಕೂಟದ ಪ್ರಮುಖರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬೆಂಗಳೂರು  ಏ.6 NEWS DESK : ಜಾಗತಿಕ ರೋಬಸ್ಟಾ ಬೆಲೆಗಳು ಸರ್ವ ಕಾಲಿಕ ದಾಖಲೆ ನಿರ್ಮಿಸಿದ ಸಮಯದಲ್ಲಿಯೇ , ಮಾರ್ಚ್ 2024 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಭಾರತದ ಕಾಫಿ ರಫ್ತು ಮೌಲ್ಯವು ಹೊಸ ಎತ್ತರವನ್ನು ಮುಟ್ಟಿದೆ. ಅಲ್ಪ ಪ್ರಮಾಣದ ಕುಸಿತದ ಹೊರತಾಗಿಯೂ, ರಫ್ತು ಹೊಸ ದಾಖಲೆ ಬರೆದಿದೆ. . ವಾಸ್ತವವಾಗಿ, 2023-24 ರ ಆರ್ಥಿಕ ವರ್ಷವು ಸೇರಿದಂತೆ ಸತತ ಮೂರು ವರ್ಷಗಳಿಂದ ಭಾರತೀಯ ಕಾಫಿ ರಫ್ತು ಏರಿಕೆಯನ್ನೇ ದಾಖಲಿಸುತ್ತಾ ಬಂದಿದೆ. ಡಾಲರ್ ಲೆಕ್ಕದಲ್ಲಿ, ಭಾರತೀಯ ಕಾಫಿ ರಫ್ತು 2022-23 ಹಣಕಾಸು ವರ್ಷದಲ್ಲಿ $1.12 ಶತಕೋಟಿಗಿಂತ $1.26 ಶತಕೋಟಿಗೆ ಏರಿಕೆ ದಾಖಲಿಸಿ 12.5 ಶೇಕಡಾವಾರು ಹೆಚ್ಚಳವನ್ನು ದಾಖಲಿಸಿದೆ. ಅದೇ ರೀತಿ ರೂಪಾಯಿ ಲೆಕ್ಕದಲ್ಲಿ ರಫ್ತು ಶೇ.16ರಷ್ಟು ಏರಿಕೆಯಾಗಿದ್ದು ₹9,033 ಕೋಟಿಗಿಂತ ರೂ.10,491 ಕೋಟಿಗೆ ತಲುಪಿದೆ. ಕಾಫಿಯ ಮೌಲ್ಯ ಜಾಸ್ತಿ ಇದ್ದರೂ ರಫ್ತು ಪ್ರಮಾಣ 2022-23 ರಲ್ಲಿ 3.98 ಲಕ್ಷ ಟನ್‌ಗಳಿಂದ 3.88 ಲಕ್ಷ ಟನ್‌ಗಳಿಗೆ 2.5 ಶೇಕಡಾ ಇಳಿಕೆ ಕಂಡಿವೆ. ಜಾಗತಿಕ…

Read More

ಮಡಿಕೇರಿ ಏ.5 NEWS DESK  : ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯ ಗಂಭೀರತೆಯನ್ನು ಅಧಿಕಾರಿಗಳು ಅರಿತುಕೊಂಡು ಜನಸಾಮಾನ್ಯರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡಲು ಆದ್ಯತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದರು. ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕುಡಿಯುವ ನೀರಿನ ಪೂರೈಕೆ ಕುರಿತು ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಸರಬರಾಜಿಗೆ ತಾಲ್ಲೂಕು ಹಂತದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ಸಭೆಗಳನ್ನು ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ರೀತಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದರು. ಮಳೆಯ ಅಭಾವದಿಂದಾಗಿ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದ್ದು, ಆ ಗ್ರಾಮಗಳಿಗೆ ಅಧಿಕಾರಿಗಳು ತೆರಳಿ ನೀರು ಪೂರೈಕೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ನೀರು ಪೂರೈಕೆ ಮಾಡಬೇಕು. ಜಿಲ್ಲೆಯಲ್ಲಿ ಕುಡಿಯುವ ನೀರಿನ…

Read More

ಸುಂಟಿಕೊಪ್ಪ ಏ.5 NEWS DESK :  ನಾರ್ಗಾಣೆ ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಅಣ್ಣಪ್ಪ ಸ್ವಾಮಿದೇವಾಲಯದಲ್ಲಿ ಏ.13, 14 ಮತ್ತು 15ರಂದು ಧರ್ಮದೈವದ ನೇಮೋತ್ಸವ ನಡೆಯಲಿದೆ ಎಂದು ದೇವಾಲಯದ ಮೇಲ್ವಿಚಾರಕರಾದ ಬಿ.ಡಿ.ರಾಜುರೈ ತಿಳಿಸಿದ್ದಾರೆ. ಏ.13 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ ಮತ್ತು ಶುದ್ಧ ಕಲಶ ನಡೆಯಲಿದೆ. ಏ.14 ರಂದು ಸಂಜೆ 6 ಗಂಟೆಗೆ ಶ್ರೀ ಸ್ವಾಮಿ ಮತ್ತು ಅಮ್ಮನವರ ಭಂಡಾರ ಮೆರವಣಿಗೆ, 6.30ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ನೆರವೇರಲಿದೆ. ರಾತ್ರಿ 8.30ಕ್ಕೆ ಧೂಮಾವತಿ ಕೋಲ, ರಾತ್ರಿ 10.30ಕ್ಕೆ ಆದಿ ದೇವತೆ ಕಲ್ಲುರ್ಟಿದೈವದ ಕೋಲ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಏ.15 ರಂದು ಬೆಳಿಗ್ಗೆ 8 ಗಂಟೆಯಿಂದ ಧರ್ಮದೈವಗಳಿಗೆ ಹರಕೆ, ಬೇಡಿಕೆಗಳನ್ನು ಒಪ್ಪಿಸುವುದು, ಮಧ್ಯಾಹ್ನ 12 ಗಂಟೆಯಿಂದ ಅನ್ನದಾನ, ಮಧ್ಯಾಹ್ನ 1 ಗಂಟೆಗೆ ಧರ್ಮದೈವ, ಶ್ರೀ ಅಣ್ಣಪ್ಪ, ಪಂಜುರ್ಲಿ ದೈವದ ಕೋಲ, 3.30 ಗಂಟೆಯಿಂದ ಗುಳಿಗ ಹಾಗೂ ಶ್ರೀ ಚಾಮುಂಡೇಶ್ವರಿ ಧರ್ಮದೈವದ ಕೋಲ ನಡೆಯಲಿದೆ ಎಂದು ರಾಜುರೈ ಮತ್ತು ಕುಟುಂಬಸ್ಥರು…

Read More

ಪುತ್ತೂರು ಏ.5 NEWS DESK : ತಂತ್ರಜ್ಞಾನವು ಅಪರಿಮಿತ ವೇಗದಲ್ಲಿ ಬದಲಾವಣೆಯಾಗುತ್ತಿದೆ. ನಿರ್ಮಾಣ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆಗಳಾಗುತ್ತಿದೆ. ಹೊಸ ಪಠ್ಯಕ್ರಮದ ಮೂಲಕ ನೂತನ ತಂತ್ರಜ್ಞಾನಗಳು ನಮ್ಮನ್ನು ತಲಪುವುದಕ್ಕೆ ಸಮಯಾವಕಾಶ ಬೇಕಾಗುತ್ತದೆ ಇದನ್ನು ತಪ್ಪಿಸುವುದಕ್ಕಾಗಿ ಉಪನ್ಯಾಸಕರ ಉದ್ದೀಪನಾ ಕಾರ್ಯಕ್ರಮಗಳನ್ನು ಮಾಡುವುದು ಆವಶ್ಯಕ ಎಂದು ಬೆಂಗಳೂರಿನ ಮೇದಿನಿ ಟೆಕ್ನಾಲಜೀಸ್ ಸಂಸ್ಥೆಯ ಡಿಸೈನ್ ಇಂಜಿನಿಯರ್ ಮೋಹನ್ ಪ್ರಭು ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ, ಬೆಂಗಳೂರಿನ ಮೇದಿನೀ ಟೆಕ್ನಾಲಜೀಸ್, ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಘ ಮತ್ತು ಕಾಲೇಜಿನ ಐಕ್ಯುಎಸಿ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ 5 ದಿನಗಳ ಬಿಲ್ಡಿಂಗ್ ಇನ್ಫಾರ್ಮೇಶನ್ ಮಾಡೆಲಿಂಗ್ ಇನ್ ಸಿವಿಲ್ ಇಂಜಿನಿಯರಿಂಗ್-ಎಂಪವರಿಂಗ್ ಎಜುಕೇಟರ್ಸ್ ವಿಷಯದ ಬಗ್ಗೆ ಉಪನ್ಯಾಸಕರ ಉದ್ದೀಪನಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮೂಲ ಇಂಜಿನಿಯರಿಂಗ್ ವಿಭಾಗಗಳಿಗೆ ಯಾವತ್ತೂ ಅಳಿವಿಲ್ಲ ಇತರ ವಿಭಾಗಗಳ ಏರುಗತಿಯ ಬೆಳವಣಿಗೆಯಿಂದಾಗಿ…

Read More