ಸೋಮವಾರಪೇಟೆ ಜೂ.7 NEWS DESK : ಭಾರತೀಯ ಕೃಷಿ ಅನುಸಂಧಾನ ಪರಿಷತ್, ಜಿಲ್ಲಾ ಆಡಳಿತ, ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪ, ಕೃಷಿ ಇಲಾಖೆ ಸೋಮವಾರಪೇಟೆ, ಪುಷ್ಪಗಿರಿ ರೈತ ಉತ್ಪಾದಕರ ಸಂಘ, ಸೋಮವಾರಪೇಟೆ, ಕಾಫಿ ಮಂಡಳಿ, ಸಂಬಾರು ಮಂಡಳಿ ವತಿಯಿಂದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಕೃಷಿಕರಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ಕೂತಿ ಗ್ರಾಮದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಅಭಿಯಾನದಲ್ಲಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ.ವೀರೇಂದ್ರ ಕುಮಾರ್ ಮಾತನಾಡಿ, ಕೃಷಿಯಲ್ಲಿ ಹೊಸ ತಂತ್ರಜ್ಞಾನ ಬಳಕೆಯೊಂದಿಗೆ ಸುಧಾರಿತ ಬೇಸಾಯ ಮಾಡಿದರೆ ಉತ್ತಮ ಫಸಲು ಪಡೆಯಬಹುದು ಎಂದು ಹೇಳಿದರು. ಮೇ ತಿಂಗಳಲ್ಲಿ ಉತ್ತಮ ಮಳೆ ಬಿದ್ದಿರುವ ಕಾರಣ, ಕಾಳುಮೆಣಸು ಉತ್ಪಾದನೆ ಹೆಚ್ಚಾಗುವ ನಿರೀಕ್ಷೆಯಿದ್ದು, ಕೃಷಿಕರು ಕಾಳುಮೆಣಸು ಬಳ್ಳಿಗಳ ರಕ್ಷಣೆಯತ್ತ ಗಮನಹರಿಸಬೇಕು. ಹಿರಿಯ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡು ಬಳ್ಳಿ ಔಷಧಿ ಮತ್ತು ಗೊಬ್ಬರವನ್ನು ಬಳಕೆ ಮಾಡಬೇಕು. ಸಂಶೋಧನ ಕೇಂದ್ರದ ವಿಜ್ಞಾನಿಗಳಿಗೆ ದೂರವಾಣಿ ಕರೆ ಅಥವಾ ವ್ಯಾಟ್ಸಪ್ ಮೂಲಕ ಮಾಹಿತಿ ಪಡೆದುಕೊಳ್ಳಬೇಕು ಎಂದು…
ಲೇಖಕ: admin
ಕುಶಾಲನಗರ ಜೂ.7 NEWS DESK : ಕುಶಾಲನಗರ ಪಟ್ಟಣದ ಗಣಪತಿ ದೇವಾಲಯ ಮುಂಭಾಗ ಸಂಚಾರಿ ಪೊಲೀಸ್ ಚೌಕಿ ಬಳಿ ಯುತಿಯೊಬ್ಬಳು ನೆರಳು ಗಿಡ ನೆಟ್ಟು ತನ್ನ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಸಂಭ್ರಮಿಸಿ ಇತರರಿಗೆ ಮಾದರಿಯಾಗಿದ್ದಾಳೆ. ಕುಶಾಲನಗರ ಪಟ್ಟಣದ ಹೃದಯ ಭಾಗದ ಪೊಲೀಸ್ ಚೌಕಿಯಲ್ಲಿ ಸಂಚಾರಿ ಪೊಲೀಸರು ದಿನದ ಬಹುತೇಕ ಅವಧಿ ಬಿಸಿಲಿಗೆ ಮೈಯೊಡ್ಡಿ ತಮ್ಮ ನಿತ್ಯದ ಸಂಚಾರಿ ನಿಯಂತ್ರಣ ಕೆಲಸ ಮಾಡುತ್ತಿರುವುದನ್ನು ಗಮನಿಸಿದ ಯುವತಿ ಚೈತನ್ಯ ಪೊಲೀಸರಿಗೆ ನೆರಳು ಕಲ್ಪಿಸುವ ಆಶಯದೊಂದಿಗೆ ಗಿಡ ಒಂದನ್ನು ನೆಟ್ಟು ಅದಕ್ಕೆ ಕಬ್ಬಿಣದ ಆವರಣ ಬೇಲಿ ನಿರ್ಮಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರತಿಯೊಬ್ಬರು ತಮ್ಮ ಹುಟ್ಟುಹಬ್ಬವನ್ನು ಕನಿಷ್ಠ ಒಂದು ಗಿಡ ನೆಟ್ಟು ಬೆಳೆಸಿ ಆಚರಿಸುವ ಮೂಲಕ ಸಂಭ್ರಮಿಸುವಂತೆ ಚೈತನ್ಯಳ ಸಾರ್ವಜನಿಕ ಸಂದೇಶ ಕುಶಾಲನಗರ ಪಟ್ಟಣ ಸುತ್ತಮುತ್ತ ಪ್ರಾಪ್ತಿಯ ಜನರ ಗಮನ ಸೆಳೆದಿದೆ.
*ನಾಡಿನ ಸಮಸ್ತ ಜನತೆಗೆ ಮಾನವೀಯತೆ ಮತ್ತು ಸಹೋದರತೆಯ ಸಂಕೇತವಾದ ಬಕ್ರೀದ್ ಹಬ್ಬದ ಶುಭಾಶಯಗಳು. ಸರ್ವರಿಗೂ ಹಬ್ಬ ಶುಭವನ್ನು ತರಲಿ, ಸುಖ, ಶಾಂತಿ, ಸಮೃದ್ಧಿ ಸಿಗಲಿ*
*ನಾಡಿನ ಸಮಸ್ತ ಜನತೆಗೆ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಶುಭಾಶಯಗಳು*
*ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸರ್ವ ಮುಸಲ್ಮಾನ ಬಂಧುಗಳಿಗೆ ಹಬ್ಬದ ಶುಭಾಶಯಗಳು*
*ಸರ್ವರಿಗೂ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಶುಭಾಶಯಗಳು. ನಾಢಿನ ಸಮಸ್ತ ಜನತೆಗೆ ದೇವರು ಸುಖ, ಶಾಂತಿ, ಸಮೃದ್ಧಿ, ಸೌಹಾರ್ದತೆ ನೀಡಲಿ*
*ನಾಡಿನ ಸಮಸ್ತ ಜನತೆಗೆ ತ್ಯಾಗ ಬಲಿದಾನದ ಸಂಕೇತವಾದ ಪವಿತ್ರ ಬಕ್ರೀದ್ ಹಬ್ಬದ ಶುಭಾಶಯಗಳು*
*ಸರ್ವರಿಗೂ ತ್ಯಾಗ ಬಲಿದಾನದ ಪ್ರತೀಕವಾದ ಪವಿತ್ರ ಬಕ್ರೀದ್ ಹಬ್ಬದ ಶುಭಾಶಯಗಳು. ಈ ಹಬ್ಬವು ಎಲ್ಲರ ಬದುಕಿನ ಕಷ್ಟಗಳನ್ನು ದೂರವಾಗಿಸಿ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿಯನ್ನು ನೀಡಲಿ*
*ಸರ್ವರಿಗೂ ಬಕ್ರೀದ್ ಹಬ್ಬ ಶುಭವನ್ನುಂಟು ಮಾಡಲಿ, ಸರ್ವ ಜನತೆಗೆ ಹಬ್ಬದ ಶುಭಾಶಯಗಳು*
*ನಾಡಿನ ಸಮಸ್ತ ಮುಸಲ್ಮಾನ ಬಂಧುಗಳಿಗೆ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಶುಭಾಶಯಗಳು. ನಾಡಿಗೆ, ನಾಡಿನ ಜನತೆಗೆ ಹಬ್ಬವು ಒಳಿತನ್ನು ಮಾಡಲಿ*






