*ಸಾಮರಸ್ಯದಿಂದ ಪ್ರಗತಿ ಸಾಧಿಸೋಣ, ಕೊಡಗಿನ ಅಭಿವೃದ್ಧಿಗಾಗಿ ಪಣ ತೊಡೋಣ*
ಲೇಖಕ: admin
*ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು*
*ನಮ್ಮ ಸಮೃದ್ಧಿಯೊಂದಿಗೆ ನಾಡಿನ ಅಭ್ಯುದಯಕ್ಕೂ ಒಗ್ಗಟ್ಟಿನಿಂದ ಶ್ರಮಿಸೋಣ*
*ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ನಾಡಿನ ಏಳಿಗೆಗಾಗಿ ಒಗ್ಗಟ್ಟಿನಿಂದ ಶ್ರಮಿಸೋಣ*
*ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು*
*ಸರ್ವರಿಗೂ ಹೊಸ ವರ್ಷ ಶುಭ ತರಲಿ, ಒಗ್ಗಟ್ಟಿನಿಂದ ನಾಡು ಕಟ್ಟೋಣ*
*ಹೊಸ ವರ್ಷ ಹೊಸ ಹರ್ಷ ತರಲಿ, ಸರ್ವರಿಗೂ ಶಾಂತಿ, ಸಮೃದ್ಧಿ ಸಿಗಲಿ*
ಮಡಿಕೇರಿ NEWS DESK ಜ.1 : ಅಪಘಾತದಲ್ಲಿ ಸಾವನ್ನಪ್ಪಿರುವ ಕೊಡಗಿನ ಯೋಧ ದಿವಿನ್ ಅವರ ಪಾರ್ಥೀವ ಶರೀರಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರು ಕುಶಾಲನಗರದ ಜಿಎಂಪಿ ಶಾಲಾ ಮೈದಾನದಲ್ಲಿ ಗೌರವ ಅರ್ಪಿಸಿದರು.
ಮಡಿಕೇರಿ ಜ.1 NEWS DESK : ಭುವನೇಶ್ವರದ ಕಾಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಹಾಗೂ ಕಾಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಕಿಟ್ ಮತ್ತು ಕಿಸ್) ಸ್ಟೇಡಿಯಂನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ. 200 ಮೀಟರ್ಸ್ ಓಟದಲ್ಲಿ ಉನ್ನತಿ 23.98 ಸೆಕೆಂಡ್ನಲ್ಲಿ ಗುರಿ ತಲುಪಿ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪದಕ ಗಳಿಸಿದ್ದಾರೆ. ಬೆಂಗಳೂರಿನ ರೇವಾ ವಿವಿಯನ್ನು ಪ್ರತಿನಿಧಿಸಿದ್ದ ಉನ್ನತಿ ಮಡಿಕೇರಿಯವರಾದ ರಾಷ್ಟ್ರೀಯ ಅಥ್ಲೆಟಿಕ್ ಕೋಚ್ ಬೊಳ್ಳಂಡ ಅಯ್ಯಪ್ಪ ಹಾಗೂ ಮಾಜಿ ಒಲಂಪಿಯನ್ ಪ್ರಮೀಳಾ ದಂಪತಿಯ ಪುತ್ರಿ.
ಮಡಿಕೇರಿ ಜ.1 NEWS DESK : ಪೊನ್ನಂಪೇಟೆ ಪಟ್ಟಣ ವ್ಯಾಪ್ತಿಯ ವಾಣಿಜ್ಯ ಮಳಿಗೆದಾರರಿಗೆ/ ಉದ್ದಿಮೆದಾರರಿಗೆ, ಅಂಗಡಿ, ಹೋಟೆಲ್, ಲಾಡ್ಜ್ ಮಾಲೀಕರು ಹಾಗೂ ಸರ್ಕಾರಿ ಮತ್ತು ಖಾಸಗಿ ಕಚೇರಿಯ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸಬೇಕಿದೆ. ಅದರಂತೆ, ಎಲ್ಲಾ ಅಂಗಡಿ/ ಮುಂಗಟ್ಟು/ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ.60 ಕನ್ನಡ ಪದ ಬಳಕೆಮಾಡುವಂತೆ ಆದೇಶವಿದೆ. ಆದ್ದರಿಂದ ಪೊನ್ನಂಪೇಟೆ ಪಟ್ಟಣದ ವ್ಯಾಪ್ತಿಯಲ್ಲಿನ ಎಲ್ಲಾ ಅಂಗಡಿ /ಮುಂಗಟ್ಟು/ ವಾಣಿಜ್ಯ ಮಳಿಗೆಗಳಲ್ಲಿನ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60 ಕನ್ನಡ ಪದಗಳ ಬಳಕೆ ಕಡ್ಡಾಯವಾಗಿದೆ. ಒಂದು ವೇಳೆ ನಾಮಫಲಕದಲ್ಲಿ ಶೇ.60 ಕನ್ನಡ ಪದ ಬಳಕೆಯಾಗದೇ ಇದ್ದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಈ ನಾಮಫಲಕವನ್ನು ತೆರವುಗೊಳಿಸಿ, ಅದಕ್ಕೆ ತಗಲುವ ವೆಚ್ಚವನ್ನು ತಮ್ಮಿಂದ ವಸೂಲಿ ಮಾಡಲಾಗುವುದು ಹಾಗೂ ತಮಗೆ ನೀಡಿರುವ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಿ, ಕಾನೂನಿನಂತೆ ಕ್ರಮಕೈಗೊಳ್ಳಲಾಗವುದು. ಕಾರ್ಯಾಚರಣೆಯಿಂದ ಕಟ್ಟಡಗಳಿಗೆ ಯಾವುದೇ ಹಾನಿ ಉಂಟಾದಲ್ಲಿ ಪಟ್ಟಣ ಪಂಚಾಯಿತಿ ಜವಾಬ್ದಾರಿಯಲ್ಲ ಎಂದು ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಗೋಪಿ ತಿಳಿಸಿದ್ದಾರೆ.






