ಲೇಖಕ: admin

ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಭೃಂಗರಾಜ ಸಸ್ಯಕ್ಕೆ ಹೆಚ್ಚಿನ ಮಹತ್ವವಿದೆ. ಇದು ಮನೆಯ ಎದುರಿಗೆ ಕಳೆಗಳ ಮದ್ಯದಲ್ಲಿ ಬೆಳೆಯುವಂತ ಸಸ್ಯ. ಇದು 1 ರಿಂದ 2 ಅಡಿ ಎತ್ತರಕ್ಕೆ ಬೆಳೆಯುವಂತ ಸಸ್ಯವಾಗಿದೆ. ಭೃಂಗರಾಜ ಗಿಡವು ನೀರು ಇರುವ ತಂಪು ಪ್ರದೇಶದಲ್ಲಿ ಗದ್ದೆ, ತೋಟ, ನದಿಯ ಪಕ್ಕದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದರ ಕಾಂಡ, ಗಿಡವು ಪೂರ್ತಿ ಬೆಳೆದ ಮೇಲೆ ಕೆಂಪಾಗುತ್ತದೆ. ಹಾಗು ಇದರಲ್ಲಿ ಚಿಕ್ಕ ಚಿಕ್ಕ ಬಿಳಿ ಹೂಗಳು ಬಿಡುತ್ತವೆ. ಇದರ ಬೀಜಗಳು ಕಪ್ಪಾಗಿದ್ದೂ, ಎಲೆಗಳು ನೆಲಬೇವಿನ ಎಲೆಗಳನ್ನು ಹೋಲುತ್ತವೆ. ಭೃಂಗರಾಜವನ್ನು “ಕೇಶರಾಜ’ ಎಂದು ಕರೆಯುತ್ತಾರೆ. ಏಕೆಂದರೆ ಇದು ಕೂದಲಿನ ಅರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ. ಈ ಸಸ್ಯವನ್ನು ಹಳ್ಳಿಗಳಲ್ಲಿ ಗರುಗದ ಗಿಡವೆಂದು ಕೂಡ ಕರೆಯುತ್ತಾರೆ. ಭೃಂಗರಾಜ ಗಿಡವನ್ನು ಆಹಾರೌಷಧವಾಗಿಯೂ ಬಳಸುತ್ತಾರೆ. ಇದು ಕಹಿ ರುಚಿಯನ್ನು ಹೊಂದಿರುತ್ತದೆ. ಹಾಗು ಭೃಂಗರಾಜ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡಬಲ್ಲದ್ದಾಗಿದೆ. ಇದರಿಂದ ಎಣ್ಣೆಯನ್ನು ತಯಾರಿಸುತ್ತಾರೆ. ಅದು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಭೃಂಗರಾಜ ಎಲೆಗಳನ್ನು ಸೂಪ್ ಮಾಡಿಕೊಂಡು ಆಹಾರೌಷಧವಾಗಿ…

Read More

ಮಡಿಕೇರಿ ಮಾ.7 : ಬೈಕ್ ಅಪಘಾತದಲ್ಲಿ ಸೋಮವಾರಪೇಟೆಯ ಬೀಟೆಕಟ್ಟೆ ಗ್ರಾಮದ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸುರತ್ಕಲ್ ಟೋಲ್ ಗೇಟ್ ಬಳಿ ನಡೆದಿದೆ. ಬಜ್ಪೆ ಕೆಂಜಾರು ಶ್ರೀದೇವಿ ಕಾಲೇಜು ವಿದ್ಯಾರ್ಥಿ ಮೂಲತ: ಸೋಮವಾರಪೇಟೆಯ ಬೀಟೆಕಟ್ಟೆ ಗ್ರಾಮದ ನಿವಾಸಿ ಶಶಾಂಕ್ (21) ಮೃತ ದುರ್ದೈವಿ. ಸೋಮವಾರ ರಾತ್ರಿ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಸುರತ್ಕಲ್ ಕಡೆಯಿಂದ ಮುಲ್ಕಿ ಕಡೆ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಹಿoಬದಿ ಸವಾರರಾಗಿದ್ದ ಶಶಾಂಕ್ ಅಪಘಾತದ ಸಂದರ್ಭ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಸ್ನೇಹಿತ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಹಾಗೂ ಸಿಬ್ಬಂದಿ ಭೇಟಿ ನಿಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಸಿಕೊಂಡಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಪ್ರಸಾದವನ್ನು ಖರೀದಿಸಲು ಅಥವಾ ದೇಣಿಗೆ ನೀಡಲು ಪೇಟಿಎಂ ಯುಪಿಐ ಬಳಸಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಪೇಟಿಎಂ ಸಂಸ್ಥೆಯು ರಾಜಾಜಿ ನಗರದಲ್ಲಿರುವ ಇಸ್ಕಾನ್ ದೇವಸ್ಥಾನದಲ್ಲಿ 28 ಸೌಂಡ್ ಬಾಕ್ಸ್ ಧನಗಳನ್ನು ಅಳವಡಿಸಿದೆ. ಭಕ್ತರಿಗೆ ಅನುಕೂಲವಾಗುವಂತೆ ಪೇಟಿಎಂ ಸಂಸ್ಥೆಯು ಇಸ್ಕಾನ್ನಲ್ಲಿರುವ ಎಲ್ಲಾ ಸ್ಟಾಲ್ಗಳಲ್ಲಿ ಮೊಬೈಲ್ಪಾವತಿಗಳನ್ನು ಸಕ್ರಿಯಗೊಳಿಸಿದೆ. ಪ್ರಸಾದ, ಆಹಾರದಿಂದ ಹಿಡಿದು ಉಡುಗೊರೆ ಅಂಗಡಿಗಳಿಂದ ಧಾರ್ಮಿಕ ವಸ್ತುಗಳವರೆಗೆ. ದೇವಾಲಯದಾದ್ಯಂತ ಇರುವ ದಾನಪತ್ರಗಳು ಪೇಟಿಎಂ ಕ್ಯುಆರ್ ಕೋಡ್ ಅನ್ನು ಸಹ ಹೊಂದಿವೆ. ಪೇಟಿಎಂ ಸೂಪರ್ ಆ್ಯಪ್ ನಲ್ಲಿನ ‘ಭಕ್ತಿ’ ವಿಭಾಗದಿಂದ ಭಾರತದಾದ್ಯಂತ ಜನರು ಇಸ್ಕಾನ್ ದೇವಾಲಯದಲ್ಲಿ ತಮ್ಮಮನೆಯಲ್ಲಿ ಕುಳಿತು ದೇಣಿಗೆ ನೀಡಬಹುದು.

Read More

ಮಡಿಕೇರಿ ಮಾ.7 : ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿತಗೊಂಡಿದ್ದ ಹಿಂದೂ ಕ್ರಿಕೆಟ್ ಕಪ್‍ನಲ್ಲಿ ಮಡಿಕೇರಿಯ ಶಾಂತಿನಿಕೇತನ ಯೂತ್ ಕ್ಲಬ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಮ್ಯಾಕ್ಸ್‍ವೆಲ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಟಾಸ್ ಗೆದ್ದ ಶಾಂತಿನಿಕೇತನ ಫೀಲ್ಡಿಂಗ್ ಆಯ್ದುಕೊಂಡು ಮ್ಯಾಕ್ಸ್‍ವೆಲ್‍ಗೆ ಬ್ಯಾಟ್ ಮಾಡುವ ಅವಕಾಶ ಮಾಡಿಕೊಟ್ಟಿತು. ನಿಗದಿತ 5 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 50 ರನ್ ಪೇರಿಸಿ 51 ರನ್‍ಗಳ ಗುರಿ ಎದುರಾಳಿ ತಂಡ ಮ್ಯಾಕ್ಸ್‍ವೆಲ್‍ಗೆ ನೀಡಿತು. ಗುರಿ ಬೆನ್ನತ್ತಿದ ಶಾಂತಿನಿಕೇತನ 4 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 51 ರನ್ ಪೂರೈಸಿ ಗೆಲುವಿನ ನಗೆ ಬೀರಿತು. ಸೆಮಿಫೈನಲ್‍ನಲ್ಲಿ ಪರಭಾವಗೊಂಡ ಎಂ.ಸಿ.ಸಿ. ಮಕ್ಕಂದೂರು ಹಾಗೂ ಸನ್ನು ಕಾಫಿ ಮೂರನೇ, ನಾಲ್ಕನೇ ಬಹುಮಾನಕ್ಕೆ ಸೆಣಸಾಡಿದವು. ಎಂ.ಸಿ.ಸಿ ನೀಡಿದ 24 ರನ್‍ಗಳ ಗುರಿಯನ್ನು ಸಾಧಿಸಲು ವಿಫಲವಾದ ಸನ್ನು ಕಾಫಿ ನಾಲ್ಕನೇ ಸ್ಥಾನ ಪಡೆದುಕೊಂಡರೇ, ಎಂಸಿಸಿ 3ನೇ ಸ್ಥಾನ ತನ್ನದಾಗಿಸಿಕೊಂಡಿತು. ವಿಜೇತ ತಂಡಕ್ಕೆ ರೂ.55,555 ರನ್ನರ್ ಅಪ್ ತಂಡಕ್ಕೆ ರೂ.33,333 ತೃತೀಯ ಸ್ಥಾನಕ್ಕೆ ರೂ.11,111…

Read More

ಕಡಂಗ ಮಾ.7 :  ಕೇರಳದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಮರ್ಕಜ್ ನ ಕೇಂದ್ರ ಸಖಾಫಿ ಸಂಗಮದ ಕಾರ್ಯಕಾರಿಣಿ ಸಮಿತಿಯಲ್ಲಿ ಕೊಟ್ಟಮುಡಿ ಮರ್ಕಜ್ ನ ಇಸ್ಮಾಯಿಲ್ ಸಖಾಫಿ ನೇಮಕಗೊಂಡಿದ್ದಾರೆ. ಇವರು ಮೂಲತಃ ಕೊಂಡಗೇರಿ ಗ್ರಾಮಸ್ಥರಾಗಿದ್ದು, ಈ ಪದವಿ ಸ್ವೀಕರಿಸಿರುವ ಜಿಲ್ಲೆಯ ಮೊದಲ ವ್ಯಕ್ತಿ ಯಾಗಿದ್ದರೆ. ವರದಿ : ನೌಫಲ್ ಕಡಂಗ 

Read More

ಮಡಿಕೇರಿ ಮಾ.6 : ಮಡಿಕೇರಿ ನಗರ ಸೇರಿದಂತೆ ವಿವಿಧೆಡೆ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ಸಾಗಿಸುತ್ತಿದ್ದ ಪಿ.ಡಿ.ರಾಮಯ್ಯ ಅವರು ನಿಧನ ಹೊಂದಿದ್ದಾರೆ. ಮಡಿಕೇರಿ ಸಂಚಾರಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಅವರು ಗಮನ ಸೆಳೆದಿದ್ದರು.

Read More

ಮಡಿಕೇರಿ ಮಾ.6 : ಕಲ್ಲುಗುಂಡಿ-ದಬ್ಬಡ್ಕ-ಚೆಟ್ಟಿಮಾನಿ ರಸ್ತೆಯನ್ನು ಡಾಂಬರೀಕರಣ ಮಾಡಿ ಕೇವಲ 10 ದಿನಗಳಾಗಿದ್ದು, ಈಗ ಡಾಂಬರು ಕಿತ್ತು ಬರುತ್ತಿದೆ. ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ. ರಸ್ತೆಯ ಡಾಂಬರನ್ನು ಕೈಯಲ್ಲಿ ಕಿತ್ತು ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯರು ಮಳೆಗಾಲ ಈ ರಸ್ತೆ ಉಳಿಯುವುದಿಲ್ಲವೆಂದು ಗಮನ ಸೆಳೆದರು. ಈ ಸಂದರ್ಭ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್ ಕಳಪೆ ಕಾಮಗಾರಿ ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಗೂಬೆ ಕೂರಿಸಿ ಪ್ರಯೋಜನವಿಲ್ಲ. ಶೇ.40 ಕಮಿಷನ್ ಸರ್ಕಾರ ಮತ್ತು ಶಾಸಕರೇ ಈ ಕಳಪೆ ಕಾಮಗಾರಿಗೆ ನೇರ ಹೊಣೆ ಎಂದು ಆರೋಪಿಸಿದರು. ಸರ್ಕಾರದ ಅನುದಾನದಿಂದ ಆದ ಕಾಮಗಾರಿಗಳಿಗೆ ಸಂಬoಧಿಸಿದoತೆ ಶಾಸಕರು ಹಾಗೂ ಸಂಸದರು ತಮ್ಮ ಪರವಾಗಿ ಬ್ಯಾನರ್ ಗಳನ್ನು ಅಳವಡಿಸಬಾರದೆಂದು ನ್ಯಾಯಾಲಯವೇ ಸೂಚನೆ ನೀಡಿದೆ. ಆದೇಶವನ್ನು ಮೀರಿ ಈ ರಸ್ತೆ ಬದಿಯಲ್ಲಿ ಶಾಸಕರ ಬ್ಯಾನರ್ ಅಳವಡಿಸಲಾಗಿದೆ. ರಸ್ತೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಪೂರ್ಣಗೊಂಡಿದೆ ಎಂದು ಬರೆಯಲಾಗಿದೆ. ಇದು…

Read More

ಮಡಿಕೇರಿ ಮಾ.6 : ಕೇರಳ ರಾಜ್ಯದ ಗಡಿಯಿಂದ ಅಕ್ರಮವಾಗಿ ನಾಡಬಂದೂಕಿನೊoದಿಗೆ ತಲಕಾವೇರಿ ವನ್ಯಜೀವಿ ವಲಯದಲ್ಲಿ ಬೇಟೆಗೆಂದು ಬಂದಿದ್ದ ನಾಲ್ವರು ಆರೋಪಿಗಳಲ್ಲಿ ಓರ್ವನನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಾರ್ಯಾಚರಣೆ ಸಂದರ್ಭ ಮೂವರು ತಲೆ ಮರೆಸಿಕೊಂಡಿದ್ದಾರೆ. ತಲಕಾವೇರಿ ವನ್ಯಜೀವಿ ವಲಯದ ಪದಿನಾಲ್ಯನಾಡು ಮೀಸಲು ಅರಣ್ಯದಲ್ಲಿ ಬೇಟೆಗಾರರು ಇರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಚಾಂದೆಟ್ಟುಕೊಲ್ಲಿ ಗಸ್ತು ಹಾಗೂ ಉಪವಲಯದ ಸಿಬ್ಬಂದಿಗಳು ದಾಳಿ ನಡೆಸಿದರು. ಒಂಟಿ ನಳಿಕೆಯ ಎರಡು ನಾಡ ಬಂದೂಕು ಸಹಿತ ಓರ್ವ ಆರೋಪಿಯನ್ನು ವಶಕ್ಕೆ ಪಡೆದರು. ತಲೆ ಮರೆಸಿಕೊಂಡಿರುವ ಮೂವರ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಹಾಗೂ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ನಾಯಕ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಅಧಿಕಾರಿಗಳಾದ ಕೆ.ಕೊಟ್ರೇಶ, ಆನಂದ ಕೆ.ಕೆ, ಗಸ್ತು ವನಪಾಲಕ ಯತೀಶ್ ಬಿ.ಎಂ, ಸುಬ್ರಮಣಿ ಕೆ.ಎಂ ಹಾಗೂ ಕಳ್ಳ ಬೇಟೆ ತಡೆ ಶಿಬಿರದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Read More

ಮಡಿಕೇರಿ ಮಾ.6 : ಮಡಿಕೇರಿಯಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಹೆಬ್ಬಲಸು ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬoಧಿಸಿದoತೆ ಓರ್ವ ಆರೋಪಿಯನ್ನು ಅರಣ್ಯ ಇಲಾಖೆ ಬಂಧಿಸಿದೆ. ಭಾನುವಾರ ರಾತ್ರಿ ಸಂಪಾಜೆ ಅರಣ್ಯ ತನಿಖಾ ಠಾಣೆ ಮೂಲಕ ಸಾಗಾಟವಾಗುತ್ತಿದ್ದ ಲಾರಿಯನ್ನು ತಡೆದ ತಪಾಸಣಾ ತಂಡ ಆರೋಪಿ  ಮಂಗಳೂರು ತಾಲ್ಲೂಕಿನ ಮಂಜನಾಡಿ ಗ್ರಾಮದ ನಿವಾಸಿ ಮಹಮ್ಮದ್ ಸಫ್ಯಾನ್ (26) ನನ್ನು ಬಂಧಿಸಿತು. ಲಾರಿ ಮತ್ತು ಹೆಬ್ಬಲಸು ಮರದ 12 ನಾಟಗಳನ್ನು ವಶಕ್ಕೆ ಪಡೆಯಿತು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಖೆ ಕೈಗೊಳ್ಳಲಾಗಿದೆ. ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ.ಎ.ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮೊಯಿಷಿನ್ ಬಾಷಾ ಹಾಗೂ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಮಾರ್ಗದರ್ಶನದಲ್ಲಿ ತನಿಖಾ ಠಾಣೆಯಲ್ಲಿ ಕಾರ್ಯನಿರತರಾಗಿದ್ದ ಉಪ ವಲಯ ಅರಣ್ಯಾಧಿಕಾರಿ ಬಸವರಾಜಪ್ಪ ಪತ್ತೆ ಪ್ರಕರಣ ಪತ್ತೆ ಹಚ್ಚಿದರು. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿನಯಕೃಷ್ಣ ಎಂ.ಸಿ, ಗಸ್ತು ಅರಣ್ಯಪಾಲಕರಾದ ನಾಗರಾಜ್ ಎಸ್, ಕಾರ್ತಿಕ್ ಡಿ., ವಾಹನ ಚಾಲಕರಾದ ಶಿವಪ್ರಸಾದ್, ಮನೋಜ್…

Read More

ಮಡಿಕೇರಿ ಮಾ.6 : ಭ್ರಷ್ಟಾಚಾರ ಮುಕ್ತ ಕರ್ನಾಟಕ ಹೋರಾಟದ ಭಾಗವಾಗಿ ಮಾ.9 ರಂದು ಬೆಳಗ್ಗೆ 9 ಗಂಟೆಯಿoದ 11 ಗಂಟೆಯವರೆಗೆ ಕರ್ನಾಟಕ ಬಂದ್ ಗೆ ಕೆಪಿಸಿಸಿ ಕರೆ ನೀಡಿದೆ. ಕೊಡಗಿನಲ್ಲೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಸಾರ್ವಜನಿಕರು ಸಹಕಾರ ನೀಡಬೇಕು ಮತ್ತು ಸ್ವಯಂ ಪ್ರೇರಿತ ಬಂದ್ ಮೂಲಕ ಬೆಂಬಲ ಸೂಚಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಮನವಿ ಮಾಡಿದೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಬಂದ್ ಗೆ ಕರೆ ನೀಡಿದರು. ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಬಂದ್ ಗೆ ಕರೆ ನೀಡಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದoತೆ ಸ್ವಯಂ ಪ್ರೇರಿತರಾಗಿ ಬಂದ್ ಮಾಡಲು ಮನವಿ ಮಾಡುತ್ತೇವೆ, ಯಾರ ಮೇಲೂ ಒತ್ತಡ ಹೇರುವುದಿಲ್ಲ. ಪ್ರತಿಭಟನೆ ಅಥವಾ ರಸ್ತೆ ತಡೆ ಮಾಡುವುದಿಲ್ಲ, ರಾಜ್ಯದಲ್ಲಿ ಮಿತಿ ಮೀರಿರುವ ಭ್ರಷ್ಟಾಚಾರದ ವಿರುದ್ಧ ಜನರು ಕೂಡ ಜಾಗೃತರಾಗಿದ್ದು, ಬಂದ್ ಗೆ ಬೆಂಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ::: ಗ್ರೇಟರ್ ರಾಜಾಸೀಟ್‌ನಲ್ಲಿ ದುರುಪಯೋಗ ::: ಸುಮಾರು…

Read More