ತಲಕಾವೇರಿಯಲ್ಲಿ ಎರಡು ಮೃತದೇಹ ಪತ್ತೆ : ಕಾರ್ಯಾಚರಣೆ ಚುರುಕು

15/08/2020

ಮಡಿಕೇರಿ ಆ. 15 : ಮಹಾಮಳೆಯಿಂದ ಬೆಟ್ಟ ಕುಸಿದು ಐವರು ನಾಪತ್ತೆಯಾದ ತಲಕಾವೇರಿ ಪ್ರದೇಶದಲ್ಲಿ ಎರಡು ಮೃತದೇಹ ಪತ್ತೆಯಾಗಿದೆ.
ಶವ ಕೊಳೆತ ಸ್ಥಿತಿಯಲ್ಲಿರುವುದರಿಂದ ಗುರುತು ಪತ್ತೆಯಾಗಿಲ್ಲ.
ಈಗಾಗಲೇ ಆನಂದತೀರ್ಥ, ನಾರಾಯಣ ಆಚಾರ್ ಅವರ ಮೃತದೇಹ ಪತ್ತೆಯಾಗಿದ್ದು, ಇಂದು ದೊರೆತ ಶವದೊಂದಿಗೆ ನಾಲ್ವರು ಪತ್ತೆಯಾದಂತ್ತಾಗಿದೆ. ಇನ್ನೊಂದು ಮೃತದೇಹಕ್ಕಾಗಿ ಕಾರ್ಯಾಚರಣೆ ಚುರುಕುಗೊಂಡಿದೆ.